ಬದುಕು
ಸಂತೋಷ ಆಹಾ.. ಆಹಾ..
ಡೈಸಿ ರಿಡ್ಜ್ ಡೈರಿ
ಬದುಕು - ಬವಣೆ
ಬದುಕು ಬವಣೆಯಾಗದಿರಲಿ
ಬದುಕನ್ನು ಬವಣೆಯೆಂದಿಣಸದಿರು
ಬವಣೆಪಟ್ಟರೂ ಜೀವಂತ ಹೋದವರುಂಟೆ?
ಸಂಕಟಗಳಿಗೆಲ್ಲ ಆಸೆಯೇ ಬೇರು
ಆಸೆಯ ಬಲೆಯಿಂದ ಪಾರಾದವರುಂಟೆ?
ತನ್ನೊಟ್ಟಿಗೆ ತಾನಾಗಿರು
ತಾನಾಗಿ ಎಲ್ಲ ದೊರೆವುದು
ತನ್ನಂಬುಗೆ ಇರಲಿ
ಅದು ಜಂಬ ಅನಿಸದಿರಲಿ
ಬದುಕಿದು ಒಡೆಯನ ತೇರು
ನಗುನಗುತಲೆ ಎಳೆಯುತಿರು. Read more about ಬದುಕು ಬವಣೆಯಾಗದಿರಲಿ
ಬದುಕೇ, ನಿನಗೊಂದು ಥ್ಯಾಂಕ್ಸ್
ಮರೆತೇನೆಂದರೆ ಮರೆಯಲಿ ಹ್ಯಾಂಗ...?
ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬೆಳವಣಿಗೆಗಳೇನೂ ಆಗಿಲ್ಲ ಅಂತ ಅಂದುಕೊಳ್ಳುತ್ತ ಸ್ಕೂಟಿ ಚಲಿಸುವಾಗ, ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.
ಸಾವೆಂಬ ಪರಮಮಿತ್ರ
ನಾಳೆ ಬಪ್ಪುದು ನಮಗಿ೦ದೇ ಬರಲಿ
ಇ೦ದು ಬಪ್ಪುದು ನಮಗೀಗಲೇ ಬರಲಿ
ಇದಕಾರ೦ಜುವರು? ಇದಕಾರಳುಕುವರು?
ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ ಒ೦ದು ಪ್ರಶ್ನೆ ಬದುಕಿನ ಈ ಅಚ್ಚರಿಯ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ. Read more about ಸಾವೆಂಬ ಪರಮಮಿತ್ರ
ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧
ಈ ಬದುಕಿನ ಗುರಿ
ದೇವರೆಂಬ ಕಲ್ಪನೆಯಿಂದ ಬಿಡುಗಡೆ ಹೊಂದಿದೆ: ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ…1
ಪ್ರಿಯ ಓದುಗರೇ,
ನಾನು ನನ್ನ ಹಳೆಯ ಬದುಕಿನ ಪುಟಗಳನ್ನು ೪೯ ವಸಂತಗಳ ಬಳಿಕ ನೋಡಿದಾಗ ನನ್ನ ಬದುಕಿನ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ಚಿಗುರಿತು. ನನ್ನ ಅನುಭವಗಳು ನಿಮ್ಮದೂ ಆಗಿರಬಹುದು ಅಥವಾ ಭಿನ್ನವಾಗಿರಬಹುದು. ಓದಿ… ನಿಮ್ಮ ಮನದಲ್ಲಿ ಪುಟಿದೇಳುವ ಭಾವನೆಗಳನ್ನು ವ್ಯಕ್ತಪಡಿಸಿ…. Read more about ದೇವರೆಂಬ ಕಲ್ಪನೆಯಿಂದ ಬಿಡುಗಡೆ ಹೊಂದಿದೆ: ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ…1
ಸುಟ್ಫು ಹಾಕಿದೆ ಜಾತಕ : ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨
ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨
ಸುಟ್ಟು ಹಾಕಿದೆ ಜಾತಕ
