ಕಶ್ಟ-ಇಶ್ಟ
ಎಡರು-ತೊಡರು
ಕಶ್ಟವನ್ನು ಇಶ್ಟಪಟ್ಟಾಗ
ಚಿಗುರುವುದು ನಲಿವಿನ ಪಯಿರು
ಚರಿಯೆ* ನೋಡಿ ಮನದಾಳವ
ಅರಿಯುಬೇಕು ಚತುರರು!
ಅರಳದ ಕೇದಗೆ ಪರಿಮಳವನು
ಅರಿವಂತೆ ಅಲರುಣಿ**ಗಳು!
ಸಂಸ್ಕೃತ ಮೂಲ:
ಆಕಾರಾಣೈವ ಚತುರಾಃ ತರ್ಕಯಂತಿ ಪರೇಂಗಿತಂ
ಗರ್ಭಸ್ಥಂ ಕೇತಕೀ ಪುಷ್ಪಂ ಆಮೋದೇನೇವ ಷಟ್ಪದಾಃ
*ಕೊ:ಚರಿಯೆ ~= ಚರ್ಯೆ, ಚಹರೆ, ಹೊರಕ್ಕೆ ತೋರುವ ನಡವಳಿಕೆ Read more about ಮುಖ ನೋಡಿ ಮಣೆ ಹಾಕುವುದು ಸರಿಯೇ?
ಸರಸರನೆ ಸರಾಗವಾಗಿ
ಸ್ವರಗಳ ಜೋಡಿಸಿ
ರಾಗವ ಹಾಡುವ
ಭಾರೀ ಹಾಡುಗಾರ
ಅವಳ ’ರೀ’ ಎಂಬ
ಒಂದು ಸ್ವರದ ಹಿಂದಿನ
ನೂರು ಭಾವಗಳ
ಅರಿಯದೇ ತಿಣುಕಿದನಂತೆ!
-ಹಂಸಾನಂದಿ Read more about 'ರೀ’ ಅನ್ನುವ ಒಂದೇ ಸ್ವರ
ಬರೆಯಲೆತ್ನಿಸುತಿಹೆನೊಂದು ಪತ್ರ
ಒಂದೊಂದೇ ಪದಗಳ ಪೋಣಿಸಿ
ಪದ ಸಾಲುಗಳ ಎಣಿಸಿ
ನೀನದರ ಬೆಲೆ ಮಾತ್ರ ಕಟ್ಟದಿರು...
ಎಷ್ಟೋ ವಿಷಯಗಳ ನಾನು
ನುಡಿದು ವಿವರಿಸಲಾರೆ. ಅದಕೆ,
ಪದಪುಂಜಗಳ ಜೊತೆಗಾಟ
ಮಧ್ಯದಲಿ ವಿಷಯ ಪ್ರಸ್ತಾಪ...
ಬಾಳಿಗರು ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು...
ಹಾಳು ಧಗೆ ಎಂದು
ಮನದ ಹೊಗೆ
ಹೊರಗೆ ಹಾಕುತ
ಭುಸುಗುಟ್ಟಿದೆ...
ಧಗೆಯ ಮೇಲಿನ
ಹೊಗೆ ಹೊರಹಾಕಿದರೂ
ಮನದಾಳದ ಹೊಗೆ
ಆರುವುದಿಲ್ಲವೆಂಬ ಅರಿವಿತ್ತು...
--ಶ್ರೀ Read more about ಮನದ ಹೊಗೆ
ಕೊನರಿದ
ಹೊಸ ಹೂಗಳ
ಸವಿಯುತ, ಆನಂದದಿ
ನಲಿಯುತ, ಹೊಗಳುತ,
ಹಳೆ ಹೂಗಳ,
ಚಿಗುರಿಸಿದ
ರೆಂಬೆ-ಟೊಂಗೆಗಳ
ಮರೆಯುವುದೆಷ್ಟು ಸುಲುಭ!
Read more about ಹೂವು ಮತ್ತು ಟೊಂಗೆ
ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ...
ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ -
ಪಾರಿವಾಳ ಹೇಳಿದ್ದು…
ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ…
ಇಲ್ಲೇ ಪಕ್ಕದಲ್ಲಿ…..
ಟ್ರಾಫಿಕ್ ಕಮ್ಮಿ ಕಣ್ರೀ….
ಅದಕ್ಕೇ ನಡೆದು ಹೋಗ್ತಿದ್ದೇನೆ… Read more about ಪಾರಿವಾಳದ ಜೊತೆಗೊಂದು ಸಂವಾದ
ಕಟಕಿಯಾಡಿದ
ಹುಡುಗನ
ನಡುಬೀದಿಯಲಿ
ಹಿಡಿಶಾಪ ಹಾಕಿದರೂ, ಅವ
ನುಡಿದ ಮಾತುಗಳು
ಗುಂಡಿಗೆಯಲಿ
ಗುಡುಗಿತ್ತು...
--ಶ್ರೀ
(೧೪ - ನವಂಬರ್ - ೨೦೦೯ ) Read more about ನುಡಿ ಸಿಡಿಲು
ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!
ತುಂಟಾಟವಾಡುವ ತಂಟೆಕೋರನ ಕೇಳಿ...
ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?
ನೂರಾರು ಬಾರಿ ಬಯ್ಗಳವ ತಿಂದರೂ
ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ!
--ಶ್ರೀ
(೧-ಡಿಸೆಂಬರ್-೨೦೦೯) Read more about ಬಯ್ಗುಳ ತಿನ್ನುವುದು ಯಾರಿಗೆ ಮೆಚ್ಚು?

ಕಡಲ ಕೊರೆತಕೇನೋ
ಇಡಬಹುದು ಬಂಡೆಗಳ...
ನಿನ್ನ ಮೌನದಿಂದ
ಹೃದಯದಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಸಖೀ???
--ಶ್ರೀ
ಭಾರತವು ಬಡಜನರ ಸಿರಿವಂತ ದೇಶ
ಸಿರಿವಂತರದೂ ಇಲ್ಲಿ ಬಡವರಾ ವೇಷ
ಬಡಜನರ ಏಳಿಗೆಗೆ ದುಡಿಯುವರು ಎಲ್ಲ
ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ
ಬದುಕಿನ ಅನೇಕ ಮಜಲುಗಳಲ್ಲಿ
ಬದುಕುವ ಹಂಬಲದಲ್ಲಿರುವವನಿಗೆ
ಗೆಳತಿಯೋ, ಅಮ್ಮನೋ, ಹೆಂಡತಿಯೋ,
ಅಕ್ಕನೋ, ತಂಗಿಯೋ ಆಗಿ
ವಿಭಿನ್ನ ರೂಪಗಳಲ್ಲಿ ಜೊತೆಯಾಗಿ
ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ
ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ
ಲೋಕದವರೆಗಿನ ಸುಖ ದು:ಖದ
ದಾರಿಯೊಳಗಣ ಸರಾಗವಾಗಿ
ಸಾಥ್ ಕೊಡುವ ನಿನಗೆ ಪದಗಳಲ್ಲಿ
ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ
ಅಭಿನಂದನೆಗಳನ್ನು ಸಲ್ಲಿಸಲು
ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು...
... ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು Read more about ಗೆಳತಿ
ಸತ್ತವನ ನೆನೆಯುತ್ತಾ
ಗಳಗಳನೆ ಅಳುತ್ತಿದ್ದೆ...
ಈ ನನ್ನ ಅಳು
ಇನ್ನೊಬ್ಬನನ್ನು
ಮೆಲ್ಲನೆ ಕೊಲ್ಲುತ್ತಿದೆ
ಎಂದು ತಿಳಿದ ಕ್ಷಣವೇ
ನಗುಮೊಗದ ಮುಖವಾಡ ಧರಿಸಬೇಕಾಯ್ತು...
--ಶ್ರೀ Read more about ಅಳು-ನಗು
ಎದುರಿನವ
ನೂರಾರು
ವಿಷಯಗಳನ್ನು
ಅದೆಷ್ಟು ಕುತೂಹಲಕಾರಿಯಾಗಿ ಹೇಳುತ್ತಿದ್ದರೂ
ಮನದಲ್ಲಿ ಅವಿತ
ಮತ್ತೊಂದು ವಿಷಯವನ್ನು
ಅರುಹದೇ
ಅವನಿಂದ ಕೇಳಬಯಸುವುದು!
--ಶ್ರೀ Read more about ತುಡಿತ
ಆಹಾ...
ತಂಪಾದ ಗಾಳಿ
ತಿಳಿ ತುಂತುರು
ಸ್ವರ್ಗಕ್ಕೆ ಮೂರೇ ಗೇಣು
ಎಂದಿತು ನನ್ನುಸಿರು
ಸದ್ದಿಲ್ಲದೇ
ತಿಳಿಗಾಳಿಯಂತೆ
ಪಕ್ಕದಲ್ಲೇ
ವೇಗವಾಗಿ ಸಾಗಿದ
ಕಾರೊಂದು
ಹಾರಿಸಿತು
ಕೊಚ್ಚೆ-ಕಲೆ-ಕೆಸರು!
--ಶ್ರೀ
ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ, ನಡೆಯುತ್ತಿದ್ದಾಗ ಹೊಳೆದಿದ್ದು! Read more about ಸ್ವರ್ಗ-ನರಕ
ಅಚ್ಚಕನ್ನಡದಲ್ಲಿ ಮಾತಾಡ್ಬೇಕು
ಸಂಸ್ಕೃತ ಹೇರಿಕೆ ನಿಲ್ಬೇಕು
ಎಂಬರ್ಥ ಬರುವ ಹೊತ್ತಗೆಗಳು
ಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ,
ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ
"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...
ಒಂದ್ ಸರ್ತಿ ಎಲ್ಲ ಸ್ಟಾಲ್ಸ್ ನೋಡಿ,
ಬುಕ್ಸ್ ತೊಗೊಳ್ಬೇಕು!"
***
ಸಮ್ಮೇಳನಕ್ಕೆ
ಬಂದ ಯುವಕ
ಗೊಣಗುತ್ತಿದ್ದ
ಇಲ್ಲಿ
ಸಿಗೋದು ಎರಡೇ...
ಬುಕ್ಸು ಮತ್ತು ಧೂಳು!
***
ಸಾಹಿತ್ಯ ಸಮ್ಮೇಳನದಲ್ಲಿ
ಕವಿದಿದ್ದ
ಧೂಳು-ದುಮ್ಮು
ಬೆಂಗಳೂರು-ಕನ್ನಡಿಗ
ಸೋಂಬೇರಿತನವನ್ನು
ಕೊಡವಿ
ಎದ್ದಿದ್ದಕ್ಕಿರಬೇಕು!
--ಶ್ರೀ
(೬-ಫೆಬ್ರವರಿ-೨೦೧೧) Read more about some-ಮೇಳನ
ಬೈಕ್ನಲ್ಲಿ ಹೋಗುವಾಗ
ಕಾಲಿಗೆ
ತರಚು ಗಾಯವಾಯ್ತೆಂದು
ತನಗೆ ತಗುಲಿಸಿದ
ಟಾಕ್ಸಿ ಡ್ರೈವರ್ ಜೊತೆ
ರಸ್ತೆ ಮಧ್ಯೆ
ವಾಗ್ವಾದಕ್ಕಿಳಿದ
ಟಪೋರಿಗೆ
ಒಂದು ಕಿಲೋಮೀಟರ್ ಉದ್ದದ
ಟ್ರಾಫಿಕ್ ಜ್ಯಾಮ್ ಹಿಂದೆ
ಆಂಬುಲೆನ್ಸ್ನಲ್ಲಿದ್ದ
ಪ್ರಾಣಪಕ್ಷಿ
ಹಾರಿಹೋಯ್ತೆಂಬ ಅರಿವಿರಲಿಲ್ಲ...
--ಶ್ರೀ
(೬-ಫೆಬ್ರವರಿ-೨೦೧೧) Read more about ತರಚು ಗಾಯ
ಹೆತ್ತವರು
ತಿದ್ದಲು
ತಿಪ್ಪರಲಾಗ ಹೊಡೆದರೂ
ನೆಟ್ಟಗಾಗದ ಗುಣ
ತನ್ನ ಪುಟ್ಟ ಕಂದ
ತನ್ನ ಪ್ರತಿರೂಪವೇ
ಎಂದು
ತಿಳಿದಾಗಲೇ
ತಪ್ಪಿನರಿವಾಗುವುದು!
--ಶ್ರೀ
(೧೦ - ಜೂನ್ - ೨೦೧೧)
Read more about ಜ್ಞಾನೋದಯ
ನಿತ್ಯ ನೀರೆರೆದು
ಹೂ ಗಿಡಗಳ
ಬೆಳೆಸುವುದು
ಕಷ್ಟವೆಂದು
ಮನೆಯೊಳು ತಂದಿಟ್ಟ
ಪ್ಲಾಸ್ಟಿಕ್ ಹೂಗಳೂ
ಬಾಡುವುದು
ಮಾಸುವುದು
ಸಮಯದಿ
ಧೂಳ ಕೊಡವದಿರಲು...
--ಶ್ರೀ
(೨೩ - ಜುಲೈ - ೨೦೧೧) Read more about ಆರೈಕೆ
ಮೊನ್ನೆ ಸುರೇಶ್ ಹೆಗಡೆಯವರ ’ಕನಸು ಉಲಿಯಿತು’ ಓದಿದಾಗ ನನ್ನ ಮನಸ್ಸಿಗೆ ಹೊಳೆದದ್ದು...
ಪ್ರತಿಕ್ರಿಯೆಯಾಗಿ ಅಲ್ಲಿ ಸೇರಿಸಿದ್ದನ್ನು ಬ್ಲಾಗ್ನಲ್ಲಿ ಹಾಕುತ್ತಿರುವೆ...
ಮೌನ-ತಾಪ
---------
ದಿನಪೂರ್ತಿ
ಹೆಂಡತಿಯ
ಮೌನವ್ರತದಿಂದ
ತಲೆಕೆಟ್ಟು
ಕಂಗೆಟ್ಟಿದ್ದ
ಗಂಡನಿಗೆ,
ಅವಳು,
’ಥೂ...ಹಾಳಾದ್ದು...
ಲಿಪ್ಸ್ಟಿಕ್ ಕಳೆದುಹೋಯ್ತು’
ಎಂದು
ಕನಸಲಿ ಉಲಿದಾಗ
ನೆಮ್ಮದಿ-ನಿಟ್ಟುಸಿರು-ನಿದ್ದೆ...
--ಶ್ರೀ
೨೪-ಜುಲೈ-೨೦೧೧ Read more about ಮೌನ-ತಾಪ
ನಲ್ಲೆ,
ನೀ ಕನಸ ಕಾಣು...
ನೀ ಕನಸ ಕಾಣು
ಹತ್ತು ಹಲವಾರು...
ನಾನಿರುವೆ ಇಲ್ಲೇ
ನಿನ್ನೊಡನೆ ಸದಾ
ಎಂದೆಂದಿಗೂ
ನಡೆಸಿಕೊಡಲು
ನಿನ್ನ ಕನಸಿನ
ಅಹವಾಲು!
--ಶ್ರೀ
೯ - ಮಾರ್ಚ್ - ೨೦೧೨
Read more about ನಲ್ಲೆ, ನೀ ಕನಸ ಕಾಣು...
ಇನಿಯ,
ನಿನ್ನ
ಈ ಎದೆಯ
ಮೇಲೆ
ತಲೆಯನ್ನು
ಪ್ರತಿ ಬಾರಿ
ಆನಿಸಿದಾಗಲೆಲ್ಲ
ಈ ಪ್ರಪಂಚ
ಅದೆಷ್ಟು ಕಿರಿದು
ಎಂದು ಅನಿಸುವುದೇಕೇ?
--ಶ್ರೀ
(ನವಂಬರ್ ೧ ೨೦೧೨)
Read more about ಕಿರಿದಾದ ಲೋಕ
ನಲ್ಲೆ,
ನನ್ನ ತರಕಾದ ಕೆನ್ನೆಯ
ಬಗ್ಗೆ ತಕರಾರು ಎತ್ತಬೇಡ
ಗಡ್ಡ ಬೆಳೆಯದಂತೆ
ತಪ್ಪದೇ ಮುಲಾಮು
ಹಚ್ಚದಿದ್ದದ್ದು
ನಿನ್ನ ತಪ್ಪಲ್ಲವೇ?
-ಶ್ರೀ
Read more about ತಕರಾರು
ನಲ್ಲೆ,
ನಿನ್ನ ಧಮನಿಗಳಲ್ಲಿ
ಹರಿಯುವುದು
ನೆತ್ತರಲ್ಲ...
ಅದು ನೆತ್ತರಲ್ಲ...
ಮಧುವಿರಬೇಕು...
ಬರಿಯ ನೆತ್ತರಿಂದಲೇ
ನಿನ್ನಧರ ಇಂತಿಷ್ಟು
ಮಧುರವಾಗಿರಲು
ಸಾಧ್ಯವೇ?
--ಶ್ರೀ Read more about ನಿನ್ನಲ್ಲಿರುವುದು ರಕುತವಲ್ಲ...
ನಲ್ಲೆ,
ನಿನ್ನ ಧಮನಿಗಳಲ್ಲಿ
ಹರಿಯುವುದು
ನೆತ್ತರಲ್ಲ...
ಅದು ನೆತ್ತರಲ್ಲ...
ಮಧುವಿರಬೇಕು...
ಬರಿಯ ನೆತ್ತರಿಂದಲೇ
ನಿನ್ನಧರ ಇಂತಿಷ್ಟು
ಮಧುರವಾಗಿರಲು
ಸಾಧ್ಯವೇ?
--ಶ್ರೀ Read more about ನಿನ್ನಲ್ಲಿರುವುದು ರಕುತವಲ್ಲ...
ಪ್ರಿಯೆ,
ನನ್ನ ಈ ಹೃದಯ
ಇಷ್ಟೊಂದು
ಸುಂದರವೆಂದು
ನಿನ್ನ ಕಂಗಳಳೊಳಗೆ
ಇಣುಕಿ ನೋಡುವವರೆಗೂ
ತಿಳಿದೇ ಇರಲಿಲ್ಲ...
--ಶ್ರೀ
Read more about ಪ್ರತಿಬಿಂಬ