19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಾತು

ಯಾವುದ ಓದಲಿ? ಯಾವುದ ಕೇಳಲಿ?

May 6, 2008 - 4:21pm
shreekant.mishrikoti
ಭಾಷೆಗಳೆಷ್ಟೋ , ಪುಸ್ತಕಗಳೆಷ್ಟೋ ಓದಲಾರೆ ಎಲ್ಲವನು ಸಿನೆಮಾಗಳೆಷ್ಟೋ ಛಾನೆಲ್ಲುಗಳೆಷ್ಟೋ ನೋಡಲಾರೆ ಎಲ್ಲವನು ಹಾಡುಗಳೆಷ್ಟೋ ಸಂಗೀತವದೆಷ್ಟೋ ಕೇಳಲಾರೆ ಎಲ್ಲವನು ಆಯುಷ್ಯವೆಷ್ಟೋ , ದಿನದಲಿ ಬಿಡುವು ಅದೆಷ್ಟೋ ಕಣ್ಣು ಕಿವಿಗಳಿರುವದೇ ಎರಡು ಯಾವುದ ಓದಲಿ? ಯಾವುದ ಕೇಳಲಿ ? ಬಿಟ್ಟೇಬಿಟ್ಟೆನು ಎಲ್ಲವನು !
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮೂಕ ಮಾತು

September 17, 2008 - 3:52pm
ಸಂಗನಗೌಡ

ನೂರೊಂದು ಮಾತೇಕೆ ಬೇಕು

ನಿನ್ನ ಕಣ್ಣ ಕಿಟಕಿಯಿಂದ ನಿನ್ನ

ಒನಪೆಲ್ಲ ತೋರುತಿರಲು.

 

ಕಟ್ಟಲಾದೀತೇ ಆ ಬೆಡಗು

ಬಿನ್ನಾಣವನು ಮಾತಲ್ಲಿ,

ಕಣ್ಣಲ್ಲೇ ಹರಿಯಲಿ ಬಿಡು,ಜಗವೇ

ಮೂಕತನದಿ ಸಾಗುತಿರಲು. Read more about ಮೂಕ ಮಾತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಕ್ಕನ ಮಗಳು ಇಂಜಿನೀರ್ ಆದಾಗ :)

November 20, 2008 - 1:17am
Aravinda
ಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ.

ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು.

ನನ್ನ ಅಮ್ಮನ ಮತ್ತು ಅವಳ(ಅಕ್ಕನ ಮಗಳು) ಮಾತುಕಥೆ ಹೀಗಿದೆ  
"ನೀನು ದೊಡ್ಡವಳಾದ ಮೇಲೆ ಡಾಕ್ಟರ್ ಆಗ್ತೀಯ? "
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಾತು - ಮೌನ

January 23, 2009 - 11:24pm
hpn
ಮೌನ
ಅಂದು ಮನವ ಕಾಡಿದ್ದು ಮೌನ. ಏನೂ ಹೇಳದೆ ಏನೆಲ್ಲ ಹೇಳಿಬಿಟ್ಟಿತ್ತು. ಮರೆತು ಎಂದಿನಂತೆ ದಿಶೆ ಬದಲಾಯಿಸಲು ಹೊರಟರೆ ಮತ್ತೆ ಎಳೆತಂದಿತ್ತು ತನ್ನೆಡೆಗೆ.
ಏನೋ ದುಗುಡ. ಅರ್ಥವಾಗದ್ದು ಎನಿಸುವಷ್ಟು ಒಮ್ಮೆಮ್ಮೆ. ಅರ್ಥವಾಯಿತು ಎಂದುಕೊಂಡಂತೆ ಏನೂ ಅರ್ಥವಾಗದು. ಅರ್ಥವಾದದ್ದೂ ತೇಲಿ ಹೋಯ್ತು ಕರಗಿ ಏನೂ ಉಳಿಯದಂತೆ!

ಏನೆಲ್ಲ ಹೇಳಿಹೋಗಿತ್ತು ಮೌನ! ಆದರೆ ಏನೂ ಬಿಡಿಸದೆ ಒಮ್ಮೆಲೇ ಎಲ್ಲವನ್ನೂ ಬಿಡಿಸುತ್ತ ಕಣ್ಣಮುಚ್ಚಾಲೆಯಾಡುತ್ತ ತುಡಿದಿತ್ತು ಮನದಲ್ಲಿ; ಹಿಡಿದು ತಡೆದಿತ್ತು ಮನದ ಹೊರಳು, ಎಲ್ಲೋ ಇದ್ದುಕೊಂಡು ಇನಿತು ದೂರದಲ್ಲೇ ಇರುವಂತೆ.
ಎಂದೂ ನಿಲ್ಲದ ಮನಸ್ಸಿಗೆ ಅಂದು stalemate.

ಎಲ್ಲಿದೆ ಹಾದಿ? ಎಲ್ಲಿರುವುದು ಮೌನದೊಳಿದ್ದ ಸಮನಾದ ಪ್ರಶ್ನೆ-ಉತ್ತರ - ಇವುಗಳಿಗೆ ಉತ್ತರ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೆಜ್ಜೆಯ ದನಿ

March 11, 2009 - 3:16am
hamsanandi

ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ
ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ
ಸಾಧುಗಳ ಮೆಲುನುಡಿಯ ಮಾತುಗಳೊ ಮನವ
ಕದ್ದಾವು  ಕಾಲಂದುಗೆಯ ನಲುದನಿಯ ತೆರದಿ

 

ಸಂಸ್ಕೃತ ಮೂಲ: 

ಕಟು ಕ್ವಣಂತೋ ಮಲದಾಯಕಾಃ ಖಲಾಃ
ತುದಂತ್ಯಲಂ ಬಂಧನಶೃಂಖಲಾ ಇವ |
ಮನಸ್ತು ಸಾಧುಧ್ವನಿಭಿಃ ಪದೇ ಪದೇ 
ಹರಂತಿ ಸಂತೋ ಮಣಿನೂಪುರಾ ಇವ || Read more about ಗೆಜ್ಜೆಯ ದನಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆರದ ಗಾಯ

April 24, 2009 - 11:10pm
hamsanandi

ಕೊಡಲಿಯೇಟು ಬಿದ್ದರೂ
ಮರವು ಚಿಗುರಬಹುದು;
ಅಂಬಿನೇಟು ಬಿದ್ದ ಮೇಲೂ
ಗಾಯ ಮಾಯಬಹುದು;

ಕೆಡುಕರ ಕಹಿ ನುಡಿಯ
ಘೋರ ಮಾತಿನೇಟು
ಬಿದ್ದರೆಂದೂ ಮಾಯದು
ಮನಕೆ ಆದ ಏಟು.

 

ಸಂಸ್ಕೃತ ಮೂಲ:

ಸಂರೋಹತಿ ಶರೈರ್ವಿದ್ಧಂ ವರಂ ಪರಶುನಾ ಹತಂ |
ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್ ||

-ಹಂಸಾನಂದಿ

  Read more about ಆರದ ಗಾಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (7 votes)
To prevent automated spam submissions leave this field empty.
ಸರಣಿ: 

(ಮರ್ಕಟ )ನನ್ನೀ ಮನಸ್ಸು

May 7, 2009 - 9:12pm
vinideso
ತಣ್ಣನೆಯ ತಿಳಿ ಗಾಳಿ ಬೀಸುತ್ತಿತ್ತು , ಆಗಸದಲ್ಲಿ ಸೂರ್ಯ ನಿಧಾನವಾಗಿ ತನ್ನ ಮನೆಯತ್ತ ಹೆಜ್ಜೆಹಾಕತೊಡಗಿದ್ದ ,ಅವನಿಗೂ ಪಾಪ ಕತ್ತಲಾಗಿರಬೇಕು ಕೆಂಪು ಬಣ್ಣದ ಟಾರ್ಚ್ ಹಿಡಿದಿದ್ದ ಅನ್ನಿಸುತ್ತೆ ಅದಕ್ಕೇನೋ ಹೋಗೋ ದಾರಿಯಲೆಲ್ಲ ಕೆಮ್ಪನ್ನೇ ಚೆಲ್ಲಿದ ಹಾಗಿತ್ತು .
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಊಟದ ಸಮಯ

