December 23, 2010 - 11:39am
ಮಾತಲ್ಲಿ ಮೌನ ತುಂಬಿದೆ
ಮನಸ್ಸು ಒಡೆದರು ನೋವು ಕಾಡಿದೆ
ಭಸ್ಮದ ಚಿತೆಯಲಿ ಚಿಂತೆ ಕಾದಿದೆ
ಜೀವ ಅಳಿದರು ಜೀವನ ನಿಂತಿದೆ
ಏಕಾಂಗಿ ಹೃದಯಕೆ ನೆನಪು ಬಂದಿದೆ
ದುಃಖ ಸೊರಗಿ ಕಣ್ಣೀರು ಬತ್ತಿದೆ
ಲೋಕ ಮಾಯಾಲೋಕವೆನಿಸಿದೆ
ಸತ್ಯ-ಸುಳ್ಳು ಕವಲು ದಾರಿಯಾಗಿದೆ
ಪ್ರೀತಿ ಸರಸದ ದ್ವೇಷವಾಗಿದೆ
ಸ್ವಾರ್ಥವೇ ಗುಣದಲ್ಲಿ ನೆಲೆಸಿದೆ
ಸುಖಮಯ ಬದುಕು ಬಲು ಭಾರವಾಗಿದೆ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:








