23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವಿಧವೆ...!

August 15, 2012 - 6:51am
mmshaik

 ಸ್ವಾತಂತ್ರ್ಯವೆಂಬ ಕನ್ಯೆಗೆ

ಯೌವನ ಬಂದಾಗ..

ಆಕೆಯ ಹುಚ್ಚಿನಲ್ಲಿ,

ತನು,ಮನ,ಧನವ

ಪಣಕ್ಕಿಟ್ಟು,ಅಮರರಾದವರೆಶ್ಟೋ....!

ಕೊನೆಗೆ ಒಲಿದಿದ್ದು,ನಿರ್ವಿಕಾರ ಮೋಹನನಿಗೆ!!

ಹೂವಿನಂತೆ,ಕಣ್ರೆಪ್ಪೆಯಲಿ

ನನ್ನನ್ನು ಬೆಳೆಸಿದ್ದ..!

ಈ ನೆಲ,ಈ ಗಾಳಿಯಲಿ,ನಾಟಿಗ್ಯೆಯಲು..

ಅದೆಷ್ಟೋ ರಾಮರಾಜ್ಯದ ಹೊಂಗನಸುಗಳು...!!


ಈಗ ನನ್ನೊಡೆಯನಿಲ್ಲ...

ಇದ್ದರೂ,ನಿಮ್ಮ ದಾಹಕ್ಕಾಗಿ

ಕ್ಷಮಿಸುತ್ತಿರಲಿಲ್ಲ...?!

ಕಾರಣ.......

ದು;ಶ್ಶಾಸನರನ್ನು,ರಾವಣರನ್ನು..

ಹೆತ್ತಿದ್ದು ನಾನೇ......!!

ಕುಂಕುಮವಳಿದ ಹಣೆಯಲ್ಲಿ..

ರಕ್ತದ ಓಕುಳಿ...

ನನ್ನೆರಡು ಕೆಯ್ ಗಳು..

ಅತ್ಯಾಚಾರ,ಬ್ರಷ್ಟಾಚಾರದಲಿ ಬಂದಿ...

ವಾತ್ಸಲ್ಯದ ರಂಗಿನ ಪತ್ತಲ ಕಳಚಿ...,

ಬಿಳಿ ಸೀರೆ ತೊಡಿಸಿ,...ಆಟ್ಠಾಸಗಯ್ ಯುವ ನೀವು...

ನನ್ನ ಒಡಲಿಗೆ ಕಿಚ್ಚು ಹಚ್ಚುವ ಕೊೞಿಗಳು,

ನನ್ನವೆಂದು ಹೇಳಲಾಗದೆ

ಮೂಕಿಯಾಗಿರುವೆ....!!!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Rajendra Kumar ... on
ಆತ್ಮೀಯ ರಾಬಿಯ ಅವರೆ, ತುಂಬಾ ಮಾರ್ಮಿಕವಾದ ಕವನ. ಬಹಳ ಇಷ್ಟವಾಯಿತು. ನಮ್ಮವರದೇ ಅಟ್ಟಹಾಸದ ನಡುವೆ ನಾವು ಹೀಗೆಯೇ ಮೂಕವಾಗುತ್ತ ಹೋದರೆ, ಮುಂದೆ ಕುರುಡ, ಕುಂಟ, ಕಿವುಡ ಮತ್ತೆ ಎಲ್ಲವನ್ನು ಮೀರಿ ಜೀವಂತ ಹೆಣವಾಗಬೇಕಾಗುತ್ತೆ. ಮೂಕವಾಗುತ್ತೇನೆ ಎನ್ನುತ್ತಾ ಜನರಿಗೆ ಎಚ್ಚರಿಸುವ ಧ್ವನಿಯಾಗಿದ್ದಿರಿ. ಕವನ ಹಂಚಿಕೊಂಡಿದಕ್ಕೆ ಧನ್ಯವಾದಗಳು. ಕಾರಣ....... ದು;ಶ್ಶಾಸನರನ್ನು,ರಾವಣರನ್ನು.. ಹೆತ್ತಿದ್ದು ನಾನೇ......!! ವಾತ್ಸಲ್ಯದ ರಂಗಿನ ಪತ್ತಲ ಕಳಚಿ..., ಬಿಳಿ ಸೀರೆ ತೊಡಿಸಿ,...ಆಟ್ಠಾಸಗಯ್ ಯುವ ನೀವು... ನನ್ನ ಒಡಲಿಗೆ ಕಿಚ್ಚು ಹಚ್ಚುವ ಕೊೞಿಗಳು, ನನ್ನವೆಂದು ಹೇಳಲಾಗದೆ ಮೂಕಿಯಾಗಿರುವೆ....!!!

Submitted by gurudutt_r on
ನಿಮ್ಮ ಕವನದ ಸಾಲುಗಳು ತುಂಬಾ ಹಿಡಿಸಿದವು. ನನ್ನ ಒಂದು ಕೋರಿಕೆ: ತಾಯಿಯ ಬಗ್ಗೆ ಬಹಳಷ್ಟು ಕವನಗಳನ್ನು ಓದಿದ್ದೇನೆ, ಆದರೇ ತಂದೆಯ ಮೇಲಿನ ಕವನಗಳು ತೀರ ಕಡಿಮೆ. ದಯವಿಟ್ಟು ಯಾರಾದರೂ ಒಂದು ಪ್ರಯತ್ನ ಮಾಡುವಿರಾ? ವೀಣಾ, ರಾಜೇಂದ್ರಕುಮರ್ ರಾಯ್ಕೋಡಿ, ಮಧುಸೂಧನ್, ಸಂತೋಶ್ ಕುಮಾರ್, ರಾಬಿ, ಜಯಂತ್ ರಮಾಚಾರ್ ಹಾಗು ಗೊಪಾಲ ಕೃಷ್ಣ ಭಟ್ರೆ...ಏನಂತೀರಾ?

Submitted by vidyakumargv on
ಸಮಾಜದಲ್ಲಿ ವಿಧವೆಯರ ಪಾಡನ್ನು ಮಾರ್ಮಿಕವಾಗಿ ತೋರಿಸುವ ಒಂದು ಒಳ್ಳೆಯ ಕವನ ಚೆನ್ನಾಗಿದೆ..

Submitted by mmshaik on
ವಿದ್ಯಾಕುಮಾರ್ ಅವರೆ ನಮಸ್ಕಾರ. ತಮ್ಮ ಪ್ರತಿಕ್ರಿಯೆಗೆ ನಾನು ಆಭಾರಿ.ಸ್ವಾತಂತ್ಯ್ರೋತ್ಸವದ ಶುಭಾಶಯಗಳು.

Submitted by S.NAGARAJ on
ಆತ್ಮೀಯ ಎಮ್ ಎಮ್ ಷೇಕ್ ರವರೆ, ಇಂದಿನ ಭಾರತ ಮಾತೆಯ ದು:ಸ್ಥಿತಿಯನ್ನು ಮಾರ್ಮಿಕವಾಗಿ ಚಿತ್ರಿಸಿದ್ದೀರಿ. ಶುಭವಾಗಲಿ.

Submitted by mmshaik on
ನಾಗರಾಜ್ ಅವರೆ ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದ.ಸ್ವಾತಂತ್ಯ್ರೋತ್ಸವದ ಶುಭಾಶಯಗಳು.

Submitted by mmshaik on
ಆತ್ಮೀಯ ರಾಜೇಂದ್ರ ಅವರೆ ನಮಸ್ಕಾರ. ತುಂಬು ಮನದ ಪ್ರತಿಕ್ರಿಯೆಗೆ ನಾನು ಆಭಾರಿ.ಧನ್ಯವಾದಗಳು.

Submitted by dayanandac on
ನಿಮ್ಮ ಈ ವಿಭಿನ್ನ ವಿಸ್ಲೇಶಣೆ ಗಮನಸೆಳೆಯುತ್ತೆ ಯಾದರೊ, ವಿಧವೆ ಮತ್ತು ಕನ್ಯೆ ಎರಡೊ ಸ್ವಾತಂತ್ರ್ಯದಂಥ ವಿಛಾರಕ್ಕೆ ಒಳಗೊಳ್ಳುವ ಸಬ್ಧಗಳೇ ಎನ್ನುವ ಪ್ರಶ್ನೇ ಕಾಡುತ್ತೆ. ಏಕೆಂದರೆ ಕನ್ಯೆ ಮತ್ತು ವಿಧವೆ ಎನ್ನುವ ಪದಗಳು ಸ್ವಾತಂತ್ರ್ಯದಂತಹ ಘನ ವಿಛಾರ ಮತ್ತು ಹೋರಾಟಗಳನ್ನ ವಿಶ್ಲೇಸುವಾಗ ಉಡಾಫೆಯ ಪದಗಳಾದವ‌ ಎನ್ನುವ ಅನುಮಾನಕ್ಕೆ ಏಡೆ ಮಾಡಿದರೊ, ಮತ್ತೆ ವಿಭಿನ್ನ ವಿಛಾರಧಾರೆಯಲ್ಲಿ ಯೋಚಿಸಲು ಮುಕ್ತವಾದ್ದರಿಂದ ಸರಿ ಇರಬಹುದೇ ಎನ್ನುವ ಅನುಮಾನಕ್ಕೊ ದೊಡುತ್ತೆ.

