ಸಾಯುವ ಆಟದಲ್ಲಿ ಒಮ್ಮೆ ಅವರು, ಒಮ್ಮೆ ಇವರು..." ಕಣ್ಣಿಗೆ ಕಣ್ಣು ಎನ್ನುವ ಸಿದ್ಧಾಂತದಲ್ಲಿ ಮುಂದುವರೆದರೆ ಮುಂದೊಂದು ದಿನ ಇಡೀ ಜಗತ್ತೇ ಕುರುಡಾಗಬಹುದು " ಮಹಾತ್ಮ ಗಾಂಧಿ. ವಿಶ್ವದ ಸುಂದರ ಸ್ಥಳಗಳಲ್ಲಿ ಒಂದಾದ ಹಿಮಾಚ್ಛಾದಿತ ಕಾಶ್ಮೀರ ಕಣಿವೆಯು ಒಂದು ಸುಂದರ ಪ್ರದೇಶ ಪೆಹಲ್ಗಾವ್ ಎಂಬಲ್ಲಿ ರಕ್ತ ದೋಕುಳಿಯಾಟ ನಡೆದಿದೆ. ಭಯೋತ್ಪಾದಕರು ಅಮಾಯಕರನ್ನು ಹುಡುಕಿ ಹುಡುಕಿ ತೀರಾ ಹತ್ತಿರದಿಂದ ಗುಂಡಿಟ್ಟು ಕೊಂದಿದ್ದಾರೆ.
ಕಾಶ್ಮೀರದ ಗುಲ್ಮೊಹರ್ನ ಸೌಂದರ್ಯವನ್ನು ಸವಿಯಲು, ಮಧುಚಂದ್ರದ ಚಂದಮಾಮನನ್ನು ನೋಡಲು ಹೋಗಿದ್ದ ಪ್ರಣಯ ಪಕ್ಷಿಗಳು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟವು. ಕೋಪದಲ್ಲಿ, ಆಕ್ರೋಶದಲ್ಲಿ, ನೋವಿನಲ್ಲಿ ಭಯೋತ್ಪಾದಕರನ್ನು, ಪಾಕಿಸ್ತಾನವನ್ನು ನೇರವಾಗಿ ಮನಸ್ಸಿಗೆ ಇಷ್ಟವಾಗುವಷ್ಟು ನಿಂದಿಸಬಹುದು, ಸತ್ತವರನ್ನು ಹುತಾತ್ಮರು ಎಂದು ಕರೆಯಬಹುದು, ಭಯೋತ್ಪಾದಕರನ್ನು ಹೊಡೆದುರುಳಿಸಬಹುದು, ಪಾಕಿಸ್ತಾನದ ಮೇಲೆ ಹೇರ್ ಸ್ಟ್ರೈಕ್ ಮಾಡಬಹುದು ಎಲ್ಲವೂ ನಡೆಯುತ್ತದೆ. ಆದರೆ ಅನಾವಶ್ಯಕವಾಗಿ ಹೋದ ಜೀವಗಳು ಮರಳಿ ಬರುವುದಿಲ್ಲ. ಈ ಸೇಡಿನ, ಸಾವಿನ ಆಟ ಮುಂದುವರಿಯಬೇಕೆ ಅಥವಾ ಸಮಸ್ಯೆ ಬಗೆಹರಿದು ಕಣಿವೆ ರಾಜ್ಯದಲ್ಲಿ ನೆಮ್ಮದಿ ನೆಲೆಸಬೇಕೇ ?
ಬಹುತೇಕ ಮಾಧ್ಯಮಗಳು ಸೇಡಿಗೆ ತಹತಹಿಸುತ್ತಿವೆ. ಜನರ ಭಾವನಾತ್ಮಕ ಉದ್ರೇಕಕ್ಕೇ ತುಪ್ಪ ಸುರಿಯುತ್ತಿವೆ. ಒಂದು ವಿಷಯ ಅರ್ಥ ಮಾಡಿಕೊಳ್ಳಿ, ಭಯೋತ್ಪಾದಕರ ಸರ್ವನಾಶಕ್ಕೆ ಎಲ್ಲಾ ಸಾಮಾನ್ಯ ಜನರ, ಶಾಂತಿ ಪ್ರಿಯರ ಬೆಂಬಲ ಸದಾ ಇರುತ್ತದೆ. ಆದರೆ ಹೇಗೆ ? ಧರ್ಮ ಎಂಬ ಅಫೀಮಿಗೆ ಬಹುತೇಕ ಎಲ್ಲರೂ ದಾಸರಾಗಿರುವ ಸನ್ನಿವೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು ಹೇಗೆ ? ತುಂಬಾ ತುಂಬಾ ಕಷ್ಟ.
ಬಹುಶಃ ಭಾರತ ಸರ್ಕಾರದ ಈಗಿನ ನಿಲುವುಗಳನ್ನು ಗಮನಿಸಿದರೆ…
ಮುಂದೆ ಓದಿ...