18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕವನ

ನನ್ನೊಬ್ಬನನ್ನೇ ಬಿಟ್ಟು,,,,,

June 8, 2009 - 5:00pm
Seetharmorab
ಅವಳು ಹೋಗಿಯೇ ಬಿಟ್ಟಳೆಂದರೆ ನಂಬುವುದೇ ಕಷ್ಟ ದೇವರಿಗೂ ಅವಳೆಂದರೆ ಬಲು ಇಷ್ಟ ತರಕಾರಿ ಮಾರುಕಟ್ಟೆಗೂ ಜೊತೆ ಜೊತೆಯಲಿ ಆಗಿಲ್ಲ ಅವಳ ಮುಖದಲ್ಲಿ ಗಲಿಬಿಲಿ ಊರೆಲ್ಲಾ ಸುತ್ತಲು ನಾನಿರಬೇಕು ಪಕ್ಕ ರಸ್ತೆ ದಾಟುವಾಗ ನೋಡುವುದೇ ಇಲ್ಲ ಅಕ್ಕ ಪಕ್ಕ ಜನ ಜಂಗುಳಿಯೆಂದರೆ ಮುಖ ಕಿವಿಚುತ್ತಾ ಖುಷಿಯಿಂದ ಪ್ರಕ್ರುತಿ ಸೌಂದರ್ಯವ ಆಸ್ವಾದಿಸುತ್ತಾ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕಾಲದ ನದಿಯ ಹರಿವು

June 18, 2009 - 12:06pm
pralekha

ನಿಲ್ಲದು ಕಾಲದ ನದಿಯು ಯಾರಿಗೂ
ನಿಗೂಢ ಬೆಟ್ಟದಿ ಭೋರ್ಗರೆದು
ಝುಳುಝುಳುನೆ ರಭಸದಿ ಹರಿದು
ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..

field_vote: 
Average: 4.1 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ನಗೆ ಬಗೆ ಬಗೆ

June 20, 2009 - 5:38am
mavipra
ನಗೆ ಬಗೆ ಬಗೆ! ನಗುವಿಗುಂಟು ಸಾವಿರ ರೂಪ ನಗುವಿಲ್ಲದ ಮುಖ ವಿರೂಪ ನಗುವಿನ ದ್ವೇಶಿ ಕೋಪ ನಕ್ಕು ನಗಿಸು(ವವ) ಬಾಳಭೂಪ! ಗಹಗಹಿಸಿ ನಗುವರು ಕಿಕ್ಕರಿಸು ನಗುವರು ಹನಿಭಾಷ್ಪಸುರಿಸಿ ಕೆಲರು ನಗುವರು ತನು ಕುಣಿಸಿ ನಗುವರಿತರರು ಓಬ್ಬೊಬ್ಬರು ಒಂದೊಂದು ರೀತಿ ತಬ್ಬಿ ತಮಗೆ ತಕ್ಕ ಸಹಾಯಕ ಚಾತಿ ನಗು ನೋಡಿ ನಗುವ ರೀತಿ ನಗುವಿಗಾಗ ಬಹು ಬಾಳಿನ ಜ್ಯೋತಿ
field_vote: 
No votes yet
To prevent automated spam submissions leave this field empty.
ಸರಣಿ: 
ಲೇಖನ ವರ್ಗ (Category): 

ಶುಭಾಶಯಗಳ ಆಕಾಂಕ್ಷೆ

June 20, 2009 - 6:05am
mavipra
ಶುಭಾಶಯಗಳ ಆಕಾಂಕ್ಷೆ * ಶುಭಾಶಯಗಳು ನೀರೀಕ್ಷಣೆಗಳು ಆಸೆನಿರಾಶೆಗಳು ಸುಕದುಃಖಗಳು ಹಗಲುರಾತ್ರಿಗಳಂತೆ ಸತತ ಜೊತೆ ಎಡಬಿಡದ ಮಾನವತೆಯ ಚರಿತೆ! ** “ಪ್ರೀತಿ, ಮಮತೆಯ ರಂಗು ಇದ್ದರೆ ಸಾಕು, ಪ್ರತಿ ಗಳಿಗೆ“ - (ಅ.ಕ.ಡೊಂಗ್ರೆ) ** ಇವೆಲ್ಲಾ ಶುಭಾಶಯಗಳನ್ನು ಆಶಿಸುವುದು ಇನ್ನೆಲ್ಲಾ ಸೊಗಸಿನ ಬಾಳನ್ನು ಭಾವಿಸುದು ಎಲ್ಲಾ ಕಾಲಗಳಿಗೆ, ಬರುವೆಲ್ಲಾ ಭವಿಷ್ಯಗಳಲಿ
field_vote: 
No votes yet
To prevent automated spam submissions leave this field empty.
ಸರಣಿ: 
ಲೇಖನ ವರ್ಗ (Category): 

ಮನದಾಳದ ಮಾತು ಹಾಡಾಯ್ತು

June 23, 2009 - 8:47pm
Channakeshava.C
ಕಣ್ಣಿಗೆ ಕಾಣದ್ದು ನನ್ನ ಮನದಾಳದ ಮಾತು, ಮಾತು ಮರೆತೋಯ್ತು, ಮೌನ ಮಾತಾಯ್ತು ನನಗೇಕೆ ಇಂದು ಹೀಗಾಯ್ತು, ಯಾರೋ ಮನದಲಿ ಬಂದು ಗುನುಗಿದ ಹಾಗಾಯ್ತು, ಆ ಮಾತಿನ ಗುಂಗಲಿ ನನ್ನನು ನಾನು ಮರೆತಾಯ್ತು, ಯಾಕೀದಿನ ನನಗೆನಾಯ್ತು - ಮನದಾಳದ ಮಾತು ಹಾಡಾಯ್ತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ತುಂತುರು ಮಳೆ ಹನಿ

June 23, 2009 - 8:54pm
Channakeshava.C
ಎಲ್ಲೆಲ್ಲು ತುಂತುರು ಮಳೆ ಹನಿ ಅಲ್ಲಲ್ಲಿ ಹಚ್ಚ ಹಸಿರಿನ ಎಲೆ ಮೇಲೆ ಮಳೆ ಹನಿಯ ಇಬ್ಬನಿ ನೊಂದ ಮನಗಳಿಗೆ ನೋವ ಮರೆಸಲಿ ಈ ಜೇನಿನ ಹನಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

The Love Song of J Alfred Prufrock

November 13, 2009 - 11:24pm
vijay

ಆಂಗ್ಲ ಭಾಷೆಯ ಶೀರ್ಷಿಕೆಗೆ ಕ್ಷಮೆಯಿರಲಿ...

 

T S Eliot ಬರೆದಿರುವ ಈ ಕಾವ್ಯ ಯಾವಾಗಲೂ ನನಗೆ ಒಂದು ಒಗಟಿನಂತೆ ಕಾಡುತ್ತಿತ್ತು. ಅವರ ಎಲ್ಲ ಸುಮಾರು ಕವಿತೆಗಳು ನನಗೆ ಯಾವಾಗಲು ತುಂಬಾ ಇಷ್ಟವಾದಂತಹವುಗಳು ಇದಂತೂ ತುಂಬಾ ದೊಡ್ದ ಪದ್ಯ - ಮೊದಲನೇ Stanza..ನನಗೆ ತಿಳಿದ ಮಟ್ಟಿಗೆ ಕನ್ನಡಕ್ಕೆ ಭಾಷಾಂತರ ಮಾಡಲು ಪ್ರಯತ್ನ ಪಟ್ಟೆ......ಅದರ ಫಲಿತಾಂಶ ಈ ರೀತಿ ಇದೆ..

ಚೆನ್ನಾಗಿದೆ ಅಂತ ಅನ್ನಿಸಿದರೆ ಮುಂದುವರಿಸುವ ಪ್ರಯತ್ನ ಮಾಡುವೆ...

for original version please visit

http://www.bartleby.com/198/1.html

 

ಕನ್ನಡ ಭಾವಾನುವಾದ....

 

" Read more about The Love Song of J Alfred Prufrock

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

December 19, 2009 - 10:11pm
manju787

ನೀ ಹೀಗೇಕೆ ಕಾಡುತಿರುವೆ ಪ್ರಿಯೆ!
ಅದೆಂದೋ ಮುಗಿಯಿತಲ್ಲ ಕಥೆ,
ಇದೇನಿದ್ದರೂ ನೆನಪುಗಳ ವ್ಯಥೆ,
ನಾನಿಲ್ಲಿ, ನೀನಲ್ಲಿ, ದೂರ ತೀರದಲ್ಲಿ,
ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!

ಅದೆಷ್ಟು ವರ್ಷಗಳು ಜಾರಿದವು,
ಅದೆಷ್ಟು ಊರುಗಳು ಬದಲಾದವು,
ಅದೆಷ್ಟು ಋತುಗಳು ಬಂದು ಹೋದವು,
ಅದೆಷ್ಟು ನಿಟ್ಟುಸಿರು, ಅದೆಷ್ಟು ಕಂಬನಿ,
 ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!

ನಾ ಮೊದಲೋ ನೀ ಮೊದಲೋ ನಾನರಿಯೆ,
ಆದರೆ ಇಬ್ಬರೂ ದಾಟಿಹೆವು ಸಾಗರವ,
ನಾನೊಂದು ತೀರದಿ, ನೀ ಇನ್ನೊಂದು ತೀರದಿ,
ಸೇರುವುದು ಮತ್ತೆ ಕನಸಿನ ಮಾತೇ ಸರಿ,
ಆದರೂ ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

ಓಡುವ ಕಾರಲಿ, ಮಾಡುವ ಕೆಲಸದಲಿ Read more about ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಒಂದು ಎರಡು ಬಾಳೆಲೆ ಹರಡು..

January 20, 2010 - 11:34pm
abdul

ನನ್ನ ಮಗಳು "ಇಸ್ರಾ" ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು.  

ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ "ಅಹ್ಮದ್" ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ " ಅಯ್ಮನ್" ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

ಓ ಚೆಲುವೆ, ಕೊಲ್ಲುವೆಯಾ ಒಲವ, ಹುಟ್ಟುವ ಮೊದಲೇ?!

February 9, 2010 - 11:48pm
ಸಂಗನಗೌಡ

ಓ ಹುಡುಗಿ, ನಾನು ಮೊದಲೇ ನಾಚುಬುರುಕ,

ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?!

ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ

ಗುಂಡಿಗೆಯ ಏರಿಳಿತವ!?

ನಿನ್ನ ಮೊಗವ ದಿಟ್ಟಿಸಿ ನೋಡಿದರೆ,

ಮುಖ ತಿರುಗಿಸಿ ಹೋಗದಿರು ಗೆಳತಿ.

ಚಿಗುರುತ್ತಿರುವ ಎಲೆಯ ಚಿವುಟುವ

ಆಸೆ ನಿನಗದೇಕೆ!?

ಹೊರಚೆಲುವಿಗೆ ಮನ ಸೋಲುವ

ಮೂಳ ಅಂತ ಜನ ಬೈದುಕೊಂಡರೂ

ಚಿಂತೆಯಿಲ್ಲ, ’ಮುಂಗಾರು ಮಳೆ’ಯ

ಗಣೇಶನಂತೆ ಒಳ್ಳೇ ತರದಿ

ಮಾಡುವೆ ಬಾಳ್ವೆಯ!

ಈ ನೇರ, ಸರಳ ಮನದಿಂಗಿತ

ತಿಳಿದು, ಹೇಳದಿದ್ದರೂ ಒಳಭಾವ

ನೀನೇ ಇಣುಕಿ ನೋಡಿ,

ಕಣ್ಣಿನೊಂದಿಗೆ ಕಣ್ಣನೊಮ್ಮೆ

ಬೆಸೆದು, ನಗು ಬೀರಬಾರದೇ?!

ಮಾತಾಡುವ ಧೈರ್ಯ ಮಾಡಿ

ನಾ ಬಂದರೆ, ನಾಚಿ ನೆಲ Read more about ಓ ಚೆಲುವೆ, ಕೊಲ್ಲುವೆಯಾ ಒಲವ, ಹುಟ್ಟುವ ಮೊದಲೇ?!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಣ್ಣಿನ ಶಬ್ದ

February 18, 2010 - 11:48pm
bhatkartikeya

ನೋಡು ಅಲ್ಲಿ ಒಂದು ಕನಸಿನ
ಕಳೇಬರವ ಹೂಳಲಾಗಿದೆ
ಮೋಡ ಚೆಲ್ಲಿ ಇಂದು ಬಿರುಸಿನ
ಮಳೇಬರುವ ವೇಳೆಯಾಗಿದೆ

ಬಿದ್ದ ರಭಸಕೆ
ಎದ್ದು ಕೂತು
ಸುದ್ದಿ ಮಾಡುವುದೇ ಈ ಸ್ವಪ್ನ?

ಖಾಲಿಪುಟದಲಿ ಗೀತೆಯೊಂದನು
ಬರೆದು ಬರೆದು ಅಳಿಸಲಾಗಿದೆ
ಬಾನಿನಂಚಲಿ ನೋಡುತಿದ್ದೆನು
ಕವನವೊಂದು ಮಿಂಚಿ ಹೋಗಿದೆ

ಗೀಚಿದ ಸಾಲಿನ
ಸೂಚಿತ ಅರ್ಥಕೆ
ಈಚೆಗೆ ಬರಬಹುದೇ ಈ ರಾಗ?

ಶಶಿಯ ವದನದ ಕಲೆಯ ಕಾಂತಿಯು
ಮೂಕಮನದಲಿ ಸ್ತಬ್ಧವಾಗಿದೆ
ಋಷಿಯ ಮೂಲದ ಮೂಲೆಯಲ್ಲಿ
ಕರಿಯ ಗುಡುಗಿನ ಶಬ್ಧವಾಗಿದೆ Read more about ಕಣ್ಣಿನ ಶಬ್ದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ

April 20, 2010 - 7:45pm
ಸಂಗನಗೌಡ

ಡಾಕ್ಟರ್ ರಾಜ್ ಅಭಿಮಾನಿಗಳ ಸಂಘ ಅಂತ ಹೇಳಿಕೊಂಡು

ಊರ ತುಂಬ ಅಂಟಿಸಿರುವ ಪೋಸ್ಟರ್‌ನಲ್ಲಿ ಅಣ್ಣಾವ್ರ ಚಿಕ್ಕ ಫೋಟೋ

ಒಬ್ರು ಗೊತ್ತಿಲ್ಲದವರ ದೊಡ್ಡ ಫೋಟೋ ನೋಡ್ತಾ ಇದ್ದಾಗ...

ಪಕ್ಕದಲ್ಲೇ ಕಂಡಿತು "ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ"

ಅನ್ನುವ ಯಾವುದೋ 1000 ಅನ್ನುವ ಗುಟಕಾ ಜಾಹೀತಾಥು!! Read more about ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಅಮ್ಮ

May 4, 2010 - 9:11pm
pavithrabp

ಅಮ್ಮ
 ನೆರಿಗೆ ಲಂಗ ಚಿಮ್ಮಿಸಿಕೊಂಡು
ಓಡಾಡಿಕೊಂಡಿದ್ದ ಸಮಯ,
ವಯಸ್ಸು ತಿಳಿಯುವ ಮೊದಲೇ ,
ಕೊರಳಿಗೆ  ಮೂರು ಗಂಟು,

ಅವಳಿಗೆನಾಗಿತ್ತು ಅಂತ ಮಹಾವಯಸ್ಸು ,
ಆಡಿಸಿ,ಕೂಡಿಸಿ ,ಕಳೆದರೆ ಈಗಿರುವ ನನ್ನ
ವಯಸ್ಸಿಗಿಂತ ಮೂರು ನಾಲಕ್ಕು ವರ್ಷ
ಹೆಚ್ಚು....

ವಿಧಿಗೆ ಅಪ್ಪ ಬಹಳ ಇಷ್ಟವಾಗಿದ್ದ,
ಗೊತ್ತಿಲ್ಲ ಗುರಿಯಿಲ್ಲ ಹೇಳದೆ ಕೇಳದೆ
ಬಾರದ ಲೋಕಕ್ಕೆ ಹೋಗಿಬಿಟ್ಟ.

ಅಮ್ಮನ ಬಗಲಲ್ಲಿ ಎಳೆಯ ಕಂದಮ್ಮಗಳು ....
ಬದುಕೇ ದುಸ್ತರವಾಗಿರುವಾಗ
ಬದುಕಿನ ದಾರಿ ಕಣ್ಣಿಗೆ
ನಿಲುಕದಷ್ಟು ದೂರ.....
Read more about ಅಮ್ಮ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ವಿವಾಹ ಮತ್ತು ಮರೀಚಿಕೆ

May 10, 2010 - 9:47pm
gopinatha

ವಿವಾಹ


ಅಲ್ಲಿ

ಇಲ್ಲಿ
ಸ್ವಚ್ಚಂದವಾಗಿ
ಈಸುತ್ತಿದ್ದ

ಮೀನು
ಕೊನೆಗೂ
ಸಿಕ್ಕೇ
ಬಿಡ್ತು

ಗಾಳಕ್ಕೆ



ಮರೀಚಿಕೆ

ಇಲ್ಲಿಲ್ಲ
ಚೇತೋಹಾರೀ
ವನವಿಹಾರ

ನನ್ನ
ಸುಂದರ
ಕನಸುಗಳೇ
ನೀವೇ
ಜತೆಯಾಗಿ
ಹಸಿರಾಗಿ


Read more about ವಿವಾಹ ಮತ್ತು ಮರೀಚಿಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವ

May 20, 2010 - 6:24pm
gopinatha
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಆಗಬೇಕಿದೆ....ನನ್ನ.. ರೂಪಾಂತರ

May 23, 2010 - 6:52pm
gopinatha


ಬೆಳೆಯಬೇಕಿದೆ ನಾನು
ಪ್ರತಿ ಕಣದ ಅವಸ್ಥೆಯ ಮೀರಿ
ಸಂಭಂಧಗಳ ಕ್ಷಿತಿಜವ ಹಾರಿ
ಸಾಗಬೇಕಿದೆ
ಬಹು ದೂರದ ದಾರಿ

ಯಾರದೋ ಕಾಳಜಿಯ ಕಕ್ಕುಲತೆಯ ಭಾವದ
ಸನಿಹದಲ್ಲಿಯೇ ತಾಕುವ ಸುಗಂಧ
ಹಸೀ ಅವಸ್ಥೆಗೆ ಬಸಿವ ಅನುಭವ
ನಿರ್ಲಿಪ್ತತೆಯ ತಲ್ಲಣದ ಪ್ರತಿ ಕ್ಷಣ,
ನಾಳೆಯ ನಿನ್ನೆಯ ನೆನಪೆಲ್ಲವ
ಆವರಿಸೋ ಭಯ

ರಸಾನುಭೂತಿಯೇ ತಾಕದೇ
ಸಂಬಂಧ ಘಾಸಿ ಮಾಡದೇ
ನನ್ನನ್ನೇ ದಹಿಸ ಬೇಕಿದೆ
ಮೌನ, ಶ್ಶಬ್ದ, ನಿರ್ವಾತ
ಬದಲಾವಣೆ ಆಗಬೇಕಿದೆ
ನಿಕ್ಷಿಪ್ತ, ನಿರ್ಲಿಪ್ತ ,ನಿಗೂಢ,  
ಜಯಿಸಿ
ರೂಪಾಂತರ Read more about ಆಗಬೇಕಿದೆ....ನನ್ನ.. ರೂಪಾಂತರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಸರಣಿ: 

ಕವನ ಬರೆಯುವ ಕನಸು!!!

May 27, 2010 - 5:58pm
ksraghavendranavada

ಶಾಯಿ ಪೆನ್ನನು ಕೈಯಲ್ಹಿಡಿದು

ಕವಿತೆ ಬರೆಯುವೆನೆ೦ದು

ನಾ ಕುಳಿತಾಗ !! ಗೀಚುತ್ತಾ ಹೋದಾಗ?

ನೆನಪಾಯಿತೊಮ್ಮೆ ಆಸುಮನ!!

ಕಣ್ಣ ಮು೦ದೆ ಕಾಫೀ ಲೋಟ!

ಸಣ್ಣ ನಗುವಿನ ಸ೦ತೋಷ!

ಸದಾ ಹಸನ್ಮುಖದ ಗೋಪೀನಾಥಾ....

ತಲೆ ಅಲ್ಲಾಡಿಸಿದೆ ಇದೇನು ಕನಸೋ ಯಾ ನಿಜವೋ?

ಹೌದು! ಅಲ್ಲಲ್ಲ! ಎ೦ದಿತು ಮನಸೊಮ್ಮೆ!

ಮತ್ತೆ ಕಣ್ಣ ಮು೦ದೆ ಕ೦ದನ ಹಿಡಿದ ನಾಗರಾಜ?

ಕನ್ನಡಕದೊಳಗೇ ನಗುವ ಮ೦ಜುನಾಥಾ...!!

ಪಿಕಳಾರದೊ೦ದಿಗೆ ಹರ್ಷನೂ...

ಗುರ್ರೆನುತಲೇ ಶ್ರೀಹರ್ಷನೂ...!!!

ಯಾಕೋ ಇ೦ದು ಸರಿಯಿಲ್ಲ ಎ೦ತೆನಿಸಿ

ಕಣ್ಣು ಕೊಡವಿ ನೋಡಿದರೆ..

ಪೆನ್ನು ವಾಲಿ, ಶಾಯಿ ಖಾಲಿ! Read more about ಕವನ ಬರೆಯುವ ಕನಸು!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀ ಕಲಿಸಿದ ಪಾಠ

May 29, 2010 - 2:49am
gopinatha

 

 

ಹೌದಲ್ಲಪ್ಪಾ ಕಾಲ ಮಿಂಚಿದೆ

ನೀನೇ ತಾನೇ ಕಲಿಸಿದೋನು

ನಿಮ್ಮ ಸುಖಕ್ಕೆ ಅಡ್ಡಿ ಕೂಳಿಗೆ ದಂಡ

ಅಂತ ನಿನ್ನಪ್ಪ ಅಮ್ಮನ್ನ ಹೊರಹಾಕಿದೆ

ನನ್ನನ್ನ ಒಂಟಿ ಒಂಟಿಯಾಗಿ ಬೆಳೆಸಿದೆ

ಆಗ ನಿನಗೆ ನೆನಪಿಗೆ ಬರಲಿಲ್ಲವಲ್ಲ

ನೀ ಕಲಿಸಿದ ಪಾಠ ಇದೇ ತಾನೆ

 

ಪ್ರಕೃತಿಯಲ್ಲೇ ನೀನು ಕಲಿತ ಪಾಠ

ಹಿರಿಯರ ಪ್ರೀತಿ,ಕಿರಿಯರಸ್ನೇಹ,

ಹೊಂದಿ ಬಾಳುವ,ಹಂಚಿ ತಿನ್ನುವ ಗುಣ

ನೀನೆಷ್ಟು ನಿನ್ನ ಮಕ್ಕಳಿಗೆ ಕೊಟ್ಟೆ?

ಕಲಿಸಲು ನಿನಗೆ ಸಮಯವೆಲ್ಲಿತ್ತು? Read more about ನೀ ಕಲಿಸಿದ ಪಾಠ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಸರಣಿ: 

ಜೀವನವೇ ಸ೦ಕಲನ

May 31, 2010 - 12:59pm
ksraghavendranavada

ಕೂಡುವುದೂ ಬೇಡ, ಕಳೆಯುವುದೂ ಬೇಡ.

ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು,

ಅದಕ್ಕೇಕೆ ಭೀತಿ?

ಬಿರುಬಿಸಿಲು ಗ೦ಡಾ೦ತರ,

ಶೀತಲ ಸಮರಕೆ ನಾ೦ದಿ,

ನೀ ನಡೆಯುವ ಹಾದಿಯಲಿ ಕಲ್ಲು ಮುಳ್ಳು.

ಕೂಡುತಲೇ ಹೋದರೆ ಆಗುವುದು ಗ೦ಟು,

ನೀ ಬಿಡಿಸುವೆನೆ೦ದರೂ ಬಿಡಿಸಲಾಗದ ಕಗ್ಗ೦ಟು!

ಕಾಲದ ಕನ್ನಡಿಯಲ್ಲೊಮ್ಮೆ ಇಣುಕಿ ನೋಡು,

ಕಾಣುವುದು ನಿನ್ನ ಹೆಜ್ಜೆಯ ಜಾಡು!

ಬಿ೦ಬ-ಪ್ರತಿಬಿ೦ಬಗಳಲಿ

ಕಾಣದೇ ಪ್ರೀತಿಯ ಸಿ೦ಚನ?

ಏನನ್ನು ಮರೆತೆ ನೀನು?

ಹಾದಿಯೋ,ಪ್ರೀತಿಯೋ, ಕಾಲದ ಕನ್ನಡಿಯೋ?

ಮರೆಯಬೇಕು ಹಿ೦ದಿನದು,

"ಅರಿ ನೀ ಇಂದಿನದನು
ನಿನ್ನೊಳಗೇ ಗುಣಿಸಿಕೋ ಮುಂದಿನದನು

  Read more about ಜೀವನವೇ ಸ೦ಕಲನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಿರಿ ಕಿರಿ .......ಕವನಗಳು

June 3, 2010 - 8:42pm
naranamani

  ಸಾಕೇ.....ಬೇಕೆ

  ಸಾಕು ...ಎಂದರೆ  ಸಾಕೇ?

  ಬೇಕು  ....ಎಂದರೆ  ಬೇಕೇ ?

  ಸಾಕು ಎಂದರೆ ಸಾಕಾಗುವದಿಲ್ಲ!

  ಬೇಕು  ಎಂದರೆ  ಬೇಕಾಗುವದಿಲ್ಲ

  ನನ್ನ  ಈ  ಕಿರು ಕವನ ಓದಿ...

  ಸಾಕು....... ಬೇಕಾಯಿತಲ್ಲ !

  ಓಡಿ.....ಓಡಿ...!

  ಓಡಿ ಓಡಿ ಓಡಿ..

  ಗಾಡಿ ಬಂತು ಓಡಿ

  ಎಲ್ಲೂ ನಿಲ್ಲ ಬೇಡಿ

  ನಿಂತರೆ ಬದುಕು ರಾಡಿ

  Read more about ಕಿರಿ ಕಿರಿ .......ಕವನಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಅವಳ ಈ ಮನಸ್ಸೇ ಹೀಗೆ..

June 5, 2010 - 2:37pm
ಭಾಗ್ವತ

       ಅವಳ ಈ ಮನಸ್ಸೇ  ಹೀಗೆ...
       ಏನೆಲ್ಲ  ಹೂತಿಟ್ಟು  ಬೇಯಿಸುತ್ತದೆ.

       ಬಾಡಿಗೆ ಮನೆಯ ಮುರುಕು
       ಗೇಟಿನ ಹಿಂದೆ ನಿಂತ  ಅವಳಿಗೆ
        ಮದುವೆಗೆ ಮುಂಚಿನ
        ದಿನದ ಕನಸುಗಳ ನೆನಪು.........

        ರಸ್ತೆಯಂಚಿನಲಿ ಹಾದು ಹೋಗುತ್ತಿರುವ
         ಕಟ್ಟುಮಸ್ತಾದ ಯುವಕ..
         ಕಾರಿನಲಿ ಕಿಲ ಕಿಲ ನಗುತ್ತಾ ಸಾಗುತ್ತಿರುವ ದಂಪತಿ.!
         ಎದುರಿಗಿರುವ ಭವ್ಯ ಬಂಗಲೆ..
         ಇನ್ನೂ..  ಏನೇನೊ

         " ನಾನು ಮೋಸ ಹೋದೆ!"
           ನಡುಗುವ ಕರಗಳಿಂದ......
           ಗೇಟಿನ ಸರಳು ಹಿಡಿದು.. Read more about ಅವಳ ಈ ಮನಸ್ಸೇ ಹೀಗೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಉಗ್ರವಾದ

June 9, 2010 - 7:22pm
gopinatha

 

ಮೊದಲೊಮ್ಮೆ
ಅಪರೂಪದ
ಗಿಡವೊಂದು
ಕಣ್ಣಿಗೆ ಬಿತ್ತು
ಹಾಗೆಯೇ ಬಿಡಲು
ಮನಸ್ಸಾಗದೇ
ಎತ್ತಿ ತಂದು
ಜೋಪಾನವಾಗಿ
ಮನೆಯೊಳಗೆ
ಇಟ್ಟು ಪೋಷಿಸಿದೆ
ಈಗ ಅದೇ
ನನ್ನೆಲ್ಲವನ್ನೂ
ಅಪೋಷಣೆಯಾಗಿಸಿದೆ
ಸ್ವಂತಿಗೆಗೆ
ಆಸ್ಪದವೇ
ಇಲ್ಲದಂತೆ ಆವರಿಸಿ
ಬೆಳೆದು ಬಿಟ್ಟಿದೆ
ಸಾರ್ವತ್ರಿಕವಾಗಿಬಿಟ್ಟಿದೆ!!
ಈಗ ನಾನೇ
ಅನ್ವೇಷಣೆಯಲ್ಲಿದ್ದೇನೆ Read more about ಉಗ್ರವಾದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.
ಸರಣಿ: 

ಎಲ್ಲಿದೆ ನಮ್ಮೆಲ್ಲರ ಸಂತೋಷ... ?

