ನೆನಪಿನ ಪಯಣ - ಭಾಗ 8

ನೆನಪಿನ ಪಯಣ - ಭಾಗ 8

ನೆನಪಿನ ಪಯಣ - ಭಾಗ 8

 

 
ಮರುದಿನ

 
ನಿಮಾನ್ಸ್ ನಲ್ಲಿ ಡಾಕ್ಟರ್ ಟೇಬಲ್ ಎದುರು ನಾನು , ಆನಂದ ಹಾಗು ಸಂದ್ಯಾ ದಿಕ್ಕೆಟ್ಟು ಕುಳಿತಿದ್ದೆವು. ಆನಂದರ ಮಗ ಶಶಾಂಕ ಇನ್ನು ಬಂದಿರಲಿಲ್ಲ. ಅವನಿಗೆ ಬೇಗ ಬರುವಂತೆ ಆನಂದ ಪೋನ್ ಮಾಡಿ ತಿಳಿಸಿದ್ದರು.
ನಿಮಾನ್ಸಿಲ್ಲಿಯ ನ್ಯೋರೋಸ್ಪೆಶಲಿಷ್ಟ್ ಡಾಕ್ಟರ್ , ನಮ್ಮಿಂದ ಹಲವಾರು ಸಾರಿ ವಿವರಣೆ ಕೇಳಿದ್ದರು. ನಾನು ಎಲ್ಲವೂ ಹೇಗೆ ಆಯಿತೆಂದು ಬಿಡಿಸಿ ಬಿಡಿಸಿ ತಿಳಿಸಿದ್ದೆ. ಕಡೆಗೆ ಆನಂದ ಜ್ಯೋತಿಯ ತಲೆಯ ಬಳಿ ಇಟ್ಟಿದ್ದ ಮೊಬೈಲ್ ರೆಕಾರ್ಡಾರ್ ನೆನಪಿಗೆ ಬಂದಿತು. ಆನಂದ ತನ್ನ ಮೊಬೈಲ್ ನ್ನು ಡಾಕ್ಟರಿಗೆ ಕೊಟ್ಟಿದ್ದ. ಅದನ್ನು ಅಲ್ಲಿನ ಡಾಕ್ಟರಗಳ ಗುಂಪು ಎರಡೆರಡು ಸಾರಿ ಪ್ರತಿ ಅಕ್ಷರವನ್ನು ಕೇಳಿದ್ದರು.
ನ್ಯೂರಾಲಿಜಿಸ್ಟ್ ಡಾಕ್ಟರ್ ನಮ್ಮೆದುರು ಗಂಭೀರವಾಗಿ ಕುಳಿತಿದ್ದರು.
ನನ್ನನ್ನು ಕುರಿತು ಹೇಳಿದರು
ನೀವು ಎಂತಹ ಅಪಾಯಕಾರಿ ಕೆಲಸವನ್ನು ಕೈಗೊಂಡಿದ್ದೀರಿ ಎನ್ನುವ ಅರಿವು ನಿಮಗಿಲ್ಲವೆ , ಸಾಮಾನ್ಯವಾಗಿ ಸಮ್ಮೋಹಿನಿ ವಿದ್ಯೆಯನ್ನುನುರಿತವರು ಮಾತ್ರ ನಿರ್ವಹಿಸುವರು, ಆದರೆ ನೀವು ಎಲ್ಲೋ ಅರ್ಧ ಪರ್ದ ಕಲಿತು ಅದನ್ನು ಆಕೆಯ ಮೇಲೆ ಪ್ರಯೋಗಿಸಿದ್ದೀರಿ
ನಾನು ಬೆಚ್ಚಿಬಿದ್ದೆ
ಇಲ್ಲ ಡಾಕ್ಟರ್ ನನಗೆ ಸಮ್ಮೋಹಿನಿ ವಿಧ್ಯೆ ಅಂದರೆ ಹಿಪ್ನಾಟಿಸಂ ಗೊತ್ತು ಇಲ್ಲ, ಅದನ್ನು ಆಕೆಯ ಮೇಲೆ ಪ್ರಯೋಗಿಸಲು ಇಲ್ಲ
ಅವರು ನಕ್ಕರು
