21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬದುಕು

ಬೆಳಕಾಗಿ ಬಾ

February 28, 2008 - 12:24am
mayakar
ಬೆಳಕಾಗಿ ಬಾ ನೀನು ನಿನಗಾಗಿ ನನಗಾಗಿ ನಕ್ಕು ನಲಿದೆ ಹೊಸದಾದ ಹುಮ್ಮಸ್ಸು ಹೊರಚೆಲ್ಲಿ ಹೊರಟೆ ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ ಹರೆಯದ ಹೊಸತನವ ಹನಿಹನಿಯಾಗಿ ಹರಡಿಕೊಂಡೆ || ೧ || ಕಿವಿಯೊಳಗೆ ಕುಹುಗುಟ್ಟುವ ಕೋಗಿಲೆಯೆ ಮನದೊಳಗೆ ಮುದ ಮೂಡಿಸುವೆಯೇಕೆ? ಕರಹಿಡಿದು ಕಾಣದ ಕನಸುಗಳ ಕಾಣಿಸುವೆ ಮನವೆಂಬ ಮರ್ಕಟದೊಳಗೆ ಮಾಡಿರುವೆ ಮನೆಯೇಕೆ? || ೨ ||
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂತೋಷ ಆಹಾ.. ಆಹಾ..

March 25, 2008 - 11:29pm
kalpana
ಈ ದಿನನಿತ್ಯದ ಜಂಜಾಟದಲ್ಲಿ ಸಂತೋಷದ ಸಿಂಚನವೇ ಇಲ್ಲವಾಗಿದೆಯೆನಿಸಿ ಅದನ್ನು ಸಂಪಾದಿಸುವ ಬಗೆ ಹುಡುಕತೊಡಗಿದೆ. ಆದರೆ ಸಂತೋಷವೆಂಬುದು ಒಂದು ಮನಸ್ಸಿನ ಸ್ಥಿತಿಯಲ್ಲವೆ? ಅದನ್ನು ದುಡ್ಡಿಗೆ ಕೊಳ್ಳಲಾದೀತೇ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಡೈಸಿ ರಿಡ್ಜ್ ಡೈರಿ

April 15, 2008 - 5:13am
hemzy78
ಸಿನೆಮಾ, ಸಿನೆಮಾ ವಿಮರ್ಶೆ, ಕಲೆ, ಸಾಹಿತ್ಯ, ಸಮಾಜ, ಜನ ಜೀವನ , ಬದುಕು , ಸಂಗೀತ ಮತ್ತು ಭಾವನೆಗಳು - ಇವುಗಳ ಜತೆ ನನ್ನ ಒಡನಾಟದ ಕೆಲವು ಕ್ಷಣಗಳು... ಇಲ್ಲಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬದುಕು - ಬವಣೆ

April 15, 2008 - 5:19pm
arunasirigere
ಹುಟ್ಟು ಸಾವುಗಳ ಮಧ್ಯೆ ಏನೆಲ್ಲಾ ನೋಡುವೆವು ನೋವು ನಲಿವು, ಅಸಹನೆ ಅನ್ಯಾಯ, ಅಕ್ರಮ ವಂಚನೆ ಅದೆಷ್ಟೋ ಸಹಿಸಲಾಗದ ಮುಖಗಳು ಅವುಗಳೊಂದಿಗಿನ ಪ್ರತಿ ಕ್ಷಣಗಳು ಕೆಲವೊಮ್ಮೆ ನಾವು ನಗಲಾರದೆ ಕಳೆದುಬಿಡುತ್ತೇವೆ ವಾರ ತಿಂಗಳುಗಳು ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು ಪ್ರತಿದಿನವೂ ಹೊಸತು, ಹೊಸ ಸಂಬಧಗಳು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬದುಕು ಬವಣೆಯಾಗದಿರಲಿ

May 6, 2008 - 6:54pm
ಸಂಗನಗೌಡ

ಬದುಕನ್ನು ಬವಣೆಯೆಂದಿಣಸದಿರು

ಬವಣೆಪಟ್ಟರೂ ಜೀವಂತ ಹೋದವರುಂಟೆ?

 

ಸಂಕಟಗಳಿಗೆಲ್ಲ ಆಸೆಯೇ ಬೇರು

ಆಸೆಯ ಬಲೆಯಿಂದ ಪಾರಾದವರುಂಟೆ?

