ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹಾಗೇ ಸುಮ್ಮನೆ

ನಾಲ್ಕನೆಯ ವರ್ಷ

ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕಾಲ ಉರುಳುವುದಿಲ್ಲ, ಓಡುತ್ತದೆ ಅನ್ನುವುದೇ ದಿಟವೇನೋ.

ಆದರೆ ಕೆಲವು ಸಂಗತಿಗಳು ಮಾತ್ರ ಬದಲಾಗುವುದೇ ಇಲ್ಲ. ಅದರಲ್ಲಿ ಕೆಲವು ಒಳ್ಳೆಯವು. ಕೆಲವು ಕೆಟ್ಟವು. ಅಂತಹುದರಲ್ಲಿ ಮತ್ತೊಂದು ಗಲಭೆ ನಮ್ಮೂರಿನಲ್ಲಿ ನಡೆಯುತ್ತಿದೆಯಂತೆ. ಕೇಳಿದೊಡನೆಯೇ ಮನೆಗೆ ಮಾತನಾಡಿ, ಏನೂ ತೊಂದರೆಯಿಲ್ಲ ಅನ್ನುವುದನ್ನು ತಿಳಿಯುವವರೆಗೆ ಮನಸ್ಸು ತಡೆಯಲೇ ಇಲ್ಲ. ಇಂತಹ ಘಟನೆ ಹಿಂದೆಯೂ ಆಗಿದ್ದು, ನೋಡಿದ್ದು, ಯಾವುದೇ ತಪ್ಪು ಇಲ್ಲದವರೇ ತೊಂದರೆಗೊಳಗಾಗಿದ್ದು ಎಲ್ಲ ನೋಡಿದ್ದೇನೆ. ಇವಕ್ಕೆ ಕೊನೆ ಎಲ್ಲಿ?

ಇದನ್ನು ನೋಡಿದಾಗ ನನಗೆ ಮತ್ತೆ ಹಿಂದೊಮ್ಮೆ ಮಾಡಿದ್ದ ಅನುವಾದವೇ ಮತ್ತೆ ನೆನಪಿಗೆ ಬಂದಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ೬೦೦ ವರ್ಷಗಳ ಹಿಂದೆ ಇದ್ದ ಸಮಚಿತ್ತ ಈಗ ಅರವತ್ತು ವರ್ಷಗಳಿಂದ ಮರೆಯೇ ಆಗಿಬಿಟ್ಟಿದೆಯೇ? ಇದಕ್ಕೆ ನಮ್ಮ ರಾಜಕಾರಣಿಗಳ ಕುಮ್ಮಕ್ಕು ಎಷ್ಟು? ಗೊತ್ತಿಲ್ಲ.  ಮುಂದೆ ಓದಿ »

ನಿನ್ನ ಮನದ ಅಂಗಳದಲ್ಲಿ ಪುಟ್ಟ ಜಾಗೆ ಬೇಕು...

ಕಾಲೇಜು ಕ್ಯಾಂಪಸಿನ ವರಾಂಡದಲ್ಲಿ ಅವನಿಗಾಗಿ ನಾನು ಹುಡುಕಾಡಬೇಕು. ಅದ್ಯಾವುದೋ ಹುಡುಗರ ಗುಂಪಲ್ಲಿ ಅವ ಹಾಸ್ಟೆಲ್್ನತ್ತ ಸಾಗುತ್ತಿದ್ದರೆ ಅವನಿಗೆ ಅರಿವಿಲ್ಲದಂತೆ ನನ್ನ ಹಾಸ್ಟೆಲ್್ನ ಕಿಟಿಕಿಯಿಂದ ಅವನನ್ನೇ ನೋಡುತ್ತಿರಬೇಕು. ಅವ ನನಗೆ ಸಿಕ್ತಾನಾ? ನನ್ನ ಪ್ರೀತಿಯನ್ನು ಅವ ಒಪ್ಪಿಕೊಳ್ತಾನಾ? ಅಂತಾ ನಂಗೊತ್ತಿಲ್ಲ. ಆದ್ರೂ ನಾನು ಅವನನ್ನು ಪ್ರೀತಿಸುತ್ತಿದ್ದೇನೆ. ಒನ್ ವೇ ಲವ್...ಹೂಂ ಕದ್ದು ಮುಚ್ಚಿ ಪ್ರೀತಿಸುವ ಈ ಪ್ರೀತಿಯಲ್ಲಿಯೂ ಒಂದು ಥ್ರಿಲ್ ಇದೆ ಅಲ್ವಾ... 


