22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇಂದು ಓದಿದ ವಚನ

ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ

December 4, 2008 - 4:11am
olnswamy

ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ
ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ
ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕ್ಕೊಬ್ಬ
ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ ರಾಮನಾಥ

 
[ತೀವಿ-ತುಂಬಿ]

 
ಜೇಡರ ದಾಸಿಮಯ್ಯ ಆದ್ಯ ವಚನಕಾರ. ಬಸವ ಮೊದಲಾದ ಸುಪ್ರಸಿದ್ಧ ಶರಣೆರಲ್ಲರಿಗಿಂತ ಹಿಂದಿನವನು. ಗುಲಬರ್ಗಾ ಜಿಲ್ಲೆಯ ಮುದನೂರು ಈತ ಹುಟ್ಟಿದ ಊರು. ತಂದೆ-ಕಾಮಯ್ಯ, ತಾಯಿ-ಶಂಕರಿ, ಹೆಂಡತಿ-ದುಗ್ಗಳೆ. ನೇಯ್ಗೆಯ ಕಸುಬಿನ ವಚನಕಾರ ಈತ. ರಾಮನಾಥ ಅನ್ನುವುದು ಜೇಡರ ದಾಸಿಮಯ್ಯನ ಅಂಕಿತ. ಈತನ ೧೭೬ ವಚನಗಳು ದೊರೆತಿವೆ.

 
ಸಭೆಯಲ್ಲಿ ಸಾವಿರ ಜನ ಇರಬಹುದು. ಆದರೆ ಅವರೆಲ್ಲರೂ ದಾನಕೊಡುವುದಕ್ಕೆ ಮುಂದೆಬರುವವರಲ್ಲ. ಯುದ್ಧಕ್ಕೆ ಲಕ್ಷ ಜನ ಹೋಗಬಹುದು. ಹಾಗೆ ಹೋದವರೆಲ್ಲ ಸಾಯುವವರಲ್ಲ. ಯುದ್ಧದಲ್ಲಿ ಶತ್ರುವನ್ನು ಇರಿಯಬಲ್ಲವರು ನೂರರಲ್ಲಿಯೋ ಸಾವಿರದಲ್ಲಿಯೋ ಒಬ್ಬರಿದ್ದರೆ ಹೆಚ್ಚು. ಹುಣಿಸೆಯ ಮರದಲ್ಲಿ ಬಿಟ್ಟ ಹೂಗಳೆಲ್ಲ ಹುಣಿಸೆಯ ಕಾಯಿ ಆಗುವುದೇ? ಇದು ಜೇಡರ ದಾಸಿಮಯ್ಯ ಕೇಳುವ ಪ್ರಶ್ನೆ. ಇಲ್ಲ ಅನ್ನುವ ಉತ್ತರ ಕೇಳುವ ಧಾಟಿಯಲ್ಲಿಯೇ ಹೊಳೆಯುತ್ತದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಇಂದು ಓದಿದ ವಚನ:ಗೆಲುವೋ ಸೋಲೋ ಚಿಂತೆ ಬೇಡ:ಸಗರದ ಬೊಮ್ಮಣ್ಣ

December 5, 2008 - 4:55am
olnswamy

ಗೆಲ್ಲ ಸೋಲ ಬಲ್ಲವರಿಗೇಕೆ
ಅದು ಬೆಳ್ಳರ ಗುಣ
ಪಥವೆಲ್ಲರಲಿ ನಿಹಿತನಾಗಿ
ಅತಿಶಯದ ವಿಷಯದಲ್ಲಿ ಗತನಾಗದೆ
ಸರ್ವವನರಿತು
ಗತಮಯಕ್ಕೆ ಅತೀತನಾಗು
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ

'ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ' ಎಂಬುದು ಸಗರದ ಬೊಮ್ಮಣ್ಣ ಎಂಬ ವಚನಕಾರನ ಅಂಕಿತನಾಮ. ಗುಲ್ಬರ್ಗಾ ಜಿಲ್ಲೆಯ ಸಗರದವನು ಈತ. ಕಾಲ ಸುಮಾರು ಕ್ರಿಶ. ೧೧೬೦. ಈತನ ಹೆಂಡತಿ ಶಿವದೇವಿ. ಈತ ಗಣಾಚಾರ ಪ್ರವೃತ್ತಿಯವನು (ಇಂದಿನ ಅರ್ಥದ ಮಿಲಿಟೆಂಟ್) ಎಂಬ ಮಾತಿದೆ. ಆತ ವಿಶೇಷವಾಗಿ ಜೈನ ವಿರೋಧಿಯಾಗಿದ್ದ ಎಂಬ ಮಾತಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದು ಓದಿದ ವಚನ;ಸುಖ ದುಃಖದ ನಕ್ಷತ್ರ: ಸಿದ್ಧರಾಮ

December 6, 2008 - 10:25am
olnswamy

ಸುಖ ದುಃಖದ ನಕ್ಷತ್ರ

ಆಕಾಶದಲ್ಲಿ ತಾರೆಗಳು ಕಾಣಬಾರದೆಂಬಯೋಚನೆಯುಳ್ಳಡೆ ಸೂರ್ಯೋದಯಕ್ಕಯ್ಯಾ
ಆಕಾಶದಲ್ಲಿ ತಾರೆಗಳು ಕಾಣಬೇಕೆಂಬಯೋಚನೆಯುಳ್ಳಡೆ ಸೂರ್ಯಾಸ್ತಮಾನಕ್ಕಯ್ಯಾ
ಕಾಣಬಾರದು ಕಾಣಬಾರದು ಜ್ಞಾನದಲ್ಲಿ ಆನಂದಅನಾನಂದವ
ಕಾಣಬಹುದು ಕಾಣಬಹುದು ಅಜ್ಞಾನದಲ್ಲಿಸುಖದುಃಖೋಭಯದ್ವಂದ್ವವ
ಭೋ ಭೋ ಕಪಿಲಸಿದ್ಧಮಲ್ಲಿಕಾರ್ಜುನಾ ಭೋ

ಸಿದ್ಧರಾಮನ ಈ ವಚನ ನಿತ್ಯಾನುಭವದರೂಪಕವೊಂದನ್ನು ಬಳಸಿಕೊಂಡು ಜ್ಞಾನದ ಸ್ವರೂಪವನ್ನು ಹೇಳುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದು ಓದಿದ ವಚನ: ಸಿದ್ಧರಾಮ: ಅರ್ಥ ಎಲ್ಲಿದೆ?

December 8, 2008 - 4:53am
olnswamy

 

ರೇಖೆ ರೇಖೆ ಕೂಡಿದಲ್ಲಿ ಅಕ್ಷರವಾದವು
ಅಕ್ಷರಾಕ್ಷರ ಕೂಡಿದಲ್ಲಿ ಶಬ್ದವಾಯಿತ್ತು
ಶಬ್ದ ಶಬ್ದ ಕೂಡಿದಲ್ಲಿ ಗ್ರಂಥಾನ್ವಯವಾಯಿತ್ತು
ಅಕ್ಷರದಲ್ಲಿಲ್ಲ
ಶಬ್ದದಲ್ಲಿಲ್ಲ
ಗ್ರಂಥಾನ್ವಯದಲ್ಲಿಲ್ಲ
ಏನೆಂಬುದಿಲ್ಲ
ಮೊದಲೆ ಇಲ್ಲ
ಇಲ್ಲವೆಂಬುವ ಅಹುದೆಂಬುವ ಉಭಯ ಶಬ್ದಕ್ಕೆಲೋಪವಿಲ್ಲ ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನ ಮಹಾಮಹಿಮನು

 

