ಬರ

ಬರ

ಕವನ

 
 
ಬಿಸಿದ ಬುವಿಗೆ
ಮೋಡ ಬಸಿದು ಹನಿಯಾಗದೆ
ಕಾರ್ಮೋಡ ಕಗ್ಗತ್ತಲು ಕವಿಯುವ ಮುನ್ನ
 
ಕನಸ ಕಡಲೋಳ್
ನವೆ ನೂಕುವ ಭಾರ
ಹನಿ ನೀರಿಗೂ ಇಲ್ಲಿ ತತ್ವಾರ
 
ಮುಸುಕು ತೆಗೆ ತಾಯೆ
ಹಸಿವೆಯ ಹದ್ದು 
ಹರಿದು ನುಂಗುವ ಮುನ್ನ
 
ಶೋಷಣೆಯ ಮುಸಕ ಸರಿಸಲು
ಬುದ್ಧ, ಬಸವರ ಪ್ರಯತ್ನವೆಷ್ಟೊ
ಕಷ್ಟಕೂಟಲೆಗಳ ಜೀವಿತ
 
ವ್ಯರ್ಥವಾಗಿ ಹೊಯಿತೆ 
ದಾಸ ಶ್ರೇಷ್ಠರ ಹೊರಾಟ
ಸಂಘಟನೆಗಳ ಹಮ್ಮಿರರ ಹಾರಾಟ ಚಿರಾಟ
 
ಸ್ನೇಹ ಸೌಹಾರ್ದತೆಯ ಬೀಜ
ಬಿದ್ದು ಬೆಳೆಯಲಿ ಇಲ್ಲಿ
ಶೋಷಣೆ ರಹಿತ ಸಮಾಜ ನಿರ್ಮಾಣವಾಗಲಿ.
 
 
 
 
 
 

ಚಿತ್ರ್