23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗಾಳಿಗೆ ತಲೆಯಿಲ್ಲ !

June 26, 2012 - 5:13pm
bhalle

 

ಇದ್ರೇನು ಗಾಳಿ ಮಳೆಯ ಬಿರುಸು

ಇತ್ತಲ್ಲಿ ಮಣ್ ವಾಸನೆಯ ಸೊಗಸು

 

ಗಾಳಿಯ ಬಿರುಸಿಗೆ ವಾಲಿ ಮರ ಬಾಗಿತ್ತು

ಸುವಾಸನೆಗೆ ಸೋತು ಮಣ್ಣಿಗೆ ಮುತ್ತಿಕ್ಕಿತು

 

ಬಿದ್ದ ಮಳೆಯಿಂದೇಳುವುದು ಸುವಾಸನೆ

ಗಾಳಿ ಹೊತ್ತೊಯ್ವುದು ವಾಸನೆಯ ವೇದನೆ

 

ಮನುಜನೂ ಪ್ರಕೃತಿಯ ಕೂಸೇ ನಿಜ

ಅವನಂತೂ ಅನುಭವಿಸಲಾರ ಈ ಮಜ

 

ಮಳೆಯೋ ಹಾಳು ಮಳೆ, ಗಾಳಿಯೋ ದರಿದ್ರ ಗಾಳಿ

ಇನ್ನು ಮಣ್ಣೋ ಕೆಟ್ಟ ಧೂಳು, ಕೊರಗುವುದೇ ಚಾಳಿ

 

ಮಣ್ಣಿಂದ ದೂರಾದ ವಾಸನೆಯ ವೇದನೆಗೆ ಬೆಲೆಯಿಲ್ಲ

ಮಾನವನ ಮೂಗಿಗೆ ಮುಟ್ಟಿಸಿದ ಗಾಳಿಗೆ ತಲೆಯಿಲ್ಲ !

 

 

 Photo: Tornado in our City on June 25th 2012. Picture taken by a friend of mine

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ನಿಜ ಮನುಜನಿಗೆ ಸದಾ ಕೊರಗುವುದೆ ಚಾಳಿ
ಮಳೆ ಬಂತೆದರೆ ಬಂದು ಕಾಡಿತು ಶನಿ ಅಂತಾನೆ
ಬಾರದಿದ್ದರೆ
ಮಳೆ ಬರುತ್ತಿಲ್ಲ ಪ್ರಕ್ಱುತಿಯ ಶಾಪ ಅಂತಾನೆ.

ಮನುಜನೀಗ ಪ್ರಕ್ಱುತಿಯ ಬಾಗ ಅಲ್ಲ
ಹಾಗಾಗಿ ಮನುಜನ ಭಾವ ವಿಕಾರಕ್ಕೆ ಬೆಲೆಯಿಲ್ಲ

. ಭೂಮಿಯ ಮೇಲೆ ಕಾಯುವುದು ಬಿಸಿಲು
ಸಾಗರದ ಮೇಲೆ ಸುರಿಯುವುದು ಮಳೆಯು
ಇದು ಪ್ರಕ್ಱುತಿಯ ಈಗಿನ ಪರಿಯು.

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ದ್ಹನ್ಯವಾದಗಳು ಪಾರ್ಥರೇ
ಎರಡು ದಿನಗಳ ಹಿಂದೆ ಬಿರುಗಾಳಿಯ ಆರ್ಭಟ ಕಂಡಾಗ ಹುಟ್ಟಿದ ಕವನವಿದು ... ಚಿತ್ರವನ್ನೂ ಸೇರಿಸಿದ್ದೇನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

.ಶ್ರೀನಾಥ್ ಅವರೆ,
ಕವನದ ಆಶಯ ಚೆನ್ನಾಗಿದೆ. ದುಡ್ಡು ಮಾಡಲು ಕೂತ ನಮಗೆ ಇದರ ಬಗ್ಗೆ ತಲೆ ಕೆಡೆಸಿಕೊಳ್ಳಲು ಸಮಯವಿಲ್ಲ :((

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ದ್ಹನ್ಯವಾದಗಳು ಶ್ರೀಧರ್ ಅವರೇ
ಎರಡು ದಿನಗಳ ಹಿಂದೆ ಬಿರುಗಾಳಿಯ ಆರ್ಭಟ ಕಂಡಾಗ ಹುಟ್ಟಿದ ಕವನವಿದು ... ಚಿತ್ರವನ್ನೂ ಸೇರಿಸಿದ್ದೇನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಅಲ್ಲಿ ಮಳೆ ಗಾಳಿ ‍ ಇಲ್ಲಿ ಬರಿ ಗಾಳಿ....!!
ಅಲ್ಲಿಯ ಮಳೆಯನ್ನ ಮಾತ್ರ ಇಲ್ಲಿಗೆ ಕಳಿಸಿ...!!

ಕವನ ಸಖತ್.. ಛಿತ್ರವು...
ಗುರುಗಳ ಕವನ ಓದಿದ ಮೆಲೆ ಅದೆ ತರಹದ್ ಹಿನ್ದೊಮ್ಮೆ ನನ್ನ ಪಟ್ಯ ಪುಸ್ತಕದಲ್ಲಿ ಓದಿದ್ದು ನೆನಪಾಯ್ತು... ಅಲ್ಲಿಯೋ ಕವಿ ಮಳೆ ‍ಛಳಿ ಬಿಸಿಲು ಕಾಲ ಬನ್ದಾಅಗ ಎಲ್ಲದಕ್ಕು ನಾವ್ ಗೊಣಗುವೆವು , ಯಾವುದನ್ನು ಅಸ್ವಾದಿಸೆವು ಎಮ್ಬ ಭಾವವಿತ್ತು... ಯಾರು ಬರೆದದ್ದು ನೆನಪಿಲ್ಲ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ಪ್ರತಿಕ್ರಿಯೆಗೆ ಧನ್ಯವಾದಗಳು ಸಪ್ತಗಿರಿಯವರೇ

ಅಲ್ಲಿ ಮಳೆ ಆಗಿಲ್ಲ ಎಂದು ಓದಿ ತಿಳಿದೆ :‍(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.