19
June
2013

ಹಣ

ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

February 1, 2008 - 5:28pm
shreekant.mishrikoti
ಭಾರತೀಯರು ಉತ್ತಮ ಉಳಿತಾಯದಾರರು ; ಉತ್ತಮ ಹೂಡಿಕೆದಾರರಲ್ಲ . ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ದೇಶದ ಜನರ ಬಡತನವನ್ನು ತೊಲಗಿಸಬಹುದು . ಷೇರುಪೇಟೆಯಲ್ಲಿ ಹಣ ತೊಡಗಿಸುವದು ಲಾಭಗಳಿಕೆಯ ನ್ಯಾಯಸಮ್ಮತ ಹಾಗೂ ಕಾನೂನುಬದ್ಧ ಮಾರ್ಗ ; ಹಣದುಬ್ಬರದ ದರಕ್ಕಿಂತ ವೇಗವಾಗಿ ನಮ್ಮ ಹಣ ಬೆಳೆಯುವಂತೆ ಮಾಡಬಹುದು ;
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕುರುಡು ಕಾಂಚಾಣ

February 4, 2008 - 3:57pm
ASHOKKUMAR
ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವಾಗ ನಾವು ಮಾಡುವ ಕೆಲವು ತಪ್ಪುಗಳು ಹೀಗಿವೆ: *ಶೇರು ಬೆಲೆ ಕಡಿಮೆ ಇದ್ದಾಗ ಖರೀದಿಸಲು ಹಿಂಜರಿಕೆ. *ಶೇರು ಮಾರುಕಟ್ಟೆ ರಸಾತಳಕ್ಕಿಳಿದಾಗ ಇನ್ನೂ ಕುಸಿದೀತೆಂಬ ಭಯಕ್ಕೆ ಬಲಿಯಾಗಿ ಖರೀದಿಸದಿರುವುದು. *ಕಡಿಮೆ ಅವಧಿಯಲ್ಲಿ ಲಾಭದ ನಿರೀಕ್ಷೆ. *ಹಣ ಹೂಡಿಕೆ ದೀರ್ಘಾವಧಿಯಾದಷ್ಟೂ ಲಾಭವೆಂಬ ಸತ್ಯವನ್ನು ಅವಗಣಿಸುವುದು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.1 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕುರುಡು ಕಾಂಚಾಣ-2

February 10, 2008 - 9:56am
ASHOKKUMAR
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಣವೇ ಗುಣವೆ?

March 17, 2008 - 11:57pm
hamsanandi

ಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ ಕುಟುಂಬದವರಿಂದಲೇ ಅನಾದರಕ್ಕೆ ಒಳಗಾಗುತ್ತಾನೆ ಅನ್ನುವುದರ ಪ್ರಸ್ತಾಪ ಬಂದಿದೆ. Read more about ಹಣವೇ ಗುಣವೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊತ್ತಿಗೆ-ಹಣ-ಹುಡುಗಿ

October 28, 2008 - 11:40pm
hamsanandi

ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ?

ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ!

ಸಂಸ್ಕೃತ ಮೂಲ:

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ
ಅಥವಾ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ  Read more about ಹೊತ್ತಿಗೆ-ಹಣ-ಹುಡುಗಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗಳಿಕೆ ಹೇಗಿರಬೇಕು?

November 25, 2008 - 1:33am
hamsanandi

 

ಗಳಿಸುತಿರಬೇಕು ಹಣವ
ಉಳಿಸುತಲೂ ಜೊತೆಗೆ
ಬೆಳೆಸುತಲೂ ಇರಬೇಕು!
ಗಳಿಸದೇ ಮುಕ್ಕುತಿರೆ
ಅಳಿವುದದು ನಿಕ್ಕುವದಿ
ಮಲೆಯೆತ್ತರದೈಸಿರಿಯೂ!!

