22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಭರ್ತೃಹರಿ

ಶೃಂಗಾರ ರಸಮಂಜರಿ

December 22, 2007 - 6:01am
hamsanandi

ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ. ಆದರೆ, ಅವುಗಳಲ್ಲಿ ಸಾಹಿತ್ಯ ಗೌಣ. ಸಂಗೀತ ಮುಖ್ಯ.

ಹಿಂದಿನಿಂದಲೂ ರಸಗಳ ಪಟ್ಟಿ ಮಾಡುವಾಗ ಶೃಂಗಾರವೇ ಮೊದಲಿನದು. ಅಮರಕೋಶ ರಸಗಳನ್ನು "ಶೃಂಗಾರ ವೀರ ಕರುಣಾ ಅಧ್ಬುತ ಹಾಸ್ಯ ಭಯಾನಕಾ: ಭೀಭತ್ಸ ರೌದ್ರೋ ಚ ರಸಾ:" ಎಂದು ಎಂಟು ರಸಗಳನ್ನು ಪಟ್ಟಿಮಾಡುತ್ತದೆ. ಭರತನ ನಾಟ್ಯಶಾಸ್ತ್ರದಲ್ಲಿ, ಈ ಎಂಟರ ಜೊತೆಗೆ ಒಂಬತ್ತನೆಯದಾದ ’ಶಾಂತ’ವೆಂಬ ರಸವೂ ದೊರೆಯುತ್ತೆ. ಒಟ್ಟಿನಲ್ಲಿ ಶೃಂಗಾರವೇ ಮೊದಲ ರಸವಾಗಿತ್ತು ಎಂದು ನಾವಂದುಕೊಳ್ಳುವುದರಲ್ಲಿ ತಪ್ಪಿಲ್ಲ.
Read more about ಶೃಂಗಾರ ರಸಮಂಜರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೂ ಬಾಣ ಹಿಡಿದವಗೆ ಒಂದು ನಮನ

October 22, 2008 - 11:49pm
hamsanandi

 

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಸುವೆನು ಹೂ ಬಾಣಗಳ ಹಿಡಿದಿಹಗೆ
Read more about ಹೂ ಬಾಣ ಹಿಡಿದವಗೆ ಒಂದು ನಮನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕತ್ತಿಯಲುಗಿನ ಮೇಲೆ ನಡಿಗೆ

April 2, 2009 - 10:01am
hamsanandi
ಗುಟ್ಟಿನಲಿ ನೀಡುವುದ ಬಂದವರ ಹದುಳದಲಿ ಕಾಣುವುದ
ಒಳಿತ ಮಾಡಿ ಮೌನದಲಿರುವುದ ಪರರ ನೆರವ ನುಡಿವುದ
ಐಸಿರಿಗರಳದ ಕಂಡವರ ತೆಗಳದೆಂತೆಂಬೀ ಕಡುಕಟ್ಟಳೆಗಳ
ಕತ್ತಿಯಲುಗಿನ ಮೇಲೆನಡೆವುದ ನೇಮಿಸಿದರಾರು ಸುಜನರಿಗೆ?

ಸಂಸ್ಕೃತ ಮೂಲ- ಭರ್ತೃಹರಿಯ ನೀತಿಶತಕದಿಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಾತು ಎನ್ನುವ ಒಂದೇ ಒಡವೆ

May 5, 2009 - 5:07am
hamsanandi


ಹೊಳೆವ ಕಡಗಗಳು ಚಂದಿರನ ಹೊಳಪಿರುವ ಹಾರಗಳು
ಸ್ನಾನವು ಪೂಸಿರುವ ಲೇಪಗಳು ಮುಡಿದಿರುವ ಹೂವುಗಳು
ಇವು ಅಲ್ಲ ಒಡವೆಗಳು! ನಿನಗಿರಲು ನಲ್ನುಡಿಯ ನಾಲಿಗೆಯು
ಮಾತಿನೊಡವೆಯ ಮುಂದುಳಿದೊಡವೆಗಳು ಸೊರಗುವುವು


ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

Read more about ಮಾತು ಎನ್ನುವ ಒಂದೇ ಒಡವೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಕೊರತೆಯಲೂ ಕಾಣುವ ಹೊಳಪು

May 6, 2009 - 1:27am
hamsanandi


ಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುನು ಉಂಡು ಗೆದ್ದಿಹ ಯೋಧ
ಮದವಡಗಿದ ಆನೆ ಹಿಂಗಾರಿನಲಿ ಮಳಲದಂಡೆಯ ತೋರುತಾ ಹರಿವಹೊಳೆ
ಹುಣ್ಣಿಮೆಯ ಹಿಂದಿನಿರುಳ ಚಂದಿರ ಬೇಟದಲಿ ಬಸವಳಿದ ಹರೆಯದ ಹುಡುಗಿ
ಕೊರತೆಯಲೆ ಮೆರುಗುವರು ಕೊಡುಗೈಯಲಿ ನೀಡಿ ಸಿರಿಯಳಿದವರ ತೆರದಿ

Read more about ಕೊರತೆಯಲೂ ಕಾಣುವ ಹೊಳಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಯೋಗಿಗಳಿಗೂ ನಿಲುಕದ್ದು

December 29, 2009 - 6:08am
hamsanandi

ಸುಮ್ಮನಿದ್ದರೆ ಮೂಗ - ಮಾತಾಡುವನೋ? ಬಾಯಿಬಡುಕ;
ಸೈರಣೆಯಿರುವನು ಪುಕ್ಕಲ; ಇಲ್ಲದವನ ಹುಟ್ಟೇ ಸರಿಯಿಲ್ಲ!
ಬಳಿಯಲಿರುವನು ಕಾಲ್ತೊಡಕು; ದೂರದಲಿರುವನು ತಿಳಿಗೇಡಿ
ಪರರ ಚಾಕರಿಯನಿತು ಕಠಿಣ! ಯೋಗಿಗಳಿಗೂ ನಿಲುಕೋದಿಲ್ಲ!

ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)

ಮೌನಾನ್ಮೂಕಃ ಪ್ರವಚನಪಟುರ್ವಾಚಕೋ ಜಲ್ಪಕೋ ವಾ
ಕ್ಷಾಂತ್ಯಾ ಭೀರುರ್ಯದಿ ನ ಸಹತೇ ಪ್ರಾಯಶೋ ನಾಭಿಜಾತಃ
ಧೃಷ್ಟಃ ಪಾರ್ಶ್ವೇ ವಸತಿ ನಿಯತ ದೂರತಶ್ಚಾಪ್ರಗಲ್ಭಃ
ಸೇವಾಧರ್ಮಃ ಪರಮ ಗಹನೋ ಯೋಗಿನಾಮಪ್ಯಗಮ್ಯಃ

-ಹಂಸಾನಂದಿ Read more about ಯೋಗಿಗಳಿಗೂ ನಿಲುಕದ್ದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

January 5, 2010 - 12:19am
hamsanandi

ಜಡತೆ ನೀಗುವುದು; ಮಾತಿನಲಿ ದಿಟವ ಬೆರೆಸುವುದು;
ಹಿರಿಮೆ ಬೆಳೆಸುವುದು; ಉಳಿದ ಕೆಡುಕನಳಿಸುವುದು;
ಮನವ ನಲಿಸುವುದು; ಜೊತೆಗೆ ಹೆಸರ ಮೆರೆಸುವುದು!
ನಲ್ಗೆಳೆಯರೊಡನಾಟ ಅದೇನ ಮಾಡದೇ ಇಹುದು?

ಸಂಸ್ಕೃತ ಮೂಲ - (ಭರ್ತೃಹರಿಯ ನೀತಿಶತಕದಿಂದ)

ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಮ್
ಮಾನೋನ್ನತಿಂ ದಿಶತಿ ಪಾಪಮಪಾಕರೋತಿ |
ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ
ಸತ್ಸಂಗತಿ: ಕಥಯ ಕಿಂ ನ ಕರೋತಿ ಪುಂಸಾಮ್||

-ಹಂಸಾನಂದಿ Read more about ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.
ಸರಣಿ: 

ಬೇಕಿರದ ವಸ್ತುಗಳು

March 4, 2010 - 12:54am
hamsanandi

ಮನ್ನಿಸುವ ಗುಣವಿರಲು ಕವಚವೇಕೆ?
ಮುಂಗೋಪಕಿಂತಲು ಹಿರಿಯ ಹಗೆಯುಂಟೆ?
ಸುಡುಬೆಂಕಿಯೇಕೆ ಪುಂಡುದಾಯಾದಿಗಳಿರಲು?
ಮನವನವರಿವ ಗೆಳೆಯಗೆ ಮಿಗಿಲು ಮದ್ದಿರುವುದೇ?
ಕೇಡಿಗರು ಬಳಿಯಲಿರೆ ಹಾವಿಗೆ ಅಂಜುವರೆ?
ನೆಮ್ಮದಿಯ ತಿಳಿವಿರಲು ಹಣದ ಹಂಗೇಕೆ?
ನಾಚುವ ಮೊಗಕೆ ಬೇರೆ ಸಿಂಗರ ಬೇಕೆ?
ನಲ್ಗಬ್ಬಗಳನೋದಿ ನಲಿಯುವನು ಆಳಬಯಸುವನೆ?

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):

ಕ್ಷಾಂತಿಶ್ಚೇದ್ಕವಚೇನ ಕಿಂ ಕಿಮರಿಭಿಃ ಕ್ರೋಧೋಸ್ತಿ ಚೇದ್ದೇಹಿನಾಂ
ಜ್ಞಾತಿಶ್ಚೇದನಲೇನ ಕಿಂ ಯದಿ ಸುಹೃದ್ದಿವ್ಯೌಷಧೈಃ ಕಿಂ ಫಲಂ |
ಕಿಂ ಸರ್ಪೈರ್ಯದಿ ದುರ್ಜನಾಃ ಕಿಮು ಧನೈರ್ವಿದ್ಯಾSನವದ್ಯಾ ಯದಿ Read more about ಬೇಕಿರದ ವಸ್ತುಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಹೆಣ್ಣುಗಳ ಸಿಂಗಾರ

March 12, 2010 - 4:31am
hamsanandi

ಕೊಂಕಾದ ಕುಡಿಹುಬ್ಬು ಕಡೆಗಣ್ಣುಗಳ ನೋಟ
ನಯವಾದ ಮೆಲುನುಡಿ ನಾಚಿಕೆಯ ನಸುನಗೆ
ಲೇಸಾದ ನಿಲುಮೆ ಜೊತೆಗೆ ಹಿತವಾದ ನಡಿಗೆ
ಪೆಣ್ಗಳಿಗಿವು ಸಿಂಗರವು ಮತ್ತವೇ ಆಯುಧವು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಭ್ರೂ ಚಾತುರ್ಯಾಕುಂಚಿತಾಕ್ಷಾಃ ಕಟಾಕ್ಷಾಃ
ಸ್ನಿಗ್ಧಾ ವಾಚೋ ಲಜ್ಜಿತಾಶ್ಚೈವ ಹಾಸಾಃ |
ಲೀಲಾಮಂದ್ರಂ ಪ್ರಸ್ಥಿತಂ ಚ ಸ್ಥಿತಂ ಚ
ಸ್ತ್ರೀಣಾಮೇತದ್ ಭೂಷಣಂ ಚಾಯುಧಂ ಚ ||

-ಹಂಸಾನಂದಿ Read more about ಹೆಣ್ಣುಗಳ ಸಿಂಗಾರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ನಾಳೆಗಾಗಿ ಇಂದೇ ದುಡಿ!