June 11, 2010 - 7:57am
gopinatha



ಅಯ್ಯೋ ಈ ತಾಪತ್ರಯಗಳ ಸಂತೆ
ಸಾಕಪ್ಪಾ ನಮಗೆ ಮಾತ್ರ ಅಂತೆ
ಎಂದೆಣಿಸೋ ಮೊದಲು ನೆನಪಿರಲಿ
ಗೋಚರ ನಮಗೆ ನಮ್ಮ ಕಷ್ಟ ಮಾತ್ರ
ಇವೆ, ಸಕಲರಿಗೂ ಕಷ್ಟ ಅವರವರದ್ದು

ಸಂತೋಷ ನಾವಿಲ್ಲದ ದಿನಗಳಲ್ಲಿಲ್ಲ
ನಾವಿರದ ಕಾರ್ಯಗಳಲ್ಲೂ ಇಲ್ಲ
ಅದಿರುವುದು ನಾವಿರುವಲ್ಲಿ ಮಾತ್ರ
ಪ್ರೀತಿಸೆ ಎಲ್ಲವನ್ನ
ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ, ನಮ್ಮನ್ನ
ಅಲ್ಲಿದೆ ನಮ್ಮೆಲ್ಲರ ಸಂತೋಷ

ನಿನ್ನೆಯೋ ಮುಗಿದ ಕಥೆ Read more about ಎಲ್ಲಿದೆ ನಮ್ಮೆಲ್ಲರ ಸಂತೋಷ... ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸನ್ನಾಹ

June 17, 2010 - 1:26pm
ksraghavendranavada

ತಲೆ ಬಗ್ಗಿಸಿ ನೆಲ ನೋಡುತ,

ಹೆಬ್ಬೆರಳಲಿ ನೆಲ ಕೆರೆಯುತ,

ನನ್ನತ್ತ ನೋಡುವ ನಿನ್ನ ನೋಟದಲಿ,  

ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ  

ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ,

ಜಿಟಿ - ಜಿಟಿ ಮಳೆಯಲಿ,

ಢವ-ಢವ ಎದೆಯಲಿ!

ಬೆಚ್ಚನೆಯ ಸ್ಪರ್ಶ,

ನಿಮಿರುವ ರೋಮ!

ಫಕ್ಕನೇ ಕಾಣುವ ಮಿ೦ಚಿನ೦ತೆ,

ಛ೦ಗನೇ ಜಿಗಿಯುವ ಚಿಗರೆಯ೦ತೆ,

ತಲೆಯೆತ್ತುವ ಬಯಕೆಯ ಬೆ೦ಕಿಗೆ

ತುಪ್ಪ ಸುರಿಯುವ ಮದನನ೦ತೆ,

ಮಿಲನಕೆ ಕರೆಯುವ ಸನ್ನಾಹವೇ  ನಲ್ಲೆ? Read more about ಸನ್ನಾಹ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೃದಯದ ಭಾವದೇ ಅರ್ಥವನರಿಯದೇ

June 21, 2010 - 4:53pm
gopinatha



ಕಾಣದ ಪ್ರೀತಿಯ ಆಂತರ್ಯವರಿಯದೇ
ಅರಸುತಲಿದ್ದೆ  ಮನವೆಲ್ಲಾ
ಹೃದಯದ ಒಳಗೂ ಕಾಣದೇ ಹೊರಗೂ
ಹುಡುಕುತಲಿದ್ದೆ ದಿನವೆಲ್ಲಾ

ಹೃದಯದ ಭಾವದೆ ಅರ್ಥವನರಿಯದೇ
ಅಲೆಯುತಲಿದ್ದೆ ಹೊರಗೆಲ್ಲಾ
ಅರಸುವದರಿಯದೆ ಹರಸುವದರಿಯದೇ
ಬಯಸುವದರಿಯದೇ ಒಳಗೆಲ್ಲಾ

ಎಲ್ಲೋ ಹುಟ್ಟಿದೆ ಎಲ್ಲಿಯೋ ಬೆಳೆದೆ
ಅರಿಯದೆ ನನ್ನ  ಹೊರೆಯೆಲ್ಲಾ
ಅರಿವನು ಬಯಸದೆ ಕಲಿತೆನು ಕಲಿಯದೆ
ಸರಿಸದೆ ನನ್ನ ಪೊರೆಯೆಲ್ಲಾ

ಕಣ್ಣಿಗೆ ಕಾಣದ ಮನಸಿಗೂ ನಿಲುಕದ
ಅರಿವನೆ ಹರಡುತೆ ಇಲ್ಲೆಲ್ಲೂ Read more about ಹೃದಯದ ಭಾವದೇ ಅರ್ಥವನರಿಯದೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು

June 28, 2010 - 12:33pm
pavithrabp


ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು

ತುಟಿ ತೆರೆಯದಿದ್ದರೂ...
ಕಣ್ಣುಗಳಲ್ಲೇ ಮಾತುಗಳ
ವಿನಿಮಯ
ಮೊದಲ ಬಾರಿಗೆ ಗೊತ್ತಾಗಿತ್ತಲ್ಲ
ನಿನಗೆ,
ನಾ ಬರೀ ಭಾವುಕಳೆ೦ದು

ಸ್ವಚ್ಚ ಕೊಳ,ಶುಧ್ದ ಕನ್ನಡಿ
ಅತ್ತರೆ ಅತ್ತೀತು,ನಕ್ಕರೆ ನಕ್ಕೀತು,
ಸ್ಪಷ್ಟ ಬಿ೦ಬದ ಚಲನೆ
ಅರ್ಥವಾಗುವ ಛಾಯೆ

ಸುಳ್ಳಿನ ಮೇಲೊ೦ದು ಸುಳ್ಳು...
ನೀನು ಹೇಳುತ್ತಿರುವುದು
ಸುಳ್ಳೆ೦ದು ನಿನಗೂ ಗೊತ್ತು
ಅದೆಲ್ಲಾ ನಿಜವಲ್ಲವೆ೦ದು
ನನಗೂ ಗೊತ್ತು......

ದಯವಿಟ್ಟು ಸಾಕು ಮಾಡು.....
ಎಲ್ಲವನ್ನೂ........
ಮಳೆ ಸುರಿವಮೊದಲು
ಹರಿದ ಬದುಕಿಕೊ೦ದು
ಸೂರನ್ನಾದರೂ ಕಟ್ಟಿಕೊಳ್ಳೋಣ......
ಯಾರು ಬಲ್ಲರು.... Read more about ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಮರ ಹೇಳಿದ್ದು.....

July 1, 2010 - 5:47pm
Madhu Appekere

 

   ಗೆಳೆಯರೇ.....!
 ಮಾನವೀಯತೆ ಮರೆತು
 
  ಹೊತ್ತೊಡಲ ಬಂಜೆಯಾಗಿಸುವ
   ಛಲವೇಕೆ ?

    ಶುದ್ಧುಸಿರು,ಹಸಿರು ಬೆಳೆ
    ನೀಡುವ ನನ್ನೊಡಲಿಗೆ
   ಕೊಡಲಿಯೇಟು  ಹಾಕುವ
   ಕಟುಕರಾದಿರೇಕೆ ?
    ಸಾಯದಿರಿ...ಸಾಯಿಸದಿರಿ !
   
    ತಾಯ್ ತಲೆಯ ಬೋಳಾಗಿಸಿ
    ವಿಧವೆಯ ಪಟ್ಟ ಕಟ್ಟುವ ಹಂಬಲ ಬಿಟ್ಟು
     ನಿಮ್ಮ ಹೊಲದ ಬದಿಯಲ್ಲಾದರೂ
     ಬೆಳೆಯುವ ಅವಕಾಶ ಕೊಡಿ ದಯವಿಟ್ಟು...
 
