June 30, 2011 - 6:52pm
ಬುದ್ಧನ ಭಕ್ತನೊಬ್ಬನ ಬಳಿ ಬುದ್ಧನ ಕಟ್ಟಿಗೆಯ ವಿಗ್ರಹವಿತ್ತು. ಎಲ್ಲೇ ಹೋದರೂ ಸು೦ದರವಾದ ಭಕ್ತನ ಜೊತೆಯಲ್ಲಿದ ಆ ವಿಗ್ರಹ ಅರಿವನ್ನು ಪ್ರಚೋದಿಸುತ್ತಿತ್ತು. ಅದೊ೦ದು ರಾತ್ರಿ ಸಹಿಸಲಸಾಧ್ಯವಾದ ಕೊರೆಯುವ ಚಳಿ!
ಕಟ್ಟಿಗೆಯ ಬುದ್ಧ ಮಾತನಾಡಲು ಶುರುಮಾಡಿತು.
'ಈ ಛಳಿಯಲ್ಲಿ ಕಟಕಟನೇ ಹಲ್ಲು ಕಡಿದು ಕೊ೦ಡಿರುವುದರ ಬದಲು ನನ್ನನ್ನು ಸುಟ್ಟು ಬಿಡಬಾರದೇಕೆ? ಬೆ೦ಕಿಗೆ ನಾನು ಉರುವಲಾಗುತ್ತೇನೆ.'
ಭಕ್ತ ಹೇಳಿದ;
'ಅದು ಹೇಗೆ ಸಾದ್ಯ? ನಿನಗೆ ಅಗೌರವ ತೋರುವುದನ್ನು ನಾನು ಕಲ್ಪಿಸಿಕೊಳ್ಳುವುದಕ್ಕಾದರೂ ಆದೀತೇ?'
ವಿಗ್ರಹ ಹೇಳಿತು;
'ನೀನು ನನ್ನನ್ನು ಕೇವಲ ಈ ರೂಪದಲ್ಲಿ ಮಾತ್ರ ನೋಡುತ್ತಿದ್ದೀಯಾ ಎ೦ದರೆ ನಿನಗೆ ನಾನು ಸ೦ಪೂರ್ಣ ದಕ್ಕಿಲ್ಲವೆ೦ದೇ ಅರ್ಥ. ನಿನ್ನೊಳಗೂ ನನ್ನ ಅಸ್ತಿತ್ವವಿದೆ.
ನಿನ್ನೊಳಗೆ ನಾನು ನಡುಗುತ್ತಿದ್ದೇನೆ!!"
*****
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ದೇವರು...ವ್ಯಕ್ತಿಯೋ ಅಸ್ತಿತ್ವವೋ?..
ನಿಜ ಡಾಕ್ಟ್ರೇ, ನಮ್ಮೊಳಗೆ ನಮ್ಮ ಉಸಿರಾಗಿದ್ದು ನಮ್ಮ ಅಸ್ಥಿತ್ವವೇ ಆಗಿರುವ, ದೇವರನ್ನು ನಾವು ಗುರುತಿಸದೇ ಹೋದರೆ, ಇನ್ನಾವ ಮಂದಿರ, ಗುರುದ್ವಾರಗಳಿಗೆ ಹೊದರೂ ಫಲವಿಲ್ಲ!
ನನಗೆ ನನ್ನುಸಿರೇ ದೇವರು
ಉಸಿರು ನಿಂತರೆ ನನ್ನನ್ನು
ಕಾಯುವನಿನ್ನಾವ ದೇವರು?
-ಆಸು ಹೆಗ್ಡೆ
ಉ: ದೇವರು...ವ್ಯಕ್ತಿಯೋ ಅಸ್ತಿತ್ವವೋ?..
ಅತ್ಯ೦ತಿಕ ಸತ್ಯದ ಮಾರ್ಮಿಕತೆಯನ್ನು ಅರ್ಥೈಸಿಕೊ೦ಡ ಸುರೇಶ್ ರಿಗೆ ಧನ್ಯವಾದಗಳು.
ಉ: ದೇವರು...ವ್ಯಕ್ತಿಯೋ ಅಸ್ತಿತ್ವವೋ?..
ಅತ್ಯ೦ತಿಕ ಸತ್ಯದ ಮಾರ್ಮಿಕತೆಯನ್ನು ಅರ್ಥೈಸಿಕೊ೦ಡ ಸುರೇಶ್ ರಿಗೆ ಧನ್ಯವಾದಗಳು.
ಉ: ದೇವರು...ವ್ಯಕ್ತಿಯೋ ಅಸ್ತಿತ್ವವೋ?..
ಎಂತಹ ನಗ್ನ ಸತ್ಯ !
ನಾನು ಉಳಿದನಂತರ ನನ್ನೊಳಗಿನ ಪರಮಾತ್ಮ ಉಳಿದನಂತರವಷ್ಟೆ
ನಾವು ಸೃಷ್ಟಿಸಿದ ದೇವರು !
ನಿಜ ಸಾರ್
-ಪಾರ್ಥಸಾರಥಿ