ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಸಂಪದ ಆರ್ಕೈವಿನಿಂದ

ತಮಿಳು

ನಾನ್ ಯಾಕ್ ತಮಿಳ್ ಕಲಿಬೇಕು!?

ಎಂದಿನಂತೆ ಇವತ್ತ್ ಬೆಳಿಗ್ಗೆ ಜಾಗಿಂಗ್ ಆದ್ಮೇಲೆ ಕುಟ್ಟಿ ಚಾ ಅಂಗಡಿ ಹೋದವ ಚಾ ಹೀರುತಿದ್ದೆ.ಎದುರಿಗೆ ಕುಳಿತಿದ್ದ ತಾತ ಅದೇನೋ ತಮಿಳಿನಲ್ಲಿ ಆ ಕುಟ್ಟಿಗೆ ಹೇಳ್ತಿದ್ರು.ನನ್ನ ನೋಡಿದವರೇ ಆ ಕುಟ್ಟಿ ಅವರಿಗೆ ರಂಜಾನ್ ಬಿರಿಯಾನಿ ಕೊಡಿಸಿಲ್ಲ ಅಂತ ಅಂತ ತಮಿಳಿನಲ್ಲಿ ಹೇಳಿದ್ರು, ಅಲ್ಪ ಸ್ವಲ್ಪ ಅರ್ಥ ಆಗೋದ್ರಿಂದ ನಕ್ಕು ಸುಮ್ಮನಾದೆ. ಕೆಲ ಹೊತ್ತಿನ ಬಳಿಕ ತಾತ ಮತ್ತೆ ನನ್ನ ಜೊತೆ ತಮಿಳಲ್ಲಿ ಏನೋ ಹೇಳೋಕೆ ಬಂದ್ರು, ನಾನ್ ನನ್ನ ಅರೆ ಬರೆ ತಮಿಳಿನಲ್ಲಿ 'ಯನಕ್ ತಮಿಳ್ ತೆರಿಯಾದ್' ಅಂದೆ.
ಆ ತಾತಪ್ಪ ತಮಿಳ್ ಸ್ಟೈಲ್ ಕನ್ನಡದಲ್ಲಿ 'ನಿಂದ್ ಯಾವ್ ಭಾಷೆ?' 
ನಾನು, 'ಕನ್ನಡ'.
ಆದ್ರೆ ನೀನಕ್ ತಮಿಳ್ ಕೊತ್ತಿರಬೇಕು!
ಹೌದಾ!?ಯಾಕೆ? ನಂಗ್ಯಾಕ್ ಗೊತ್ತಿರಬೇಕು? ಅಂತ ನಾ ಸ್ವಲ್ಪ ಬಿಸಿಯಾದೆ.
'ನೋಡಿ ಸರ್, ಬ್ರಿಟಿಷರ ಕಾಲದಲ್ಲಿ ಕರ್ನಾಟಕ,ತಮಿಳು ನಾಡು,ಕೇರಳ,ಆಂಧ್ರ ಎಲ್ಲವನ್ನ ತಮಿಳುನಾಡಿನ್ನಿಂದ ನಿಯಂತ್ರಿಸ್ತ ಇದ್ರೂ.ಬ್ರಿಟಿಷರು ಎಲ್ಲ ಕಡೆ ತಮಿಳರನ್ನೇ ಕೆಲ್ಸಕ್ಕೆ ಕರ್ಕೊಂಡ್ ಹೋಗ್ತಾ ಇದ್ರೂ'  ಮುಂದೆ ಓದಿ »

ತಮಿಳು ಸಾಫ್ಟ್ ವೇರ್ ಕ೦ಪನಿ

ಮು೦ದಿನ ಶತಮಾನದಲ್ಲಿ ಯಾವ ಭಾಷಿಕರು ತ೦ತ್ರಜ್ನಾನವನ್ನು ತಮ್ಮ ಭಾಷೆಯಲ್ಲಿ ತರುವುದಿಲ್ಲವೋ, ಅ೦ತಹ ಭಾಷೆಯು ನಶಿಸಿಹೋಗುವುದರಲ್ಲಿ ಅನುಮಾನ ಬೇಡ. ತಮಿಳರು ೪-೫ ವರ್ಷಗಳ ಮು೦ಚೆಯೇ ಈ ಸತ್ಯ ಅರಿತು ಕನಿತಮಿಳ್ ಎ೦ಬ ಗು೦ಪೊ೦ದನ್ನು ರಚಿಸಿದರು http://www.kanithami... .  ಮುಂದೆ ಓದಿ »

ಯುಗ ಯುಗಾದಿ ಕಳೆದರೂ

ಜಗಳ ಮರಳಿ ಬರುತಿದೆ
ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ!  ಮುಂದೆ ಓದಿ »

Syndicate content