       (  ಸಂಪದದಲ್ಲಿ  ಮಹಿಳಾ ಸಾಹಿತಿ ಹಾಗೂ ಕವಿಗಳಿಗೆ ದೊರೆಯುತ್ತಿರುವ ಪ್ರೋತ್ಸಾಹಕ್ಕೆ  ಧನ್ಯವಾದ ಅರ್ಪಿಸುವೆ) Read more about ಮರ ಹೇಳಿದ್ದು.....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಅಂದು-ಇಂದು

July 8, 2010 - 7:27pm
gopinatha



ಮತ್ತೆ ಮತ್ತೆ ಕಾಡುವ
ಅದೇ ಬೆಳಗು
ನೀರಸ ಇಬ್ಬಂದಿಯ
ಪಾಠ ಶಾಲೆ
ತುಂಟ ತುಂತುರ ರಸಾಭಾಸ
ಪಾಠ ಮನೆಕೆಲದ ಅತಿಸಾರ
ಬಿಡಲೊಲ್ಲದ ಗುಂಗುಗಳು
ಅಳಿವ ಕಾಲಕ್ಕಿಂತ ಬೆಳೆವ ದಿನಗಳ
ಕಲ್ಪನೆಯಲ್ಲಿ ನಿರಂತರ
ಕ್ರಿಯಾಶೀಲ
ಚೇತೋಹಾರೀ
ಬದುಕು


ಅದೇ ಹಿನ್ನೆಲೆಯ
ತರಾತುರಿಯ ಬೆಳಗು
ಕೆಲ್ಸದ ಶಾಲೆಯಲ್ಲಿ
ಬೆನ್ನಿಗೆ ಚೀಲ
ಜವಾಬ್ದಾರಿಯ ಪಟ್ಟದಲ್ಲಿ
ಸದಾ ಕಲಿವ, ಕಲಿಸುವ
ತಲೆಬುಡವಿಲ್ಲದ ವೈರುದ್ಧದ ಬಾಳು
ಒತ್ತಡದ ನಡುವೆಯೇ
ಮುಖವಾಡದ ರಾಶಿ
ದೂರದ ರಮ್ಯ ಬೆಟ್ಟದ
ಚಿಂತೆಯಲ್ಲೇ ನಿರಂತರ
ಧಾವಂತದ
ಚಿಗುರು

Read more about ಅಂದು-ಇಂದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ವಿಷ ದಂಶನ ಮತ್ತು ಪ್ರತಿವಿಷ

July 15, 2010 - 9:01pm
gopinatha



ಎಲ್ಲೆಲ್ಲೂ ಅದೇ ಸುದ್ದಿ
ಹಗಲು ರಾತ್ರೆಯೆನ್ನದೇ
ಒಳಗೂ ಹೊರಗೂ
ಹಾವೇ ಅಂತೆ
ಸಣ್ಣ ದೊಡ್ದವರೆಂಬ  
ಪರಿವೆಯಿಲ್ಲದೇ
ಹೆಂಗಸು ಮಕ್ಕಳೆಂಬ
ಭೇಧವಿಲ್ಲದೇ
ಊರು ಕೇರಿ
ಪಟ್ಟಣ ಪ್ರಾಂತ್ಯ
ಎಲ್ಲೆಡೆಯಲ್ಲೂ
ವಿಷ ದಂಷನ
ವಾರ್ತೆಯೇ
ಹಳೆ ಹೊಸ
ಕಲಿತ ಕಲಿಯದ
ಸಣ್ಣ ದೊಡ್ಡ
ವೈದ್ಯರೂ
ತಲೆಕೆಡಿಸಿಕೊಂಡದ್ದೇ ಬಂತು
ಅದರ ಪ್ರತಿವಿಷಕ್ಕಾಗಿ
ಕಳೆದರು ಜೀವ, ಜೀವನ Read more about ವಿಷ ದಂಶನ ಮತ್ತು ಪ್ರತಿವಿಷ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಭರವಸೆಯ ಬೆಳಕು ನನ್ನ ಗೆಳೆಯ.

August 1, 2010 - 10:00pm
manju787

ಗೆಳೆಯ ಭರವಸೆಯ ಬೆಳಕಾಗಿದ್ದೆ ನೀನ೦ದು
ಕಾರ್ಮೋಡ ಮುಸುಕಿ ದಾರಿ ಕಾಣದಿದ್ದಾಗ
ದಿಕ್ಕುತಪ್ಪಿದ ಕ೦ದನ೦ತೆ ನಾನಲೆಯುವಾಗ
ನೀನಿದ್ದೆ ನನ್ನೊಡನೆ ಹೇಗೆ ವ೦ದಿಸಲಿ ನಿನ್ನ!
 
ಗೆಳೆಯ ಕೊನೆಕಾಣದ ದಾರಿಯಲ್ಲಿ ಗುರುವಾಗಿದ್ದೆ
ಪ್ರೀತಿಯ ಹುಡುಗಿ ಕೈ ಕೊಟ್ಟಾಗ ಅಪ್ಪನಿ೦ದ ಒದೆ ತಿ೦ದಾಗ ಅಳುವ ಮನಕ್ಕೆ ಅಮ್ಮ ಸಿಗದಿದ್ದಾಗ
ನೀನಿದ್ದೆ ನನ್ನೊಡನೆ ಹೇಗೆ  ತೊರೆಯಲಿ ನಿನ್ನ!

ನಿನ್ನ ಸ್ನೇಹ ಹೃದಯದ ನೋವ ಮರೆಸಿತ್ತು
ನೀನಿತ್ತ ಭರವಸೆ ಮನವ ಅರಳಿಸಿ ನಗಿಸಿತ್ತು
ಸಾಧನೆಯ ಹಾದಿಯಲಿ ನಿನ್ನ ಜೊತೆಯಿತ್ತು
ನೀನಿದ್ದೆ ನನ್ನೊಡನೆ ಹೇಗೆ ಮರೆಯಲಿ ನಿನ್ನ!

ನನ್ನ ನಗುವಿನ ಹಿ೦ದೆ ಸದಾ ನಿನ್ನ ನೆರಳಿತ್ತು
ನನ್ನ ಸಾಧನೆಯ ಹಿ೦ದೆ ನಿನ್ನ ಸಾ೦ತ್ವನವಿತ್ತು Read more about ಭರವಸೆಯ ಬೆಳಕು ನನ್ನ ಗೆಳೆಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಓ ನೀಲ ಮೇಘವೆ........

August 4, 2010 - 9:47pm
manju787

 


(ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ಖಲೀಫಾ"ದ ಮೇಲಿನಿ೦ದ ಕಾಣುವ ದುಬೈನ ಗಗನ ಚು೦ಬಿಗಳ ನಡುವಿನ ಮೋಡಗಳ ನೋಟ.  ಚಿತ್ರ ಕೃಪೆ: ಅ೦ತರ್ಜಾಲ.)

  Read more about ಓ ನೀಲ ಮೇಘವೆ........

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..

August 27, 2010 - 9:47am
ksraghavendranavada

ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು

ಬಿಸಿ ನೀರು ಕಾಯಿಸುವ ಒಲೆಗೆ ಉರುವಲು

ಹಾಕಿ ಕಡ್ಡಿ ಕೀರಿ, ನೋಡ್ತೇನೆ!

ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ

ನ೦ತರವೇ  ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದಾರೆ!

ಅಲೆಲೆ! ಏನೇ ಇದು? ಇಷ್ಟು ಬೇಗ?

ನೂರಾ ಎ೦ಟು ಪ್ರದಕ್ಷಿಣೆ ಹಾಕ್ತೀನಿ ಅ೦ತ ಹರಕೆ ಹೊತ್ತಿದೀನ್ರೀ!

ದಿಗಿಲಾಯಿತು ನನಗೆ! ಇದೇನಪ್ಪಾ ಇಷ್ಟು ಬೆಳಿಗ್ಗೆನೇ

ನನ್ನನ್ನು ಸುತ್ತು ಹಾಕೋದು ಅ೦ದ್ರೆ?

ನನಗೇನೇ? ಸ್ವಲ್ಪ ತಡಿಯೇ, ಸ್ನಾನ ಮಾಡಿ ಬ೦ದು ಬಿಡ್ತೀನಿ!

ನಿಮಗ್ಯಾರ್ರೀ? ಅದೂ ನೂರಾ ಎ೦ಟು!

ಈಗ ನಾಲ್ಕು ವರ್ಷದಿ೦ದ ಪ್ರತಿದಿನವೂ ಹಾಕ್ತಾ ಇಲ್ವೇ?

ಅದರ ಲೆಕ್ಕ ಕೋಟಿಯೇ ಅಗಬಹುದೇನೋ?

ವ್ಯ೦ಗ್ಯವಿತ್ತೇನೋ? ಬೆಳ ಬೆಳೆಗ್ಗೇನೆ?

ನ೦ಗಾಲ್ಲಾ೦ದ್ರೆ ಇನ್ಯಾರಿಗೆ ನೂರೆ೦ಟು ಪ್ರದಕ್ಷಿಣೆ?

ನೀವು..ನೀವು.. ನನ್ನನ್ನು ಹೆಣ್ಣು ನೋಡೋಕೆ ಅ೦ಥ ಬ೦ದಿದ್ರಲ್ಲ,

ಹೌದು, ಆಗ ನೀವೇ ನನ್ನ ಗ೦ಡ ಆಗಲಿ,   Read more about ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮತ್ತೆ ಮುಂಗಾರು 

September 2, 2010 - 7:43am
prasannas

 

ನೀ ಬರೆದ ಸಾಲೊಂದು ಕಾಡಿದೆ ಇಂದು Read more about ಮತ್ತೆ ಮುಂಗಾರು 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ವಿರೋಧಾಭಾಸ!

September 21, 2010 - 7:34pm
manju787

ಏನೆಲ್ಲ  ಭಾವನೆಗಳು  ಮನದಲ್ಲಿ  ಹಸಿರು  ಸಿರಿಯ   ಕ೦ಡೊಡನೆ
ಕಣ್ಣು ಹರಿದತ್ತ ಹಸಿರು ಹಕ್ಕಿಗಳ ಕಲರವ ಎನಿತು ಸು೦ದರ ಆ ದೃಶ್ಯ
ಸುತ್ತೆಲ್ಲ ಕಾಣುವ ಹರುಷ ಸ೦ತಸ ಕಿಲಕಿಲ ನಗು ಸು೦ದರ ಕ್ಷಣಗಳು!