 

ತನ್ನೊಟ್ಟಿಗೆ ತಾನಾಗಿರು

ತಾನಾಗಿ ಎಲ್ಲ ದೊರೆವುದು

 

ತನ್ನಂಬುಗೆ ಇರಲಿ

ಅದು ಜಂಬ ಅನಿಸದಿರಲಿ

 

ಬದುಕಿದು ಒಡೆಯನ ತೇರು

ನಗುನಗುತಲೆ ಎಳೆಯುತಿರು. Read more about ಬದುಕು ಬವಣೆಯಾಗದಿರಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬದುಕೇ, ನಿನಗೊಂದು ಥ್ಯಾಂಕ್ಸ್‌

October 8, 2008 - 3:29pm
Chamaraj
ಎರಡು ದಿನ ಯೋಗಾಸನ, ವ್ಯಾಯಾಮ ಬಿಟ್ಟರೆ ಮನಸ್ಸಿಗೆ ಏನೋ ತಹತಹ. ಛೇ, ಹೀಗಾದರೆ, ಕ್ರಮೇಣ ನಾನು ಸೋಮಾರಿಯಾಗುತ್ತೇನೆ. ನಸುಕಿನಲ್ಲಿ ಏಳಲು ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ತಿಂದು ತಿಂದು ಡುಮ್ಮಣ್ಣನಾಗುತ್ತೇನೆ ಎಂದು ಅಂದುಕೊಂಡು, ಹೆದರಿಸಿ, ಹದ ಮೀರಿದ ದಿನಚರಿಯನ್ನು ಮತ್ತೆ ಹಳಿಗೆ ಹತ್ತಿಸುತ್ತೇನೆ. ಊಟ ಮಾಡುವಾಗಲೂ ಅಷ್ಟೇ. ಮೊದಲಿನಿಂದ ಸರಳ ಆಹಾರ ಇಷ್ಟ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮರೆತೇನೆಂದರೆ ಮರೆಯಲಿ ಹ್ಯಾಂಗ...?

February 22, 2009 - 3:50pm
Chamaraj
’ಬಿಸಿಲು ಬಲಿಯುತ್ತಿದೆ’

ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬೆಳವಣಿಗೆಗಳೇನೂ ಆಗಿಲ್ಲ ಅಂತ ಅಂದುಕೊಳ್ಳುತ್ತ ಸ್ಕೂಟಿ ಚಲಿಸುವಾಗ, ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾವೆಂಬ ಪರಮಮಿತ್ರ

March 9, 2009 - 11:56pm
Chamaraj

ನಾಳೆ ಬಪ್ಪುದು ನಮಗಿ೦ದೇ ಬರಲಿ
ಇ೦ದು ಬಪ್ಪುದು ನಮಗೀಗಲೇ ಬರಲಿ
ಇದಕಾರ೦ಜುವರು? ಇದಕಾರಳುಕುವರು?

ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ ಒ೦ದು ಪ್ರಶ್ನೆ ಬದುಕಿನ ಈ ಅಚ್ಚರಿಯ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ. Read more about ಸಾವೆಂಬ ಪರಮಮಿತ್ರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧

April 5, 2009 - 9:52am
Chamaraj
ಅದು ಮಾರ್ಚ್‌ ತಿಂಗಳ ಮೂರನೇ ವಾರದ ಕೊನೆ. ಎಂದಿನಂತೆ ನಸುಕಿನಲ್ಲಿ ಎದ್ದು ಕಂಪ್ಯೂಟರ್‌ ಮುಂದೆ ಪತ್ರಿಕೆಗಳ ಅಂತರ್ಜಾಲ ತಾಣಗಳನ್ನು ಹುಡುಕಿ ಓದುತ್ತ, ನೋಟ್ಸ್‌ ಮಾಡಿಕೊಳ್ಳುತ್ತಾ ಕೂತಿದ್ದೆ. ಸಮಯ ಆಗಲೇ ಆರೂ ಕಾಲು. ಇನ್ನೊಂದು ಹದಿನೈದು ನಿಮಿಷ ಸಮಯ. ಮಕ್ಕಳು ಏಳುತ್ತವೆ. ಅವರ ಮುಖ ತೊಳೆದು, ಒಂದಿಷ್ಟು ಹಾಲು ಕುಡಿಸಿಕೊಂಡು ವಾಕಿಂಗ್‌ ಹೋಗುವುದು ರೂಢಿ. ಮತ್ತೈದು ನಿಮಿಷದಲ್ಲಿ ಚಿಕ್ಕವಳು ಎದ್ದಳು. ರೇಖಾ ಅವಳನ್ನು ರೆಡಿ ಮಾಡುವಷ್ಟರಲ್ಲಿ ದೊಡ್ಡ ಮಗಳು ಗೌರಿ ಕೂಡ ಎದ್ದು ಕೂತಳು. ಹಾಗೇ ಬಿಟ್ಟರೆ ಹಾಸಿಗೆಯಲ್ಲೇ ಸೂಸೂ ಮಾಡುತ್ತಾಳೆಂದು ಅವಳನ್ನು ಎಬ್ಬಿಸಿದ ರೇಖಾ ಬಾತ್‌ರೂಮಿನ ಕಡೆ ನಡೆಸಿಕೊಂಡು ಬಂದಳು. ಏಕೋ ಗೌರಿ ನಡೆಯಲು ಹಠ ಮಾಡಿದಳು. ಅದು ಹಳೆಯ ಅಭ್ಯಾಸ. ಬಾತ್‌ರೂಮಿನ ನೆಲ ತಂಪಗಿರುತ್ತದೆ. ಎದ್ದ ಕೂಡಲೇ ಕಾಲು ನೆನೆಸಿಕೊಳ್ಳಲು ಆಕೆ ಇಷ್ಟಪಡುವುದಿಲ್ಲ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಈ ಬದುಕಿನ ಗುರಿ

April 6, 2009 - 1:25am
kalpana
ಸಂದೀಪನ ಬಗ್ಗೆ ಓದಿದಾಗ ಆತನ ತಂದೆತಾಯಿಯ ಬಗ್ಗೆ ಮರುಕವೆನ್ನಿಸಿದರೂ ಆತನ ಬಗ್ಗೆ ಆಹಾ! ಎಂತಹ ಅದೃಷ್ಟವಂತ ಎನ್ನಿಸಿತು. ಚಿಕ್ಕಂದಿನಲ್ಲೆ ಸೈನಿಕನಾಗಬೇಕೇಂಬ ಧ್ಯೇಯ, ದೇಶಕ್ಕಾಗಿ ಸಾಯಬೇಕೆಂಬ ಗುರಿ, ಇವನ್ನು ನೋಡಿದರೆ ಆತ ನಿಜಕ್ಕೂ ಬದುಕಿನ ಪ್ರತಿ ಕ್ಷಣವನ್ನೂ ತನಗೆ ಅತಿ ಹೆಚ್ಚು ಸಂತಸ ಕೊಡುವ ಕ್ರಿಯೆಯಲ್ಲೇ ಕಳೆದ ಅನ್ನಬಹುದು. ಈ ಮಾತು ಎಷ್ಟು ಜನರು ಹೇಳಲು ಸಾಧ್ಯ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರೆಂಬ ಕಲ್ಪನೆಯಿಂದ ಬಿಡುಗಡೆ ಹೊಂದಿದೆ: ಸಾಮಾನ್ಯ ಮನುಷ್ಯನ‌ ಬದುಕಿನ ಪುಟಗಳಿಂದ…1

April 21, 2009 - 11:30pm
natekar

ಪ್ರಿಯ ಓದುಗರೇ,

ನಾನು ನನ್ನ ಹಳೆಯ ಬದುಕಿನ ಪುಟಗಳನ್ನು ೪೯ ವಸಂತಗಳ ಬಳಿಕ ನೋಡಿದಾಗ ನನ್ನ ಬದುಕಿನ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ಚಿಗುರಿತು. ನನ್ನ ಅನುಭವಗಳು ನಿಮ್ಮದೂ ಆಗಿರಬಹುದು ಅಥವಾ ಭಿನ್ನವಾಗಿರಬಹುದು. ಓದಿ… ನಿಮ್ಮ ಮನದಲ್ಲಿ ಪುಟಿದೇಳುವ ಭಾವನೆಗಳನ್ನು ವ್ಯಕ್ತಪಡಿಸಿ…. Read more about ದೇವರೆಂಬ ಕಲ್ಪನೆಯಿಂದ ಬಿಡುಗಡೆ ಹೊಂದಿದೆ: ಸಾಮಾನ್ಯ ಮನುಷ್ಯನ‌ ಬದುಕಿನ ಪುಟಗಳಿಂದ…1

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸುಟ್ಫು ಹಾಕಿದೆ ಜಾತಕ ‍‍‍‍‍: ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨

April 23, 2009 - 9:08pm
natekar

ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨

ಸುಟ್ಟು ಹಾಕಿದೆ ಜಾತಕ

ನಾನು ರಜಾದಿನಗಳನ್ನು ಕಳೆಯಲು ಭದ್ರಾವತಿಯಲ್ಲಿದ್ದ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದೆ. ಅಲ್ಲಿ ಪಕ್ಕದ ಮನೆಯಲ್ಲಿದ್ದ ಒಬ್ಬರು ಕೈಯ ರೇಖೆಗಳನ್ನು ನೋಡಿ ಭವಿಷ್ಯ ಹೇಳುತ್ತಿದ್ದರು. ಭೂತಕಾಲಕ್ಕಿಂತ ಭವಿಷ್ಯದ ಬಗ್ಗೆ ಮನುಷ್ಯನಿಗೆ ಆಸಕ್ತಿ. ನನಗೂ ಭವಿಷ್ಯ ತಿಳಿಯುವ ತವಕ. ಅವರನ್ನು ಕಾಡಿಸಿ ಪೀಡಿಸಿ ನನ್ನ ಭವಿಷ್ಯವನ್ನು ಕೇಳಿದೆ. ನಿನಗೆ ವಿದ್ಯೆ ಹತ್ತುವುದಿಲ್ಲವೆಂದು ಅವರು ಭವಿಷ್ಯ ನುಡಿದರು. ಓದುವುದರಲ್ಲಿ ಹಿಂದಿದ್ದ ನನಗೆ ಅವರ ಭವಿಷ್ಯ ನಿಜವಾಗಬಹುದೇನೋ ಎಂಬ ಭಯ ಕಾಡತೊಡಗಿತು. Read more about ಸುಟ್ಫು ಹಾಕಿದೆ ಜಾತಕ ‍‍‍‍‍: ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಏಳು ಎದ್ದೇಳು ಯಾತ್ರಿಕನೆ

June 11, 2009 - 6:17am
ಅನಾಮಿಕ
ಬೆಳಗೆದ್ದು ಮುಖತೊಳೆದು
ಸೂರ್ಯನಿಗೆ ಸಮಸ್ಕಾರವೀಯ್ದು
ಸುಪ್ರಭಾತವ ಕೇಳಿ
ಹೊರಡು ನೀ ಮುಂದಕ್ಕೆ
ನಿನ್ನ ಜೀವನ ಯಾತ್ರೆಯಲಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪು

November 10, 2009 - 9:37am
sinchana

ನೆನಪಿನಂಗಳದಲ್ಲಿ ನೆನಹುಗಳ ಕುಲುಕಾಟ,

ನೆಪಗಳಲ್ಲಲ್ಲಿ ಕಳೆದುಹೋದ ಗೆಳೆತನದ ಹುಡುಕಾಟ,

ಮತ್ತದೆ ನೋವು ಮತ್ತದೆ ಚಿಂತೆ, Read more about ನೆನಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು

November 10, 2009 - 9:46am
sinchana

ನಾನು ನಾನಗಬೇಕು

ನನಗ್ಯಾಕೆ ಇನ್ನೊಂದು ಹೆಸರು

ಸಿಂಚನವೊ ಇಂಚರವೊ

ಬರೆವವನು ನಾ ತಾನೆ

ತೆಗಳಿಕೆಗೆ ಹೆದರಿ ಆ ಹೆಸರುಗಳಿಗೆ 

ಮೊರೆ ಹೋದ ನಾನು

ಇನ್ನಾದರು ಎದುರಿಸಬೇಕು

ಹೊಗಳಿಕೆಗಳ ಅಸ್ವಾದಿಸಿದಂತೆ

ನಾನು ನಾನಗದಿದ್ದರೆ ನನಗೇನು ಬೆಲೆ

ನಾನು ನಾನಗ ಹೊರಟಿರುವೆ

ಉಗಿತಕ್ಕೆ, ಹೊಡೆತಕ್ಕೆ,

ಹೊಗಳಿಕೆಗೆ ತೆಗಳಿಕೆಗೆ

ಅಂಜದೆ ಅಳುಕದೆ

ನಡೆಯುವ ಸ್ಥೈರ್ಯವನ್ನು ಹೊತ್ತು Read more about ನಾನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

November 24, 2009 - 5:36pm
Chamaraj

ಏಪ್ರಿಲ್‌ಗೆ ಏಳು ವರ್ಷಗಳಾದವು.

ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ.

ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ ಮಗಳು ಗೌರಿ ಕಲಿಸಿದ್ದಾಳೆ. ಇನ್ನೂ ಕಲಿಸುತ್ತಲೇ ಇದ್ದಾಳೆ. Read more about ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೇನಾನಿಗಳು

February 21, 2010 - 11:37am
devaru.rbhat

ಸ್ವತಂತ್ರ ಹೋರಾಟಗಾರರಲ್ಲ. ಬದುಕಿನ ಹೋರಾಟಗಾರರು.

ಸ್ವತಂತ್ರ ಹೋರಾಟಗಾರರಲ್ಲ. ಬದುಕಿನ ಹೋರಾಟಗಾರರು. Read more about ಸೇನಾನಿಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಟಕ ಚೈತ್ರ ೨೦೧೦

May 25, 2010 - 1:39am
hamsanandi

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!

ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ ಚಿಗುರು. ಚಿಗುರು ಅಂದ್ರೆ ಹೊಸತು. ಹಾಗಾಗಿ ಹೊಸದಾಗಿ ಏನು ಯೋಚಿಸಿದ್ರೂ ಮಾಡಿದ್ರೂ ಅದನ್ನ ಚೈತ್ರ ಅಂದ್ರೆ ಅದರಲ್ಲೇನಿದೆ ತಪ್ಪು? ಅಲ್ವಾ? ಅಷ್ಟೇ ಅಲ್ಲದೆ ಈ ನಾಟಕ ಚೈತ್ರಕ್ಕೆ ತಾಲೀಮು ಶುರು ಮಾಡಿದ್ದಂತೂ ಚೈತ್ರದಲ್ಲೇ.

ಸುಮಾರು ೨+ ತಿಂಗಳು ನಡೆಸಿದ ಅಭ್ಯಾಸದ ನಂತರ ನೆನ್ನೆ ಸ್ಯಾನ್ ಹೊಸೆಯ ಮೌಂಟ್ ಪ್ಲೆಸೆಂಟ್ ಪ್ರೌಢ ಶಾಲೆಯ ರಂಗ ಮಂದಿರದಲ್ಲಿ ಎರಡು ನಾಟಕಗಳನ್ನು ಆಡಿದ್ದಾಯಿತು. ಒಂದು ಟಿ ಎನ್ ಸೀತಾರಾಮರ ’ನಮ್ಮೊಳಗೊಬ್ಬ ನಾಜೂಕಯ್ಯ’ ಮತ್ತೆ ಮತ್ತೊಂದು ಡುಂಡಿರಾಜರ ’ಕೊರಿಯಪ್ಪನ ಕೊರಿಯೊಗ್ರಫಿ’. Read more about ನಾಟಕ ಚೈತ್ರ ೨೦೧೦

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಏಕಾಂಗಿಯಲ್ಲ ನೀ

December 22, 2010 - 12:07pm
gopinatha

ಏಕಾಂಗಿಯಲ್ಲ ನೀ

ಓ ಮುದುಡಿದ ಮನವೇ,
ನೀ ಏಕಾಂಗಿಯಲ್ಲ
ಒಮ್ಮೆ ಈ ಕಡೆ ದೃಷ್ಟಿ
ಹಾಯಿಸಿ ನೋಡು
ನಿನ್ನ ಆ ನಿಷ್ಕಲ್ಮಷ
ಪ್ರೀತಿಗೆ, ಸ್ನೇಹಕ್ಕೆ,
ನಗುವಿಗೆ ಕಾದಿಹವು
ನೂರಾರು, ಸಾವಿರಾರು
ಜೀವಿಗಳು
ನೀನೋರ್ವನೇ
ಎಂಬ  ಚಿಂತೆ ಬಿಡು
ಆಕಾಶದೆತ್ತರಕೆ ಏರುವ
ಆಸೆಯ ಏಕೆ ಪಕ್ಕಕ್ಕೆಸೆಯುವೆ?
ಪ್ರಕೃತಿ ಇದೆಲ್ಲವ
ನಿನಗಾಗಿಯೇ
ಸೃಷ್ಟಿಸಿಹಳು
ಯಾವ ಹಣ್ಣನ್ನೂ ಸೃಷ್ಟಿಸುವದಿಲ್ಲ Read more about ಏಕಾಂಗಿಯಲ್ಲ ನೀ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಖಾಲಿ ಮನಸ್ಸೀಗ ಗರಿಗೆದರತೊಡಗಿದೆ..!!

April 1, 2011 - 8:10am
ksraghavendranavada

 ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ

ಈಗ ಕನಸು ಕಾಣುವ ಕನಸು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕಾವ್ಯ ಕೃಷಿ!!

April 6, 2011 - 8:28am
ksraghavendranavada
ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ..
ಹರಿದ ಕಾಗದಗಳ ಲೆಕ್ಕವಿಲ್ಲ..
ಇನ್ನೂ ಎರಡು ಸಾಲಿನ ಕವನವೂ  ಹುಟ್ಟಿಲ್ಲ!!
 
ಬದುಕ ಬ೦ಡಿಯ ನೊಗವ ಹೊರುತ್ತಲೇ
ಇಷ್ಟು ದಿನಗಳ ಕಳೆದಾಯಿತಲ್ಲ..
ಬೆನ್ನು ಬಾಗಿ ಹಿರಿತನವು ಕೋಲೂರಿ
ನಡೆವಾಗಲೆಲ್ಲಾ ಮುಖವೆ೦ಬುದು ನೆಲವನ್ನು ನೋಡಿ
ಕಣ್ಣಿಗೆ ಪೊರೆ.. ಭೂಮಿಗೆ ಹೊರೆ..
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮನುಷ್ಯ V/s. ಸಸ್ಯ

September 7, 2011 - 4:28pm
prasannasp

ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು ದೂರುವುದೇ ಇಲ್ಲ. ಒಂದು ಮಳೆ ಬಿದ್ದರೆ ಸಾಕು ಎಲ್ಲೆಡೆ ಎದ್ದುನಿಲ್ಲುತ್ತವೆ. ಅವು ಹಾಗಿರುವುದರಿಂದಲೇ ನಾವು ಉಸಿರಾಡಲು ಆಗುತ್ತಿರುವುದು ಅಲ್ವಾ? Read more about ಮನುಷ್ಯ V/s. ಸಸ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕ್ಲಿಷ್ಟವೆನ್ನುವುದದೆಷ್ಟು ಸುಲಭ!

January 7, 2012 - 10:44am
uniquesupri

ದ್ವಂದ್ವಗಳೊಡನೆ ಆಟವಾಡುವುದು ಬಲು ಸೊಗಸು. ನಮ್ಮ ಕಪ್ಪು ಬಿಳುಪು ನೈತಿಕತೆ, ಇಬ್ಭಾಗ ಸೀಳುವ ಕತ್ತಿಯಲಗಿನ ಹರಿತ ತರ್ಕಗಳಿಗೆ ದ್ವಂದ್ವ ದುಃಸ್ವಪ್ನ. ಆದರೆ ಬದುಕಿಗೋ ಅದೇ ಸಹಜ ದಾರಿ.

ಸರಳವಾಗಿ ಹೇಳುವುದಾದರೆ ಎರಡು ಸಮಾನಾಂತರ ಕಂಬಿಗಳಿರುವ ರೈಲು ಹಳಿ, ಅದರೆರಡು ಕಂಬಿಗಳು ದ್ವಂದ್ವವೆನ್ನುವುದಾರೆ. ನಮ್ಮ ತರ್ಕ, ನೈತಿಕ ಮೌಲ್ಯಗಳು ಯಾವುದೋ ಒಂದು ಕಂಬಿಯ ಮೇಲಷ್ಟೇ ಸಾಗಬಲ್ಲ ಸೈಕಲ್ಲು. ಬದುಕೋ ಎರಡೂ ಹಳಿ ಮೇಲೆ ಹರಿದು ಸಾಗುವ ರೈಲು ಗಾಡಿ. Read more about ಕ್ಲಿಷ್ಟವೆನ್ನುವುದದೆಷ್ಟು ಸುಲಭ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
Subscribe to ಬದುಕು