 

ಸಂಸ್ಕೃತ ಮೂಲ:

ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ
ಭಕ್ಷ್ಯಮಾಣೋ ನಿರಾದಾಯಃ ಸುಮೇರುರಪಿ ಹೀಯತೇ 

-ಹಂಸಾನಂದಿ

 

  Read more about ಗಳಿಕೆ ಹೇಗಿರಬೇಕು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಲೆಯಿರದ ನಿಧಿ

March 30, 2009 - 9:38pm
hamsanandi

ಹೊತ್ತಿಗೆಯೊಳಗಡೆ ಅಡಗಿದ ಅರಿವು
ಕಂಡವರ ಕೈ ಸೇರಿದ ಹಣವು
ಬೇಕಾದೊಡನೆ ಸಿಗದಂತಿರಲು
ಅದಲ್ಲ ಅರಿವು! ಅದಲ್ಲ ಹಣವು!

ಸಂಸ್ಕೃತ ಮೂಲ:

ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ|
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ||

-ಹಂಸಾನಂದಿ Read more about ಬೆಲೆಯಿರದ ನಿಧಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದುಡ್ಡಿದ್ದವನೇ ದೊಡ್ಡಪ್ಪ

November 2, 2009 - 11:14pm
hamsanandi

ಅರಿವೂ ಮನೆತನವೂ ತರಲಾರವು ಹಿರಿಮೆ

ಎಂದಿಗೂ ಹಣವುಳ್ಳವರಲೇ ಜನರ ಒಲುಮೆ;

ಶಿವನು ತಲೆಯ ಮೇಲೆ ಹೊತ್ತಾಡಿದರೇನು?

ಗಂಗೆ ಸೇರುವುದು ರತ್ನಾಕರ*ನಲ್ಲವೇನು?

 

ಸಂಸ್ಕೃತ ಮೂಲ:

ನ ವಿದ್ಯಯಾ ನೈವ ಕುಲೇನ ಗೌರವಂ

ಜನಾನುರಾಗೋ ಧನಿಕೇಷು ಸರ್ವದಾ |

ಕಪಾಲಿನಾ ಮೌಲಿ ಧೃತಾಪಿ ಜಾಹ್ನವೀ

ಪ್ರಯಾತಿ ರತ್ನಾಕರಮೇವ ಸರ್ವಾದಾ ||

-ಹಂಸಾನಂದಿ

 

* ಕೊ.ಕೊ: ರತ್ನಾಕರ = ಮುತ್ತು ರತ್ನಗಳಿಗೆ ಆಗರವಾದ ಸಾಗರ Read more about ದುಡ್ಡಿದ್ದವನೇ ದೊಡ್ಡಪ್ಪ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಗಳಿಸುವ ರೀತಿ

November 5, 2009 - 8:18am
hamsanandi

ಜಾಣರು ಮುಪ್ಪು ಸಾವಿಲ್ಲವದರ ತೆರದಿ
ಹಣವನ್ನೂ ಅರಿವನ್ನೂ ಗಳಿಸುತಿರಬೇಕು;
ಮುಂದಲೆಯನೇ ಯಮನು ಹಿಡಿದೆಳೆದಿರುವಂತೆ
ಒಳ್ಳೆಯ ಕೆಲಸಗಳನೇ ಮಾಡುತಿರಬೇಕು!


ಸಂಸ್ಕೃತ ಮೂಲ:

ಅಜರಾಮರವತ್ ಪ್ರಾಜ್ಞೋ ವಿದ್ಯಾಮರ್ಥಂ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್ ||

-ಹಂಸಾನಂದಿ Read more about ಗಳಿಸುವ ರೀತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಕೂಡಿಡುವ ಮೊದಲು ..

November 25, 2009 - 11:09pm
hamsanandi

ಹಣವ ಬರಿದೆ ಕೂಡಿಡದಲೇ
ನೀಡು,ಬಳಸು,ಮತ್ತೇನಾದರೂ ಮಾಡು;
ಬಂಡನ್ನು ಸೇರಿಸುತ ಜೇನ್ದುಂಬಿಗಳು
ಮಾಡಿಟ್ಟ ಜೇನು ಕದ್ದು ತಿಂದವರ ಪಾಲು!


ಸಂಸ್ಕೃತ ಮೂಲ:

ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |
ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ ||

-ಹಂಸಾನಂದಿ Read more about ಕೂಡಿಡುವ ಮೊದಲು ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಕೊಡುಗೈ ದಾನಿ

March 31, 2010 - 3:11am
hamsanandi

ಜಿಪುಣನಿಗಿಂತಲು ಕೊಡುಗೈ ದಾನಿ
ಹಿಂದಿರಲಿಲ್ಲ ಮುಂದೆ ಬರಲಾರ
ತಾ ಮುಟ್ಟದ ಹಣಕಾಸೆಲ್ಲವನೂ
ಕಂಡವರಿಗುಳಿಸಿ ಹೋಗುವನಲ್ಲ!


ಸಂಸ್ಕೃತ ಮೂಲ:

ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|
ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ ||

-ಹಂಸಾನಂದಿ Read more about ಕೊಡುಗೈ ದಾನಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗಳಿಕೆ

April 27, 2011 - 10:23am
hamsanandi

ಗಳಿಸಬಹುದೆಷ್ಟು ಹಣವನು? ಬೊಮ್ಮ ಹಣೆಯಲಿ ಬರೆದಷ್ಟು!

ಮರುಭೂಮಿಯಲಾದರೂ ಮೇರುಗಿರಿಗೆ ಹೋದರೂ ಹೆಚ್ಚು ಸಿಗುವುದಿಲ್ಲ;

ಸಿರಿವಂತ ಜಿಪುಣರ ಮುಂದೆರಗದೇ ನೀನು ದಿಟ್ಟನಾದರೆ ಲೇಸು.

ಬಾವಿಯೇನು? ಕಡಲೇನು? ಕೊಡದಲ್ಲಿ ಹೆಚ್ಚು ತುಂಬುವುದಿಲ್ಲ!

 

ಸಂಸ್ಕೃತ ಮೂಲ:

ಯದ್ಧಾತ್ರಾ ನಿಜಫಾಲಪತ್ರಲಿಖಿತಂ ಸ್ತೋಕಂ ಮಹದ್ವಾ ಧನಮ್

ತತ್ಪ್ರಾಪ್ನೋತೀ ಮರುಸ್ಥಲೋSಪಿ ನಿತರಾಮ್ ಮೇರೌ ತತೌ ನಾಧಿಕಂ |

ತದ್ಧೀರೋ ಭವ ವಿತ್ತವತ್ತ್ಸು ಕೃಪಣಂ ವೃತ್ತಿಂ ವೃಥಾ ಮಾ ಕೃಥಾಃ

ಕೂಪೇ ಪಶ್ಯ ಪಯೋನಿಧಿವಾಪಿ ಘಟಃ ಪ್ರಾಪ್ನೋತಿ ತುಲ್ಯಂ ಜಲಂ ||

 

यद्वात्रा निजफालपट्टलिखितं स्तोकं महद्वा धनं Read more about ಗಳಿಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೊರತೆ ಮರೆಯಿಸುವ ಗುಣಗಳು

August 5, 2011 - 7:24am
hamsanandi

ಎಣಿಯಿರದ ರತುನಗಳ ಹೆತ್ತ ಪರ್ವತದ
ಸುತ್ತ ತುಂಬಿರುವ ಭಾರಿ ಹಿಮರಾಶಿಯೂ
ಅದರ ಹಿರಿಮೆಯ ಇನಿತೂ ಕುಂದಿಸದು;

ಒಳಿತಾದ ಗುಣಗಳೇ ತುಂಬಿ ತುಳುಕಿರಲು
ಮರೆಸಿ ಹೋದೀತು ಇರಲೊಂದು ಕುಂದು
ಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!


ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸಂಭವದಿಂದ):

ಅನಂತರತ್ನ ಪ್ರಭವಸ್ಯ ಯಸ್ಯ
ಹಿಮಂ ನ ಸೌಭಾಗ್ಯವಿಲೋಪಿ ಜಾತಂ |
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||

-ಹಂಸಾನಂದಿ
  Read more about ಕೊರತೆ ಮರೆಯಿಸುವ ಗುಣಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಹಣ