August 15, 2012 - 6:51am
ಸ್ವಾತಂತ್ರ್ಯವೆಂಬ ಕನ್ಯೆಗೆ
ಯೌವನ ಬಂದಾಗ..
ಆಕೆಯ ಹುಚ್ಚಿನಲ್ಲಿ,
ತನು,ಮನ,ಧನವ
ಪಣಕ್ಕಿಟ್ಟು,ಅಮರರಾದವರೆಶ್ಟೋ....!
ಕೊನೆಗೆ ಒಲಿದಿದ್ದು,ನಿರ್ವಿಕಾರ ಮೋಹನನಿಗೆ!!
ಹೂವಿನಂತೆ,ಕಣ್ರೆಪ್ಪೆಯಲಿ
ನನ್ನನ್ನು ಬೆಳೆಸಿದ್ದ..!
ಈ ನೆಲ,ಈ ಗಾಳಿಯಲಿ,ನಾಟಿಗ್ಯೆಯಲು..
ಅದೆಷ್ಟೋ ರಾಮರಾಜ್ಯದ ಹೊಂಗನಸುಗಳು...!!
ಈಗ ನನ್ನೊಡೆಯನಿಲ್ಲ...
ಇದ್ದರೂ,ನಿಮ್ಮ ದಾಹಕ್ಕಾಗಿ
ಕ್ಷಮಿಸುತ್ತಿರಲಿಲ್ಲ...?!
ಕಾರಣ.......
ದು;ಶ್ಶಾಸನರನ್ನು,ರಾವಣರನ್ನು..
ಹೆತ್ತಿದ್ದು ನಾನೇ......!!
ಕುಂಕುಮವಳಿದ ಹಣೆಯಲ್ಲಿ..
ರಕ್ತದ ಓಕುಳಿ...
ನನ್ನೆರಡು ಕೆಯ್ ಗಳು..
ಅತ್ಯಾಚಾರ,ಬ್ರಷ್ಟಾಚಾರದಲಿ ಬಂದಿ...
ವಾತ್ಸಲ್ಯದ ರಂಗಿನ ಪತ್ತಲ ಕಳಚಿ...,
ಬಿಳಿ ಸೀರೆ ತೊಡಿಸಿ,...ಆಟ್ಠಾಸಗಯ್ ಯುವ ನೀವು...
ನನ್ನ ಒಡಲಿಗೆ ಕಿಚ್ಚು ಹಚ್ಚುವ ಕೊೞಿಗಳು,
ನನ್ನವೆಂದು ಹೇಳಲಾಗದೆ
ಮೂಕಿಯಾಗಿರುವೆ....!!!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!
ಉ: ವಿಧವೆ...!