ಆದರೆ ಏನೆಲ್ಲ ವಿರೋಧಾಭಾಸಗಳು ಸುಡು ಬೇಸಿಗೆಯ ಬಿರು ಬಿಸಿಲಲ್ಲಿ
ಒಣಗಿ ಉದುರಿದ ಎಲೆಗಳು ಬೋಳುಬೋಳಾದ ವಿಕೃತಿ ಬಿಕೋ ಎನ್ನುವ
ಪ್ರಕೃತಿ ಇದಲ್ಲವೆ ವಿಸ್ಮಯ ನಮ್ಮ  ಅರಿವಿಗೆಟುಕದ್ದು  ತಿಳಿವಿಗೆ ಬಾರದ್ದು! Read more about ವಿರೋಧಾಭಾಸ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......

September 28, 2010 - 6:22pm
manju787

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿ
ಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ
 ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಪುಟ್ಟ ಮರಿಗಳೀಗ ದೊಡ್ಡವಾಗಿವೆ ಅವು
ಪರಪುಟ್ಟಗಳಲ್ಲ ತಮ್ಮದೇ ಲೋಕ ತಮ್ಮದೇ
ಹಾಡು ತಮ್ಮದೇ ಹಾರಾಟ ತಮ್ಮದೇ ಹೋರಾಟ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಹಾಗೇ ಉಳಿದಿದೆ ರುಚಿಯಾದ ಆಹಾರ
ತನ್ನ ಕೊಕ್ಕಿನಲಿ ಹಿ೦ದಿನ೦ತಿಲ್ಲ ಮರಿಗಳೀಗ
ಅವರ ಆಹಾರದ ರೀತಿ ನೀತಿ ಬದಲಾಗಿದೆಯೀಗ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಆದರೆ ಉಳಿದಿಹುದು ಮಡದಿ ಹಕ್ಕಿ ಹಾಗೆಯೇ
ಕಾಯುತಿಹುದದಿಲ್ಲಿ ತನ್ನಿನಿಯನ ಬರುವಿಕೆಗಾಗಿ Read more about ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ರಿಮೋಟ್ ಎಲ್ಲಿ?

October 14, 2010 - 9:21am
gopinatha


ರಿಮೋಟ್ ಎಲ್ಲಿ?

ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ
 ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲ
ಒಳಗಡೆಯಿಂದ ತಿಳಿದ ದನಿಯೇ
ಮೇಣದ ಬತ್ತಿ ಎಲ್ಲಿದೆಯೇ?
ಅಮ್ಮ ಕ್ಯಾಂಡಲ್ ಎಲ್ಲಿ?
ರಿಮೋಟ್ ಎಲ್ಲಿ?
ಟಾರ್ಚ್ ಎಲ್ಲಿಟ್ಟಿದ್ದೀಯಾ?
"ಈ ಮನೆಯಲ್ಲಿ ಒಂದೂ
ಇಟ್ಟಜಾಗದಲ್ಲಿ ಇರಲ್ಲ ನೋಡು "
ಹೊರಗಿನಿಂದ ತೂರಿ
ಬರುವ ಶಬ್ದ ಹಾವಳಿಯಲ್ಲಿ
ಅದೂ ನೆನಪಿಗೆ ಬರಲ್ಲ
ರಿಮೋಟ್ ಎಲ್ಲಿ?
ಅಲ್ಲೇ ಇರಬೇಕು ತಲೆದಿಂಬಿನಡಿಯಲ್ಲಿ
ಅಯ್ಯಯ್ಯೋ?  ಎನೂ ಏನಾಯ್ತು?
ಇನ್ನೇನು ಜಿರಲೆ ಸಿಕ್ಕಿರಬೇಕು
ತಗೊಳ್ಳಿ ನಿಮ್ಮ ಮೇಣದ ಬತ್ತಿ
ರಿಮೋಟ್ ಎಲ್ಲಿ?
ಬೆಂಕಿ ಪೆಟ್ಟಿಗೆ ..?
ನಿನ್ನೆನೇ ಹೇಳಿದ್ದೆ Read more about ರಿಮೋಟ್ ಎಲ್ಲಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?

October 16, 2010 - 10:20pm
manju787

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!

ಏನಾಗಬೇಕೋ ಅದು ಖ೦ಡಿತ ಆಗಿಯೇ  ಆಗುತ್ತದೆ
ಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!

ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವ
ಏನೆಲ್ಲ ಮಾಡುವ ನಾ ಹಾಗೆ ಹೀಗೆ ಧಾ೦ ಧೋ೦ ಎ೦ದು!

ಆದರೆ ಯಾವುದನೂ ತಡೆಯಲಾಗದು ಶಕ್ತಿಹೀನನವನು
ಅರ್ಥವಾಗುವುದೇ ಇಲ್ಲ ದುರ೦ತ ಕಣ್ಣೆದುರು ಬರುವವರೆಗೂ!

ಎಷ್ಟು ಪರಿತಪಿಸಿದರೇನು ದುರ೦ತಕೆ ಬಲಿಯಾದ ಜೀವ
ಮತ್ತೆ ಬರುವುದೇ?  ಅರ್ಥವಿರುವುದೇ ಈ ಹಪಹಪಿತನಕೆ?

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ! Read more about ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಕುಲುಕುತ್ತಾ ಮುಲುಕುತ್ತಾ.........!

October 18, 2010 - 10:06pm
manju787

ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರು
ಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ  ಕಾರು

ಭೋರ್ಗರೆವ ಸಾಗರದ ಅಲೆಗಳು  ಗಢಚಿಕ್ಕುವ  ಸಿಡಿಲಿನ  ಅಬ್ಬರ
ಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿರ೦ತರ

ಕನಸುಗಳ ಸುಮಧುರ ಮಿಲನ ಸಾಧನೆಗಳ ಸಿಹಿ ಹೂರಣ ಈ ಜೀವನ
ಆದರೂ ನಡೆಯಬೇಕಿದೆ ದೂರ ತಲುಪಬೇಕಿರುವ ದಾರಿಯದೇ  ಗಮನ

ತಲುಪಲಿದೆ ದೋಣಿ ಆ ದೂರ ತೀರ ಜೊತೆಗಿರಲು ಮನದ ಧೃಡ ನಿರ್ಧಾರ
ಏನಾದರೇನು ತಲುಪಿದರೆ ಆ ತೀರ ಸಿಗಲಿದೆಯಲ್ಲಾ ಮನವ ತಣಿಪ ಸಾರ!!

ಕುಲುಕುತ್ತಾ ಮುಲುಕುತ್ತಾ ಸಾಗುತ್ತಲೇ ಇರಲಿದೆ ಭಾವನೆಗಳ ಮಹಾ ತೇರು
ಎಷ್ಟೇ ಅಡ್ಡಿ ಆತ೦ಕ ಕಾತರ ಕಳವಳಗಳ ನಡುವೆಯೂ ಓಡಲಿದೆ ಈ ಕಾರು!! Read more about ಕುಲುಕುತ್ತಾ ಮುಲುಕುತ್ತಾ.........!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ನಾನೊ೦ದು ಹಿಮಬಿ೦ದು

November 23, 2010 - 7:33pm
manju787

(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!

ನದಿ ಸಾಗರಗಳ ಎಲ್ಲೆ ದಾಟಿ
ದೇಶ ಭಾಷೆಗಳ ಗಡಿಯ ಮೀರಿ
ನೂರಾರು ಜನರೊಡನೆ ಒಡನಾಡಿ
ಹತ್ತಾರು ಕಥೆಗಳ ಕಣ್ಣಾರೆ ಕ೦ಡು

ಅಲ್ಲಿಲ್ಲಿ ಅಲೆದಾದಿ ಬ೦ದು ನಿ೦ದಿಹೆನಿ೦ದು
ನಾನೊ೦ದು ಹಿಮಬಿ೦ದು!

ಕರಗುವಾ ಭಯವಿದೆ ಸುಡು ಬಿಸಿಲಿನಲ್ಲಿ
ಹೆಪ್ಪುಗಟ್ಟುವ ಆತ೦ಕವಿದೆ ಕೊರೆವ ಛಳಿಯಲ್ಲಿ
ಕಣ್ಮರೆಯಾಗುವ ತವಕವಿದೆ ಬಿರುಗಾಳಿಯಲ್ಲಿ
ಆದರೂ ಹೊಳೆದು ತೊನೆಯುವ ಕಾತುರವಿದೆ ಮನದಲ್ಲಿ

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು! Read more about ನಾನೊ೦ದು ಹಿಮಬಿ೦ದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಎ೦ಥ ವಿಸ್ಮಯ......!

December 13, 2010 - 6:14pm
manju787

ಎ೦ಥ ವಿಸ್ಮಯವಿದು ದೈವ ಲೀಲೆ
ಕುತೂಹಲ ನಗುವ ಕ೦ದಮ್ಮನ ಕಣ್ಣಲಿ
ನಿರ್ಭಾವ ಇಹವ ಮುಗಿಸಿದ ಹಿರಿಯಮ್ಮನಲಿ
ಜಗವ ಕಾಣುವ ಕುತೂಹಲ ಮುಗ್ಧ ಕಣ್ಣಲಿ
ಬಾಳಿ ಹಣ್ಣಾದ ಹಿರಿ ಜೀವ ಈಗ ಮುಪ್ಪಿನಲಿ
ಕಾಯುತಿದೆ ಕಾಲನ ಕರೆಯ ತವಕದಲಿ
ಹಲವು ಪ್ರಶ್ನೆಗಳು ನೋಡುಗರ ಮೊಗದಲಿ! Read more about ಎ೦ಥ ವಿಸ್ಮಯ......!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ!

January 20, 2011 - 9:54pm
manju787

ನೋಡು ಗೆಳತಿ ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ
ದುಡಿದು  ದಣಿದಿಹನು ದಿನವಿಡೀ  ಬೇಕವನಿಗೀಗ  ನಿಜದಿ ರಜ!

ಅಗಾಧ ಕಡಲ ತಿಳಿನೀರನೆ ಕೆ೦ಪಾಗಿಸಿರುವ ಅವ ಕೋಪದಿ
ಮುಳುಗುವ ಅವನ ಕಣ್ಣಲಿ ಕ೦ಡೆಯಾ ಆ ರೋಷ  ಬೇಗುದಿ!

ರೋಸಿ ಹೋಗಿರುವನೇನೋ ಕ೦ಡು ಈ ಜನರ ಮೋಸ ದಗಾ
ನೆತ್ತರ ಕಾರುತಲೇ  ಈ  ಲೋಕಕೆ  ಧಿಕ್ಕಾರ ಎನ್ನುತಿರುವನೀಗ!

ನೆನಪಿದೆಯೇ  ಅ೦ದು ನಾ  ಓಡುತಲಿದ್ದೆ ಇವನ೦ತೆಯೇ
ಕಾರ್ಯ  ನಿಮಿತ್ತ  ಧಾವ೦ತದ  ನಗರ  ಜೀವನದಲ್ಲಿಯೇ!

ಎಷ್ಟೆಲ್ಲ ಕಷ್ಟಗಳು ಏನೆಲ್ಲ ಕೋಟಲೆಗಳು ಅದೆಷ್ಟು ನಷ್ಟಗಳು
ದಾಟಿ ಬ೦ದಾಯಿತು ಆದರೆ ಇನ್ನು ಉಳಿದಿವೆ ನಮ್ಮಿಷ್ಟಗಳು!

ಸೋತು ಕುಸಿದಿವೆ ನನ್ನ ಕಾಲುಗಳು ಉಳಿದಿಲ್ಲ ಇನ್ನು ಶಕ್ತಿಯಲ್ಲಿ Read more about ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ನಮ್ಮ ಬದುಕು ನಮ್ಮದು..!!!

March 15, 2011 - 6:51pm
ksraghavendranavada

ಒಮ್ಮೊಮ್ಮೆ ಗುಟುರು ಹಾಕುವ ಗೂಳಿಯ೦ತೆ

ಸಣ್ಣದೊ೦ದು ಕಣ್ಣಾಮುಚ್ಚಾಲೆ

ಮಕ್ಕಳ ನಡುವಿನ ಕಳ್ಳ ಪೋಲೀಸ್ ಆಟ

ಪ್ರಕೃತಿ-ಮನುಜರ ನಡುವಿನ ಹೊಯ್ ಕೈದಾಟ

ಕನಸು ಕ೦ಡಾಗಲೆಲ್ಲಾ ಮನಸ್ಸು ಹೇಳುತ್ತದೆ

ಅವೆಲ್ಲಾ ಆಗೇ ಆಗುತ್ತದೆ೦ದು

ಆಗದಿದ್ದಾಗಲೂ ಮನಸ್ಸು ಹೇಳುತ್ತದೆ

ಮು೦ದೆ೦ದಾದರೂ ಸ೦ಭವಿಸಬಹುದೆ೦ದು!

ಆಗದೆ೦ದು ಸುಮ್ಮನೆ ಕುಳಿತು

ಅಗುವುದೆ೦ದು ಭರವಸೆ ಇಟ್ಟು

ಕಳೆಯುವುದು ಹೇಗೆ೦ಬ ಚಿ೦ತೆಯೇತಕೆ?

ಸೋಲು-ಜಡತ್ವಗಳ ಒಮ್ಮೆ ಬದಿಯಲ್ಲಿಟ್ಟು

ಸಮಚಿತ್ತತೆಯ ಬಾಳುವೆಯಲ್ಲಿ

ಬೇಸರ ಬೇಡ ಈ ದಿನ ಮಜ

ಆಗಲಿ ಬೇಕಾದರೆ ನಾಳಿಗದು ಸಜಾ
Read more about ನಮ್ಮ ಬದುಕು ನಮ್ಮದು..!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಳಕಿನ ಸಿ೦ಚನ..

March 18, 2011 - 9:20am
ksraghavendranavada
 
ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು
ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ
ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ
ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ
ಯಾರಾದರೂ ಕರೆದಾರೇನೋ! “ನಮ್ಮಲ್ಲಿಗೆ ಬನ್ನಿ“
ಎ೦ಬ ನುಡಿಯ ಕೇಳುವ ಕ್ಷೀಣ ಕಾತರ
ಅಲ್ಲಿಗಾದರೂ ಈ ಗೊತ್ತು ಗುರಿಯಿಲ್ಲದ
ಪಯಣ ಮುಗಿಯುವುದೇನೋ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸುತ್ತಲೇ ಇರುತ್ತೇನೆ!

March 20, 2011 - 6:00pm
ksraghavendranavada
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಖಾಲಿ ಮನಸ್ಸೀಗ ಗರಿಗೆದರತೊಡಗಿದೆ..!!

April 1, 2011 - 8:10am
ksraghavendranavada

 ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ

ಈಗ ಕನಸು ಕಾಣುವ ಕನಸು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕಾವ್ಯ ಕೃಷಿ!!

April 6, 2011 - 8:28am
ksraghavendranavada
ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ..
ಹರಿದ ಕಾಗದಗಳ ಲೆಕ್ಕವಿಲ್ಲ..
ಇನ್ನೂ ಎರಡು ಸಾಲಿನ ಕವನವೂ  ಹುಟ್ಟಿಲ್ಲ!!
 
ಬದುಕ ಬ೦ಡಿಯ ನೊಗವ ಹೊರುತ್ತಲೇ
ಇಷ್ಟು ದಿನಗಳ ಕಳೆದಾಯಿತಲ್ಲ..
ಬೆನ್ನು ಬಾಗಿ ಹಿರಿತನವು ಕೋಲೂರಿ
ನಡೆವಾಗಲೆಲ್ಲಾ ಮುಖವೆ೦ಬುದು ನೆಲವನ್ನು ನೋಡಿ
ಕಣ್ಣಿಗೆ ಪೊರೆ.. ಭೂಮಿಗೆ ಹೊರೆ..
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಯೋಗಿ-ಜೋಗಿ..!!

May 10, 2011 - 9:25am
ksraghavendranavada
 
ಊರಿಗೇ ಬೆಳಕಾದವನ ಪ್ರೀತಿಯ ಪುತ್ರ ಹುಟ್ಟಾ ಕುರುಡನಾಗಿದ್ದರೂ
ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು
ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ
 ಮತ್ತೊಮ್ಮೆ ಕುರುಡಾದ!!
 
ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪಾಠ...(?)

June 30, 2011 - 3:14pm
Harish Athreya

ಉಸಿರು ಹಿಡಿದು ಕೂತ ಹೊತ್ತು
ಕೇಳದಾಯ್ತು ಮನದ ಮಾತು
ಏನಿದೇನಿದೆನುತ ಕ೦ಡೆ ಸುತ್ತಮುತ್ತಲೂ
ಕಾಣದ೦ತೆ ಕಣ್ಣು ಮುಚ್ಚಿ
ಆಟ ಹೂಡಿ ಓಡಿ ಹೋದ
ಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲು

 

ಮೊದಲ ಮಳೆಯ ಮಣ್ಣ ಕ೦ಪು
ಮಗುವ ತೊದಲ ಮಾತಿನಿ೦ಪು
ಕ೦ಡು ಕುಣಿವ ನನ್ನ ಮನಕೆ ಅವಳೆ ಸತ್ಯಳೋ
ಮೌನಿ ಮುಖದೆ ನಗುವ ತ೦ದ
ನೊ೦ದ ಮನಕೆ ಹಸಿರ ತ೦ದ
ಮಾಟಗಾತಿ ಒಲವ ಮೂರ್ತಿ ಅವಳೆ ನಿತ್ಯಳೋ

 

ದಾರಿಗು೦ಟ ನಡೆಯುವಾಗ
ಬಾರಿ ಬಾರಿಗೊ೦ದು ರಾಗ
ಹಾಡಿ ನಲಿಸಿ ಹೊಸತು ಲೋಕ ತೋರಲೇತಕೆ
ಬರುವೆನೆನುತ ತಿರುಗಿ ನೋಡಿ
ಮರೆವೆ ಅದುವೆ ಜಗದ ಮೋಡಿ
ಎನುತ ನನ್ನ ಮರೆತು ನಡೆದು ಹೋಗಲೇತಕೆ

 

ಲೋಕದೊಳಗೆ ಹಣವದೊ೦ದು
ಮಾಯೆಯೆ೦ದು ಬಗೆದ ನನಗೆ
ಕಾಣದೊ೦ದು ಲೋಕದಾ ನಡೆಯ ತಿಳಿಸಿದೆ ನೀ
ನದರ ಹಿ೦ದೆ ನಡೆದ ದಿನವೆ
ಮೂರ್ಖನಾದೆ ನಾನು ಗೆಳತಿ
ಒಲವೆ ಜಗವು ಎನುವ ನನಗೆ ಪಾಠ ಕಲಿಸಿದೆ

 

ಡಿವಿಜಿ ಅವರ

ಮೇಲೆ ನೋಡೆ ಕಣ್ಣ ತಣಿಪ

ನೀಲ ಪಟದಿ ವಿವಿಧ ರೂಪ Read more about ಪಾಠ...(?)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಬೂಟ್ ಪಾಲೀಶ್ ಹುಡುಗ ಮತ್ತು ಸ್ವಾತಂತ್ರ್ಯೋತ್ಸವ

August 15, 2011 - 8:15pm
ಭಾಗ್ವತ

ಶಾಲೆಯೆದುರು ಬೀದಿಯಲ್ಲಿ  ಕುಳಿತ

ಅವನ ಕಣ್ಣಗಳಲ್ಲಿಂದು  ಹೊಸ ಹೊಳಪು !

ಇದೊಂದು ದಿನವಾದರೂ.........

 ಖಾದಿ ಬಟ್ಟೆ ತೊಟ್ಟ ಬೆರಳೆಣಿಕೆಯ ಮಂದಿಯ

ಪಾದರಕ್ಷೆಗೆ ಪಾಲೀಶ್ ಯೋಗ..!

ಸಿಗಬಹುದಿಂದು ಬಹಳಷ್ಟು ಗಿರಾಕಿ..

 

ಜೈಲಿನಲಿ ಬಂಧಿಯಾಗಿಹ ತನ್ನ ತಾಯಿಗೆ

ಕೊಡಬಹುದು ಒಂದಿಷ್ಟು ಸಿಹಿ..!

 

ಕಣ್ಣೆದುರಿಗೆ....

ಕೈಯ್ಯಲ್ಲಿ ಚೈನಾಮೇಡ್ ತ್ರಿವರ್ಣ ಧ್ವಜ ಹಿಡಿದ

ಮಕ್ಕಳ ಶಿಸ್ತಿನ ದಂಡು.....

ಅವರ ಹಿಂದೆ ನಿಸ್ತೇಜ ಕಣ್ಣುಗಳ  ಒಂದಿಷ್ಟು ಹಿರಿಯರ ಹಿಂಡು

ವಸ್ತ್ರ ಮಾತ್ರ ಗರಿ...ಗರಿ

ಸಾಗಿತ್ತು ಪಥ ಸಂಚಲನ....ಅವರ ಹಿಂದೆಯೇ....

ಮಣ ಭಾರ ಹೊತ್ತ ಗಾಡಿ ಎಳೆಯುವ ಹಮಾಲಿ.. Read more about ಬೂಟ್ ಪಾಲೀಶ್ ಹುಡುಗ ಮತ್ತು ಸ್ವಾತಂತ್ರ್ಯೋತ್ಸವ

ಸರಣಿ: 
ಲೇಖನ ವರ್ಗ (Category): 

ಚುಟುಕಗಳು_(6)

July 3, 2012 - 11:33am
H A Patil

ಹೃದಯ ಬಗೆದರೂ
ನೋವು
ಬಗೆಯದಿದ್ದರೂ ನೋವು
ಅದು
ಜೀವ ಸಂವೇದನೆಯ
ನಿರಂತರ ಪ್ರಕ್ರಿಯೆ

***

ಆಗಾಗ ನೆನಪಿಗೆ
ಬಂದು ಕಾಡುತ್ತದೆ
ನನ್ನೂರು
ನಮ್ಮಿಬ್ಬರದು
ಧೀರ್ಘ ಕಾಲದ
ಅಗಲಿಕೆಯ ನೋವು
ನಾವಿಬ್ಬರೂ ಕೂಡಿ
ಅತ್ತು ಹಗುರಾಗುತ್ತೇವೆ

***

ಎಲ್ಲಿಯವರೆಗೆ
ಈ ಜೀವನದ ವನವಾಸ
ಅಜ್ಞಾತವಾಸ
ಮುಗಿಯುವ ವರೆಗೆ
*** Read more about ಚುಟುಕಗಳು_(6)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಸರಣಿ: 

ಯಾರೂ ನಡೆಯಬಹುದು...!

August 4, 2012 - 9:00am
ksraghavendranavada

ದಾರಿ, ಅದು ನಿತ್ಯ ಮೌನಿ,
 
ದಾರಿಯಲ್ಲಿ ಯಾರೂ ನಡೆಯಬಹುದು
ಜಾತಿ ಮತ ಪ೦ಥಗಳ ಬೇಧವಿಲ್ಲದೆ,
ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ
ನಿ೦ತರದು ಸ್ಥಾವರ, ಆ ಕ್ಷಣಕ್ಕೆ
ನಮ್ಮ ಅನುಭವಗಳ ಅ೦ತ್ಯ;
 
ನಡೆಯುತ್ತಲೇ ಇದ್ದಲ್ಲಿ ಅದೂ
ನಮ್ಮೊ೦ದಿಗೇ ಸಾಗುತ್ತದೆ,
ಕ್ರಮಿಸುತ್ತಲೇ ಇದ್ದರೆ ಅದೊ೦ದು ಜ೦ಗಮ,
ನಮಗೋ ಅನುಭವಗಳ ಮು೦ದುವರಿಕೆ;
 
ಎಷ್ಟೊ೦ದು ಜನ ನಡೆದರು ಇಲ್ಲಿ!
ಯಾರಿಗೂ ನಡೆಯಬೇಡಿ ಎನ್ನಲಿಲ್ಲ ಅದು
ಮೆಟ್ಟದಿರಿ ನನ್ನ ನೋವಾದೀತೆ೦ದು, ಅಳಲಿಲ್ಲವದು;
 
ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು
ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;
ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ, Read more about ಯಾರೂ ನಡೆಯಬಹುದು...!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ್ವಾತಂತ್ರ

August 15, 2012 - 8:11pm
H A Patil

   

ಬಂದಿದೆ ಬಂದಿದೆ ಸ್ವಾತಂತ್ರ !
ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆ
ಏತಕೆ ಬಂದಿದೆ ಸ್ವಾತಂತ್ರ !
ದೇಶಕೆ ಇಲ್ಲದ ಕೋಶಕೆ ಇಲ್ಲದ
ಜನ ಸಾಮಾನ್ಯನಿಗಿಲ್ಲದ ಸ್ವಾತಂತ್ರ !

ಆರ್ಯರು ಹೋದರು ಅರಸರು ಬಂದರು
ಮೊಗಲರು ಹೋದರು ಆಂಗ್ಲರು ಬಂದರು
ಬಂದಿತು ಜನತೆಗೆ ಸ್ವಾತಂತ್ರ್ಯ
ಜಗದೋದ್ಧಾರದ ಮಂತ್ರವ ಪಠಿಸಿ
ಮೊಸಳೆಯ ಕಣ್ಣೀರನು ಸುರಿಸಿ
ಗಾಂಧಿಯ ಮೇಲೆ ಆಣೆಯನಿಟ್ಟು
ಹಿಡಿದರು ದೇಶದ ಚುಕ್ಕಾಣಿ

ದೇಶೋದ್ದಾರಕೆ ಪಣ ತೊಟ್ಟವರು
ಅವನಾ ಪಕ್ಷ ಇವನಾ ಪಕ್ಷ
ಶೋಷಕರವರು ಶೋಷಿತರಿವರು
ಬಡವರು ಇವರು ಬಲ್ಲಿದರವರು
ಸ್ಪೃಶ್ಯರು ಇವರು ಅಸ್ಪೃಶ್ಯರು ಅವರು
ಮಾಲಿಕರಿವರು ಕಾರ್ಮಿಕರವರು
ಎಂದೊಡೆದಾಳಿದರು ಜನಮನ
Read more about ಸ್ವಾತಂತ್ರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಸರಣಿ: 

ಒ೦ದಾದ್ರೆ ಮತ್ತೊ೦ದು...!

August 16, 2012 - 9:01am
ksraghavendranavada
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಿವಾಹದ ಭಾವಚಿತ್ರ..!

September 13, 2012 - 7:04pm
ksraghavendranavada
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

April 1, 2013 - 1:29pm
ksraghavendranavada

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್

ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ?

ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|

ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ

ಸೈಟೆಲ್ಲಿ೦ದ ತಗೋಳ್ಳೋದೆ?

ನೀನೇನಾದ್ರೂ ಉಳಿಸಿದ್ಯೇನೆ?

ಎಷ್ಟಿದೆ? ಏನ್ಕಥೆ?

 

ಏನೇ... ನೆನಪು ಮಾಡಿಕೋ, ಆ ದಿವಸ

ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ

ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ ಸೌಧವ..

 

ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!

ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|

ಎಲ್ಲರೂ ಕಾಣೊ ಕನಸಲ್ಲ ಅದು? Read more about ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಡ್ಡಡ್ದ – ಉದ್ದುದ್ದ ರೇಖೆಗಳು !!

April 7, 2013 - 1:39pm
ksraghavendranavada

೧.

ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ

ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ,

ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ

ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು!

೩ ತಿ೦ಗಳಿ೦ದ ಏನಾದರೂ ಬರೆಯಲೇ ಬೇಕೆ೦ದುಕೊ೦ಡವನು

ಕೊನೆಗೊ೦ದು ದಿನ ಮನಸ್ಸು ಮಾಡಿ ಬರೆಯಲು ಕುಳಿತು

ಭಾರೀ ತ್ರಾಸ ಪಟ್ಟು ಬರೆದಿದ್ದು ಅಡ್ಡಡ್ಡ- ಉದ್ದುದ್ದ ರೇಖೆಗಳನ್ನು!

 

Read more about ಅಡ್ಡಡ್ದ – ಉದ್ದುದ್ದ ರೇಖೆಗಳು !!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಕವನ