’ಕರ್ನಾಟಕದ ದೇಗುಲಗಳ ಸುತ್ತ ಒಂದು ಸುತ್ತು’ - ಒಂದು ಸಂಗೀತ ಕಚೇರಿ
October 6, 2010 - 11:15pm
ಕರ್ನಾಟಕ ಸಂಗೀತ ದೇವಾಲಯಗಳ ಸುತ್ತ ಬೆಳೆಯಿತು, ಹಿಂದೂಸ್ತಾನಿ ಸಂಗೀತ ಸುಲ್ತಾನರ ಆಸ್ಥಾನಗಳಲ್ಲಿ ಬೆಳೆಯಿತು ಅನ್ನೋ ಮಾತಿದೆ. ಆದರೂ ಕರ್ನಾಟಕ ಸಂಗೀತಕ್ಕೆ ಮೈಸೂರು ಒಡೆಯರ, ತಂಜಾವೂರಿನ ನಾಯಕರ, ಮರಾಠೀ ದೊರೆಗಳ ಪ್ರೋತ್ಸಾಹ ಹೆಚ್ಚಿಗೆ ಇದ್ದೇ ಇತ್ತು. ಅದು ಹೇಗೇ ಇರಲಿ, ಅಂದರೆ ಇಂದು ಒಂದು ಕರ್ನಾಟಕ ಸಂಗೀತ ಕಚೇರಿಗೆ ಹೋದರೆ ಹೆಚ್ಚಾಗಿ ಭಕ್ತಿ ಪ್ರಧಾನ ರಚನೆಗಳನ್ನು ಕೇಳುವ ಸಾಧ್ಯತೆಯೇ ಹೆಚ್ಚು ಅನ್ನುವುದೇನೋ ನಿಜ.
ಈಗ ರಾಜಾಸ್ಥಾನಗಳಿಲ್ಲವಲ್ಲ- ಆದರೆ ಅದರ ಬದಲು ವಿಶೇಷ ಸಂದರ್ಭಗಳಲ್ಲಿ ಮನೆಗಳಲ್ಲೇ ಕಚೇರಿ ನಡೆಸುವ ಪದ್ಧತಿ ಬೆಳೆದು ಬಂದಿದೆ. ಇಂತಹ ಮನೆ-ಕಚೇರಿಗಳು ಸಭೆಯಲ್ಲಿ ನಡೆವ ಕಚೇರಿಗಳಿಗಿಂತ ಒಂದು ರೀತಿಯ ಆಪ್ತ ಅನುಭವವನ್ನೂ ನೀಡುತ್ತವೆ.
Read more about ’ಕರ್ನಾಟಕದ ದೇಗುಲಗಳ ಸುತ್ತ ಒಂದು ಸುತ್ತು’ - ಒಂದು ಸಂಗೀತ ಕಚೇರಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:




