ಬೆಳಗಿನ ಬೆಂಗಳೂರಿನ ಚಳಿಯ ಹಿನ್ನೆಲೆಯಲ್ಲಿ ಮನದನ್ನೆ ಕೊಟ್ಟ ಮನೆಯಲ್ಲಲ್ಲದೇ ಬೇರೆಲ್ಲೂ ಸಿಗದ ಸೊಗಸಾದ ಕಾಫಿಯನ್ನು ಗುಟುಕರಿಸುತ್ತಿದ್ದೆ. ನಿನ್ನೆಯ ಕುವೆಂಪುರವರ ಉದಯರವಿ ದರ್ಶನಮ್ ನ ಅಭ್ಯಾಸದ ಗುಂಗಿನಲ್ಲಿ ಪ್ರಭು ಶಂಕರರವರು ತಮ್ಮ ಮರೆವಿನ ಪ್ರಸಂಗವನ್ನು ತನ್ನ ಮೇಲೆಯೇ ಹಾಸ್ಯ ಮಾಡಿಕೊಂಡು ನಗುವುದನ್ನು ನೆನಪಿಸಿಕೊಂಡು.
ಬೆಳಿಗ್ಗೆಯೇ ಅವರನ್ನು ಮನೆಯವರು ಜ್ಞಾಪಿಸಿದರಂತೆ. ಇವತ್ತು ನಿಮಗೆ ಒಂದು ಕಾರ್ಯಕ್ರಮವಿದೆ,ಎಚ್ಚೆಸ್ವೀಯವರೂ ನರಹಳ್ಳಿಯವರೂ ಬರ್ತಾರೆ, ಅಂತ ಇಲ್ಲ ನನಗೆಲ್ಲ್ಯೂ ಹೋಗಲಿಕ್ಕಿಲ್ಲ ಎಂದರಂತೆ ಇವರು.ಇಲ್ಲ ನಿಮಗೊಂದು ಕಾರ್ಯಕ್ರಮವಿದೆ ಅವರೇ ಬಂದು ನಿಮಗೆ ಕಾಯುತ್ತಿದ್ದಾರೆ ಹೊರಗೆ ಎಂದು ಇನ್ನೊಮ್ಮೆ ಜ್ಞಾಪಿಸಿದರಂತೆ. ನನ್ನ ಪ್ರಕಾರ ಏನೂ ಇಲ್ಲ ಆದರೂ ಬಂದವರು ಯಾರು ಎಂದು ನೋಡಲು ಹೊರಗೆ ಬಂದರೆ ಶ್ರೀಯುತ ಮಹೇಶರು ಕಂಡರು.( ಇವರ ಮನೆಯಲ್ಲೇ ಮೊನ್ನೆಯ ಅಭ್ಯಾಸ ಆಗಿದ್ದುದು,) ಆಗ ನೆನಪಾಯಿತಂತೆ ಹೌದು ಅಂತ. ಹೀಗೆ ತನ್ನ ಮರೆಗುಳಿತನ ತನಗೇನೂ ತೊಂದರೆ ಕೊಡೋದಿಲ್ಲ ತೊಂದರೆಯೆಲ್ಲ ಉಳಿದವರಿಗೆ ಎಂದು ಹೇಳಿ ನಕ್ಕಿದ್ದರು.
ಏನೂ ಇದೂ ಶುರುವಾಯ್ತಾ ಏನು ಒಬ್ಬರೇ ನಗಾಡ್ತಾ ಇದ್ದೀರಲ್ಲಾ, ಕಾಫಿಯಲ್ಲಿ ನನಗೂ ಪಾಲು ಉಳಿದಿದೆಯಾ ಅಥವಾ ಅದೂ ನೈವೇಧ್ಯವಾ? ಎನ್ನುತ್ತಾ ಬಂದಳು ಮಡದಿ.
Read more about ಶೀನ, ಕನ್ನಂತರು ಹಾಗೂ ಹಂಸಾ ನಂದಿಯವರ ಹಂಸನಾದದ ಬಿಡುಗಡೆನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: