ಹಾಗೇ ಸುಮ್ಮನೆ
365 ದಿನಗಳು
ಮುನ್ನೂರರವತ್ತೈದು ದಿನಗಳು
ಒಂದು ವರ್ಷ
(ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!)
ಎಂಬತ್ತು+ ಬ್ಲಾಗ್ ಬರಹಗಳು
ಕೈಬೆರಳೆಣಿಕೆಯ ಲೇಖನಗಳು
ಮರುದನಿಗೂಡಿಸಿದ ನೂರಾರು ಟಿಪ್ಪಣಿಗಳು
ಭಾಗವಹಿಸಿದ ಹತ್ತಾರು ಚರ್ಚೆಗಳು
ತಿಳಿದ ಹೊಸ ವಿಷಯಗಳು ಹಲವಾರು
ಅದರಲ್ಲರಗಿಸಿಕೊಂಡವು ನಾಕಾರು Read more about 365 ದಿನಗಳು
ಬರೆ code ಬರಿ (ಬರೀತಾ ಇರು)
ಮಳೆಯ ಹನಿಗಳು
ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?
ಪ್ರೈಮರಿ ಶಾಲೆಯಿಂದ ಕಾಲೇಜಿನವರೆಗೆ ಕರ್ನಾಟಕದಲ್ಲಿ ಸಾವಿರಾರು ಹುಡುಗರು ( ಹುಡುಗಿಯರೂ ಕೂಡ) - ಸಾವಿರಾರು ಯಾಕೆ - ಲಕ್ಷಾಂತರ ಇರಬಹುದು ಕ್ರಿಕೆಟ್ ಆಡ್ತಾರೆ.
ಇದರಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ ಆಗಿದೆ ಅಂತ ನಂಗೊತ್ತಿಲ್ಲ.
ನಾನು ಕ್ರಿಕೆಟ್ ಆಡಲ್ಲ. ಹಿಂದೆ ಆಡಿರೋದೂ ಕಡಿಮೆ. ನೋಡೋ ಆಸಕ್ತೀನೂ ನನಗೆ ಇಲ್ಲ. Read more about ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?
ಟಿವಿ ಯಲ್ಲಿ ಕಂಡ ಸಂಪದಿತಿ :)
ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧
ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊರತೆ ಆಗಿರ್ಲಿಲ್ಲ. ಸುತ್ತ ಮುತ್ತ ಹಳ್ಳೀ ಜನರೂ ಕೂಡ ಸೀಗೆ ಗುಡ್ಡದಲ್ಲಿ ಕರಡಿ ಸಂಸಾರ ಇರೋದು ಗೊತ್ತಿದ್ರಿಂದ ಹೆಚ್ಚಾಗಿ ಯಾರೂ ಬೆಟ್ಟದ ಮೇಲೇ ಬರೋದಾಗ್ಲಿ, ಕರಡಿಗಳಿಗೆ ತೊಂದ್ರೆ ಮಾಡೋದಾಗ್ಲಿ ಮಾಡ್ತಿರ್ಲಿಲ್ಲ.
