ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬದುಕು

ಸೇನಾನಿಗಳು

ಸ್ವತಂತ್ರ ಹೋರಾಟಗಾರರಲ್ಲ. ಬದುಕಿನ ಹೋರಾಟಗಾರರು.

ಸ್ವತಂತ್ರ ಹೋರಾಟಗಾರರಲ್ಲ. ಬದುಕಿನ ಹೋರಾಟಗಾರರು.

ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

ಏಪ್ರಿಲ್‌ಗೆ ಏಳು ವರ್ಷಗಳಾದವು.

ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ.

ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ ಮಗಳು ಗೌರಿ ಕಲಿಸಿದ್ದಾಳೆ. ಇನ್ನೂ ಕಲಿಸುತ್ತಲೇ ಇದ್ದಾಳೆ.

ವ್ಯತ್ಯಾಸ ಇಷ್ಟೇ: ಮೊದಮೊದಲು ಆ ಪಾಠಗಳನ್ನು ಬಹಳ ಕಷ್ಟಪಟ್ಟು ಕಲಿಯುತ್ತಿದ್ದೆವು. ಕಣ್ಣೀರಿಡುತ್ತ ಕಲಿಯುತ್ತಿದ್ದೆವು. ವೃತ್ತಿಯ ಸವಾಲುಗಳೇನೇ ಇರಲಿ, ಅವು ನಮ್ಮ ಕೈಯೊಳಗೆ ಇರುವಂಥವು. ಅವನ್ನು ಸಮರ್ಥವಾಗಿ ಎದುರಿಸಬಲ್ಲೆವು. ಆದರೆ ಕೆಲವು ಸವಾಲುಗಳು ನಮ್ಮ ವ್ಯಾಪ್ತಿಯಾಚೆಗೂ ಇರುತ್ತವೆ ಎಂಬ ಮಹಾಪಾಠವನ್ನು ಮಾತು ಬಾರದ, ಇದುವರೆಗೂ ಮಾತನ್ನು ಆಡದ ಮಗಳು ಕಲಿಸುವಾಗ ಅದನ್ನು ಜೀರ್ಣಿಸಿಕೊಳ್ಳಲು ನಿಜಕ್ಕೂ ತುಂಬ ಕಷ್ಟಪಟ್ಟೆವು.

ಅವು ನಿಜಕ್ಕೂ ಯಾತನಾಮಯ ದಿನಗಳು.

ಆ ದಿನಗಳಲ್ಲಿ ಆಕೆ ಪೂರ್ತಿ ಕಣ್ಣರಳಿಸಿ ನಮ್ಮನ್ನು ನೋಡುತ್ತಿರಲಿಲ್ಲ. ‘ನಾಲ್ಕು ತಿಂಗಳ ಮಗು ಹಾಗೆ ನೋಡಬೇಕಂತ ಏನು ಅರ್ಜೆಂಟಿದೆ?’ ಎಂದು ಕೇಳಿದವರು ಕೊಪ್ಪಳದ ಮಕ್ಕಳ ಡಾಕ್ಟರ್.  ಮುಂದೆ ಓದಿ »

ನಾನು

ನಾನು ನಾನಗಬೇಕು

ನನಗ್ಯಾಕೆ ಇನ್ನೊಂದು ಹೆಸರು

ಸಿಂಚನವೊ ಇಂಚರವೊ

ಬರೆವವನು ನಾ ತಾನೆ

ತೆಗಳಿಕೆಗೆ ಹೆದರಿ ಆ ಹೆಸರುಗಳಿಗೆ 

ಮೊರೆ ಹೋದ ನಾನು

ಇನ್ನಾದರು ಎದುರಿಸಬೇಕು

ಹೊಗಳಿಕೆಗಳ ಅಸ್ವಾದಿಸಿದಂತೆ

ನಾನು ನಾನಗದಿದ್ದರೆ ನನಗೇನು ಬೆಲೆ

ನಾನು ನಾನಗ ಹೊರಟಿರುವೆ

ಉಗಿತಕ್ಕೆ, ಹೊಡೆತಕ್ಕೆ,

ಹೊಗಳಿಕೆಗೆ ತೆಗಳಿಕೆಗೆ

ಅಂಜದೆ ಅಳುಕದೆ

ನಡೆಯುವ ಸ್ಥೈರ್ಯವನ್ನು ಹೊತ್ತು

ನೆನಪು

ನೆನಪಿನಂಗಳದಲ್ಲಿ ನೆನಹುಗಳ ಕುಲುಕಾಟ,

ನೆಪಗಳಲ್ಲಲ್ಲಿ ಕಳೆದುಹೋದ ಗೆಳೆತನದ ಹುಡುಕಾಟ,

ಮತ್ತದೆ ನೋವು ಮತ್ತದೆ ಚಿಂತೆ,

ಬದುಕು ಭಾವಗಳ ಸಂತೆ

ಏಳು ಎದ್ದೇಳು ಯಾತ್ರಿಕನೆ

ಬೆಳಗೆದ್ದು ಮುಖತೊಳೆದು
ಸೂರ್ಯನಿಗೆ ಸಮಸ್ಕಾರವೀಯ್ದು
ಸುಪ್ರಭಾತವ ಕೇಳಿ
ಹೊರಡು ನೀ ಮುಂದಕ್ಕೆ
ನಿನ್ನ ಜೀವನ ಯಾತ್ರೆಯಲಿ

ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ…

ಪ್ರಿಯ ಓದುಗರೇ, ನಾನು ನನ್ನ ಹಳೆಯ ಬದುಕಿನ ಪುಟಗಳನ್ನು ೪೯ ವಸಂತಗಳ ಬಳಿಕ ನೋಡಿದಾಗ ನನ್ನ ಬದುಕಿನ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ಚಿಗುರಿತು. ನನ್ನ ಅನುಭವಗಳು ನಿಮ್ಮದೂ ಆಗಿರಬಹುದು ಅಥವಾ ಭಿನ್ನವಾಗಿರಬಹುದು. ಓದಿ… ನಿಮ್ಮ ಮನದಲ್ಲಿ ಪುಟಿದೇಳುವ ಭಾವನೆಗಳನ್ನು ವ್ಯಕ್ತಪಡಿಸಿ….


ಆಸ್ತಿಕನಿಂದ ನಾಸ್ತಿಕನೆಡೆಗೆ  ಮುಂದೆ ಓದಿ »

ಈ ಬದುಕಿನ ಗುರಿ

ಸಂದೀಪನ ಬಗ್ಗೆ ಓದಿದಾಗ ಆತನ ತಂದೆತಾಯಿಯ ಬಗ್ಗೆ ಮರುಕವೆನ್ನಿಸಿದರೂ ಆತನ ಬಗ್ಗೆ ಆಹಾ! ಎಂತಹ ಅದೃಷ್ಟವಂತ ಎನ್ನಿಸಿತು. ಚಿಕ್ಕಂದಿನಲ್ಲೆ ಸೈನಿಕನಾಗಬೇಕೇಂಬ ಧ್ಯೇಯ, ದೇಶಕ್ಕಾಗಿ ಸಾಯಬೇಕೆಂಬ ಗುರಿ, ಇವನ್ನು ನೋಡಿದರೆ ಆತ ನಿಜಕ್ಕೂ ಬದುಕಿನ ಪ್ರತಿ ಕ್ಷಣವನ್ನೂ ತನಗೆ ಅತಿ ಹೆಚ್ಚು ಸಂತಸ ಕೊಡುವ ಕ್ರಿಯೆಯಲ್ಲೇ ಕಳೆದ ಅನ್ನಬಹುದು. ಈ ಮಾತು ಎಷ್ಟು ಜನರು ಹೇಳಲು ಸಾಧ್ಯ?  ಮುಂದೆ ಓದಿ »

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧

ಗೌರಿ

ಅದು ಮಾರ್ಚ್‌ ತಿಂಗಳ ಮೂರನೇ ವಾರದ ಕೊನೆ.

ಎಂದಿನಂತೆ ನಸುಕಿನಲ್ಲಿ ಎದ್ದು ಕಂಪ್ಯೂಟರ್‌ ಮುಂದೆ ಪತ್ರಿಕೆಗಳ ಅಂತರ್ಜಾಲ ತಾಣಗಳನ್ನು ಹುಡುಕಿ ಓದುತ್ತ, ನೋಟ್ಸ್‌ ಮಾಡಿಕೊಳ್ಳುತ್ತಾ ಕೂತಿದ್ದೆ. ಸಮಯ ಆಗಲೇ ಆರೂ ಕಾಲು. ಇನ್ನೊಂದು ಹದಿನೈದು ನಿಮಿಷ ಸಮಯ. ಮಕ್ಕಳು ಏಳುತ್ತವೆ. ಅವರ ಮುಖ ತೊಳೆದು, ಒಂದಿಷ್ಟು ಹಾಲು ಕುಡಿಸಿಕೊಂಡು ವಾಕಿಂಗ್‌ ಹೋಗುವುದು ರೂಢಿ.

ಮತ್ತೈದು ನಿಮಿಷದಲ್ಲಿ ಚಿಕ್ಕವಳು ಎದ್ದಳು. ರೇಖಾ ಅವಳನ್ನು ರೆಡಿ ಮಾಡುವಷ್ಟರಲ್ಲಿ ದೊಡ್ಡ ಮಗಳು ಗೌರಿ ಕೂಡ ಎದ್ದು ಕೂತಳು. ಹಾಗೇ ಬಿಟ್ಟರೆ ಹಾಸಿಗೆಯಲ್ಲೇ ಸೂಸೂ ಮಾಡುತ್ತಾಳೆಂದು ಅವಳನ್ನು ಎಬ್ಬಿಸಿದ ರೇಖಾ ಬಾತ್‌ರೂಮಿನ ಕಡೆ ನಡೆಸಿಕೊಂಡು ಬಂದಳು.

ಏಕೋ ಗೌರಿ ನಡೆಯಲು ಹಠ ಮಾಡಿದಳು. ಅದು ಹಳೆಯ ಅಭ್ಯಾಸ. ಬಾತ್‌ರೂಮಿನ ನೆಲ ತಂಪಗಿರುತ್ತದೆ. ಎದ್ದ ಕೂಡಲೇ ಕಾಲು ನೆನೆಸಿಕೊಳ್ಳಲು ಆಕೆ ಇಷ್ಟಪಡುವುದಿಲ್ಲ.  ಮುಂದೆ ಓದಿ »

ಸಾವೆಂಬ ಪರಮಮಿತ್ರ

Death-Water.jpg

ನಾಳೆ ಬಪ್ಪುದು ನಮಗಿ೦ದೇ ಬರಲಿ
ಇ೦ದು ಬಪ್ಪುದು ನಮಗೀಗಲೇ ಬರಲಿ
ಇದಕಾರ೦ಜುವರು? ಇದಕಾರಳುಕುವರು?

ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ ಒ೦ದು ಪ್ರಶ್ನೆ ಬದುಕಿನ ಈ ಅಚ್ಚರಿಯ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ.  ಮುಂದೆ ಓದಿ »

Syndicate content