ಸಿದ್ಧರಾಮನ ಈ ವಚನ ಅರ್ಥದ ಮೀಮಾಂಸೆಯ ಆರಂಭಬಿಂದುವಿನಂತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದು ಓದಿದ ವಚನ: ಯಾವ ಮಾದರಿಯೂ ಇಲ್ಲ: ಸಿದ್ಧರಾಮ

December 9, 2008 - 8:32am
olnswamy

ಗುರುವಿಂಗೆ ಗುರುವಿಲ್ಲ

ಲಿಂಗಕ್ಕೆ ಲಿಂಗವಿಲ್ಲ

ಜಂಗಮಕ್ಕೆ ಜಂಗಮವಿಲ್ಲ

ನನಗೆ ನಾನಿಲ್ಲ

ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ

ಕಪಿಲಸಿದ್ಧಮಲ್ಲಿಕಾರ್ಜುನಾ

ಸಿದ್ಧರಾಮನ ವಚನ ಇದು.

ಮಾದರಿಗಳನ್ನು ಅನುಸರಿಸುವವರು ಹೇಳಹೆಸರಿಲ್ಲದಾಗುತ್ತಾರೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದು ಓದಿದ ವಚನ: ಹೆಣ್ಣು-ದೇವರು: ಸಿದ್ಧರಾಮ

December 11, 2008 - 10:20am
olnswamy

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ
ಹೆಣ್ಣು ರಾಕ್ಷಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ
ನೋಡಾ

ಭಕ್ತಿಯಲ್ಲಿ ತೊಡಗಿದವರು, ಆಧ್ಯಾತ್ಮ ಸಾಧನೆಯಲ್ಲಿ ಮುಳುಗಿದವರು, ಹೆಣ್ಣನ್ನು ಅನುಮಾನದಿಂದ ಕಾಣುತ್ತಾ, ಹೆಣ್ಣಿನಿಂದ ತೊಂದರೆಯೇ ಹೆಚ್ಚೆಂದು ಭಾವಿಸುವುದು ತೀರಸಾಮಾನ್ಯವಾದ ದೃಷ್ಟಿಕೋನ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದು ಓದಿದ ವಚನ: ಲೀಢವಾಗಿರಬಾರದು: ಸಿದ್ಧರಾಮ

December 12, 2008 - 5:24am
olnswamy
ನೋಡುವುದು ನೋಡಲೇ ಬೇಕು
ಮಾಡುವುದು ಮಾಡಲೇ ಬೇಕು
ನೋಡಿ ಮಾಡಿ ಮನದಲ್ಲಿ ಲೀಢವಾಗಿರಬಾರದು ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ

[ಲೀಢ-ನೆಕ್ಕು, ಆಸ್ವಾದಿಸು, ರುಚಿ ನೋಡು].

ಸಿದ್ಧರಾಮನ ಈ ವಚನ ವೈರಾಗ್ಯವೆಂಬ ಕಲ್ಪನೆಯ ಭಾಷ್ಯದಂತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದು ಓದಿದ ವಚನ: ನೀರಿನಂಥ ಮನಸ್ಸು: ಸಿದ್ಧರಾಮ

December 13, 2008 - 6:28am
olnswamy
ಅನೇಕ ತೆರದ ಯೋನಿಮುಖಂಗಳ ಪೊಕ್ಕು
ನೀರ್ಗುಡಿಯಲೆಂದು ಪೋದಡೆ
ಸುಡು ಪೋಗೆಂದು ನೂಂಕಿತ್ತೆ ಜಲ
ಅದರಂತಿರಬೇಡಾ ಹಿರಿಯರ ಮನ
ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ
ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ
ಕಪಿಲಸಿದ್ಧಮಲ್ಲಿಕಾರ್ಜುನಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದು ಓದಿದ ವಚನ: ಓರಂತಿಪ್ಪುದೆ ಸಮತೆ: ಸಿದ್ಧರಾಮ

December 14, 2008 - 4:38am
olnswamy

ಆರು ಜರಿದವರೆನ್ನ ಮನದ ಕಾಳಿಕೆಯಕಳೆದರೆಂಬುದೆ ಸಮತೆ

ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ  ಹಗೆಗಳೆಂಬುದೆ ಸಮತೆ

ಇಂತಿದು ಗುರುಕಾರುಣ್ಯ

ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ Read more about ಇಂದು ಓದಿದ ವಚನ: ಓರಂತಿಪ್ಪುದೆ ಸಮತೆ: ಸಿದ್ಧರಾಮ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದು ಓದಿದ ವಚನ: ಅಸಾಧ್ಯ: ಘಟ್ಟಿವಾಳಯ್ಯ

December 15, 2008 - 5:24am
olnswamy

ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ  

ಅಯ್ಯಾ

ನೆನಹಿಂಗೆ ಬಾರದುದ ಕಾಂಬುದು ಹುಸಿ 

ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ 

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲನಿಲ್ಲು ಮಾಣು

  Read more about ಇಂದು ಓದಿದ ವಚನ: ಅಸಾಧ್ಯ: ಘಟ್ಟಿವಾಳಯ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಇಂದು ಓದಿದ ವಚನ: ಘನ: ಘಟ್ಟಿವಾಳಯ್ಯ

December 16, 2008 - 5:43am
olnswamy

ಭೂಮಿ ಘನವೆಂಬೆನೆ
ಪಾದಕ್ಕೊಳಗಾಯಿತ್ತು
ಗಗನ ಘನವೆಂಬೆನೆ
ಕಂಗಳಿಗೊಳಗಾಯಿತ್ತು
ಮಹವು ಘನವೆಂಬೆನೆ
ಮಾತಿಂಗೊಳಗಾಯಿತ್ತು
ಘನವೆಂಬುದಿನ್ನೆಲ್ಲಿಯದೆಲವೋ Read more about ಇಂದು ಓದಿದ ವಚನ: ಘನ: ಘಟ್ಟಿವಾಳಯ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂದು ಓದಿದ ವಚನ: ಚಿಂತೆ ಎಂಬ ಹೂವಿನ ಗಿಡ: ಘಟ್ಟಿವಾಳಯ್ಯ

December 19, 2008 - 10:23am
olnswamy

ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ

ಹೊಲಗೇರಿಯಲಿ ಬಿತ್ತುವನೆ ನೋಡಿರೆ

ಜಲಶೇಖರನ ಉದಕರವನೆರದಡೆ

ಆಸೆಯೆಂಬ ಹೂವ ಕೊಯ್ದು ಕಾಮಂಗೇರಿಸುವೆನು

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ Read more about ಇಂದು ಓದಿದ ವಚನ: ಚಿಂತೆ ಎಂಬ ಹೂವಿನ ಗಿಡ: ಘಟ್ಟಿವಾಳಯ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (2 votes)
To prevent automated spam submissions leave this field empty.

ಕಾಲದ ಕಲಿತನ

January 2, 2010 - 3:41pm
ananthesha nempu

ಕಾಲಕ್ಕೆ ತಕ್ಕಂತೆ ಕಲಿಸುವ ವಿಧಾನ ಬದಲಾದ ಬಗೆ- ಅಲ್ಲಮಪ್ರಭುವಿನ ವಚನ.

ಕೃತಯುಗದಲ್ಲಿ

ಶ್ರೀಗುರು ಶಿಷ್ಯಂಗೆ ಬಡಿದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ತ್ರೇತಾಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಬೈದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ದ್ವಾಪರ ಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಝಂಕಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಕಲಿಯುಗದಲ್ಲಿ
ಶ್ರೀಗುರು ಶಿಷ್ಯಂಗೆ ವಂದಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಗುಹೇಶ್ವರ,
ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆಱಗಾದೆನು. Read more about ಕಾಲದ ಕಲಿತನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಇಂದು ಓದಿದ ವಚನ