24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕವಿ..

June 30, 2012 - 6:30pm
spsshivaprasad

ಅಂತರದಿ ಬರೆದುದು

ಅನಂತರದಿ ಸಾಗುವುದು

ಭವ್ಯ ಬರೆಯುವುದೇಕೆ?

ಇಲ್ಲದನು ಬಣ್ಣಿಸಿ,

ಎಲ್ಲರನು ನಂಬಿಸಿ

ಮೆಚ್ಚುಗೆಯ ಪಡೆಯ ಬೇಕೆ..?

 

ಕವಿ ಭಾವ ಬರೆಸುವುದು

ನೈಜತೆಯು ಕೆರಳುವುದು

ಮರುಸೃಷ್ಟಿ ಕಲ್ಪನೆ,

ಅನುಕರಣೆ ಸಾಧ್ಯ,

ಅನುಕರಿಸಿ ಅಂಕುರಿಸಿ

ಅರಳುವುದೇ ಕವನ..

 

ಸ್ತಬ್ಧತೆಯ ಕುಂಚದಲಿ

ಅರುಣೋದಯದ ಉದಯ

ಬರೆಸಿದವ ನಿಜ ಕವಿಯು,

ಬರೆದವನು ಲಿಪಿಕಾರ,

ಕವಿ ನಾನು ಎಂಬುದಕು

ಗರ್ವ ಬೇಕೋ ತಮ್ಮ..

ಸೃಷ್ಟಿಯೇ ನಿಜ ಕವಿಯು

ತಿಳಿಯ ಬೇಕೋ..

 

ಶಿವಪ್ರಸಾದ್ ಎಸ್.ಪಿ.ಎಸ್

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on
ಅಂತರದಿ ಬರೆದುದು ಅನಂತರದಿ ಸಾಗುವುದು ಭವ್ಯ ಬರೆಯುವುದೇಕೆ? ಇಲ್ಲದನು ಬಣ್ಣಿಸಿ, ಎಲ್ಲರನು ನಂಬಿಸಿ ಮೆಚ್ಚುಗೆಯ ಪಡೆಯ ಬೇಕೆ..? ಸ್ತಬ್ಧತೆಯ ಕುಂಚದಲಿ ಅರುಣೋದಯದ ಉದಯ ಬರೆಸಿದವ ನಿಜ ಕವಿಯು, ಬರೆದವನು ಲಿಪಿಕಾರ, ಕವಿ ನಾನು ಎಂಬುದಕು ಗರ್ವ ಬೇಕೋ ತಮ್ಮ.. ಸೃಷ್ಟಿಯೇ ನಿಜ ಕವಿಯು ತಿಳಿಯ ಬೇಕೋ.. =============== ಸಖತ್ ಸಾಲುಗಳು... ಹಿನ್ದೊಮ್ಮೆ ನಾ ಒನ್ದು ಗೀಛಿದ್ದೆ... ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು) | ಸಂಪದ - Sampada http://sampada.net/%E0%B2%92%E0%B2%82%E0%B2%A6%E0%B3%81-%E0%B2%95%E0%B2%B5%E0%B2%A8-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%95%E0%B2%BE%E0%B2%B0%E0%B2%A3-%E0%B2%A4%E0%B3%8B%E0%B2%9A%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%97%E0%B3%80%E0%B2%9A%E0%B2%BF%E0%B2%A6%E0%B3%8D%E0%B2%A6%E0%B3%81 \|/

Submitted by spsshivaprasad on
ಸಪ್ತಗಿರಿ ಅವರಿಗೆ ಧನ್ಯವಾದಗಳು.. ತಮ್ಮ "ತೋಚಿದ್ದ್" ಅನ್ನು ಓದಿದೆ.. ಬಹಳ ಸೊಗಸಾಗಿದೆ.. ಎಸ್.ಪಿ.ಎಸ್

Submitted by venkatb83 on
ತಮ್ಮ ಮೆಚ್ಚುಗೆಗೆ ವಂದನೆಗಳು...... ಶುಭವಾಗಲಿ... \|/