24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನನಗೆ ಅನುಮಾನ ಬರುತ್ತಿದೆ

August 15, 2012 - 1:08am
Rajendra Kumar ...

 

ನನಗೆ ಅನುಮಾನ ಬರುತ್ತಿದೆ

 

ಇಂದು ಸ್ವಾತಂತ್ರ್ಯೋತ್ಸವದ ದಿನ?!
ವಿಚಾರ ಮಾಡಿದರೆ,
ಯಾಕೋ ವಿಡಂಬನೆ ಎನಿಸುತ್ತೆ …
ಹೌದು, ಅದು ನಾವು
ಪುಕ್ಕಟ್ಟೆಯಾಗಿ ಪಡೆದು ಕೊಂಡದ್ದಲ್ಲ,
ಗಳಿಸಿಕೊಂಡದ್ದು.
ಆದರೆ ಉಳಿಸಿಕೊಂಡಿದ್ದೆವೆಯ ಎನ್ನುವ
ಪ್ರಶ್ನೆಯ ಚೂರಿ,
ಮುಗ್ದ ನಾಗರೀಕನ ಎದೆಯೊಳಗೊಮ್ಮೆ, ಹಣೆಬರಹಕೊಮ್ಮೆ
ಗೀರಿ ಗೀರಿ ನೆತ್ತರ ಮುಟ್ಟಿ ಗಹಗಹಿಸುತ್ತೆ.
ಅಪರಿಚಿತ ವಿದೇಶಿಗಳ 
ಅತ್ಯಾಚಾರದಿಂದ ಮುಕ್ತಿ ಕೊಡಿಸಿದ ತಾಯಿಗೆ
ಮಕ್ಕಳೇ, ಹೌದು ಅವಳ ಮಕ್ಕಳೇ
ಶೀಲಹರಣ ಮಾಡುವುದನು ನೋಡುವ ದುರ್ದಿನ.


ಆಚರಿಸಿ, ಬಂಧು ಭಗಿನಿಯರೆ ಆಚರಿಸಿ.
ಆದರೆ,
ಇನ್ ಕಿಲಾಬ್ ಜಿಂದಾಬಾದ್ ಎಂದು,
ಒಂದೇ ಮಾತರಂ ಎಂದು,
ಭಾರತ್ ಮಾತಾ ಕೀ ಜೈ ಎಂದು
ಹಾರಿಸಿದ ಈ ಧ್ವಜ
ನಾವು ಸ್ವತಂತ್ರವಾಗಿದಕ್ಕೋ
ಅಥವಾ ಇಂದು ಮತ್ತೊಮ್ಮೆ ಕಳೆದುಕೊಂಡಿದಕ್ಕೋ
ಎಂದು ನನಗೆ ಅನುಮಾನ ಬರುತ್ತಿದೆ ….

 

ರಾಜೇಂದ್ರಕುಮಾರ್ ರಾಯಕೋಡಿ - Copyright©

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by veena wadki on
ನಿಜ ಸರ್, ಧ್ವಜವೇರಿಸಿ ಭಾರತಾಂಬೆಗೆ ಜೈ ಎಂದು ಮರೆಯುವ ಮೊದಲು ಯೋಚಿಸಲೇಬೇಕು. ಕವನ ಚೆನ್ನಾಗಿದೆ ಅಭಿನಂದನೆಗಳು.