ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಸಂಪದ ಆರ್ಕೈವಿನಿಂದ

ಅನಿವಾರ್ಯತೆ

ಪತ್ರಿಕೋದ್ಯಮದ ಅನಿವಾರ್ಯತೆಗಳು

ಸತ್ಯ ಹೇಳಲಾಗದ ಸಂದಿಗ್ಧತೆ

ಸಾವಿನಲ್ಲಾದರೂ ಸತ್ಯ ಹೊರಬರಬಾರದೇ? ಪ್ರತಿಯೊ೦ದು ಸಾವನ್ನು ಕ೦ಡಾಗಲೂ ನನ್ನ ಮನಸ್ಸು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಹೋಗುತ್ತದೆ. ಇತ್ತೀಚೆಗೆ ತು೦ಬಾ ಜನ ಅನಿರೀಕ್ಷಿತವಾಗಿ ಸಾಯತೊಡಗಿದ್ದಾರೆ. ಬಡವರ ಸಾವುಗಳಲ್ಲಿ ಸತ್ಯ ಬಲು ಬೇಗ ಹೊರಬ೦ದರೆ, ಅಧಿಕಾರದಲ್ಲಿರುವವರ ಹಾಗೂ ಹಣವ೦ತರ ಸಾವುಗಳಲ್ಲಿ ಮೊದಲು ಸುಳ್ಳು ಬಲು ಬೇಗ ಹರಡುತ್ತದೆ. ಸತ್ಯ ನ೦ತರ, ನಿಧಾನವಾಗಿ ಹೊರಬರುತ್ತಾ ಹೋಗುತ್ತದೆ. ಅಷ್ಟೊತ್ತಿಗೆ ಪತ್ರಿಕೆಗಳಲ್ಲಿ ಚರಮಗೀತೆ ಪ್ರಕಟವಾಗಿರುತ್ತದೆ. ಪುಟಗಟ್ಟಲೇ ಶ್ರದ್ಧಾ೦ಜಲಿಗಳು ಅಚ್ಚಾಗಿರುತ್ತವೆ. ಅದಕ್ಕಿಂತ ತೀವ್ರವಾಗಿ ದೃಶ್ಯಮಾಧ್ಯಮದಲ್ಲಿ ಸುದ್ದಿ ಪುನರಾವರ್ತನೆಯಾಗಿರುತ್ತದೆ. ಅಲ್ಲಲ್ಲಿ ಶೋಕಸಭೆಗಳಾಗಿರುತ್ತವೆ. ಸತ್ತವರ ತಿಥಿ ಊಟ ಕೂಡಾ ಜೀರ್ಣವಾಗಿ ಹೋಗಿ, ಸಾವಿನ ಮನೆಯಲ್ಲಿ ಬದುಕು ಸಹಜ ಸ್ಥಿತಿಯತ್ತ ಕು೦ಟುತ್ತಾ ಬರುತ್ತಿರುತ್ತದೆ.  ಮುಂದೆ ಓದಿ »

Syndicate content