ವೇದಾಂತ ಸಾರ
ಕವನ
ಶ್ರೀಶಂಕರ ವೇದಾಂತ ಉಪನಿಷತ್ತ್ ಸಾರ
ಅವಿದ್ಯೆ ಅಹಂಕಾರ ಮಮಕಾರ
ಚಂಚಲ ವ್ಯಾಕುಲ ಮನ ಸ್ಪಂದನ ಬಂಧನ
ಪಂಚೇಂದ್ರಿಯಗಳ ನಿಗೂಡ ಪಾಶ ಆವರಣ.
ಜಾಗೃತಿ ಸ್ವಪ್ನ ಸುಷುಪ್ತಿ
ಈ ವಿಷ ಚಕ್ರವ್ಯೂಹವ ಬೇಧಿಸಿ
ಅಂತರ್ ಮುಖಿಯಾಗಬೇಕು ಸಮಾಧಿ ಸ್ಥಿತಿಗೆ
ಮನವರಿಕೆಯಾಗಲು ಆ ನಿತ್ಯಜ್ಯೋತಿ ಸ್ವರೂಪ !
ನಡಯಬೇಕು ವ್ಯಕ್ತದಿಂದ ಅವ್ಯಕ್ತಡೆಗೆ
ಅನಿತ್ಯದಿಂದ ನಿತ್ಯದೆಡೆಗೆ
ರೂಪದಿಂದ ಅರೂಪದೆಡೆಗೆ
ಲೀನವಾಗಲು ಆತ್ಮ ಪರಮಾತ್ಮನಲಿ
ಶುಧ್ದ ಬುಧ್ದ ಅನಂತ ಸಾಗರದಲಿ
ಅನುಭವಿಸಲು ಪ್ರಶಾಂತಿ ಆನಂದ ಅನಾವರಣ.
ಶ್ರೀ ನಾಗರಾಜ್.
- Log in to post comments