ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 80 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

"ಹಂಸನಾದ" ಪುಸ್ತಕ ಬಿಡುಗಡೆ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
16
Jul
2011
ಲೇಖನ

ಇಂದು, ೧೬ ಜುಲೈ ೨೦೧೧ರಂದು, ಸಾರಂಗ ಮೀಡಿಯ, ಆಕೃತಿ ಪುಸ್ತಕ ಮತ್ತು ಮಂದಾರ ಪುಸ್ತಕ ಇವರ ಆಶ್ರಯದಲ್ಲಿ "ಹಂಸನಾದ" ಪುಸ್ತಕದ ಬಿಡುಗಡೆ. ಜೊತೆಯಲ್ಲೇ "ಅಕ್ಟೋಬರ್ ೧೦" ಕಥಾಸಂಕಲನದ...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,059
ಜನಪರ ಆಂದೋಲನಗಳಲ್ಲಿ ಗೇಯಪದಗಳು
Shivashankar Rao's picture
Addoor Shivashankar Rao
13
May
2012
ಲೇಖನ

 

ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಗಳಿಸಿದ ನಂತರದ ದಿನಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಸಭೆ ಆರಂಭವಾಗುವ ಮೊದಲು ಜನರ ಗಮನ...

ಪ್ರತಿಕ್ರಿಯೆಗಳು: 0
ಹಿಟ್ಸ್ : 80
ಪ್ರಾಣಿಗಳು ಮತ್ತು ಮನುಷ್ಯರ ಬಾಳಿನ ಸೂತ್ರಗಳು ಕತೆಗಳ ಮೂಲಕ - ರಾ.ಶಿ. ಅವರ 'ಮೃಗ-ಶಿರ' ಪುಸ್ತಕ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
09
Mar
2011
ಬ್ಲಾಗ್ ಬರಹ


ಪ್ರಾಣಿಗಳನ್ನು ನೋಡುವಾಗ ಅವುಗಳ  ನಡವಳಿಕೆಗೂ ಮಾನವನ ನಡವಳಿಕೆಗೂ ತುಂಬಾ ಸಾಮ್ಯ ಇರುವದು ಕಂಡು ಬರುತ್ತದೆ. ಪ್ರಾಣಿಗಳಲ್ಲಿ ದೇಹಕ್ಕೆ ಸಂಬಂಧಿಸಿದುದು ಮಾನವರಲ್ಲಿ...

ಪ್ರತಿಕ್ರಿಯೆಗಳು: 4
ಹಿಟ್ಸ್ : 702
ದುರ್ಯೋಧನ: ನನ್ನೇಕೆ ದೂರುವಿರಿ ?
bhalle's picture
ಶ್ರೀನಾಥ್ ಭಲ್ಲೆ
07
Nov
2009
ಪುಟ

 

ಸಮಂತಪಂಚಕ ನದೀ ತೀರದಲ್ಲಿ ನಿರ್ಜೀವವಾಗಿ ಬಿದ್ದಿದ್ದಾನೆ ದುರ್ಯೋಧನ. ಹುಟ್ಟಿನಿಂದ ಸಾವಿನವರೆಗೂ ನೆಡೆದಿದ್ದ ದಾಯಾದಿ ಹಗೆತನಕ್ಕೆ ತೆರೆಬಿದ್ದಿದೆ. ತನ್ನ...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,322
ಸತ್ಯಕಾಮರ ಕಿಡಿನುಡಿಗಳು
thesalimath's picture
ಶ್ರೀಹರ್ಷ ಸಾಲಿಮಠ
18
Feb
2010
ಪುಟ

   ...

ಪ್ರತಿಕ್ರಿಯೆಗಳು: 3
ಹಿಟ್ಸ್ : 1,262
ಪದವಿ ತರಗತಿಗಳಲ್ಲಿ ಕನ್ನಡ ಶಿಕ್ಶಣ
H.S.R.Raghavendra Rao's picture
30
Jan
2007
ಪುಟ

ಕನ್ನಡವನ್ನು ಕಲಿತವರಿಗೆ, ಕಲಿಸುವವರಿಗೆ ಮತ್ತು ಇತರ ಆಸಕ್ತರಾದವರಿಗೆಂದು ಈ ಲೇಖನವನ್ನು ಇಲ್ಲಿ ಹಾಕಿದ್ದೇನೆ. ಪ್ರತಿಕ್ರಿಯೆಗಳಿಗೆ ಸ್ವಾಗತ.

...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,574
ಅನನ್ಯ ಅಲ್ಲಮ ೭ (೬)
csomsekraiah's picture
ಸಿ ಸೋಮಶೇಖರಯ್ಯ
24
Sep
2010
ಪುಟ

 

...
ಪ್ರತಿಕ್ರಿಯೆಗಳು: 9
ಹಿಟ್ಸ್ : 789
ಟ್ವಿಟ್ಟರ್ ಮತ್ತು ಗೂಗಲ್ ಪರ್ಯಾಯ
hpn's picture
ಹರಿ ಪ್ರಸಾದ್ ನಾಡಿಗ್
02
Nov
2009
ಪುಟ

ಟ್ವಿಟ್ಟರ್

(ಲೇಖನ ೪, ಅಕ್ಟೋಬರ್...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,327
ಕಥೆ : ಸೀತೆ
partha1059's picture
ಪಾರ್ಥಸಾರಥಿ
08
Mar
2011
ಲೇಖನ

ನಿದಾನವಾಗಿ ಹಗಲು ಸಂಜೆಯಾಗಿ ಬದಲಾಗುತ್ತಿತ್ತು. ಸುತ್ತಲ ಮರಗಳಲ್ಲಿ ಅಹಾರವನ್ನರಸಿ ದೂರಹೋಗಿದ್ದ ಪಕ್ಷಿಗಳೆಲ್ಲ  ಹಿಂದಿರುಗಿ ಗೂಡಿಗೆ...

ಪ್ರತಿಕ್ರಿಯೆಗಳು: 24
ಹಿಟ್ಸ್ : 1,080
ಅಮಾವಾಸ್ಯೆಯ ಒಂದು ರಾತ್ರಿ !
bhalle's picture
ಶ್ರೀನಾಥ್ ಭಲ್ಲೆ
28
Jan
2010
ಪುಟ
ೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ...
ಪ್ರತಿಕ್ರಿಯೆಗಳು: 19
ಹಿಟ್ಸ್ : 1,762

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಕ್ಷುಲ್ಲಕ ಕಾರಣ, ಅಮಾಯಕರ ಸಾವು

ಕ್ಷುಲ್ಲಕ ಕಾರಣ, ಅಮಾಯಕರ ಸಾವು

ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ ಮಕ್ಕಳಿಗೆಂದು ಗೋಬಿ ಮಂಚೂರಿ ಕಟ್ಟಿಸಿಕೊಂಡು ಮನೆಗೆ ಹೋಗುತ್ತಾನೆ. ಅದನ್ನು ತಿಂದ ಮಕ್ಕಳು ತುಂಬಾ ಖಾರ ಆಯಿತು ಎಂದು ಅಪ್ಪನಲ್ಲಿ ದೂರುತ್ತಾರೆ. ಕೋಪಗೊಂಡ ಅಪ್ಪ ಗೋಬಿ ಮಾರಿದ ಹೋಟೆಲ್ ಗೆ ಬಂದು ಇದರ ಬಗ್ಗೆ ದೂರುತ್ತಾನೆ. ರಾತ್ರಿಯಾದ್ದರಿಂದ ಹೋಟೆಲ್ ಮುಚ್ಚುತ್ತಿದ ಯಜಮಾನ ದೂರಿದ ಗಿರಾಕಿಯ ಮೇಲೆ ಕೈ ಮಾಡುತ್ತಾನೆ, ಇನ್ನಷ್ಟು ತದುಕಲು ಕೆಲಸಗಾರರನ್ನೂ ಕರೆಸುತ್ತಾನೆ. ಎಲ್ಲರ ಬಡಿತ ತಿಂದ ಗಿರಾಕಿ ಕೊನೆಯುಸಿರೆಳೆಯುತ್ತಾನೆ. ಎಂಥ ದುರಂತ ನೋಡಿ. ಮಕ್ಕಳು ಆಸೆ ಪಡುತ್ತಾರೆ ಎಂದೋ ಅಥವಾ ಬೆಳಿಗ್ಗೆ ಮನೆಯಿಂದ ಹೊರಡುವಾಗ ಅಪ್ಪಾ, ಬರುವಾಗ ಗೋಬಿ ತಗೊಂಡು ಬಾ ಎಂದು ಹೇಳಿದ ಪುಟಾಣಿಗಳ ಆಸೆ ಪೂರೈಸಲು ಕಟ್ಟಿಸಿಕೊಂಡು ತಂದ ತಿಂಡಿ ಅವನ ಅವಸಾನಕ್ಕೆ ಕಾರಣ ವಾಗಬಹುದು ಎಂದು ಅವನಿಗೆ ಖಂಡಿತ ಹೊಳೆದಿರಲಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಗಾಭರಿ ಹುಟ್ಟಿಸುತ್ತದೆ.
ಇಷ್ಟು ಕ್ಷುಲ್ಲಕ, ಸಾಧಾರಣ ಸಮಸ್ಯೆಯೊಂದು ಒಬ್ಬನ ಸಾವಿನಲ್ಲಿ ಸಮಾಪ್ತಿಯಾದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ನಮ್ಮ ಸಹನೆಯ ಮಿತಿ ಈ ರೀತಿ ತಳ ಮುಟ್ಟಲು ಕಾರಣವೇನು? ದಿನ ಬೆಳಗಾದರೆ ಈ ತೆರನಾದ ಮನಕಲಕುವ, ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸಗಳು ದೇಶದ ಎಲ್ಲೆಡೆ ವರದಿ ಆಗುತ್ತಿದ್ದರೂ ನಮಗೆ ಅದು ಒಂದು ಪುಟ್ಟ distraction ಮಾತ್ರವಾಗಿ ಗೋಚರಿಸುವುದು ಖೇದಕರ. 
  
ಮೇಲಿನ ದುರಂತ ದಕ್ಷಿಣ ಭಾರತದ್ದಾದರೆ ಈಗ ಬನ್ನಿ ಉತ್ತರ ಭಾರತಕ್ಕೆ.
 
ತಾನು ಪ್ರೀತಿಸಿದವನನ್ನು ತನ್ನ ತಂದೆ ಇಷ್ಟ ಪಡಲಿಲ್ಲ ಎಂದು ಪ್ರಿಯಕರ ಮತ್ತು ಅವನ ಮಿತ್ರನನ್ನು ತನ್ನ ತಂದೆಯನ್ನು ಕೊಲ್ಲಲು ಮಗಳು ನಿಯಮಿಸುತ್ತಾಳೆ. ಅವರಿಬ್ಬರೂ ಸೇರಿ ಹುಡುಗಿಯ ತಂದೆಗೆ ಗತಿ ಕಾಣಿಸುತ್ತಾರೆ. ನಂಬಲು ಸಾಧ್ಯವೇ ಈ ಘಟನೆಯನ್ನು? ಇಂಥ ಪೈಶಾಚಿಕ ಪ್ರವೃತ್ತಿಗೆ ಕಾರಣವಾದರೂ ಏನಿರಬಹುದು? ಅಸಹನೆಯ ಕಿಡಿ, ಧ್ವೇಷದ ಮನೋಭಾವ ಇವಕ್ಕೆ ಕಾರಣ ಎಂದು ದೂರುವಂತಿಲ್ಲ. ಏಕೆಂದರೆ ಇವು ಆ ಕ್ಷಣದಲ್ಲಿ ಹುಟ್ಟಿಕೊಂಡ ವಿಕೃತ ಕೃತ್ಯ. ವ್ಯವಸ್ಥಿತವಾಗಿ ನಡೆಯುವ ಹಲ್ಲೆಗಳಿಗೆ ಪರಿಹಾರ ಹಾಗೂ ಹೀಗೂ ಕಂಡು ಕೊಳ್ಳಬಹುದು. ಜನರನ್ನು ಜಾಗೃತಿ ಗೊಳಿಸಬಹುದು. ಧ್ವೇಷ ದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ ಕೊಡಬಹುದು. ಅಂಥ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳ ಬಹುದು. ಆದರೆ ಈ ರೀತಿ ಥಟ್ಟನೆ ಉದ್ಭವವಾಗುವ ಹಿಂಸೆಗೆ ಏನು ಪರಿಹಾರ? ಮೇಲಿನ ಎರಡು ಪೈಶಾಚಿಕ ಘಟನೆಗಳು ಎಲ್ಲೋ ಒಂದೋ ಎರಡೋ ಆಗಿದ್ದಿದ್ದರೆ ನಿಟ್ಟುಸಿರು ಬಿಟ್ಟು ಮುಂದೆ ಸಾಗಬಹುದಿತ್ತು. ದಿನ ಬೆಳಗಾದರೆ ನಮಗೆ ಎದುರಾಗುವುದು ಇಂಥ ಅವಿವೇಕತನದಿಂದ ಕೂಡಿದ ಹಿಂಸೆಗಳೇ. ಚಿಲ್ಲರೆಗಾಗಿ ಕೊಲೆ, ಚೌಕಾಶಿ ಮಾಡಿದ್ದಕ್ಕೆ ಕೊಲೆ, ಇಟ್ಟುಕೊಂಡವಳಿಗಾಗಿ ಕೊಲೆ, ತನ್ನ ಸೋದರಿಯನ್ನು ಪ್ರೀತಿಸಿದ್ದಕ್ಕಾಗಿ ಕೊಲೆ............ಅಸಹನೆಯ ಕೂಪಕ್ಕೆ ದಬ್ಬಲ್ಪಡುತ್ತಿರುವ ನಮ್ಮ ಸಮಾಜವನ್ನು, ಸಂಸ್ಕಾರವನ್ನು ಪಾರು ಮಾಡಲು ನಾವೇನು ಮಾಡಬಹುದು? ನಾಗರೀಕ, ಪ್ರಜ್ಞಾವಂತ ಸಮಾಜ ಕೇಳಿಕೊಳ್ಳಬೇಕಾದ ಪ್ರಶ್ನೆ.        
No votes yet
750 ಹಿಟ್ಸ್

ಪ್ರತಿಕ್ರಿಯೆಗಳು

gururajkodkani's picture
22
Jul
2011
2:43

ನಿಜಕ್ಕೂ ಯೋಚಿಸುವ೦ತಹ ಮಾತೇ ಅಬ್ದುಲ್ ಅವರೇ, ಉತ್ತರ ಭಾರತದ ಬಗ್ಗೇ ಗೊತ್ತಿಲ್ಲ ಆದರೇ ಬೆ೦ಗಳೂರಿನ ಬಗೆಗೆ ನಾನು ಗಮನಿಸಿದ್ದೇನೆ೦ದರೇ ,ಇಲ್ಲಿಯ ಜನಕ್ಕೆ ಸಹನೇ ತು೦ಬಾ ಕಡಿಮೆ.ಕೆಲಸದ ಒತ್ತಡವೋ,ಇಲ್ಲಿನ ವಾತಾವರಣವೋ ಗೊತ್ತಿಲ್ಲ ಆದರೇ ತು೦ಬಾ ಚಿಕ್ಕ ಪುಟ್ಟ ಕಾರಣಗಳಿಗೆ ಸಣ್ಣ ಮಕ್ಕಳ೦ತೇ ಜನ ಹೊಡೆದಾಡುವುದನ್ನು ನಾನು ನೋಡಿದ್ದೇನೆ

ನಂದೀಶ್ ಬಂಕೇನಹಳ್ಳಿ's picture
22
Jul
2011
4:21

ಹೌದು,ಆದುನಿಕತೆಯ ಹುಚ್ಚು ಓಟದಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸುವುದನ್ನೇ ಮರೆತಿದಾನೆ.ಸಣ್ಣಪುಟ್ಟದಕೆಲ್ಲಾ ಕೊಲೆ ಮಾಡಲು ಹೊರಟ ಮನುಷ್ಯ ಆತ್ಮವಿಮರ್ಶೆ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕಾಗಿದೆ ಅಲ್ವೆ?

abdul's picture
22
Jul
2011
5:24

ಗುರುರಾಜ್, ನಂದೀಶ್, ಪ್ರತಿಕ್ರಿಯೆಗೆ ಧನ್ಯವಾದಗಳು.

"ಕೆಡುಕು ಬಗೆಯದಿರು",ಇದು ಶಿಕ್ಷಣದ ಪ್ರ ಪ್ರಥಮ ಧ್ಯೇಯ, ಬೋಧನೆ ಆಗಬೇಕು.

kavinagaraj's picture
23
Jul
2011
1:09

ಅಬ್ದುಲ್, ನಿಮ್ಮ ಕಳಕಳಿಗೆ ಧನ್ಯವಾದ. ಧನಾತ್ಮಕ ಬೆಳವಣಿಗೆಗೆ ಇಂದು ಪ್ರೋತ್ಸಾಹವಿಲ್ಲ, ಕೆಟ್ಟ ಸಂಗತಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಸಿಗುತ್ತಿದ್ದು ಇದೂ ಸಹ ಇಂತಹ ಅವನತಿಗೆ ಕಾರಣಗಳು.

lnbhatta's picture
23
Jul
2011
9:58

ಆಧುನಿಕ ಶಿಕ್ಷಣದಲ್ಲಿ ಜೀವನ ಮೌಲ್ಯಗಳ ಕುರಿತಾದ ಚಿಂತನೆ-ಅಳವಡಿಕೆ ಇಲ್ಲ. ಜೀವನ ಮೌಲ್ಯಗಳನ್ನು ಉದ್ದೀಪಿಸುವ ಕಾರ್ಯದಲ್ಲಿ ತೊಡಗಬೇಕಾಗಿದ್ದ ಮಠ-ಸಂಸ್ಥೆಗಳೂ ವಾಣಿಜ್ಯೀಕರಣಕ್ಕೆ ಒಳಗಾಗಿ ದುಡ್ಡು ಗಳಿಸುವ ದಂಧೆಗೆ ತೊಡಗಿವೆ. ಒಟ್ಟಿನಲ್ಲಿ ಬೆಕ್ಕಿಗೆ ಗಂಟೆ ಕಟ್ಟುವರಾರು? ಎಂಬ ಪರಿಸ್ಥಿತಿ.

pavi shetty's picture
24
Jul
2011
7:36

ದಿನ ಕಳೆದಂತೆ ನಮ್ಮಲ್ಲಿ ಸಹನೆ ಸಹಬಾಳ್ವೆ ಕಡಿಮೆಯಾಗುತ್ತಿದೆ. ಜಗಳ ಕೊಲೆಯಲ್ಲಿಯೇ ಅಂತ್ಯಗೊಳ್ಳುತ್ತಿದೆ. ಇದಕ್ಕೆ ಯಾರನ್ನ ಹೊಣೆ ಮಾಡುವುದೋ ತಿಳಿಯದು!

manju787's picture
24
Jul
2011
10:36

ಅಬ್ದುಲ್, ನಿಜಕ್ಕೂ ನಿಮ್ಮ ಲೇಖನದಲ್ಲಿ ಎದ್ದು ಕಾಣುವ ಸಾಮಾಜಿಕ ಕಳಕಳಿ ಇ೦ದು ಎಲ್ಲ ವಿದ್ಯಾವ೦ತರು ಅನ್ನಿಸಿಕೊ೦ಡವರಲ್ಲಿ ಕ೦ಡಿದ್ದಿದ್ದರೆ, ಬಹುಶಃ ಇ೦ಥ ಘಟನೆಗಳು ನಡೆಯುತ್ತಿರಲಿಲ್ಲ. ಆಧುನೀಕರಣದ ಸು೦ಟರಗಾಳಿಯಲ್ಲಿ ಸಿಲುಕಿರುವ ಇ೦ದಿನ ತಲೆಮಾರು ತನ್ನತನವನ್ನು ಕಳೆದುಕೊ೦ಡು ಅತ್ಯ೦ತ ಅಮಾನವೀಯರಾಗಿ ಬದಲಾಗುತ್ತಿರುವ ಸಾ೦ಸ್ಕೃತಿಕ ಪಲ್ಲಟದ ದ್ಯೋತಕವೇ ಈ ಘಟನೆಗಳಾಗಿವೆ ಅನ್ನಿಸುತ್ತದೆ.

abdul's picture
24
Jul
2011
5:01

ನಾಗರಾಜ್, ಲಕ್ಷ್ಮೀ ನಾರಾಯಣ, ಪವಿತ್ರ ಮತ್ತು ಮಂಜು,
ಪ್ರತಿಕ್ರಯಿಸಿದ್ದಕ್ಕೆ ತಮ್ಮೆಲ್ಲರಿಗೆ ಧನ್ಯವಾದಗಳು. ನಮ್ಮ ಗಮನ ನಮ್ಮ ಮಕ್ಕಳ ಶಿಕ್ಷಣದ ಕಡೆಗಿದೆ. ಪ್ರಶಂಸ ನೀಯವೇ. ಆದರೆ ಯಾವ ತೆರನಾದ ಶಿಕ್ಷಣ ನಾವು ಅವರಿಗಾಗಿ ಬಯಸುತ್ತಿರುವುದು? ಪೈಪೋಟಿ ಶಿಕ್ಷಣ ಕೊಡಿಸುವುದು ನಮ್ಮ ಧ್ಯೇಯವಾಗಿದೆ. ಆಂಗ್ಲ, ಗಣಿತ ವಿಜ್ಞಾನ ಈ ವಿಷಯಗಳಲ್ಲಿ ಪರಿಣತಿ ಮತ್ತು ಹೆಚ್ಚು ಅಂಕ ಪಡೆದರೆ ಸಾಕು ಅನ್ನೋ ಮನೋಭಾವ ನಮ್ಮಲ್ಲಿದೆ. ನೈತಿಕ ಶಿಕ್ಷಣ ಅನ್ನೋ ಒಂದು ವಿಷಯ ಶಾಲೆಯಲ್ಲಿದ್ದರೆ ಅಂಕ ಪಟ್ಟಿಯಲ್ಲಿ ಅದಕ್ಕೆ ಕೊನೆ ಸ್ಥಾನ ಕೊಟ್ಟಿರುತ್ತಾರೆ. ಅದರಲ್ಲಿ ಅಂಕಗಳು ಹೆಚ್ಚು ಕಡಿಮೆ ಬಂದರೂ ನಾವು ಗಾಭರಿಯಾಗೋಲ್ಲ.

ಮೊನ್ನೆ ಶುಕ್ರವಾರ ನಾರ್ವೆ ದೇಶದಲ್ಲಿ ನಡೆದ, ವಿಶ್ವವನ್ನೇ ನಡುಗಿಸಿದ ಸಾಮೂಹಿಕ ನರಸಂಹಾರ ಸಹ ನಮ್ಮ ಕಣ್ಣು ತೆರೆಸಬೇಕು. ನಾರ್ವೆಗೆ ಹೆಚ್ಚು ಸುರಕ್ಷಾ ಕ್ರಮಗಳು ಬೇಕೇ ಎನ್ನುವ ಪ್ರಶ್ನೆಗೆ ಪ್ರತಿಕ್ರಯಿಸಿದ ಓಸ್ಲೋ ನಗರದ ಮೇಯರ್ ಹೇಳಿದ್ದು, “we need to teach greater respect”. ಎಂದು. ಎಂಥ ಮುತ್ಸದ್ದಿತನದ ಮಾತುಗಳು ಇವು. ಈ greater respect ಭಾವನೆ ಉಂಟುಮಾಡುವ ಶಿಕ್ಷಣದ ಕಡೆ ನಾವು ಗಮನ ಹರಿಸುವುದು ಯಾವಾಗ? ಇನ್ನೆಷ್ಟು ರಕ್ತಪಾತ ನಾವು ಕಾಣಬೇಕು? ಕಣ್ಣೀರು ಬತ್ತಿದ ನಂತರ ಪ್ರಶ್ನೆಗಳ ಕಲೆ ಹಾಗೆಯೇ ಉಳಿಯುತ್ತವೆ.

bhasip's picture
26
Jul
2011
8:59

ಕೀನ್ ವಾಚರ್ ಗೆ, ಇಂತಹ ಘಟನೆಗಳು ಕಂಡಿದ್ದು ಸಂತೋಷ. ಹಾಗೆಯೆ KFD ಯ ತಮ್ಮ ಮತೀಯರು ಹುಣಸೂರಿನ ವಿದ್ಯಾರ್ಥಿಗಳನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು ಕೊಂದು ಹಾಕಿದ ಬರ್ಬರ ಘಟನೆ ಗಮನಕ್ಕೆ ಬಂದಿಲ್ಲವೇ? ಅಥವಾ ಜಾಣ ಕುರುಡು ತೋರಿಸಿ under ground ಆಗುವ ಮ್ಮ ಜಾಯಮಾನದ ಮತ್ತೊಂದು instance ನಿರೂಪಣೆಯೆ?

bhasip's picture
26
Jul
2011
9:00

ಕೀನ್ ವಾಚರ್ ಗೆ, ಇಂತಹ ಘಟನೆಗಳು ಕಂಡಿದ್ದು ಸಂತೋಷ. ಹಾಗೆಯೆ KFD ಯ ತಮ್ಮ ಮತೀಯರು ಹುಣಸೂರಿನ ವಿದ್ಯಾರ್ಥಿಗಳನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು ಕೊಂದು ಹಾಕಿದ ಬರ್ಬರ ಘಟನೆ ಗಮನಕ್ಕೆ ಬಂದಿಲ್ಲವೇ? ಅಥವಾ ಜಾಣ ಕುರುಡು ತೋರಿಸಿ under ground ಆಗುವ ಮ್ಮ ಜಾಯಮಾನದ ಮತ್ತೊಂದು instance ನಿರೂಪಣೆಯೆ?

abdul's picture
26
Jul
2011
12:48

ಭಾಸ್ಕರ್, ತಪ್ಪು ಗ್ರಹಿಕೆ. ಒಂದು ಘಟನೆಯ ಬಗ್ಗೆ ಎಲ್ಲರೂ ಬರೆಯೋಲ್ಲ. ಹುಣಸೂರಿನ ದುರಂತದ ಬಗ್ಗೆ ಒಂದೆರಡು ಲೇಖನಗಳೂ, ಶೋಕ ಕವನಗಳೂ ಪ್ರಕಟವಾದವು. ಅವಕ್ಕೆ ಪ್ರತಿಕ್ರಯಿಸಿದ್ದೇನೆ ಕೂಡಾ.

bhasip's picture
26
Jul
2011
1:36

ಗ್ರೇಟ್ escapism!!

Aravind M.S's picture
27
Jul
2011
2:50

ಹಲೋ ಭಾಸ್ಕರ್,

ಕಂಡರಿತಿರುವ ವಯಸ್ಸಾದ ತಂದೆಯನ್ನ ಯಾವುದೇ ಅನ್ಯಾಯಕ್ಕಾಗಿ ಕೊಲ್ಲುವುದು ತಪ್ಪೇ.

ಆದರೆ ಏನೂ ಅನ್ಯಾಯ ಮಾಡಿರದ ಮಕ್ಕಳನ್ನು ಹಣಕ್ಕಾಗಿ ಕೊಂದ ಹುಣಸೂರಿನ ಪ್ರಕರಣ ನಿಜಕ್ಕೂ ಇನ್ನೂ ಭಯಾನಕ. ಇನ್ನೇನು ಓದಿ ಜನಕ್ಕೆ ನೆರವಾಗುತ್ತಾ ಜೀವನವನ್ನು ಎದುರಿಸಲು ಸಿದ್ಧವಾಗಿ ನಿಂತ ಕಾಲೇಜ್ ಹುಡುಗರನ್ನ ಕೊಂದದ್ದು ನಿಜಕ್ಕೂ ದಾರುಣವಾಗಿತ್ತು.

- ಅರವಿಂದ

jokumar's picture
05
Aug
2011
9:18

ಖಾರ ಇದೆಯೆಂದಾಕ್ಷಣಕ್ಕೆ ಅಂಗಡಿಯವನನ್ನು ಆ ರಾತ್ರಿಯಲ್ಲಿ ಅದು ಆತ ಅಂಗಡಿ ಮುಚ್ಚುವ ಸಮಯದಲ್ಲಿ ಹೋಗಿ ಕೇಳುವ ಅಗತ್ಯವೇನಿತ್ತು?
ನಾನು ನೋಡಿದ ಹಾಗೆ ಬೆಂಗಳೂರಿನಲ್ಲಿ ಮಕ್ಕಳನ್ನು ಬೆಳೆಸುವ ಪದ್ಧತಿ ಹಾಗು ಅವರಿಗೆ ತೋರಿಸುವ ಔದಾರ್ಯ ಅತಿಯಾಗಿದೆ ಅನ್ನುವದಕ್ಕೆ ಇದು ಜ್ವಲಂತ ಉದಾಹರಣೆ, ಮಕ್ಕಳಿಗೆ ಖಾರ ಎನಿಸುತ್ತಿದ್ದರೆ ಬೇರೆ ಏನಾದರು ಕೊಡಬಹುದಿತ್ತಲ್ಲ. ಜುಜುಬಿ ಗೋಬಿ ಮಂಚೂರಿ ಅದು ಜಂಕ್ ತಿಂಡಿ ಗೋಸ್ಕರ ತನ್ನ ಪ್ರಾಣವನ್ನೆ ಕಳೆದು ಕೊಂಡನಲ್ಲ.

RAMAMOHANA's picture
06
Aug
2011
2:11

ಸಾಮಾಜಿಕ ಕಳಕಳಿಯ ಉತ್ತಮ ಲೇಖನ. ಶಿಕ್ಷಣದ ಜೊತೆ ಅರಿವೂ ಮೂಡಿಸಬೇಕು, ಅಂತೆಯೆ ಹಿರಿಯರು - ನಾಯಕರು ತಮ್ಮ ಜವಾಬ್ದಾರಿಯುತ
ನಡೆ ನುಡಿ ಆದರ್ಶಗಳನ್ನು ಬಿಡದೆ ಮಾದರಿಯಾಗಿರಬೇಕು, ಅವರವರ ಸ್ಥಾನಗಳಿಗೆ ತಕ್ಕಂತೆ.
ಅಂತೆಯೆ ಹಿಂದಿನಿಂದ ನಮ್ಮಲಿ ಮಾಂಸಾಹಾರ ಮತ್ತು ಮದ್ಯಪಾನ ವರ್ಜಿತವಿತ್ತು, ಜೊತೆಗೆ ಅದಕ್ಕೆ ತಕ್ಕ ಕಟ್ಟುಪಾಡು ಇತ್ತು.
ಆದರೆ ಈಗ ಅದು ವ್ಯತಿರಿಕ್ತವಾಗಿದೆ ಮತ್ತು ಒಂದು ಮಟ್ಟಕ್ಕೆ ಅತಿಯಾಗೇ ಇದೆ ಅನ್ನಬಹುದು, ಸಾಮಾನ್ಯವಾಗಿ ಇವು ಮನುಷ್ಯತನವನ್ನು ಮೃಗತ್ವದೆಡೆಗೆ
ಎಳೆಯಲು ಸಹಾಯ ಮಾಡುತ್ತವೆ.

ಜೊತೆಗೆ ಬದುಕಿನಲ್ಲಿ ಸರಳತೆ ಅತ್ಯಗತ್ಯ.

-ನನ್ನ ಅನಿಸಿಕೆ ಅಭಿಪ್ರಾಯ-
-ಧನ್ಯವಾದಗಳು ಅಬ್ದುಲ್ ಅವರೆ
-ರಾಮಮೋಹನ