ಪುಟಾಣಿ ಕರಡಿ ಇದೆಯಲ್ಲ, ಅದು ಬಹಳ ಚೇಷ್ಟೆ. ನಿಂತ ಕಡೆ ಕಾಲು ನಿಲ್ಲೋದಿಲ್ಲ. ಒಂದು ದಿನ ಹಾಡುಹಗಲೇ ಅಮ್ಮನ ಕಣ್ಣು ತಪ್ಪಿಸಿ ಗುಡ್ಡದ ಕೆಳಗಿರೋ ಊರಿಗೆ ಹೋಗಿಬಿಟ್ಟಿದೆ! ನಟ್ಟ ನಡು ಮಧ್ಯಾಹ್ನ. ಎಲ್ಲೋ ಮಕ್ಕಳು ಹಾಡು ಹೇಳೋದು ಕೇಳಿ ಹೋಗಿ ನೋಡತ್ತೆ, ಒಂದು ಪುಟಾಣಿ ಗುಡಿಯೊಳಗೆ ಯಾರೋ ಮಕ್ಕಳಿಗೆ ಏನೋ ಹೇಳಿಕೊಡ್ತಿದಾರೆ. ಪುಟಾಣಿ ಅಲ್ಲೇ ಕಿಟಕಿ ಹತ್ರ ಕಿವಿಇಟ್ಟು ಕೇಳತ್ತೆ. ಮೂಡಲ - ಪಡುವಲ - ಬಡಗಲ - ತೆಂಕಲ ಇವು ನಾಕು ದಿಕ್ಕುಗಳು. ಇವಕ್ಕೇ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಅಂತಲೂ ಅಂತಾರೆ ಅಂತ ಪೇಟ ಕಟ್ಟಿಕೊಂಡವರೊಬ್ಬ್ರು ಹೇಳ್ತಿದ್ರೆ, ಮಕ್ಕಳೂ ಅದೇ ಮಾತನ್ನೆ ತಿರುಗಿ ತಿರುಗಿ ಹೇಳ್ತಿದ್ದು ಕೇಳಿಸ್ತು. ಅಷ್ಟರಲ್ಲೇ, ಪೇಟದವರು, ಹೋಗಿ ಮಕ್ಳಾ , ಇನ್ನು ಮನೇಗೆ ಹೋಗಿ ಊಟ ಮಾಡೀ ಅಂತ ಇದ್ದಾಗ ಕರಡೀ ಮರಿಗೆ ಯಾರಾದ್ರೂ ನೋಡಿದ್ರೆ ಅಂತ ಭಯವಾಗಿ ಓಟ ಕಿತ್ತಿತು.
ಅತ್ಲಾಗಿ ಅಮ್ಮ ಕರಡೀಗೆ ಜೀವವೇ ಬಾಯಿಗೆ ಬಂದಿತ್ತು. ಮಗು ಎಲ್ಲಾದ್ರೂ ಹೋಗಿ ಏನಾದ್ರೂ ಅಪಾಯ ಮಾಡಿಕೊಂಡರೆ ಅಂತ. ವಾಪಸ್ ಬಂದ ಮಗುವಿಗೆ ಒಂದು ಕೋಪದಲ್ಲಿ ಏಟು ಕೊಟ್ಟು, ಆಮೇಲೆ ಮುದ್ದು ಮಾಡಿ, ಹಾಗೆಲ್ಲ ಮಾಡ್ಬಾರ್ದು ಮರೀ, ನಮ್ಮ ಮನೆ ಈ ಗುಡ್ಡ. ನಮ್ಮ ಮನೆಯಲ್ಲಿ ನಾವೇ ರಾಜರು. ಹೊರಗೆ ಹೋದರೆ ನಮಗೆ ಕಷ್ಟ ಅಂತ ಒಳ್ಳೇ ಮಾತಲ್ಲಿ ತಿಳೀಹೇಳಿ, ಇನ್ಯಾವತ್ತೂ ಹಾಗೆ ಹಳ್ಳೀಗೆ ಹೋಗ್ಬಾರ್ದು ಅಂತ ಮಾತು ತೊಗೋತು.
ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
ಹಂಸನಾದ
ನಿರೀಕ್ಷೆಯಲ್ಲಿ...ಹಾಗೇ ಸುಮ್ಮನೆ
ನಾವು ಹುಡುಗಿಯರೇ ಹೀಗೆ
ಮರೆವಿಲ್ಲದೆ ಮಾಸದು ತಲ್ಲಣ
ಮನದ ಸೂಡು, ತಲ್ಲಣ. ಮರೆವು ಆ ಸಮಯದ ಬಂಧು. ಮರೆವಿದ್ದೆಡೆ ಹೊರೆ ಹೊರೆಯಾಗದು. ಮಾಸದು ತಲ್ಲಣ ಮರೆವಿಲ್ಲದೆ. ಹೃದಯದೊಂದಿಗೆ ಒಂದು ಸಲ್ಲಾಪ...
ಸುಮ್ಮನೆ
೧
ಉಸಿರಾಡುವಾಗ
ನೀನು
ನನ್ನಗಲಿ
ಹೋಗುವೆಯೆ೦ದೆನಿಸಿ
ಉಸಿರಾಡುವುದನ್ನು ನಾ ಮರೆತೆ
೨
ಕಣ್ಣೊಳಗೆ
ನೀ ಕುಳಿತೆ
ನಿನಗೆ
ನೋವಾಗಬಾರದೆ೦ದು
ಕಣ್ರೆಪ್ಪೆ
ಆಡಿಸುವುದನ್ನು ಮರೆತೆ
೩
ದಿನವೂ
ನಿನ್ನ
ನೆನಪಾಗಿ
ನನಗೆ ನಾನೇ
ನೆನಪಾಗಿ ಹೋದೆ
೪
ಕಣ್ಹಾಯಿಸಿದಷ್ಟು
ನಿನ್ನ ನೆರಳು
ಕ೦ಡಿತು
ನನ್ನ ನೆರಳು
ನಿನ್ನೊಡನೆ
ಬೆರೆತು ನಡೆಯಿತು
Read more about ಸುಮ್ಮನೆ
ನಿನ್ನ ಮನದ ಅಂಗಳದಲ್ಲಿ ಪುಟ್ಟ ಜಾಗೆ ಬೇಕು...
ಕಾಲೇಜು ಕ್ಯಾಂಪಸಿನ ವರಾಂಡದಲ್ಲಿ ಅವನಿಗಾಗಿ ನಾನು ಹುಡುಕಾಡಬೇಕು. ಅದ್ಯಾವುದೋ ಹುಡುಗರ ಗುಂಪಲ್ಲಿ ಅವ ಹಾಸ್ಟೆಲ್್ನತ್ತ ಸಾಗುತ್ತಿದ್ದರೆ ಅವನಿಗೆ ಅರಿವಿಲ್ಲದಂತೆ ನನ್ನ ಹಾಸ್ಟೆಲ್್ನ ಕಿಟಿಕಿಯಿಂದ ಅವನನ್ನೇ ನೋಡುತ್ತಿರಬೇಕು. ಅವ ನನಗೆ ಸಿಕ್ತಾನಾ? ನನ್ನ ಪ್ರೀತಿಯನ್ನು ಅವ ಒಪ್ಪಿಕೊಳ್ತಾನಾ? ಅಂತಾ ನಂಗೊತ್ತಿಲ್ಲ. ಆದ್ರೂ ನಾನು ಅವನನ್ನು ಪ್ರೀತಿಸುತ್ತಿದ್ದೇನೆ. ಒನ್ ವೇ ಲವ್...ಹೂಂ ಕದ್ದು ಮುಚ್ಚಿ ಪ್ರೀತಿಸುವ ಈ ಪ್ರೀತಿಯಲ್ಲಿಯೂ ಒಂದು ಥ್ರಿಲ್ ಇದೆ ಅಲ್ವಾ...
ಇನ್ನೇನು ವ್ಯಾಲೆಂಟೆನ್ಸ್ ಡೇ ಹತ್ತಿರವಾಗುತ್ತಾ ಬಂತು. ನನ್ನ ಗೆಳತಿಯರೆಲ್ಲಾ ತಮ್ಮ ತಮ್ಮ ಬಾಯ್್ಫ್ರೆಂಡ್ಸ್್ಗಾಗಿ ಉಡುಗೊರೆ ಖರೀದಿಸಿಯಾಗಿದೆ. ಆ ಪ್ರೇಮಿಗಳ ದಿನವನ್ನು ಹೇಗೆ ಕಳೆಯೋದು ಎಂದು ಇಲ್ಲಿ ಕೆಲವರು ಲೆಕ್ಕ ಹಾಕುತ್ತಿದ್ದಾರೆ. ಆದರೆ ನನ್ನದು ನಿಶ್ಶಬ್ದ ಪ್ರಣಯ....ನನ್ನ ಇನಿಯ ನೀನೇ ಎಂದು ನಿನ್ನಲ್ಲಿ ನನ್ನ ಪ್ರೇಮ ನಿವೇದನೆ ಮಾಡಲಾ? ಒಂದು ವೇಳೆ ನೀನು 'ನೋ' ಅಂದು ಬಿಟ್ರೆ ಅನ್ನುವ ಭಯ ಕಾಡ್ತಾ ಇದೆ ಕಣೋ... Read more about ನಿನ್ನ ಮನದ ಅಂಗಳದಲ್ಲಿ ಪುಟ್ಟ ಜಾಗೆ ಬೇಕು...
ನಾಲ್ಕನೆಯ ವರ್ಷ
ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕಾಲ ಉರುಳುವುದಿಲ್ಲ, ಓಡುತ್ತದೆ ಅನ್ನುವುದೇ ದಿಟವೇನೋ.
ಆದರೆ ಕೆಲವು ಸಂಗತಿಗಳು ಮಾತ್ರ ಬದಲಾಗುವುದೇ ಇಲ್ಲ. ಅದರಲ್ಲಿ ಕೆಲವು ಒಳ್ಳೆಯವು. ಕೆಲವು ಕೆಟ್ಟವು. ಅಂತಹುದರಲ್ಲಿ ಮತ್ತೊಂದು ಗಲಭೆ ನಮ್ಮೂರಿನಲ್ಲಿ ನಡೆಯುತ್ತಿದೆಯಂತೆ. ಕೇಳಿದೊಡನೆಯೇ ಮನೆಗೆ ಮಾತನಾಡಿ, ಏನೂ ತೊಂದರೆಯಿಲ್ಲ ಅನ್ನುವುದನ್ನು ತಿಳಿಯುವವರೆಗೆ ಮನಸ್ಸು ತಡೆಯಲೇ ಇಲ್ಲ. ಇಂತಹ ಘಟನೆ ಹಿಂದೆಯೂ ಆಗಿದ್ದು, ನೋಡಿದ್ದು, ಯಾವುದೇ ತಪ್ಪು ಇಲ್ಲದವರೇ ತೊಂದರೆಗೊಳಗಾಗಿದ್ದು ಎಲ್ಲ ನೋಡಿದ್ದೇನೆ. ಇವಕ್ಕೆ ಕೊನೆ ಎಲ್ಲಿ? Read more about ನಾಲ್ಕನೆಯ ವರ್ಷ
ಕನ್ನಡ ಬಳಕೆಯಲ್ಲೇಕೆ ಕೀಳರಿಮೆ?
ಈಗೀಗ ಪತ್ರಿಕೆಗಳಲ್ಲಿ ಬರುವ ಕೆಲವು ಪದಗಳನ್ನ ನೋಡಿದ್ರೆ ಇದು ಕನ್ನಡವಾ ಅಂತ ಅನುಮಾನ ಬರೋದು ಸಹಜ.
’ಪಠಣ ಅಕ್ಷಮತೆ’ ’ಕಲಿಕಾ ನ್ಯೂನತೆ’ – ಇದ್ಯಾವ್ ಸೀಮೆ ಕನ್ನಡ ಪದಗಳು ರೀ? ಈ ರೀತಿಯ ಪದಗಳನ್ನ ನೀವು ಓದಿಲ್ದಿದ್ರೆ, ಇಲ್ಲಿ ಚಿಟಕಿಸಿ.
ಈಗ ಡಿಸ್ಲೆಕ್ಸಿಯಾಗೆ ಓದುವಲ್ಲಿ ತೊಡಕು – ಓದುವುದರಲ್ಲಿ ತೊಡಕು – ಅಥವಾ ’ತೊಡಕೋದು’ ಅಂತ ಒಂದು ಹೊಸ ಪದವನ್ನು ಹುಟ್ಟಿಸಬಹುದು. ಯಾಕಂದ್ರೆ ಆ ಪದಗಳೇ ಹೇಳುತ್ತೆ - ಓದುವುದರಲ್ಲಿ ತೊಡಕಾಗುತ್ತೆ ಅಂತ. ಅದನ್ನ ಬಿಟ್ಟು ಪಠಣ ಅಕ್ಷಮತೆ ಅಂತೆ ಪಠಣ ಅಕ್ಷಮತೆ!
Read more about ಕನ್ನಡ ಬಳಕೆಯಲ್ಲೇಕೆ ಕೀಳರಿಮೆ?
ನಾಟಕ ಚೈತ್ರ ೨೦೧೦
ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!
ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ ಚಿಗುರು. ಚಿಗುರು ಅಂದ್ರೆ ಹೊಸತು. ಹಾಗಾಗಿ ಹೊಸದಾಗಿ ಏನು ಯೋಚಿಸಿದ್ರೂ ಮಾಡಿದ್ರೂ ಅದನ್ನ ಚೈತ್ರ ಅಂದ್ರೆ ಅದರಲ್ಲೇನಿದೆ ತಪ್ಪು? ಅಲ್ವಾ? ಅಷ್ಟೇ ಅಲ್ಲದೆ ಈ ನಾಟಕ ಚೈತ್ರಕ್ಕೆ ತಾಲೀಮು ಶುರು ಮಾಡಿದ್ದಂತೂ ಚೈತ್ರದಲ್ಲೇ.
ಸುಮಾರು ೨+ ತಿಂಗಳು ನಡೆಸಿದ ಅಭ್ಯಾಸದ ನಂತರ ನೆನ್ನೆ ಸ್ಯಾನ್ ಹೊಸೆಯ ಮೌಂಟ್ ಪ್ಲೆಸೆಂಟ್ ಪ್ರೌಢ ಶಾಲೆಯ ರಂಗ ಮಂದಿರದಲ್ಲಿ ಎರಡು ನಾಟಕಗಳನ್ನು ಆಡಿದ್ದಾಯಿತು. ಒಂದು ಟಿ ಎನ್ ಸೀತಾರಾಮರ ’ನಮ್ಮೊಳಗೊಬ್ಬ ನಾಜೂಕಯ್ಯ’ ಮತ್ತೆ ಮತ್ತೊಂದು ಡುಂಡಿರಾಜರ ’ಕೊರಿಯಪ್ಪನ ಕೊರಿಯೊಗ್ರಫಿ’. Read more about ನಾಟಕ ಚೈತ್ರ ೨೦೧೦
ಮೂರ್ ಕಥೆ
ತಡರಾತ್ರಿಯಲ್ಲಿ ಅವಳಿಗೆ ಅವನೂ, ಅವನಿಗೆ ಅವಳೂ ನೆನಪಾದಳು. ಇಬ್ಬರೂ ಒಂದೇ ಸಮಯಕ್ಕೆ ಫೋನ್ ಹಚ್ಚಿದರು. ಅವಳು ಫೋನ್ ಮಾಡಿದಾಗ ಅವನ ನಂಬರ್ ಬ್ಯುಸಿ, ಅವ ಕರೆ ಮಾಡಿದಾಗ ಅವಳ ನಂಬರ್ ಬ್ಯುಸಿ ಬಂತು. ಈ ರಾತ್ರಿಯಲ್ಲಿ ಅವಳ್ಯಾರಲ್ಲೋ ಮಾತನಾಡುತ್ತಿದ್ದಾಳೆ ಎಂದು ಅವನು, ಅದ್ಯಾವಳ ಜೊತೆ ಅವ ಮಾತನಾಡುತ್ತಿದ್ದಾನೆ ಎಂದು ಇವಳು. ಇಬ್ಬರ ಮನದಲ್ಲೂ ಸಂಶಯದ ಭೂತ. ರಾತ್ರಿ ನಿದ್ದೆ ಮಾಡದೆ ಇಬ್ಬರೂ ಏನೋ ಯೋಚನೆ ಮಾಡುತ್ತಾ ಕಾಲ ಕಳೆದರು.
--------------
ನಂಗೆ ಬಲೂನ್ ಬೇಕು ಎಂದು ಅವಳು ಹಠ ಹಿಡಿದಳು. ವಯಸ್ಸಿಗೆ ಬಂದಿದ್ದೀಯಾ ಮಕ್ಕಳಾಟ ಆಟಬೇಡ ಎಂದು ಅವ ಗದರಿಸಿದ. ಬಲೂನ್ ಕೊಡಿಸದ ಇನಿಯ ಮೇಲೆ ಕೋಪದಿಂದ ಮುಖ ಊದಿಸಿಕೊಂಡು ಆಕೆ ನಡೆದಳು. ಈಗ ನೀನೇ ಬಲೂನ್ ತರ ಕಾಣ್ತಿದ್ದೀಯಾ ಎಂದು ಆತ ಮುದ್ದಾಡಿದ.
-----------------
ಹೆಂಡತಿ ಮೇಲೆ ಸಿಟ್ಟಿನಲ್ಲಿ ಅವನು: 'ದೇವರು ಯಾಕೆ ನಿನಗೆ ಬುದ್ದಿ ಕೊಡಲಿಲ್ಲ?' ಎಂದು ಬಿಟ್ಟ. Read more about ಮೂರ್ ಕಥೆ