May 9, 2009 - 6:54pm
Aravinda

ಏನ್ ಜನಾನೋ ಯಪ್ಪಾ...  ಊಟ ಮಾಡೋ ಟೈಮ್ ಅಲ್ಲಿ ಇಡ್ಲಿ ತಿಂತಾ ಕೂತಿದಾರೆ... ಅಂತ ಯೋಚಿಸುತ್ತಾ ಅಲ್ಲಿ ತಿನ್ನುತ್ತಾ ಕುಳಿತವ್ರನ್ನ ನೋಡ್ತಾ  ವೆಜ್ ಪಾರ್ಕ್ ಒಳಗೆ ಹೋದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏಕೆ ಬದಲಾದೆ ಗೆಳತಿ?

June 25, 2010 - 11:25am
srinivasps

ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿ
ಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?
ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ
ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ್ದು?
ನಿನ್ನೊಳಗಿನ ಜಗವನ್ನು ಬಿಟ್ಟು ಹೊರಗೆ ಬಾರದೆ ಇದ್ದ ಅಂತರ್ಮುಖಿಯನ್ನಲ್ಲವೇ ನಾ ಮೆಚ್ಚಿದ್ದು?
ನನ್ನ ಮನದ ಮಾತು ನಿನಗೆ ತಲಪುವ ಮುನ್ನ ನಿನ್ನೊಳಗಿನ ಭಾವ ಹೇಗಿತ್ತೋ ಅರಿಯೆ...
ನನ್ನ ಪ್ರೇಮದ ಒಕ್ಕಣೆಗೂ ಮೌನವಾಗೆ ಸಮ್ಮತಿಸಿದ್ದೆಯಲ್ಲವೇ?
ಅಂದಿನಿಂದಲೇ ಶುರುವಾಯ್ತು ಹೊಸ ಅಧ್ಯಾಯ...
ನೀ ಬದಲಾದೆ ಗೆಳತಿ...
ಸಮ್ಮೋಹನಗಳಿಸಿದ ಆ ಮೌನ ಮಾಯವಾಯ್ತಲ್ಲ...
ಈಗ, ನನ್ನೊಡನಿದ್ದಾಗ ನಿನ್ನಧರಕೆ ಬಿಡುವಿಲ್ಲ! Read more about ಏಕೆ ಬದಲಾದೆ ಗೆಳತಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಕೋಲೆಗಳು

September 23, 2011 - 4:12am
hamsanandi

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು
ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು
ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು
ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):

ಸ್ಮಿತೇನ ಭಾವೇನ ಚ ಲಜ್ಜಯಾ ಭಯಾ
ಪರಾಙ್ಮುಖೈರರ್ಧ ಕಟಾಕ್ಷ ವೀಕ್ಷಣೈಃ |
ವಚೋಭಿರೀರ್ಷ್ಯಾ ಕಲಹೇನ ಲೀಲಯಾ
ಸಮಸ್ತ ಭಾವೈಃ ಖಲು ಬಂಧನಂ ಸ್ತ್ರೀಯಃ ||

-ಹಂಸಾನಂದಿ
Read more about ಸಂಕೋಲೆಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಸರಣಿ: 

ಅಪರ೦ಜಿಗಿಲ್ಲ ಅಳುಕು..!

August 24, 2012 - 8:21am
ksraghavendranavada
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಮಾತು