ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸ್ಫೂರ್ತಿ ಸೆಲೆಗಳು

ಸಮಯ - ಸ್ಫೂರ್ತಿ ಸೆಲೆ ೭

ಸಮಯದ ಮಹತ್ವ ಎಲ್ಲರಿಗೂ ಮುಪ್ಪಿನಲ್ಲಿ ಅರ್ಥವಾಗುತ್ತದೆ.
ಆದರೆ ಆಗ ನಾವು ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ.
ಪ್ರತಿ ಕ್ಷಣವನ್ನು ಆನಂದದಿಂದ, ಸಾರ್ಥಕವಾಗಿ ಕಳೆಯಲು ಪ್ರಯತ್ನಿಸಬೇಕು.

ಗುಟ್ಟು - ಸ್ಫೂರ್ತಿ ಸೆಲೆ ೬

ಗುಟ್ಟುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ.
ನಿಮಗೇ ಅದನ್ನು ಕಾಪಾಡಲು ಆಗುವುದಿಲ್ಲ ಎಂದ ಮೇಲೆ
ಅವರು ಹೇಗೆ ಕಾಪಾಡುತ್ತಾರೆ?

ಕಣ್ಣೀರು - ಸ್ಫೂರ್ತಿ ಸೆಲೆ ೫

ಕಣ್ಣೀರು ನಗೆಗಿಂತ ಹೆಚ್ಚು ವಿಶೇಷ.
ನಗೆಯನ್ನು ಯಾರಿಗಾದರೂ ಬೀರಬಹುದು ಆದರೆ
ನಾವು ಪ್ರೀತಿಸಿದವರಿಗೆ ಮಾತ್ರ ಕಣ್ಣೀರು ಮಿಡಿಯಬಹುದು.

ಜೀವನ - ಸ್ಫೂರ್ತಿ ಸೆಲೆ ೪

ಜೀವನವೆಂದರೆ ಅವಕಾಶಗಳ ನದಿಯಿದ್ದಂತೆ.
ನೀವು ಬಾನಿ(ಬಕೆಟ್) ಹಿಡಿದಿದ್ದೀರೋ, ಚಮಚ ಹಿಡಿದಿದ್ದೀರೋ ಎಂಬುದು ಮುಖ್ಯ.
ಯಾವುದನ್ನು ಹಿಡಿಯಬೇಕೆಂದು ನಿರ್ಧರಿಸುವವರು ನೀವೇ.

ಸಾಲ - ಸ್ಫೂರ್ತಿ ಸೆಲೆ ೩

ಸ್ನೇಹಿತರಿಂದ ಸಾಲ ಪಡೆಯುವ ಮೊದಲು
ಸ್ನೇಹಿತರು ಮುಖ್ಯವೋ, ಸಾಲ ಮುಖ್ಯವೋ ಎಂದು ಯೋಚಿಸಿ.
ಆಗ ಸಾಲ ಮುಖ್ಯವೆನಿಸಿದರೆ ಮಾತ್ರ ಸಾಲ ಮಾಡಿ.

ಸಂತೋಷ - ಸ್ಫೂರ್ತಿ ಸೆಲೆ ೨

ಸಂತೋಷದ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ತೆರೆದುಕೊಳ್ಳುತ್ತದೆ.
ಆದರೆ ನಾವು ನುಚ್ಚಿದ ಬಾಗಿಲನ್ನೇ ನೋಡುತ್ತಿರುತ್ತೇವೆ.
ಯಾವುದಕ್ಕೂ ಬೇಸರ ಪಟ್ಟುಕೊಳ್ಳಬಾರದು.

ಹಣ - ಸ್ಫೂರ್ತಿ ಸೆಲೆ ೧

ನಾವು ನಮ್ಮಲ್ಲಿರುವ ಹಣವನ್ನೆಲ್ಲಾ ಕಳೆದುಕೊಂಡಾಗ ಎಷ್ಟು ಬೆಲೆ ಬಾಳುತ್ತೇವೋ ಅದೇ ನಮ್ಮ ಕಿಮ್ಮತ್ತು. ಹಣದಿಂದ ಯಾರನ್ನೂ ಅಳೆಯದಿರಲು ಪ್ರಯತ್ನಿಸಿ.

Syndicate content