September 5, 2011 - 4:05pm
ಜ್ಞಾನ ಜ್ಯೋತಿ ಬೆಳಗಲಿ ನಿನ್ನೇದೆಯ
ಅಮೃತ ದೇಗುಲ ಗುಡಿಯೊಳಗೆ ಶಿಕ್ಷಕ
ಚಿಣ್ಣರವೆಂಬ ಶಿಲೆಗೆ ಕಲಾಕೃತಿಯ
ಮೆರಗಿನ ಹೊಂಬಣ್ಣದ ಬೆಳಕು ತುಂಬು ಬಾ ಶಿಕ್ಷಕ.
ಅರಳುವ ಹೊಸಕಾಂತಿಯ ಮೊಗ್ಗಿನ
ಶಿಶುವಿಗೆ ನೀ ಬೇರು ಆಗು ಶಿಕ್ಷಕ
ನಿನ್ನ ಆಸರೆಯೊಳಗೆ ಘಮಗಮಿಸುವ ನಿನ್ನ
ಶ್ವೇತ ಪುಷ್ಪವ ಅರಳಿಸು ಬಾ ಶಿಕ್ಷಕ.
ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಶಿಕ್ಷಕ