25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಂಬಿ ಕೆಟ್ಟವರು..

June 25, 2012 - 9:55pm
spsshivaprasad

 

ನಾನು ನಂಬುವುದಿಲ್ಲ

ಯಾರಿಗೂ ಸೋಲದ ರಾವಣ

ಸೀತೆಗೆ ಸೋತನೆಂದರೆ..

ರಾವಣನಿಗೂ ಮುರಿಯದ ಧನಸ್ಸು

ರಾಮನಿಗೆ ಬಗ್ಗಿತೆಂದರೆ..

 

ನಾನು ನಂಬುವುದಿಲ್ಲ

ಬಸ್ಮಾಸುರನಿಗೆ ಹೆದರಿದ ಶಿವ

ಕಾಮನನ್ನು ಸುಟ್ಟನೆಂದರೆ,

ತನ್ನ ಮಗಳನ್ನೆ ಬೊಮ್ಮ

ಮದುವೆಯಾದನೆಂದರೆ..

 

ನಾನು ನಂಬುವುದಿಲ್ಲ

ಇಷ್ಟೆಲ್ಲ ನಾನು ಹೇಳಿದ ಮೇಲೂ

ನೀವು ಸುಮ್ಮನೆ ಇರುತ್ತೇನೆಂದರೆ

ನಾನು ನಂಬುವುದಿಲ್ಲ..

 

ಶಿವಪ್ರಸಾದ್ ಎಸ್.ಪಿ.ಎಸ್

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.