22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮನಸ್ಸು !

August 20, 2012 - 4:25pm
S.NAGARAJ

  

   ಮನಸ್ಸೊಂದು  ಮೂರಾಬಟ್ಟೆ

   ಬಲೆಯ ಸೆರೆಯಾಳಾಗಿರುವ ಚಿಟ್ಟೆ

   ರಂಗು-ರಂಗು ಕಣ್ಣ್-ಮನಕೆ ತೂರಿ

   ಮೇಲೆ, ಮುಗಿಲೆತ್ತರ  ಹಾರಿ

  ಎಲ್ಲರಿಗೂ ತಂದು ಹೊಟ್ಟೆ ಉರಿ

  ಕುಣಿವಾಸೆ  ಗರಿ ಕೆದರಿ.

  ವಿಧಿಗೆ ಬೇರೊಂದಾಸೆ

  ಕತ್ತಲ್ಲಲ್ಲೇ ಕೊಳೆತು,ನಾರಿತು

  ಕೆಂದುರಿಗೆ ನಲುಗಿ ಬಾಡಿತು

  ಬಾಳ ಮಲ್ಲೆ ಆಸೆ ಮರೆತು

  ನಗು-ಹಾಡು-ಸುಗ್ಗಿ ದೂರ ಸರಿಯಿತು

  ನಿರಾಸೆ  ತಾಂಡವ  ನೄತ್ಯವಾಡಿತು

  ಕಡೆಗೆ ಈ ಶೋಕಗೀತೆ  ಬಾಳ

                    ಜೊತೆಗಾಯ್ತು.

 

ಶ್ರೀನಾಗರಾಜ್

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Rajendra Kumar ... on
ಆತ್ಮೀಯ ನಾಗರಾಜ್ ಸರ್, ಉತ್ತಮ ಕವನ. ಹಂಚಿಕೊಂಡಿದಕ್ಕೆ ಧನ್ಯವಾದಗಳು.

Submitted by S.NAGARAJ on
ಆತ್ಮೀಯ ರಾಜೇಂದ್ರ ಕುಮಾರ್ ಅವರೆ, ನಿಮ್ಮ ಪ್ರೋತ್ಸಾಹ ನುಡಿ, ಮೆಚ್ಚುಗೆಗೆ ಧನ್ಯ ವಾದಗಳು.

Submitted by gurudutt_r on
ಕವನ ತುಂಬಾ ಚೆನ್ನಾಗಿದೆ. ಇತ್ತೀಚಿಗೆ ಸಂಪದದಲ್ಲಿ ಯಾಕೆ ಎಲ್ಲರೂ ಸಾವು, ನಿರಾಶೆ, ಹತಾಶೆಯ ಬಗ್ಗೆ ಸಾಲುಗಳನ್ನು ಪೋಣಿಸುವ ತವಕ? ನಾಗರಾಜು ಅವರ ಈ ಕವಿತೆ, ಮಧುಸೂಧನರವರ ಜೀವನ ಮುಗಿಯಿತೆಂಬ ಪ್ರತಿಕ್ರಿಯೆಗಳು ನನ್ನಲ್ಲಿ ಆತಂಕ ಮೂಡಿಸಿದೆ. ಬರೆಯುವ ಕೈಗಳಿಂದ ಸಿಗುವ ಸ್ಪೂರ್ತಿ ಅದೆಷ್ಟೋ, ಆದರೆ ಬರೆಯುವ ಕೈಯ್ಯ ನೋವು ನನಗೆ ತಿಳಿದಿಲ್ಲ. ಕೆಲವು ಕವನಗಳು ಓದಿ ಅತ್ತಿದ್ದೂ ಉಂಟು

Submitted by S.NAGARAJ on
ಆತ್ಮೀಯ ಗುರುದತ್ತ ರವರೆ, ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಆಶಯ ಕಾಲವೂ ಬರಲಿದೆ.