June 10, 2010 - 6:34am
hamsanandi

ಒಡಲೆಂಬ ಮನೆಯು ಗಟ್ಟಿಮುಟ್ಟಾಗಿರಲು,
ಮುಪ್ಪೆನುವುದಿನ್ನೂ ಬಳಿಸಾರದೇ ಇರಲು,
ಕಿವಿಮೂಗುಕಣ್ಣುಗಳ ಕಸುವುಗುಂದದೇ ಇರಲು,
ಜೀವ ತಾನಿನ್ನೂ ಸೊರಗಿ ಹೋಗದೇ ಇರಲು,
ಅರಿತವರು ಆಗಲೇ ದುಡಿಯುತಲಿ ಇರಬೇಕು;
ತಮ್ಮ ಏಳಿಗೆಯನ್ನು ತಾವೆ ತರುತಿರಬೇಕು!
ಇದನು ಮಾಡದೆ ಹೋಗಿ ಮನೆ ಹತ್ತಿ ಉರಿವಾಗ
ಬಾವಿ ತೋಡಲು ಹೊರಡುವುದೆಂತಹ ಕೆಲಸ?


ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕದಿಂದ):

ಯಾವತ್ಸ್ವಸ್ಥಮಿದಂ ಕಲೇಬರಗೃಹಂ ಯಾವಚ್ಚ ದೂರೇ ಜರಾ
ಯಾವಚ್ಚೇಂದ್ರಿಯಶಕ್ತಿರಪ್ರತಿಹತಾ ಯಾವತ್ ಕ್ಷಯೋ ನಾಯುಷಃ | Read more about ನಾಳೆಗಾಗಿ ಇಂದೇ ದುಡಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಮದ್ದಿಲ್ಲದ ರೋಗ

July 16, 2010 - 12:17am
hamsanandi

ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;
ನಂಜು ಏರಿದರೆ ಮಂತ್ರದ ತಡೆ;
ಮದಿಸಿದ ಆನೆಗೆ ಅಂಕುಶದಿರಿತ;
ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,
ರೋಗ ರುಜಿನಕೆ ವೈದ್ಯನ ಮದ್ದು;
ಹುಡುಕಬಹುದು ಉಳಿದೆಲ್ಲಕು ಮದ್ದು,
ವಾಸಿಯಾಗದ್ದೊಂದೇ - ಪೆದ್ದನ ಮೊದ್ದು.

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಶಕ್ಯೋ ವಾರಯಿತುಂ ಜಲೇನ ಹುತಭುಕ್ ಛತ್ರೇಣ ಸೂರ್ಯಾತಪೋ
ನಾಗೇಂದ್ರೋ ನಿಶಿತಾಂಕುಶೇನ ಸಮದೌ ದಂಡೇನ ಗೋಗರ್ದಭೌ
ವ್ಯಾಧಿರ್ಭೇಷಜ ಸಂಗ್ರಹೈಶ್ಚ ವಿವಿಧೈರ್ಮಂತ್ರಪ್ರಯೋಗೈರ್ವಿಷಂ
ಸರ್ವಸ್ಯೌಷದಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಂ
Read more about ಮದ್ದಿಲ್ಲದ ರೋಗ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಬಿಲ್ಲುಗಾರ್ತಿಗೆ

July 29, 2010 - 11:41pm
hamsanandi

ಚೆಲುವೆ! ನಿನ್ನಂಥ ಬಿಲ್ಗಾರ್ತಿ
ಸುಲಭದಲಿ ಕಾಣಸಿಗುವುದಿಲ್ಲ;
ಬಾಣ ಹೂಡದೆ ಬರಿ ಸೆಳೆತದಲೇ**
ಮನಸುಗಳನು ಸೀಳಿಬಿಡುವೆಯಲ್ಲ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |
ಯದಾ ವಿಧ್ಯಸಿ ಚೇತಾಂಸಿ ಗುಣೇರೈವ ನ ಸಾಯಕೈಃ ||

-ಹಂಸಾನಂದಿ
Read more about ಬಿಲ್ಲುಗಾರ್ತಿಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಕೊಲ್ಲುವ ಕಣ್ಣ ನೋಟ

September 21, 2010 - 2:21am
hamsanandi

ಸರ್ರನೇ ಸರಿವಂಥ ಹೊಳೆವ ಚರ್ಮದ ಹಾವು
ಕಚ್ಚುವುದೂ ಮೇಲವಳ ದಿಟ್ಟಿ ಬೀಳ್ವುದಕಿಂತ
ಮದ್ದು ಕೊಟ್ಟಾರಿಲ್ಲಿ ಹಾವು ಕಚ್ಚಿದರೆ; ಚೆಲುವೆ-
ಗಣ್ಣ ಚಣನೋಟಕ್ಕೆನಗೆ ಸಿಗದು ಔಷಧಿಯು!