ಈಗ ಮತ್ತೇನು ನೀವು ಮಾಡಿರುವುದು ಅಂದುಕೊಂಡಿದ್ದೀರಿ, ರೂಮಿನಲ್ಲಿ ಎಲ್ಲ ದೀಪಗಳನ್ನು ಆರಿಸಿ, ಒಂದೇ ದೀಪವನ್ನು ಆಕೆ ನೋಡುವಂತೆ ಉಳಿಸಿದ್ದೀರಿ, ಹಿಪ್ನಾಟಿಸಂ ಗೆ ಬೇಕಾದ ಎಲ್ಲ ವಾತವರಣಾ ಸೃಷ್ಟಿ ಮಾಡಿದ್ದೀರಿ. ರೆಕಾರ್ಡರ್ ನಲ್ಲಿ ನಿಮ್ಮ ದ್ವನಿಯನ್ನೊಮ್ಮೆ ಆಲಿಸಿ ನೋಡಿ. ಅತ್ಯಂತ ಮಂದ್ರವಾದ ದ್ವನಿ, ನಿಧಾನಕ್ಕೆ ಆಕೆಯ ಮೆದುಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಂತ ದ್ವನಿ. ಆದರೆ ಅಕೆಗೆ ಕೊಡುವ ಸೂಚನೆಗಳನ್ನು ಮಾತ್ರ ಸರಿಯಾಗಿ ಕೊಡದೆ ಆಕೆ ಇಂತಹ ಸ್ಥಿತಿ ತಲುಪುವಂತೆ ಮಾಡಿದ್ದೀರಿ
ನಾನು ಉದ್ವೇಗದಿಂದ
ಇಲ್ಲ ಡಾಕ್ಟರ್ , ನಾನು ಆಕೆಗೆ ಪದೆ ಪದೆ ಹೇಳಿರುವೆ , ನಾನು ಹಿಪ್ನಾಟಿಸಂ ಮಾಡುತ್ತಿಲ್ಲ , ನೀನು ಯೋಚಿಸಲು, ನಿರ್ದರಿಸಲು ಸ್ವತಂತ್ರಳು ಎಂದು
ಡಾಕ್ಟರ್ ನನ್ನ ಮುಖ ನೋಡುತ್ತ ನುಡಿದರು
ನೀವು ಹಿಪ್ನಾಟಿಸಂ ಮಾಡುತ್ತಿಲ್ಲ ಎಂದು ಪದೆ ಪದೆ ಬಾಯಲ್ಲಿ ಹೇಳಿದ್ದೀರಿ ಆದರೆ ಆಕೆ ಹಿಪ್ನಾಟಿಸಂಗೆ ಒಳಗಾಗಿದ್ದಾರೆ ನಿಮ್ಮಿಂದ. ಆದರೆ ಸಾಮಾನ್ಯ ಹಿಪ್ನಾಟಿಸಂನಲ್ಲಿ ಎಲ್ಲರು ಸೂಚನೆ ಕೊಡುವಾಗ , ನೀನೀಗ ನನ್ನ ವಶದಲ್ಲಿದ್ದೀಯ, ನಾನು ಹೇಳಿದಂತೆ ಕೇಳುತ್ತೀಯ ಎಂದರೆ ನೀವು ಅದಕ್ಕೆ ವಿರುದ್ದವಾಗಿ ಹೇಳಿದ್ದೀರಿ, ನೀನು ಸ್ವತಂತ್ರಳು ನಿನಗೆ ಬೇಕಾದಂತೆ ಚಿಂತಿಸಬಹುದು, ನಿನಗೆ ಮನಬಂದಾಗ ಮೇಲೆ ಏಳಬಹುದು ಅನ್ನುವ ರೀತಿಯ ಸೂಚನೆ ಕೊಟ್ಟಿದ್ದೀರಿ, ಹಾಗಿರುವಾಗ ಅವಳನ್ನು ಮತ್ತೆ ಎಬ್ಬಿಸುವುದು ನಿಮ್ಮಿಂದ ಹೇಗೆ ಸಾದ್ಯ ?
