ಬಿಡುಗಡೆ

ಬಿಡುಗಡೆ

ಕವನ

ನಾವು ನಾವಾಗಿ ಇರಲು ಬಿಡದ ಜಗತ್ತು.
ತನ್ನ ಕಟ್ಟುಪಾಡುಗಳ ವ್ಯೂಹದಲ್ಲಿ
ನಮ್ಮಗೆ ಅರಿವೆ ಆಗದಂತೇ ಬಂದಿಸುವ
ಪರಿಗೆ
ಬೆರಗಾಗಿದ್ದೇನೆ.
ಸಂಪ್ರದಾಯದ ದೂಳ ಕೊಡವಿ
ಸೀದಾ ನಡೆದು ಬಿಡುವ ಎಂದರೂ
ಗಡಿ ದಾಟುವ ಯತ್ನದಲ್ಲಿ
ನಡೆದೆ ನಡೆದರೂ
ಸಿಗದ ತೀರವ ಕಂಡೂ
ನಿಟ್ಟುಸಿರಿಟ್ಟಿದೇನೆ.
-ನಂದೀಶ್ ಬಂಕೇನಹಳ್ಳಿ