Submitted by mmshaik on
ಆತ್ಮೀಯ ದಯಾನಂದ ಅವರೆ, ರವಿ ಕಾಣದ್ದನ್ನು ಕವಿ ಕಾಣುತ್ತಾನೆ..ಇದು ಕುವೆಂಪು ಅವರ ವಾಣಿ.ಈ ಕವನ ಸುಮಾರು ಹದಿನ್ಯೆದು ವರ್ಷಗಳ ಹಿಂದೆ,ದಲಿತ ಸಂಘರ್ಷ ಸಮಿತಿ ಬೆಂಗಳೂರು ಅವರು ಏರ್ಪಡಿಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿತ್ತು...ಇದಕ್ಕೆ ದಲಿತ ಕವಿ ಶ್ರೀ ಸಿದ್ದಲಿಂಗಯ್ಯ ಅವರು ತೀರ್ಪುಗಾರರಾಗಿದ್ದರು.ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by dayanandac on
ಈ ಕವನವನ್ನ ಮೆಚ್ಚಿ ಹಿರಿಯ ದಲಿತ ಕವಿ ಸಿದ್ದಲಿಂಗಯ್ಯನವರ ಪ್ರಶಂಸೆ ಪಡೆದಿದ್ದನ್ನ ಕೇಳಿ ಸಂತಸವಾಯ್ತು ಮತ್ತು ನಿಮ್ಮೊಳಗಿನ ಕವಿಗೆ ಆ ಸೆಳೆಯುವ ಸೆಲೆ ಇದೆ, ಅದನ್ನ ಒಪ್ಪುತ್ತೇನೆ. ನಾನು ನನ್ನ ಅನಿಸಿಕೆ ಅಭಿಪ್ರಾಯಗಳನ್ನ ಮುಕ್ತವಾಗಿ ಮುಚ್ಚು ಮರೆ ಇಲ್ಲದೆ ಹೇಳಿದ್ದೇನೆ, ಅದಕ್ಕೆ ನಿಮ್ಮ ಉತ್ತರವನ್ನ ತುಂಬಾ ಮುಕ್ತವಾಗಿ ನೀಡಿದ್ದೀರಿ. ಅಬ್ಹಿನಂದನೆಗಳು ದಯಾನಂದ‌

Submitted by veena wadki on
ಕವನ ಚೆನ್ನಾಗಿದೆ, ಅಭಿನಂದನೆಗಳು.

Submitted by mmshaik on
ವೀಣಾ ಅವರೆ ನಮಸ್ಕಾರ. ಅನಿಸಿಕೆಗೆ ಧನ್ಯವಾದ, ರಮಜಾನ್ ಹಬ್ಬದ ಶುಭಾಶಯಗಳು.

Submitted by mmshaik on
ಗುರುದತ್ ಅವರೆ ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದ...ತಂದೆಯ ಬಗೆಗೆ ನಾನಂತೂ ಬರೆಯಲೇಬೇಕು....!!ಗಮನ ಸೆಳೆದದ್ದಕ್ಕೆ ಆಭಾರಿ! ಸಂಪದಿಗರೆಲ್ಲರಿಗೂ ರಂಮಜಾನ್ ಹಬ್ಬದ ಶುಭಾಶಯಗಳು.......

Submitted by gurudutt_r on
ಪದ್ಯಕ್ಕಾಗಿ ಕಾಯುತ್ತಿರುತ್ತೇನೆ... ರಂಜಾನ್ ಹಬ್ಬದ ಶುಭಾಶಯಗಳು