ನಾನು ಗೊಂದಲದಿಂದ ಅವರ ಮುಖ ನೋಡಿದೆ, ಡಾಕ್ಟರ್ ಮುಂದೆ ಹೇಳಿದರು
ನಿಮಗೆ ತಿಳಿಯದು ಹಿಪ್ನಾಟಿಸಂಗೆ ಒಳಗಾದ ವ್ಯಕ್ತಿಯ ಮೆದುಳಿಗೆ , ದೇಹಕ್ಕೆ ಅದಮ್ಯ ಶಕ್ತಿ ಇರುತ್ತದೆ , ಅಂತಹ ಸ್ಥಿತಿಯಲ್ಲಿ ಮೆದುಳು ಮಾತ್ರ ಹಿಪ್ನಾಟಿಸಂ ಮಾಡಿದವರ ವಶದಲ್ಲಿಯೆ ಇರುತ್ತದೆ. ನೀವು ಇಲ್ಲಿ ಹಿಪ್ನಾಟಿಸಂಗೆ ಅನುಕೂಲವಾಗುವಂತ ಎಲ್ಲ ವಾತವರಣ ಸೃಷ್ಟಿಸಿದ್ದೀರಿ, ಸೂಚನೆಗಳನ್ನು ಕೊಡುವಾಗ ಮಾತ್ರ ಆಕೆಯ ಮನಸ್ಸು ಬುದ್ದಿಯ ದಾರಿ ತಪ್ಪಿಸಿದ್ದೀರಿ
ಗೊಂದಲದಿಂದ ಅವರ ಮುಖ ನೋಡಿದೆ,
ನೀವು ರೆಕಾರ್ಡ್ ಮಾಡಿರುವ ಮಾತುಗಳನ್ನು ಕೇಳಿನೋಡಿ, ಆಕೆಗೆ ನೆನಪಿನಲ್ಲಿ ಹಿಂದೆ ಹಿಂದೆ ಹೋಗು ಎಂದೇ ಹೇಳುತ್ತಿದ್ದೀರಿ, ಆಕೆ ತನ್ನ ನೆನಪಿನ ಪಯಣದಲ್ಲಿ ಮತ್ತೆ ಮುಂದಕ್ಕೆ , ಪ್ರಸ್ತುತಕ್ಕೆ ಬರುವುದು ಹೇಗೆ ಎನ್ನುವ ಸೂಚನೆಗೆ ಆಕೆಗೆ ಇಲ್ಲ. ಆ ಸ್ಥಿತಿಯಲ್ಲಿ ಅವಳಿಗೆ ನಿನ್ನ ಮನಸಿಗೆ ತೋಚಿದ ನೆನಪನ್ನು ದಾಖಲಿಸುವಂತೆ ಹೇಳಿದ್ದೀರಿ. ನೀನು ಸ್ವತಂತ್ರಳು ಅನ್ನುವಾಗ ಆಕೆ ನಿಮ್ಮ ಮಾತನ್ನು ಕೇಳದಿದ್ದರು ಪರವಾಗಿಲ್ಲ ಎನ್ನುವ ಸೂಚನೆ ಹೋಗಿದೆ, ಹಾಗಾಗಿ ನೀವು ಸಾಕು ಎದ್ದೇಳು ಅಂದರು ಆಕೆ ಎಚ್ಚರಗೊಳ್ಳುತ್ತಿಲ್ಲ. ಆಕೆ ತನ್ನ ಕಲ್ಪನೆಯಲ್ಲಿ ತನ್ನ ನೆನಪಿನ ಕೊಟ್ಟ ಕೊನೆಯ ಬಿಂದುವನ್ನು ತಲುಪಿದ್ದಾರೆ, ಆಕೆಯ ಪ್ರಕಾರ ಅಲ್ಲಿಂದ ಹಿಂದೆ ಹೋಗಲು ಸಾದ್ಯವಿಲ್ಲ. ಆದರೆ ಅಲ್ಲಿಂದ ಮುಂದೆ ಬರಲು ನೀವು ಸೂಚಿಸಲೂ ಇಲ್ಲ. ಆಕೆಯೆ ಮನಸ್ಸು ಬದಲಾಯಿಸಿ, ಪುನಃ ವರ್ತಮಾನಕ್ಕೆ ಬರಬೇಕು ಅನ್ನುವ ವಾತವರಣ ಸೃಷ್ಟಿಸಿದ್ದೀರಿ

 
ನಾನು ನುಡಿದೆ,