ಸಂಸ್ಕೃತ ಮೂಲ: (ಭರ್ತೃಹರಿಯ ಶೃಂಗಾರಶತಕದಿಂದ)

ವ್ಯಾದೀರ್ಘೇಣ ಚಲೇನ ವಕ್ರಗತಿನಾ ತೇಜಸ್ವಿನಾ ಭೋಗಿನಾ
ನೀಲಾಬ್ಜದ್ಯುತಿನಾಹಿನಾ ಪರಮಹಮ್ ದಷ್ಟೋ ನ ತಚ್ಚಕ್ಷುಷಾ|
ದಷ್ಟೇ ಸಂತಿ ಚಿಕಿತ್ಸಕಾ ದಿಶಿ ದಿಶಿ ಪ್ರಾಯೇಣ ಧರ್ಮಾರ್ಥಿನೋ
ಮುಗ್ಧಾಕ್ಷೀಕ್ಷಣವೀಕ್ಷಿತಸ್ಯ ನ ಹಿ ಮೇ ಮಂತ್ರೋ ನ ಚಾಪ್ಯೌಷಧಮ್||

-ಹಂಸಾನಂದಿ
Read more about ಕೊಲ್ಲುವ ಕಣ್ಣ ನೋಟ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಬಾಳಿನಿಂದ ಬೆಂಕಿಗೆ!

October 28, 2010 - 12:58am
hamsanandi

ಮದನನೆಂಬ ಬೆಸ್ತ ಭರದಿ ಹಾಕಿಹನು
ಹೆಣ್ಣೆಂಬ ಗಾಳವನು ಬಾಳಗಡಲಿನಲಿ;
ಅವಳ ತುಟಿಗಳ ಸೆಳೆತಕ್ಕೀಡಾದವರನು
ಹಾಕಿ ಹುರಿಯುವನು ಒಲವ ಬೆಂಕಿಯಲಿ!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ವಿಸ್ತಾರಿತಂ ಮಕರಕೇತನಧೀವರೇಣ
ಸ್ತ್ರೀಸಂಜ್ಞಿತಂ ಬಡಿಶಮತ್ರ ಭವಾಂಬುರಾಶೌ
ಯೇನಾಚಿರಾತ್ತಧರಾಮಿಷಲೋಲ ಮರ್ತ್ಯ-
ಮತ್ಸ್ಯಾಸ್ವಿಕೃಷ್ಯ ಸ ಪಚತ್ಯನುರಾಗವಹ್ನೋ

 

-ಹಂಸಾನಂದಿ

 

ಕೊ: ಮೂಲದಲ್ಲಿರುವ ’ಮಕರಕೇತನ’ = ಮೊಸಳೆಬಾವುಟದವನು = ಮನ್ಮಥ ಅನ್ನುವುದನ್ನು ಸುಲಭವಾಗಿ ತಿಳಿಯಲೆಂದು ’ಮದನ’ನೆಂದೇ ಇರಿಸಿದ್ದೇನೆ. Read more about ಬಾಳಿನಿಂದ ಬೆಂಕಿಗೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪುಣ್ಯವಂತರು

January 21, 2011 - 5:59am
hamsanandi

ನಡತೆಯಿಂದ ಸಂತಸನೆ ತರುವ ಮಗನು
ಮಡದಿ ಗಂಡನೊಳಿತ ಬಯಸುವಂಥವಳು
ಬದಲಾಗದ ಗೆಳೆಯ ನೋವಲೂ ನಲಿವಲೂ
ಹದುಳಿಗರಿಗೆ ಜಗದೊಳೀ ಮೂವರು ಸಿಕ್ಕಾರು!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಪ್ರೀಣಾತಿ ಯಃ ಸುಚರಿತಃ ಪಿತರಂ ಸ ಪುತ್ರೋ
ಯದ್ಭರ್ತುರೇವ ಹಿತಮಿಚ್ಛತಿ ತತ್ ಕಲತ್ರಂ |
ತನ್ಮಿತ್ರಮಾಪದಿ ಸುಖೇ ಚ ಸಮಕ್ರಿಯಂ ಯದ್
ಏತತ್ ತ್ರಯಂ ಜಗತಿ ಪುಣ್ಯಕೃತೋ ಲಭಂತೇ||

-ಹಂಸಾನಂದಿ

ಕೊ: ಹದುಳ = ಕ್ಷೇಮ, ಶ್ರದ್ಧೆ, ಸಂತೋಷ ಹೀಗೆಲ್ಲಾ ಅರ್ಥಗಳಿವೆ. ಹಾಗಾಗಿ, ಹದುಳಿಗ = ಪುಣ್ಯವಂತ ಅಂತ ಬಳಸಿದ್ದೇನೆ Read more about ಪುಣ್ಯವಂತರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಜಿಂಕೆ ಕಣ್ಣವಳು ಮಾಡಿದ ತಪ್ಪು

February 10, 2011 - 7:36am
hamsanandi

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿ
ಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವ
ತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರು
ತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ಏತಾಶ್ಚಲದ್ವಲಯ ಸಂಹತಿ ಮೇಖಲೋತ್ಥ
ಝಂಕಾರನೂಪುರ ಪರಾಜಿತ ರಾಜಹಂಸ್ಯಃ |
ಕುರ್ವಂತಿ ಕಸ್ಯ ನ ಮನೋ ವಿವಶಂ ತರುಣ್ಯೋ
ವಿತ್ರಸ್ತ ಮುಗ್ಧಹರಿಣೀಸದೃಶೈಃ ಕಟಾಕ್ಷೈಃ ||

-ಹಂಸಾನಂದಿ

 

ಕೊ: ಪೂರ್ತಿ ಪದಶಃ ಅನುವಾದವಲ್ಲದಿದ್ದರೂ ಭಾವವನ್ನು ಉಳಿಸಿದ್ದೇನೆ ಎಂದುಕೊಂಡಿದ್ದೇನೆ. Read more about ಜಿಂಕೆ ಕಣ್ಣವಳು ಮಾಡಿದ ತಪ್ಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಚೆಲುವೆಯ ನೋಟ

February 11, 2011 - 7:16am
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಗಟ್ಟಿಗರ ಸೋಲು

February 19, 2011 - 2:23am
hamsanandi


ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;
ಮೃಗರಾಜ ಸಿಂಹವ ಮಡುಹುವಲೂ ನಿಪುಣರು.
ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನು
ಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ಮತ್ತೇಭಕುಂಭದಲನೇ ಭುವಿ ಸಂತಿ ಶೂರಾಃ
ಕೇಚಿತ್ಪ್ರಚಂಡ ಮೃಗರಾಜವಧೇSಪಿ ದಕ್ಷಾಃ |
ಕಿಂತು ಬ್ರವೀಮಿ ಬಲಿನಾಂ ಪುರತಃ ಪ್ರಸಹ್ಯ
ಕಂದರ್ಪದರ್ಪದಲನೇ ವಿರಲಾ ಮನುಷ್ಯಾಃ||

-ಹಂಸಾನಂದಿ Read more about ಗಟ್ಟಿಗರ ಸೋಲು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಾಡಲಾರದ ಕೆಲಸ

April 14, 2011 - 5:19am
hamsanandi

ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ
ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;
ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂ
ಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಲಭೇತ ಸಿಕತಾಸು ತೈಲಮಪಿ ಯತ್ನತಃ ಪೀಡಯನ್
ಪಿಬೇತ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ ||
ಕದಾಚಿದಪಿ ಪರ್ಯಟನ್ಶಶವಿಷಾಣಮಾಸಾದಯೇನ್ನತು
ಪ್ರತಿನಿವಿಷ್ಟಮೂರ್ಖಜನಚಿತ್ತಮಾರಾಧಯೇತ್ ||

-ಹಂಸಾನಂದಿ Read more about ಮಾಡಲಾರದ ಕೆಲಸ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಾಡಲಾರದ ಕೆಲಸ -೨

April 30, 2011 - 6:01am
hamsanandi

ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದು
ಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;
ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದು
ಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಪ್ರಸಹ್ಯ ಮಣಿಂ ಉದ್ಧರೇತ್ ಮಕರ ವಕ್ತ್ರದಂಷ್ಟ್ರಾಂತರಾತ್
ಸಮುದ್ರಮಪಿ ಸಂತರೇತ್ ಪ್ರಚಲದೂರ್ಮಿ ಮಾಲಾಂಕುಲಾಮ್|
ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವತ್ ಧಾರಯೇನ್ನತು
ಪ್ರತಿವಿಷ್ಟ ಮೂರ್ಖಜನ ಚಿತ್ತಮಾರಾಧಯೇತ್ ||

-ಹಂಸಾನಂದಿ Read more about ಮಾಡಲಾರದ ಕೆಲಸ -೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೂ ಬಾಣ ಹಿಡಿದವನಿಗೆ

May 2, 2011 - 4:49am
hamsanandi

ಇದು ರಮ್ಯ ಚೈತ್ರ ಕಾಲ. ವಸಂತ ಕಾಲ. Read more about ಹೂ ಬಾಣ ಹಿಡಿದವನಿಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಒಂದು ಕಿವಿಮಾತು

May 15, 2011 - 11:15am
hamsanandi

ಮುಂದೆ ಸಂಗೀತ ಪಕ್ಕದಲಿ ತೆಂಕಣದ ಸರಸ ಕವಿಗಳ ಕೂಟ
ಹಿಂದೆ ಜಣಜಣಿಸುವ ಬಳೆಕೈಗಳ ಸುಂದರಿಯರ ಚಾಮರ ಸೇವೆ
ಉಂಟೆಂದಾದರೆ ಸವಿ ನೀ ಸಂಸಾರಚಪಲಗಳ ಬಿಡದೆಲೆ;
ಇಲ್ಲದಿರೆ ನಿನ್ನನೇ ಮರೆತು ಸೇರಿಕೋ ತನ್ಮಯಸ್ಧಿತಿಗೆ ಕೂಡಲೆ!

ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕದಿಂದ):

ಅಗ್ರೇ ಗೀತಂ ಸರಸ ಕವಯಃ ಪಾರ್ಶ್ವತೋ ದಾಕ್ಷಿಣಾತ್ಯಾಃ
ಪಶ್ಚಾಲ್ಲೀಲಾವಲಯರಣಿತಣಂ ಚಾಮರಗ್ರಾಹಿಣೀನಾಂ|
ಯದ್ಯಸ್ತ್ಯೇವಂ ಕುರು ಭವರಸಾಸ್ವಾದನೇ ಲಂಪಟತ್ವಂ
ನೋಚೇಚ್ಚೇತಃ ಪ್ರವಿಶ ಸಹಸಾ ನಿರ್ವಿಕಲ್ಪೌ ಸಮಾಧೌ||

-ಹಂಸಾನಂದಿ
Read more about ಒಂದು ಕಿವಿಮಾತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಜೀವದ ಗೆಳೆಯರು

May 17, 2011 - 1:36am
hamsanandi

ಹಾಲದು ತನ್ನೊಳು ಬೆರೆಸಿದ ನೀರಿಗೆ
ತನ್ನ ನಡತೆಯನೆಲ್ಲವ ನೀಡುವುದು
ಹಾಲ ಕಾಯಿಸಿರೆ ನೀರು ಗೆಳೆಯನ
ನೋವಿಗೆ ಮರುಗಿ ಹಬೆಯಾಡುವುದು

ನೀರಿನ ಗತಿಯ ನೋಡಿದ ಹಾಲು
ಉಕ್ಕಿ ಬೆಂಕಿಗಾಹುತಿಯಾಗುತಿರಲು
ಬೆರೆಸಲು ಅದಕೆ ತುಸುವೇ ನೀರನು
ಕೂಡಲೆ ತಣಿವನು ಹೊಂದುವುದು!

ಒಳ್ಳೆಯ ಗೆಳೆಯರ ಗೆಳೆತನವೆಂದರೆ
ಇರುವುದು ಇಂತಹ ರೀತಿ;
ನೋವಲಿ ನಲಿವಲಿ ಹೇಗೇ ಇರಲಿ
ಜೊತೆಯನು ಬಿಡದಿಹ ರೀತಿ!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)
Read more about ಜೀವದ ಗೆಳೆಯರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ದಂಡದ ಕೆಲಸಗಳು

May 18, 2011 - 10:14pm
hamsanandi

ಸೊಕ್ಕಿದ ಸಲಗವ ಕಮಲದ ದಂಟಿನಲಿ
ಕಟ್ಟಿ ಹಿಡಿಯಲುಜ್ಜುಗಿಸುವಂತೆ

ಗಟ್ಟಿ ವಜ್ರವನು ಹೂವಿನ ದಳದಲಿ
ಪಟ್ಟೆನಿಸಿ ಮುರಿಯ ತೊಡಗುವಂತೆ

ಉಪ್ಪಿನ ಕಡಲನು ಜೇನ ಹನಿಯಿಂದ
ಹೆಚ್ಚು ರುಚಿಗೊಳಿಸ ಬಯಸುವಂತೆ

ಒಳ್ಳೆ ಮಾತಿನಲಿ ಮೂಳರ ದಾರಿಗೆ
ಜಗ್ಗಿಸಿ ತರಹೋಗುವುದು ದಂಡವಂತೆ!


ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ವ್ಯಾಲಂ ಬಾಲ ಮೃಣಾಲ ತಂತುಭಿರಸೌ ರೋದ್ಧುಂ ಸಮುಜ್ಜೃಂಭತೇ
ಭೇತ್ತುಮ್ ವಜ್ರಮಣಿಂ ಶಿರೀಶಕುಸುಮ ಪ್ರಾಂತೇನ ಸನ್ನಹ್ಯತೇ||
ಮಾಧುರ್ಯಂ ಮಧುಬಿಂದುನಾ ರಚಯಿತುಂ ಕ್ಷಾರಾಂಬುಧೇರೀಹತೇ Read more about ದಂಡದ ಕೆಲಸಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಕೊಂಕು ನೋಟದವಳ ಜಾಣ್ಮೆ

August 2, 2011 - 10:19am
hamsanandi

 ಮೋಡಿಗೊಳಿಸುವರು ಅಮಲೇರಿಸುವರು
ಮೇಲೆ ಕಟಪಟೆಯ ಕಟಕಿಯಾಡುವರು; Read more about ಕೊಂಕು ನೋಟದವಳ ಜಾಣ್ಮೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಹಣೆ ಬರಹ

August 19, 2011 - 7:44pm
hamsanandi

ಆನೆ ಹಕ್ಕಿ ಹಾವುಗಳಿಗೆ ತಪ್ಪದ ಸೆರೆವಾಸ

ನೇಸರಚಂದಿರಗಿಹ ರಾಹುಕೇತುಗಳ ಕಾಟ
ಜೊತೆಗೆ ಅರಿವುಳ್ಳವರ ಬಡತನವ ನೋಡಿ
ಎನ್ನ ಮನವೆಂದಿತು "ಹಣೆ ಬರಹವೇ ಗಟ್ಟಿ"
 
 
ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)
 
ಗಜ ಭುಜಂಗ ವಿಹಂಗಮ ಬಂಧನಂ
ಶಶಿ ದಿವಾಕರಯೋರ್ಗ್ರಹ ಪೀಡನಂ |
ಮತಿಮತಾಂ ಚ ನಿರೀಕ್ಷ್ಯ ದರಿದ್ರತಾಂ
ವಿಧಿರಹೋ ಬಲವಾನ್ ಇತಿ ಮೇ ಮತಿಃ ||
 
-ಹಂಸಾನಂದಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ವಸಂತನ ತಪ್ಪು

August 25, 2011 - 5:19am
hamsanandi

 ವಸಂತದಲಿಂಪಾದ ಕೋಗಿಲೆಗಳ ಗಾನ
ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ
ಅಗಲಿ ನೊಂದವರ ಜೀವವನೇ ಸೆಳೆದಾವು
ಕೇಡುಗಾಲದಲಮೃತವೂ ಆದೀತು ನಂಜು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ )

ಮಧುರಯಂ ಮಧುರೈರಪಿ ಕೋಕಿಲಾ-
ಕಲರವೈರ್ಮಲಯಸ್ಯ ಚ ವಾಯುಭಿಃ |
ವಿರಹಿಣಃ ಪ್ರಹಿಣಸ್ತಿ ಶರೀರಿಣೋಂ
ವಿಪದಿ ಹಂತ ಸುಧಾSಪಿ ವಿಷಾಯತೇ ||

-ಹಂಸಾನಂದಿ
Read more about ವಸಂತನ ತಪ್ಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕಾರ್ಗಾಲದ ಹಂಬಲ

August 26, 2011 - 1:38am
hamsanandi

ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು;
ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ;
ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು -
ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ವಿಯದುಪಚಿತ ಮೇಘೋ ಭೂಮಯಃ ಕಂದಲಿನ್ಯೋ
ನವಕುಟಜ ಕದಂಬಾಮೋದಿನೋ ಗಂಧವಾಹಾಃ |
ಶಿಖಿಕುಲಕಲ ಕೇಕಾರವರಮ್ಯಾ ವನಾಂತಾಃ
ಸುಖಿನಮಸುಖಿನಂ ವಾ ಸರ್ವಮುತ್ಕಂಠಯಂತಿ ||

-ಹಂಸಾನಂದಿ Read more about ಕಾರ್ಗಾಲದ ಹಂಬಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವಿಷವಾಗುವ ಅಮೃತ

September 12, 2011 - 10:33pm
hamsanandi

ಕಣ್ಣ ಮುಂದಿರುವ ತನಕ ಈಕೆ
ಅಮೃತ ತುಂಬಿದ ಬಿಂದಿಗೆ;
ಕಣ್ಣ ಹಾದಿಯಲಿರದೆ ಹೋದರೆ 
ವಿಷಕ್ಕಿಂತಲೂ ಹೆಚ್ಚಿಗೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ):

ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ |
ಚಕ್ಷುಶ್ಪಥಾತ್ ಅತೀತಾ ತು ವಿಷಾದಪಿ ಅತಿರಿಚ್ಯತೇ ||

-ಹಂಸನಾದ

ಕೊ:ಮೂಲದಲ್ಲಿಲ್ಲದ "ಬಿಂದಿಗೆ" ಅನ್ನುವ ಪದವು ಮೂಲದಲ್ಲಿ ಇಲ್ಲದಿದ್ದರೂ, ಅರ್ಥವನ್ನು ಹೊಮ್ಮಿಸುತ್ತದೆಂದು ಬಳಸಿದ್ದೇನೆ. Read more about ವಿಷವಾಗುವ ಅಮೃತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಕೋಲೆಗಳು

September 23, 2011 - 4:12am
hamsanandi

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು
ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು
ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು
ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):

ಸ್ಮಿತೇನ ಭಾವೇನ ಚ ಲಜ್ಜಯಾ ಭಯಾ
ಪರಾಙ್ಮುಖೈರರ್ಧ ಕಟಾಕ್ಷ ವೀಕ್ಷಣೈಃ |
ವಚೋಭಿರೀರ್ಷ್ಯಾ ಕಲಹೇನ ಲೀಲಯಾ
ಸಮಸ್ತ ಭಾವೈಃ ಖಲು ಬಂಧನಂ ಸ್ತ್ರೀಯಃ ||

-ಹಂಸಾನಂದಿ
Read more about ಸಂಕೋಲೆಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಸರಣಿ: 

ಇನಿಯೆ?

October 19, 2011 - 7:04am
hamsanandi

ಬೇಗುದಿ ತರುವಳು ನೆನಪಿನಲೆ

ಮರುಳು ಹಿಡಿಸುವಳು ನೋಡಿದರೆ;

ಸೋಕಲು ಇವಳು ಮೈ ಮರವೆ!

ಇವಳಿಗಿನಿಯೆ ಎನ್ನುವ ಹೆಸರೆ? 
 
 
ಸಂಸ್ಕೃತ ಮೂಲ  (ಭರ್ತೃಹರಿಯ ಶೃಂಗಾರಶತಕದಿಂದ):
 

ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣೀ |

ಸ್ಪೃಷ್ಟಾ ಭವತಿ ಮೋಹಾಯ ಸಾ ನಾಮ ದಯಿತಾ ಕಥಮ್ ||
 
-ಹಂಸಾನಂದಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

October 20, 2011 - 1:18am
hamsanandi

ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನು
ನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?
ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾ
ನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿವ ತನಕ  ! 


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ*) :

ಸನ್ಮಾರ್ಗೇ ತಾವದಾಸ್ತೇ ಪ್ರಭವತಿ ಚ ನರಸ್ತಾವದೇವೇಂದ್ರಿಯಾಣಾಂ
ಲಜ್ಜಾಂ ತಾವದ್ವಿಧತ್ತೇ ವಿನಯಮಪಿ ಸಮಾಲಂಭತೇ ತಾವದೇವ |
ಭ್ರೂಚಾಪಾಕೃಷ್ಟ ಮುಕ್ತಾಃ ಶ್ರವಣಪಥಗತಾ ನೀಲ ಪಕ್ಷ್ಮಾಣ ಏತೇ
ಯಾವಲ್ಲೀಲಾವತೀನಾಂ ಹೃದಿ ನ ಧೃತಿ ಮುಷೋ ದೃಷ್ಟಿಭಾಗಾಃ ಪತಂತಿ ||


-ಹಂಸಾನಂದಿ
Read more about ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆಸೆ

October 26, 2011 - 3:06am
hamsanandi

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :

ಅದರ್ಶನೇ ದರ್ಶನಮಾತ್ರ ಕಾಮಾ
ದೃಷ್ಟಾ ಪರಿಷ್ಟಂಗ ಸುಖೈಕ ಲೋಲಾ |
ಆಲಿಂಗಿತಾಯಾಂ ಪುನರಾಯತಾಕ್ಷ್ಯಾ
-ಮಾಶಾಸ್ಮಹೇ ವಿಗ್ರಹಯೇರಭೇದಮ್ ||

-ಹಂಸಾನಂದಿ

ಕೊ: ಈ ಅನುವಾದವನ್ನು ನೋಡಿದ ನನ್ನ ಗೆಳೆಯರೊಬ್ಬರು ಇದನ್ನ ಯಾವುದೋ ಸಿನೆಮಾದಲ್ಲಿ ಇಂತಹದ್ದೇ ಸಾಲುಗಳನ್ನ ಕೇಳಿದ ಹಾಗಿದೆ ಅಂದರು. ಇದ್ದರೂ ಇರಬಹುದು - ಜೈ ಭರ್ತೃಹರಿ! ಪಾಪ ಕ್ರೆಡಿಟ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.

Read more about ಆಸೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆಸೆ

October 26, 2011 - 3:06am
hamsanandi

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :

ಅದರ್ಶನೇ ದರ್ಶನಮಾತ್ರ ಕಾಮಾ
ದೃಷ್ಟಾ ಪರಿಷ್ಟಂಗ ಸುಖೈಕ ಲೋಲಾ |
ಆಲಿಂಗಿತಾಯಾಂ ಪುನರಾಯತಾಕ್ಷ್ಯಾ
-ಮಾಶಾಸ್ಮಹೇ ವಿಗ್ರಹಯೇರಭೇದಮ್ ||

-ಹಂಸಾನಂದಿ

ಕೊ: ಈ ಅನುವಾದವನ್ನು ನೋಡಿದ ನನ್ನ ಗೆಳೆಯರೊಬ್ಬರು ಇದನ್ನ ಯಾವುದೋ ಸಿನೆಮಾದಲ್ಲಿ ಇಂತಹದ್ದೇ ಸಾಲುಗಳನ್ನ ಕೇಳಿದ ಹಾಗಿದೆ ಅಂದರು. ಇದ್ದರೂ ಇರಬಹುದು - ಜೈ ಭರ್ತೃಹರಿ! ಪಾಪ ಕ್ರೆಡಿಟ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.

Read more about ಆಸೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಗೆ ಬಗೆಯ ಜನರು

November 2, 2011 - 9:15pm
hamsanandi

ಯೋಗ್ಯರಿವರು ತಮ್ಮೊಳಿತನೂ ಕಡೆಗಣಿಸಿ ಪರಹಿತವನೆಸಗುವವರು;
ನಾಡಾಡಿಗಳು ಸ್ವಾರ್ಥವನು ಬಿಡದೇ ಉಳಿದವರಿಗೊಳಿತು ಮಾಡಿಯಾರು.
ತಮಗೋಸುಗ ಹೆರವರೊಳಿತಿಗೆ ತಡೆಯಾದವರು ಮನುಜ ರಕ್ಕಸರು;
Read more about ಬಗೆ ಬಗೆಯ ಜನರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ತರುಣಿಯರ ಬೆಡಗು

May 31, 2012 - 9:24am
hamsanandi

ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ
ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ
ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ
ಚಿಗರೆಗಣ್ಣಿಯರಲ್ಲದಾವ ಸೊಗಸಿರದು?

 

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬):

ಸ್ಮಿತಂ ಕಿಂಚಿದ್ವಕ್ತ್ರೇ ಸರಲತರಲೋ ದೃಷ್ಟಿ ವಿಭವಃ
ಪರಿಸ್ಪಂದೋ ವಾಚಾಮಾಭಿನವ ವಿಲಾಸೋಕ್ತಿ ಸರಸ: |
ಗತಾನಾವಾರಂಭಃ ಕಿಸಲಯಿತ ಲೀಲಾ ಪರಿಕರಃ
ಸ್ಪೃಶಂತ್ಯಾಸ್ತಾರುಣಂ ಕಿಮಿವ ನ ಹಿ ರಮ್ಯಂ ಮೃಗದೃಶಃ ||

-ಹಂಸಾನಂದಿ

ಕೊ: ಬಗೆ = ಮನಸ್ಸು ಅನ್ನುವುದಕ್ಕೊಂದು ಅಚ್ಚಕನ್ನಡದ್ದೇ ಪದ.
ಕೊ.ಕೊ : ಮೊದಲ ಸಾಲಿಗೆ "ಸ್ಮಿತಂ ಕಿಂಚಿನ್ಮುಗ್ಧಂ." ಎನ್ನುವ ಪಾಠಾಂತರವೂ ಇದೆ. ಅರ್ಥದಲ್ಲಿ ಬಹಳ ಹೆಚ್ಚಿನ ಬದಲಾವಣೆಯಾಗದು. Read more about ತರುಣಿಯರ ಬೆಡಗು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಸರಣಿ: 

ಅರ್ಧನಾರೀಶ್ವರ

November 10, 2012 - 2:08am
hamsanandi

 


 

 

ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ ತ-

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಭರ್ತೃಹರಿ