ಇನ್ನೇನು ವ್ಯಾಲೆಂಟೆನ್ಸ್ ಡೇ ಹತ್ತಿರವಾಗುತ್ತಾ ಬಂತು. ನನ್ನ ಗೆಳತಿಯರೆಲ್ಲಾ ತಮ್ಮ ತಮ್ಮ ಬಾಯ್್ಫ್ರೆಂಡ್ಸ್್ಗಾಗಿ ಉಡುಗೊರೆ ಖರೀದಿಸಿಯಾಗಿದೆ. ಆ ಪ್ರೇಮಿಗಳ ದಿನವನ್ನು ಹೇಗೆ ಕಳೆಯೋದು ಎಂದು ಇಲ್ಲಿ ಕೆಲವರು ಲೆಕ್ಕ ಹಾಕುತ್ತಿದ್ದಾರೆ. ಆದರೆ ನನ್ನದು ನಿಶ್ಶಬ್ದ ಪ್ರಣಯ....ನನ್ನ ಇನಿಯ ನೀನೇ ಎಂದು ನಿನ್ನಲ್ಲಿ ನನ್ನ ಪ್ರೇಮ ನಿವೇದನೆ ಮಾಡಲಾ? ಒಂದು ವೇಳೆ ನೀನು 'ನೋ' ಅಂದು ಬಿಟ್ರೆ ಅನ್ನುವ ಭಯ ಕಾಡ್ತಾ ಇದೆ ಕಣೋ...   ಮುಂದೆ ಓದಿ »

ಸುಮ್ಮನೆ



ಉಸಿರಾಡುವಾಗ
 
ನೀನು   
ನನ್ನಗಲಿ   
ಹೋಗುವೆಯೆ೦ದೆನಿಸಿ
ಉಸಿರಾಡುವುದನ್ನು ನಾ ಮರೆತೆ


ಕಣ್ಣೊಳಗೆ
  
ನೀ ಕುಳಿತೆ  
ನಿನಗೆ   
ನೋವಾಗಬಾರದೆ೦ದು
ಕಣ್ರೆಪ್ಪೆ   
ಆಡಿಸುವುದನ್ನು ಮರೆತೆ


ದಿನವೂ
  
ನಿನ್ನ  
ನೆನಪಾಗಿ  
ನನಗೆ ನಾನೇ
ನೆನಪಾಗಿ ಹೋದೆ
೪  
ಕಣ್ಹಾಯಿಸಿದಷ್ಟು
ನಿನ್ನ ನೆರಳು
ಕ೦ಡಿತು  
ನನ್ನ ನೆರಳು
ನಿನ್ನೊಡನೆ
ಬೆರೆತು ನಡೆಯಿತು

ಹೃದಯದೊಂದಿಗೆ ಒಂದು ಸಲ್ಲಾಪ...

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...?

ಹೃದಯ: ಹಾಗೇ ಸುಮ್ಮನೆ ಇದ್ದೇನೆ.

ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ?

ಹೃದಯ: ಏನಿಲ್ಲಾ ಬಿಡು...

ನಾನು: ಹೇಳೇ...

ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ..

ನಾನು: ಹೌದು

ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ..

ನಾನು: ಮತ್ತೆ (?)

ಹೃದಯ: ಪ್ರೇಮಿಗಳು!

ನಾನು: ಹೂಂ..  ಮುಂದೆ ಓದಿ »

ಮರೆವಿಲ್ಲದೆ ಮಾಸದು ತಲ್ಲಣ

ಮರೆವಿಲ್ಲದೆ ಮಾಸದು ತಲ್ಲಣ
ಮನದ ಸೂಡು, ತಲ್ಲಣ. ಮರೆವು ಆ ಸಮಯದ ಬಂಧು. ಮರೆವಿದ್ದೆಡೆ ಹೊರೆ ಹೊರೆಯಾಗದು. ಮಾಸದು ತಲ್ಲಣ ಮರೆವಿಲ್ಲದೆ.

ನಾವು ಹುಡುಗಿಯರೇ ಹೀಗೆ

ನಾವಿರುವುದೇ ಹೀಗೆ ಹುಡುಗರಾ
ನಮ್ಮಂತರಾಳವನು ತುಸು ಕಾಣಿರಾ?

ಬಾಲ್ಯದ ನೆನಪಿನ ಬುತ್ತಿ ಮನದಲ್ಲಿ
ಹರೆಯದ ಕನಸು ಕಣ್ಣಲ್ಲಿ
ಹೊತ್ತುಕೊಂಡೆ ಇಳಿಯುತೇವೆ ಈ ಹುಚ್ಚು ಹೊಳೆಯಲ್ಲಿ

ನಿಮ್ಮ ಮಾತು ತರುವುದಾದರೂ ಕುಶಿ
ತೋರುತ್ತೇವೆ ಮುನಿಸು ಅದು ಬರೀ ಹುಸಿ
ನಿಮ್ಮ ನೋಟ ಆಗುವುದಾದರೂ ಇಷ್ಟ
ಆಡುತ್ತೇವೆ ಆದಂತೆ ಕಷ್ಟ

ನೀವೆದುರು ಬಂದಾಗ ಬಗ್ಗಿಸಿ ತಲೆ  ಮುಂದೆ ಓದಿ »

ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ

ನಾವು ಚಿಕ್ಕವರಿರುವಾಗ ಮಕ್ಕಳೆಲ್ಲರೂ ಸೇರಿ ನೆಲದ ಮೇಲೆ ಎರಡೂ ಕೈಗಳನ್ನಿರಿಸಿ "ಅಟ್ಟಾ ಮುಟ್ಟಾ" ಆಟವಾಡುವಾಗ ಅದರಲ್ಲಿ ಬರುವಂತಹ "ನಿನ್ನ ಗಂಡ ಎಲ್ಲಿಗೆ ಹೋದ? ಕಾಶಿಗೆ ಹೋದ..ಏನು ತಂದ? ಗಿರಿಗಿಟಿ ತಂದ.. ಯಾರಿಗೆ ಕೊಟ್ಟ? ಅರಸನ ಮಗಳಿಗೆ ಕೊಟ್ಟ..."ಎಂದು ಹೇಳಿ ಮುಗಿಸುವಾಗ 'ಏನು ತಂದ? ಯಾರಿಗೆ ಕೊಟ್ಟ ?'ಎಂಬ ಪ್ರಶ್ನೆಗಳು ನನ್ನನ್ನು ಅಷ್ಟೊಂದು ಚಿಂತೆಗೀಡು ಮಾಡಿರಲಿಲ್ಲ. ಹುಂ!  ಮುಂದೆ ಓದಿ »

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧

kittle-1.jpg

ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊರತೆ ಆಗಿರ್ಲಿಲ್ಲ. ಸುತ್ತ ಮುತ್ತ ಹಳ್ಳೀ ಜನರೂ ಕೂಡ ಸೀಗೆ ಗುಡ್ಡದಲ್ಲಿ ಕರಡಿ ಸಂಸಾರ ಇರೋದು ಗೊತ್ತಿದ್ರಿಂದ ಹೆಚ್ಚಾಗಿ ಯಾರೂ ಬೆಟ್ಟದ ಮೇಲೇ ಬರೋದಾಗ್ಲಿ, ಕರಡಿಗಳಿಗೆ ತೊಂದ್ರೆ ಮಾಡೋದಾಗ್ಲಿ ಮಾಡ್ತಿರ್ಲಿಲ್ಲ.