ಆದರೆ ಡಾಕ್ಟರ್ ನಮ್ಮ ಕಲ್ಪನೆ ನಿಜವಾಗಿದೆ ಅಲ್ಲವೆ ? ಆಕೆ ತನ್ನ ಅನುಭವಗಳನ್ನು ಹೇಳುತ್ತಾ ಹೋಗಿದ್ದಾರಲ್ಲ,
ಡಾಕ್ಟರ್ ನುಡಿದರು,
ಸರಿ ಏನಾಯಿತೀಗ, ಆಕೆ ತನ್ನ ಬಾಲ್ಯಕ್ಕೆ ಹಂತ ಹಂತವಾಗಿ ಜಿಗಿದ್ದಿದ್ದಾರೆ, ಹಳೆಯದನ್ನೆಲ್ಲ ನೆನಪಿಸಿಕೊಂಡು ಆಕೆಯ ಮನ ಹಗುರಾಗಿದೆ ಒಪ್ಪೋಣ , ಅದಕ್ಕೆ ಹಿಪ್ನಾಟಿಸಂ ಸಹಾಯ ಏತಕ್ಕೆ ಬೇಕೆ, ಅವರ ಸ್ನೇಹಿತರ ಜೊತೆ ಹಂಚಿಕೊಂಡರೆ ಸಾಕಲ್ಲವೆ
ನಾನು ಹೇಳಿದೆ,
ಅದಲ್ಲ ಡಾಕ್ಟರ್ ಆಕೆ ತನ್ನ ಹುಟ್ಟಿನಿಂದ ಹಿಂದಕ್ಕೂ ನೆನಪನ್ನು ಕೆದಕಿದ್ದಾರೆ, ನನ್ನ ಪ್ರಕಾರ ಆಕೆಯ ಮೆದುಳಿನಲ್ಲಿ ವಂಶಪಾರಂಪರ್ಯವಾಗಿ ಮನುಜ ಕುಲದ ಬೆಳವಣಿಗೆಯ ಹಂತಗಳು ಶೇಖರವಾಗಿದೆ ಅಲ್ಲವೆ , ಅಲ್ಲದೆ ಅವರು ಮನುಜ ಕುಲದ ಹುಟ್ಟಿನಿಂದ ಹಿಂದಕ್ಕೆ ಹೋಗಿ ಭೂಮಿಯ ಸೃಷ್ಟಿ , ಸಮುದ್ರದ ಸೃಷ್ಟಿ, ಸೂರ್ಯನ ರೂಪಗೊಳ್ಳುವಿಕೆ ಎಲ್ಲ ನೋಡಿದಂತೆ ಹೇಳುತ್ತಿದ್ದಾರಲ್ಲ?
ದಾಕ್ಟರ್ ನನ್ನತ್ತ ಮರುಕದಿಂದ ನೋಡಿದರು,

 
ಆಕೆ ತನ್ನ ಹುಟ್ಟಿನಿಂದ ಹಿಂದಕ್ಕೆ ಹೇಳಿರುವುದು, ಆಕೆ ತನ್ನ ತಂದೆ ತಾಯಿಯ ಬಾಯಲ್ಲಿ ಕೇಳಿದ ಕತೆಗಳಾಗಿರಬಹುದು, ಅದನ್ನೆ ತನ್ನ ಅನುಭವ ಎಂದು ಭಾವಿಸಿ ಹೇಳಿರುತ್ತಾರೆ ಅಷ್ಟೆ
ನಾನು ಮೊಂಡುವಾದ ಹೂಡಿದೆ
ಆದರೆ ಡಾಕ್ಟರ್ ಆಕೆ ಯಾವುದೋ ಕಾಡುಜನರ ಕತೆಯನ್ನು ಕೃಷ್ಣದೇವರಾಯನ ಜೊತೆ ಇದ್ದಿದ್ದನ್ನು ಹೇಳುತ್ತಿದ್ದಾರಲ್ಲ ಅದನ್ನು ಯಾರು ಹೇಳಿರುತ್ತಾರೆ
ಡಾಕ್ಟರ್ ಹೇಳಿದರು,
ಅದೆಲ್ಲ ಆಕೆ ಎಲ್ಲಿ ನೋಡಿರಲು ಸಾದ್ಯ, ಅವೆಲ್ಲ ಆಕೆಯ ಕಲ್ಪನೆಗಳು, ಅಥವ ಎಲ್ಲಿಯೋ ಓದಿರುವದನ್ನು ಕಲ್ಪಿಸಿ ಅನುಭವ ಅಂತ ಹೇಳ್ತೀದ್ದಾರೆ ಅನ್ನಿಸುತ್ತೆ, ಅಲ್ಲದೆ ಭೂಮಿಯ ಸೃಷ್ಟಿ ಸೂರ್ಯನ ಸೃಷ್ಟಿ ಎಲ್ಲವೂ ಹೇಗೆ ಗೊತ್ತಿರಲು ಸಾದ್ಯ
ನಾನು ನನ್ನ ಕಲ್ಪನೆಯನ್ನು ಬಿಚ್ಚಿಟ್ಟೆ,
ಅಲ್ಲ ಡಾಕ್ಟರ್ ನಮ್ಮ ದೇಹ ಆಗಿರುವುದು ನರಮಂಡಲ, ನ್ಯೂರಾನ್ ಮುಂತಾದವುಗಳಿಂದ, ಅವು ವಂಶಪಾರಂಪರ್ಯವಾಗಿ ಮುಂದುವರೆಯುತ್ತಿದೆ, ಹಾಗಿರುವಾಗ ಮೆದುಳಿನಲ್ಲಿ ನಮ್ಮ ತಂದೆಯ ತಾಯಿಯ, ತಾತಂದಿರ ನೆನಪುಗಳು ಶೇಕರವಾಗಿದ್ದು, ನನ್ನ ನೆನೆಪಿನಂತೆಯೆ ಏಕೆ ಅವರಿಗೆ ಕಾಣಿಸಿರಬಾರದು, ಅದು ಹೇಗೋ ಆಕೆಯ ಮೆದುಳಿನಲ್ಲಿ ಹುದುಗಿದ್ದ ನೆನಪನ್ನು ಕೆದಕಲು ಆಕೆಗೆ ಸಾದ್ಯವಾಗಿದೆ ಅನ್ನಿಸುತ್ತೆ
ಡಾಕ್ಟರ್ ಸಹನೆ ಮೀರಿತ್ತು,
ಸ್ವಾಮಿ , ನೀವು ಅತಿಯಾಗಿ ಪುಸ್ತಕ ಓದುವದನ್ನು ಬಿಟ್ಟುಬಿಡಿ, ನಿಮ್ಮ ಕಲ್ಪನೆಗಳು, ಕತೆಗಳು ಇಲ್ಲಿ ವಿಜ್ಜಾನವಾಗಲಾರದು, ನೀವು ಹೇಳಿದಂತೆ ಆದರೆ ಮನುಷ್ಯ ಅಥವ ಜೀವಕೋಶ ಜನ್ಮ ತಳೆದಿದ್ದೆ, ಭೂಮಿಯ ಮೇಲೆ ಆಕೆ ಭೂಮಿಯ ರಚನೆಗಿಂತಲೂ ಹಿಂದಿನದೆಲ್ಲ ಹೇಳಲು ಹೇಗೆ ಸಾದ್ಯ. ಮನುಷ್ಯನ ಮೆದುಳಿನ ಶಕ್ತಿಯ ಕಲ್ಪನೆ ನಿಮಗಿಲ್ಲ. ನೀವು ಆ ಬಗ್ಗೆ ಓದಿಯೂ ಇಲ್ಲ. ನನಗೆ ತಿಳಿದಂತೆ ಆಕೆ ಮಾತನಾಡಿರುವದನ್ನು ಗಮನಿಸಿದರೆ ಆಕೆಗೆ ನಿಜವಾದ ಅನುಭವಕ್ಕೂ , ಕೇಳಿರುವುದು ಅಥವ ಕಲ್ಪನೆಗೆ ವ್ಯೆತ್ಯಾಸವನ್ನು ಗುರುತಿಸಲು ಆಗುತ್ತಿಲ್ಲ. ಆಕೆ ಇಲ್ಲಿಯವರೆಗೂ ಹೇಳಿರುವ ಭೂಮಿಯ ಸೂರ್ಯನ ಭ್ರಹ್ಮಾಂಡದ ಕಲ್ಪನೆಗಳೆಲ್ಲ ಎಲ್ಲಿಯಾದರು ಗೂಗಲ್ ನಲ್ಲಿ ಹುಡುಕಿನೋಡಿ ಬರಹದಲ್ಲಿ, ಯೂ-ಟ್ಯೂಬ್ ನಲ್ಲಿ ಎಲ್ಲಿಯೋ ಇದ್ದೆ ಇರುತ್ತದೆ. ಯಾವ ಹೊಸದು ಇಲ್ಲ.
ನಾನು ಸೋತು ಹೇಳಿದೆ
ಆದರೆ ನಾವು ಈಗ ಸಾದಿಸಿದ್ದೆಲ್ಲ ಸುಳ್ಳೆ, ಆಕೆ ನೆನಪಿನಲ್ಲಿ ಹಿಂದಕ್ಕೆ ಪಯಣಿಸಿದ್ದು ಸುಳ್ಳೆ
ಡಾಕ್ಟರ್ ಸಹನೆ ಕಳೆದು, ಕೋಪದಿಂದ ಹೇಳಿದರು
ನೋಡಿ , ನನಗೆ ಈಗ ನಿಮ್ಮ ಸಾದನೆ ಸುಳ್ಳು ಸತ್ಯ ಎನ್ನುವುದು, ನಿಮ್ಮ ಯಾವುದೋ ಕತೆ ಇದೆಲ್ಲ ಮುಖ್ಯವಲ್ಲ, ನಮಗೀಗ ಆಕೆಯನ್ನು ಸಹಜ ಸ್ಥಿತಿಗೆ ತರುವುದು ಹೇಗೆಂಬುದೆ ಮುಖ್ಯ.
ಆನಂದ ಈಗ ಮಾತನಾಡಿದ
ಅಂದರೆ ಡಾಕ್ಟರ್ , ಜ್ಯೋತಿ ಪುನಃ ಮೊದಲಿನಂತೆ ಆಗುತ್ತಾಳೆ, ಯಾವ ಸಮಸ್ಯೆಯೂ ಇಲ್ಲ ಅಲ್ಲವೆ ?
ಡಾಕ್ಟರ್ ಮುರುಳಿಕೃಷ್ಣ ನುಡಿದರು
ಹಾಗೆ ಹೇಳುವುದು ಕಷ್ಟ, ಆಕೆಯೀಗ ಸ್ವಯಂ ಹಿಪ್ನಾಟಿಸಂ ಅನ್ನುತ್ತಾರಲ್ಲ ಆ ಸ್ಥಿತಿಯಲ್ಲಿ ಇದ್ದಾರೆ, ಹೊರಗಿನ ಯಾವ ಮಾತನ್ನು ಕೇಳಿಸಿಕೊಳ್ಳುತ್ತಲೇ ಇಲ್ಲ, ಹಾಗೆ ಹೊರಗಿನ ಯಾವ ಘಟನೆಗಳು , ಮಾತು , ಬೆಳಕು, ಆಕೆಯ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ, ಆಕೆಯ ಮೆದುಳು ತನ್ನೋಳಗೆ ತಾನೆ ಅನ್ನುವಂತೆ ಆಳವಾದ ಹಿಪ್ನಾಟಿಸಂ ಗೆ ಹೊರಟುಹೋಗಿದೆ. ಮತ್ತು ಅದು ಆಕೆಯ ಹಿಡಿತದಲ್ಲಿ ಮಾತ್ರ ಇದೆ. ಆದರೆ ದೇಹ ಮಾತ್ರ ಸಹಜ ಸ್ಥಿತಿಯಲ್ಲಿದೆ , ಆಕೆಯ ಹೃದಯವಾಗಲಿ ಉಳಿದ ಅಂಗಗಳಾಗಲಿ ತಮ್ಮ ಕೆಲಸ ನಿರ್ವಹಿಸುತ್ತಿವೆ.

 
ಆನಂದ ಮತ್ತೆ ಕೇಳಿದ
ಅಂದರೆ ಅವಳು ಈಗ ಕೋಮದಲ್ಲಿದ್ದಾಳೆಯೆ ?
ತಲೆ ಆಡಿಸುತ್ತ ನುಡಿದರು
ಇಲ್ಲ ಕೋಮದಲ್ಲಿ ಆದರೆ ಅವಳ ಮೆದುಳು ಸತ್ತ ಸ್ಥಿತಿಯಲ್ಲಿರುತ್ತೆ, ಹಾಗಾಗಿ ದೇಹವೂ ಕೇವಲ ಹಸಿ ತರಕಾರಿ ಅನ್ನುತ್ತಾರಲ್ಲ ಹಾಗಿರುತ್ತೆ, ಇಲ್ಲಿ ಹಾಗಿಲ್ಲ, ಆಕೆಯ ಮೆದುಳು ಸಹ ಸಹಜ ಸ್ಥಿತಿಯಲ್ಲಿಯೆ ಇದೆ, ದೈಹಿಕವಾಗಿಯೂ ಆರೋಗ್ಯವಾಗಿದ್ದಾರೆ. ಆದರೆ ಮೆದುಳು ನಿದ್ದೆ ಏನು ಮಾಡುತ್ತಿಲ್ಲ. ಸಂಪೂರ್ಣ ಕ್ರಿಯಾತ್ಮಕವಾಗಿದ್ದೆ. ಹಾಗೆ ಹೇಳುವದಾದರೆ ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ ಯಾವುದೋ ಲಾಜಿಕ್ ತಪ್ಪಾಗಿ, ಲೂಪ್ ನಲ್ಲಿ ಸಿಕ್ಕಿಕೊಳ್ಳುವುದು ಅನ್ನುತ್ತಾರಲ್ಲ ಆ ರೀತಿ ಅಂದುಕೊಳ್ಳಿ , ಆಕೆಯ ತರ್ಕದ ಕೊಂಡಿ ಸ್ಥಗಿತಗೊಂಡಿದೆ ಅನ್ನಬಹುದೇನೊ. ಹಾಗಾಗಿ ಆಕೆ ಕೋಮದಲ್ಲಿದ್ದಾರೆ ಅನ್ನುವಂತಿಲ್ಲ. ಎಚ್ಚರದಲ್ಲೂ ಇಲ್ಲ . ಕಂಪ್ಯೂಟರ್ ನಲ್ಲಿ ಯಾದರೆ ರಿಸ್ಟಾರ್ಟ್ ಅಂದು ಬಿಡುತ್ತೀರಿ, ಇಲ್ಲಿ ಹಾಗೆ ಆಗಲ್ಲವಲ್ಲ
ಆನಂದನ ದ್ವನಿಯಲ್ಲಿ ಆತಂಕವೂ ಇತ್ತು
ಸರಿ ಸಾರ್ ಹಾಗಿದ್ದರೆ, ಜ್ಯೋತಿಯನ್ನು ಮತ್ತೆ ಎಬ್ಬಿಸುವುದು ಹೇಗೆ, ಎಷ್ಟು ಕಾಲವಾಗಬಹುದು ಆಕೆ ಏಳಲು, ಮತ್ತೆ ಅದೇನೊ ಕರೆಂಟ್ ಕೊಡುವುದು ಅನ್ನುತ್ತಾರಲ್ಲ, ಎಲೆಕ್ಟ್ರಿಕ್ ಶಾಕ್ ಅವೆಲ್ಲ ಆಗಲ್ಲ ಅಲ್ಲವೆ ಡಾಕ್ಟರ್
ಡಾಕ್ಟರ್ ದ್ವನಿ ಒಂದು ರೀತಿ ಇತ್ತು,
ರೀ ಅವೆಲ್ಲ ಹೇಳಬೇಡಿ, ಇಲ್ಲಿ ನೀವಲ್ಲ ಡಾಕ್ಟರ್ ನಾನು. ಈ ಕೇಸಿನಲ್ಲಿ ಏನೆಲ್ಲ ಮಾಡಿದರೆ ಆಕೆ ಪ್ರಾಣಕ್ಕೆ ಅಪಾಯವಾಗಬಹುದು.
