ಗೌರಿ
ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
ಅಯ್ಯೋ ಗಣೇಶ! ಯಾಕೋ ನೀನಳುವೆ? ನನ್ನ ಕಿವಿಗಳನ್ನೆಳೀತಿದಾನೆ ನೋಡಮ್ಮ!
ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?
ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನೇ?
ಇದಕೇಳುತಲೇನೂ ತೋಚದೆ ಹುಸಿಕೋಪವತೋರಿದ ಗೌರಿಯೆ ಕಾಯಲೆಮ್ಮೆಲ್ಲರನ್ನು!
ಸಂಸ್ಕೃತ ಮೂಲ ಹೀಗಿದೆ:
Read more about ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧
ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೨ (ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ...)
ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...
ಏಪ್ರಿಲ್ಗೆ ಏಳು ವರ್ಷಗಳಾದವು.
ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ.
ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ ಮಗಳು ಗೌರಿ ಕಲಿಸಿದ್ದಾಳೆ. ಇನ್ನೂ ಕಲಿಸುತ್ತಲೇ ಇದ್ದಾಳೆ. Read more about ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...
ಗೌರಿಯ ಗುಟ್ಟು
"ಬೆವೆತಿಹೆಯೇಕೆ ಹೀಗೆ ನಲ್ಲೆ?" "ಉರಿಯಿಹುದಲ್ಲ ನಿನ್ನ ಕಣ್ಗಳಲೆ "
"ನಡುಕವೇಕೆ ತಿಂಗಳಮೊಗದವಳೆ?" "ಕೊರಳ ಹಾವಿನ ಅಂಜಿಕೆ"
"ದೇವಿ, ಮೈನವಿರೆದ್ದಿದೆಯಲ್ಲ?" "ಗಂಗೆಯ ತುಂತುರಿನಿಂದ"
ಇಂತು ಸಂಗಾತಿಯಲಿ ಇಂಗಿತವ ಮುಚ್ಚಿಡುವ ಗೌರಿ ಕಾಯಲೆಮ್ಮನ್ನು!
ಸಂಸ್ಕೃತ ಮೂಲ: (ಸುಭಾಷಿತ ರತ್ನಕೋಶದಿಂದ)
ಸ್ವೇದಸ್ತೇ ಕಥಮೀದೃಶಃ ಪ್ರಿಯತಮೇ ತ್ವನ್ನೇತ್ರವಹ್ನೇರ್ವಿಭೋ
ಕಸ್ಮಾದ್ವೇಪಿತಮೇತಾದಿಂದು ವದನೇ ಭೋಗೀಂದ್ರಭೀತೇರ್ಭವ ।
ರೋಮಾಂಚಃ ಕಥಮೇಶ ದೇವಿ ಭಗವನ್ ಗಂಗಾಂಭಸಾಂ ಶೀಕರೈಃ
ಇತ್ಥಂ ಭರ್ತಾರಿ ಭಾವಗೋಪನಪರಾ ಗೌರೀ ಚಿರಂ ಪಾತು ವಃ ॥
स्वॆदस्तॆ कथमीदृशः प्रियतमॆ त्वन्नॆत्रवह्नॆर्विभॊ Read more about ಗೌರಿಯ ಗುಟ್ಟು
ಗಾನ ವನ ಮಯೂರಿ
ಇವತ್ತು (ಏಪ್ರಿಲ್ ೬,೨೦೧೧) ಸಂಗೀತಪ್ರೇಮಿಗಳನ್ನು ಅಗಲಿದ ಸಂಗೀತ ಕಲಾಚಾರ್ಯ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ (೧೯೨೨-೨೦೧೧) ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ಪರಂಪರೆಯ ಒಂದು ಮುಖ್ಯ ಕೊಂಡಿ.ಇವತ್ತು ಅವರು ಸಂಗೀತ ಪ್ರೇಮಿಗಳ ಜೊತೆ ಇಲ್ಲದಿರಬಹುದು. ಆದರೆ, ಅವರ ಸಂಗೀತ ಇನ್ನೂ ನಮ್ಮೊಡನೆ ಇದೆ. ಮತ್ತೆ ಇನ್ನೂ ಬಹುಕಾಲ ಇರುವುದು.
ಚಿತ್ರ ಕೃಪೆ: ವಿಜಯ್ ಶರ್ಮ Picture Courtesy: Vijay Sarma
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಅವರ ಹೆಸರನ್ನೂ ಕೇಳಿರಲಿಲ್ಲ. ಸ್ವತಃ ನಾನೇ ಚೆನ್ನೈ ವಾಸಿಯಾಗಿ ಹದಿನೆಂಟು ತಿಂಗಳು ಕಳೆದಿದ್ದಾಗಲೂ ಒಮ್ಮೆಯೂ ಅವರ ಕಚೇರಿಯನ್ನು ಕೇಳಿರಲಿಲ್ಲ. ಎಂತಹ ದುರದೃಷ್ಟ! ನಂತರ ನನಗೆ ಅವರ ಕಚೇರಿಯನ್ನು ನೇರವಾಗಿ ಕೇಳುವ ಅವಕಾಶವೂ ಸಿಗಲೇ ಇಲ್ಲ.
Read more about ಗಾನ ವನ ಮಯೂರಿ
ಮಾರವೈರಿ ರಮಣಿ
ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ.
ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ ರಾಗದ, ರೂಪಕತಾಳದ ಮಾರವೈರಿ ರಮಣಿ ಎನ್ನುವ ರಚನೆ. ಮೊದಲು ಸಾಹಿತ್ಯವನ್ನು ಓದಿ.
ಪಲ್ಲವಿ:
ಮಾರವೈರಿ ರಮಣಿ ಮಂಜು ಭಾಷಿಣೀ ||ಮಾರವೈರಿ||
ಅನುಪಲ್ಲವಿ:
ಕ್ರೂರ ದಾನವೇಭವಾರಣಾರೀ ಶ್ರೀಗೌರೀ ||ಮಾರವೈರಿ||
ಚರಣ:
ಕರ್ಮಬಂಧವಾರಣ ನಿಷ್ಕಾಮಚಿತ್ತ ವರದೇ
ಧರ್ಮವರ್ಧನೀ ಸದಾ ವದನಹಾಸೇ ಶುಭಫಲದೇ ||ಮಾರವೈರಿ||