ಪುಟಾಣಿ ಕರಡಿ ಇದೆಯಲ್ಲ, ಅದು ಬಹಳ ಚೇಷ್ಟೆ. ನಿಂತ ಕಡೆ ಕಾಲು ನಿಲ್ಲೋದಿಲ್ಲ. ಒಂದು ದಿನ ಹಾಡುಹಗಲೇ ಅಮ್ಮನ ಕಣ್ಣು ತಪ್ಪಿಸಿ ಗುಡ್ಡದ ಕೆಳಗಿರೋ ಊರಿಗೆ ಹೋಗಿಬಿಟ್ಟಿದೆ! ನಟ್ಟ ನಡು ಮಧ್ಯಾಹ್ನ. ಎಲ್ಲೋ ಮಕ್ಕಳು ಹಾಡು ಹೇಳೋದು ಕೇಳಿ ಹೋಗಿ ನೋಡತ್ತೆ, ಒಂದು ಪುಟಾಣಿ ಗುಡಿಯೊಳಗೆ ಯಾರೋ ಮಕ್ಕಳಿಗೆ ಏನೋ ಹೇಳಿಕೊಡ್ತಿದಾರೆ. ಪುಟಾಣಿ ಅಲ್ಲೇ ಕಿಟಕಿ ಹತ್ರ ಕಿವಿಇಟ್ಟು ಕೇಳತ್ತೆ. ಮೂಡಲ - ಪಡುವಲ - ಬಡಗಲ - ತೆಂಕಲ ಇವು ನಾಕು ದಿಕ್ಕುಗಳು. ಇವಕ್ಕೇ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಅಂತಲೂ ಅಂತಾರೆ ಅಂತ ಪೇಟ ಕಟ್ಟಿಕೊಂಡವರೊಬ್ಬ್ರು ಹೇಳ್ತಿದ್ರೆ, ಮಕ್ಕಳೂ ಅದೇ ಮಾತನ್ನೆ ತಿರುಗಿ ತಿರುಗಿ ಹೇಳ್ತಿದ್ದು ಕೇಳಿಸ್ತು. ಅಷ್ಟರಲ್ಲೇ, ಪೇಟದವರು, ಹೋಗಿ ಮಕ್ಳಾ , ಇನ್ನು ಮನೇಗೆ ಹೋಗಿ ಊಟ ಮಾಡೀ ಅಂತ ಇದ್ದಾಗ ಕರಡೀ ಮರಿಗೆ ಯಾರಾದ್ರೂ ನೋಡಿದ್ರೆ ಅಂತ ಭಯವಾಗಿ ಓಟ ಕಿತ್ತಿತು.

ಅತ್ಲಾಗಿ ಅಮ್ಮ ಕರಡೀಗೆ ಜೀವವೇ ಬಾಯಿಗೆ ಬಂದಿತ್ತು. ಮಗು ಎಲ್ಲಾದ್ರೂ ಹೋಗಿ ಏನಾದ್ರೂ ಅಪಾಯ ಮಾಡಿಕೊಂಡರೆ ಅಂತ. ವಾಪಸ್ ಬಂದ ಮಗುವಿಗೆ ಒಂದು ಕೋಪದಲ್ಲಿ ಏಟು ಕೊಟ್ಟು, ಆಮೇಲೆ ಮುದ್ದು ಮಾಡಿ, ಹಾಗೆಲ್ಲ ಮಾಡ್ಬಾರ್ದು ಮರೀ, ನಮ್ಮ ಮನೆ ಈ ಗುಡ್ಡ. ನಮ್ಮ ಮನೆಯಲ್ಲಿ ನಾವೇ ರಾಜರು. ಹೊರಗೆ ಹೋದರೆ ನಮಗೆ ಕಷ್ಟ ಅಂತ ಒಳ್ಳೇ ಮಾತಲ್ಲಿ ತಿಳೀಹೇಳಿ, ಇನ್ಯಾವತ್ತೂ ಹಾಗೆ ಹಳ್ಳೀಗೆ ಹೋಗ್ಬಾರ್ದು ಅಂತ ಮಾತು ತೊಗೋತು.  ಮುಂದೆ ಓದಿ »

Syndicate content