ಇಷ್ಟು ಕಾಲ ಎಂದು ಹೇಳುವುದು ಸ್ವಲ್ಪ ಕಷ್ಟವೆ , ಆಕೆ ತಾನಾಗೆ ಏಳಬೇಕು. ಸದ್ಯಕ್ಕೆ ಅದಕ್ಕೆ ಕಾಯಬೇಕು. ಆಕೆ ಯಾರ ದ್ವನಿಗೂ ಪ್ರತಿಕ್ರಿಯಿಸುತ್ತಿಲ್ಲ. ಸದ್ಯಕ್ಕೆ ಇವರ ದ್ವನಿಗೆ ಮೊದಲು ಪತಿಕ್ರಿಯೆ ನೀಡುತ್ತಿದ್ದರು ಅನ್ನುವಿರಿ, (ನನ್ನ ಕಡೇ ಕೈ ತೋರಿಸಿದರು) ಅದೊಂದು ಹೋಪ್ ಇದೆ , ನೋಡೋಣ ಇವರ ಮೂಲಕ ಪ್ರಯತ್ನಿಸೋಣ ಅದೊಂದೆ ಸಾದ್ಯತೇ ಇದೆ.
ಎಂದರು
ನಾನೀಗ ಆತಂಕ, ಅವಮಾನ, ಅಪಮಾನ, ತಪ್ಪಿತಸ್ತನ ಭಾವನೆ, ಪಶ್ಚತಾಪ ಎಲ್ಲ ಭಾವನೆಗಳ ಮಿಶ್ರಣದಲ್ಲಿ ತಲೆ ತಗ್ಗಿಸಿ ಕುಳಿತೆ. ಅದು ತುಂಬಾ ಯಾತನಮಯ ದಿನಗಳಾಗಿದ್ದವು. ನಾನು ದಿನವೂ ಆಸ್ಪತ್ರೆಗೆ ಹೋಗುತ್ತಿದ್ದೆ. ಡಾಕ್ಟರ್ ಹೇಳಿದಂತೆ ದಿನವೂ ಬೇರೆ ಬೇರೆ ಮಾರ್ಗಗಳಿಂದ ಜ್ಯೋತಿಯನ್ನು ಎಬ್ಬಿಸಲು ಪ್ರಯತ್ನಪಡುತ್ತಿದ್ದೆ. ಆದರೆ ಯಾವ ಪರಿಣಾಮವು ಇರಲಿಲ್ಲ. ಆಕೆಗೆ ಮಲಗಿದ ಕಡೆ ಕೃತಕ ರೀತಿಯಲ್ಲಿ ಅಹಾರ ಕೊಟ್ಟು ಅವಳ ದೇಹವನ್ನು ಜತನದಿಂದ ನೋಡಿಕೊಳ್ಳುತ್ತಿದ್ದರು. ಅವಳನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಸಹ ನಿರಾಶರಾಗಿದ್ದರು, ಅವರ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿದ್ದವು. ಹಾಗೆ ಅವಳಿಗೆ ವಿದ್ಯುತ್ ಶಾಕ್ ಕೊಡುವ ಮಟ್ಟಿಗೆ ಯಾವ ಡಾಕ್ಟರ್ ಸಹ ಒಪ್ಪಲಿಲ್ಲ. ಮೆದುಳು ವ್ಯಾದಿಗ್ರಸ್ಥವಾಗಿ, ಹತೋಟಿ ತಪ್ಪಿ ವರ್ತಿಸುತ್ತಿದ್ದರೆ, ಅ ಮಾರ್ಗ ಅನುಸರಿಸಬಹುದೆ ಹೊರತು, ಆರೋಗ್ಯಪೂರ್ಣವಾಗಿರುವ ಮೆದುಳಿಗೆ ಶಾಕ್ ಕೊಡುವುದು ಸರಿಯಲ್ಲ ಎಂದು ಸುಮ್ಮನಾಗಿದ್ದರು.
ನನ್ನಲ್ಲಿ ಅಪರಾದಿ ಭಾವ ಜಾಗೃತವಾಗಿ ನನ್ನ ಮನಸಿನ ಸ್ವಾದೀನ ತಪ್ಪುತ್ತಿತ್ತು. ಎಲ್ಲಿಯಾದರು ಹೊರಗೆ ಹೋಗಿ ಬರಬೇಕೆಂದು ನಿರ್ಧರಿಸಿದೆ. ಆದರೆ ಅದನ್ನು ಯಾರಲ್ಲಿಯೂ ಹೇಳಲು ಹೋಗದೆ, ನಾನು ಶೃಂಗೇರಿಗೆ ಹೊರಟುಬಿಟ್ಟೆ. 
 
ಮುಂದುವರೆಯುವುದು .....
 
photo courtesy https://www.google.co.in/url?sa=i&rct=j&q=&esrc=s&source=images&cd=&cad=...