ನಾನು ರಜಾದಿನಗಳನ್ನು ಕಳೆಯಲು ಭದ್ರಾವತಿಯಲ್ಲಿದ್ದ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದೆ. ಅಲ್ಲಿ ಪಕ್ಕದ ಮನೆಯಲ್ಲಿದ್ದ ಒಬ್ಬರು ಕೈಯ ರೇಖೆಗಳನ್ನು ನೋಡಿ ಭವಿಷ್ಯ ಹೇಳುತ್ತಿದ್ದರು. ಭೂತಕಾಲಕ್ಕಿಂತ ಭವಿಷ್ಯದ ಬಗ್ಗೆ ಮನುಷ್ಯನಿಗೆ ಆಸಕ್ತಿ. ನನಗೂ ಭವಿಷ್ಯ ತಿಳಿಯುವ ತವಕ. ಅವರನ್ನು ಕಾಡಿಸಿ ಪೀಡಿಸಿ ನನ್ನ ಭವಿಷ್ಯವನ್ನು ಕೇಳಿದೆ. ನಿನಗೆ ವಿದ್ಯೆ ಹತ್ತುವುದಿಲ್ಲವೆಂದು ಅವರು ಭವಿಷ್ಯ ನುಡಿದರು. ಓದುವುದರಲ್ಲಿ ಹಿಂದಿದ್ದ ನನಗೆ ಅವರ ಭವಿಷ್ಯ ನಿಜವಾಗಬಹುದೇನೋ ಎಂಬ ಭಯ ಕಾಡತೊಡಗಿತು. Read more about ಸುಟ್ಫು ಹಾಕಿದೆ ಜಾತಕ : ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨
ಏಳು ಎದ್ದೇಳು ಯಾತ್ರಿಕನೆ
ಸೂರ್ಯನಿಗೆ ಸಮಸ್ಕಾರವೀಯ್ದು
ಸುಪ್ರಭಾತವ ಕೇಳಿ
ಹೊರಡು ನೀ ಮುಂದಕ್ಕೆ
ನಿನ್ನ ಜೀವನ ಯಾತ್ರೆಯಲಿ
ನೆನಪು
ನೆನಪಿನಂಗಳದಲ್ಲಿ ನೆನಹುಗಳ ಕುಲುಕಾಟ,
ನೆಪಗಳಲ್ಲಲ್ಲಿ ಕಳೆದುಹೋದ ಗೆಳೆತನದ ಹುಡುಕಾಟ,
ಮತ್ತದೆ ನೋವು ಮತ್ತದೆ ಚಿಂತೆ, Read more about ನೆನಪು
ನಾನು
ನಾನು ನಾನಗಬೇಕು
ನನಗ್ಯಾಕೆ ಇನ್ನೊಂದು ಹೆಸರು
ಸಿಂಚನವೊ ಇಂಚರವೊ
ಬರೆವವನು ನಾ ತಾನೆ
ತೆಗಳಿಕೆಗೆ ಹೆದರಿ ಆ ಹೆಸರುಗಳಿಗೆ
ಮೊರೆ ಹೋದ ನಾನು
ಇನ್ನಾದರು ಎದುರಿಸಬೇಕು
ಹೊಗಳಿಕೆಗಳ ಅಸ್ವಾದಿಸಿದಂತೆ
ನಾನು ನಾನಗದಿದ್ದರೆ ನನಗೇನು ಬೆಲೆ
ನಾನು ನಾನಗ ಹೊರಟಿರುವೆ
ಉಗಿತಕ್ಕೆ, ಹೊಡೆತಕ್ಕೆ,
ಹೊಗಳಿಕೆಗೆ ತೆಗಳಿಕೆಗೆ
ಅಂಜದೆ ಅಳುಕದೆ
ನಡೆಯುವ ಸ್ಥೈರ್ಯವನ್ನು ಹೊತ್ತು Read more about ನಾನು
ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...
ಏಪ್ರಿಲ್ಗೆ ಏಳು ವರ್ಷಗಳಾದವು.
ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ.
ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ ಮಗಳು ಗೌರಿ ಕಲಿಸಿದ್ದಾಳೆ. ಇನ್ನೂ ಕಲಿಸುತ್ತಲೇ ಇದ್ದಾಳೆ. Read more about ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...
ಸೇನಾನಿಗಳು
ಸ್ವತಂತ್ರ ಹೋರಾಟಗಾರರಲ್ಲ. ಬದುಕಿನ ಹೋರಾಟಗಾರರು.
ನಾಟಕ ಚೈತ್ರ ೨೦೧೦
ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!
ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ ಚಿಗುರು. ಚಿಗುರು ಅಂದ್ರೆ ಹೊಸತು. ಹಾಗಾಗಿ ಹೊಸದಾಗಿ ಏನು ಯೋಚಿಸಿದ್ರೂ ಮಾಡಿದ್ರೂ ಅದನ್ನ ಚೈತ್ರ ಅಂದ್ರೆ ಅದರಲ್ಲೇನಿದೆ ತಪ್ಪು? ಅಲ್ವಾ? ಅಷ್ಟೇ ಅಲ್ಲದೆ ಈ ನಾಟಕ ಚೈತ್ರಕ್ಕೆ ತಾಲೀಮು ಶುರು ಮಾಡಿದ್ದಂತೂ ಚೈತ್ರದಲ್ಲೇ.
ಸುಮಾರು ೨+ ತಿಂಗಳು ನಡೆಸಿದ ಅಭ್ಯಾಸದ ನಂತರ ನೆನ್ನೆ ಸ್ಯಾನ್ ಹೊಸೆಯ ಮೌಂಟ್ ಪ್ಲೆಸೆಂಟ್ ಪ್ರೌಢ ಶಾಲೆಯ ರಂಗ ಮಂದಿರದಲ್ಲಿ ಎರಡು ನಾಟಕಗಳನ್ನು ಆಡಿದ್ದಾಯಿತು. ಒಂದು ಟಿ ಎನ್ ಸೀತಾರಾಮರ ’ನಮ್ಮೊಳಗೊಬ್ಬ ನಾಜೂಕಯ್ಯ’ ಮತ್ತೆ ಮತ್ತೊಂದು ಡುಂಡಿರಾಜರ ’ಕೊರಿಯಪ್ಪನ ಕೊರಿಯೊಗ್ರಫಿ’. Read more about ನಾಟಕ ಚೈತ್ರ ೨೦೧೦
ಏಕಾಂಗಿಯಲ್ಲ ನೀ
ಏಕಾಂಗಿಯಲ್ಲ ನೀ
ಓ ಮುದುಡಿದ ಮನವೇ,
ನೀ ಏಕಾಂಗಿಯಲ್ಲ
ಒಮ್ಮೆ ಈ ಕಡೆ ದೃಷ್ಟಿ
ಹಾಯಿಸಿ ನೋಡು
ನಿನ್ನ ಆ ನಿಷ್ಕಲ್ಮಷ
ಪ್ರೀತಿಗೆ, ಸ್ನೇಹಕ್ಕೆ,
ನಗುವಿಗೆ ಕಾದಿಹವು
ನೂರಾರು, ಸಾವಿರಾರು
ಜೀವಿಗಳು
ನೀನೋರ್ವನೇ
ಎಂಬ ಚಿಂತೆ ಬಿಡು
ಆಕಾಶದೆತ್ತರಕೆ ಏರುವ
ಆಸೆಯ ಏಕೆ ಪಕ್ಕಕ್ಕೆಸೆಯುವೆ?
ಪ್ರಕೃತಿ ಇದೆಲ್ಲವ
ನಿನಗಾಗಿಯೇ
ಸೃಷ್ಟಿಸಿಹಳು
ಯಾವ ಹಣ್ಣನ್ನೂ ಸೃಷ್ಟಿಸುವದಿಲ್ಲ Read more about ಏಕಾಂಗಿಯಲ್ಲ ನೀ
ಖಾಲಿ ಮನಸ್ಸೀಗ ಗರಿಗೆದರತೊಡಗಿದೆ..!!
ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ
ಕಾವ್ಯ ಕೃಷಿ!!
ಮನುಷ್ಯ V/s. ಸಸ್ಯ
ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು ದೂರುವುದೇ ಇಲ್ಲ. ಒಂದು ಮಳೆ ಬಿದ್ದರೆ ಸಾಕು ಎಲ್ಲೆಡೆ ಎದ್ದುನಿಲ್ಲುತ್ತವೆ. ಅವು ಹಾಗಿರುವುದರಿಂದಲೇ ನಾವು ಉಸಿರಾಡಲು ಆಗುತ್ತಿರುವುದು ಅಲ್ವಾ? Read more about ಮನುಷ್ಯ V/s. ಸಸ್ಯ
ಕ್ಲಿಷ್ಟವೆನ್ನುವುದದೆಷ್ಟು ಸುಲಭ!
ದ್ವಂದ್ವಗಳೊಡನೆ ಆಟವಾಡುವುದು ಬಲು ಸೊಗಸು. ನಮ್ಮ ಕಪ್ಪು ಬಿಳುಪು ನೈತಿಕತೆ, ಇಬ್ಭಾಗ ಸೀಳುವ ಕತ್ತಿಯಲಗಿನ ಹರಿತ ತರ್ಕಗಳಿಗೆ ದ್ವಂದ್ವ ದುಃಸ್ವಪ್ನ. ಆದರೆ ಬದುಕಿಗೋ ಅದೇ ಸಹಜ ದಾರಿ.
ಸರಳವಾಗಿ ಹೇಳುವುದಾದರೆ ಎರಡು ಸಮಾನಾಂತರ ಕಂಬಿಗಳಿರುವ ರೈಲು ಹಳಿ, ಅದರೆರಡು ಕಂಬಿಗಳು ದ್ವಂದ್ವವೆನ್ನುವುದಾರೆ. ನಮ್ಮ ತರ್ಕ, ನೈತಿಕ ಮೌಲ್ಯಗಳು ಯಾವುದೋ ಒಂದು ಕಂಬಿಯ ಮೇಲಷ್ಟೇ ಸಾಗಬಲ್ಲ ಸೈಕಲ್ಲು. ಬದುಕೋ ಎರಡೂ ಹಳಿ ಮೇಲೆ ಹರಿದು ಸಾಗುವ ರೈಲು ಗಾಡಿ. Read more about ಕ್ಲಿಷ್ಟವೆನ್ನುವುದದೆಷ್ಟು ಸುಲಭ!




