ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲದೇ, ಕುಶಲವರು ವೀಣೆಯನ್ನು ನುಡಿಸುತ್ತ, ರಾಮನ ಮುಂದೆ ರಾಮಾಯಣವನ್ನು ಹಾಡಿದರೆಂಬ ಸಂಗತಿ ರಾಮಾಯಣದ ಉತ್ತರಕಾಂಡದಲ್ಲಿದೆ. ಹಾಗಾಗಿ, ನಮ್ಮ ಸಂಗೀತದ ಆದಿಯನ್ನು ಕಡಿಮೆಯೆಂದರೆ ಎರಡುಸಾವಿರ ವರ್ಷಗಳ ಹಿಂದೆ ಎಂದಾದರೂ ಊಹಿಸಬೇಕಾಗುತ್ತೆ. ಏಕೆಂದರೆ, ವಾಲ್ಮೀಕಿರಾಮಾಯಣದ ಪ್ರಕ್ಷಿಪ್ತಭಾಗಗಳೂ (ಬಾಲಕಾಂಡ, ಉತ್ತರಕಾಂಡ) ಸುಮಾರು ಕ್ರಿಸ್ತನ ಕಾಲದ ಆಸುಪಾಸಿನವು ಎಂಬುದು ಗೊತ್ತಿರುವ ವಿಚಾರವೇ.
ಆದರೆ ಪುರಾಣ-ಪ್ರಸಿದ್ಧರಲ್ಲಿ ಸಂಗೀತಗಾರನೆಂದು ಜನಜನಿತವಾಗಿರುವುದು ಕೃಷ್ಣ. ಕೃಷ್ಣನ ಕೊಳಲು ವಾದನದ ಕೌಶಲ ಮಹಾಭಾರತದಲ್ಲಿ (ನನಗೆ ತಿಳಿದ ಮಟ್ಟ್ಟಿಗೆ) ಹೆಚ್ಚಾಗಿಲ್ಲವಾದರೂ, ನಂತರ ಬಂದ ಭಾಗವತ - ಗೀತಗೋವಿಂದದಿಂದ ಹಿಡಿದು ಕಳೆದ ಶತಮಾನದ ಗೋಕುಲನಿರ್ಗಮನ (ಪುತಿನ) ದ ವರೆಗೂ ಹಲವಾರು ಕವಿಗಳು ಕೃಷ್ಣನ ಕೊಳಲಿನ ಕರೆಯನ್ನು ಬಣ್ಣಿಸಿದ್ದಾರೆ.
ಮುಂದೆ ಓದಿ »