ಕವನ
ಕಾಲದ ನದಿಯ ಹರಿವು
ನಿಲ್ಲದು ಕಾಲದ ನದಿಯು ಯಾರಿಗೂ
ನಿಗೂಢ ಬೆಟ್ಟದಿ ಭೋರ್ಗರೆದು
ಝುಳುಝುಳುನೆ ರಭಸದಿ ಹರಿದು
ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..
ನಗೆ ಬಗೆ ಬಗೆ
ಶುಭಾಶಯಗಳ ಆಕಾಂಕ್ಷೆ
ಮನದಾಳದ ಮಾತು ಹಾಡಾಯ್ತು
ತುಂತುರು ಮಳೆ ಹನಿ
The Love Song of J Alfred Prufrock
ಆಂಗ್ಲ ಭಾಷೆಯ ಶೀರ್ಷಿಕೆಗೆ ಕ್ಷಮೆಯಿರಲಿ...
T S Eliot ಬರೆದಿರುವ ಈ ಕಾವ್ಯ ಯಾವಾಗಲೂ ನನಗೆ ಒಂದು ಒಗಟಿನಂತೆ ಕಾಡುತ್ತಿತ್ತು. ಅವರ ಎಲ್ಲ ಸುಮಾರು ಕವಿತೆಗಳು ನನಗೆ ಯಾವಾಗಲು ತುಂಬಾ ಇಷ್ಟವಾದಂತಹವುಗಳು ಇದಂತೂ ತುಂಬಾ ದೊಡ್ದ ಪದ್ಯ - ಮೊದಲನೇ Stanza..ನನಗೆ ತಿಳಿದ ಮಟ್ಟಿಗೆ ಕನ್ನಡಕ್ಕೆ ಭಾಷಾಂತರ ಮಾಡಲು ಪ್ರಯತ್ನ ಪಟ್ಟೆ......ಅದರ ಫಲಿತಾಂಶ ಈ ರೀತಿ ಇದೆ..
ಚೆನ್ನಾಗಿದೆ ಅಂತ ಅನ್ನಿಸಿದರೆ ಮುಂದುವರಿಸುವ ಪ್ರಯತ್ನ ಮಾಡುವೆ...
for original version please visit
http://www.bartleby.com/198/1.html
ಕನ್ನಡ ಭಾವಾನುವಾದ....
ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!
ನೀ ಹೀಗೇಕೆ ಕಾಡುತಿರುವೆ ಪ್ರಿಯೆ!
ಅದೆಂದೋ ಮುಗಿಯಿತಲ್ಲ ಕಥೆ,
ಇದೇನಿದ್ದರೂ ನೆನಪುಗಳ ವ್ಯಥೆ,
ನಾನಿಲ್ಲಿ, ನೀನಲ್ಲಿ, ದೂರ ತೀರದಲ್ಲಿ,
ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!
ಅದೆಷ್ಟು ವರ್ಷಗಳು ಜಾರಿದವು,
ಅದೆಷ್ಟು ಊರುಗಳು ಬದಲಾದವು,
ಅದೆಷ್ಟು ಋತುಗಳು ಬಂದು ಹೋದವು,
ಅದೆಷ್ಟು ನಿಟ್ಟುಸಿರು, ಅದೆಷ್ಟು ಕಂಬನಿ,
ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!
ನಾ ಮೊದಲೋ ನೀ ಮೊದಲೋ ನಾನರಿಯೆ,
ಆದರೆ ಇಬ್ಬರೂ ದಾಟಿಹೆವು ಸಾಗರವ,
ನಾನೊಂದು ತೀರದಿ, ನೀ ಇನ್ನೊಂದು ತೀರದಿ,
ಸೇರುವುದು ಮತ್ತೆ ಕನಸಿನ ಮಾತೇ ಸರಿ,
ಆದರೂ ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!
ಓಡುವ ಕಾರಲಿ, ಮಾಡುವ ಕೆಲಸದಲಿ Read more about ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!
ಒಂದು ಎರಡು ಬಾಳೆಲೆ ಹರಡು..
ನನ್ನ ಮಗಳು "ಇಸ್ರಾ" ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು.
ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ "ಅಹ್ಮದ್" ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ " ಅಯ್ಮನ್" ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು...
ಓ ಚೆಲುವೆ, ಕೊಲ್ಲುವೆಯಾ ಒಲವ, ಹುಟ್ಟುವ ಮೊದಲೇ?!
ಓ ಹುಡುಗಿ, ನಾನು ಮೊದಲೇ ನಾಚುಬುರುಕ,
ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?!
ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ
ಗುಂಡಿಗೆಯ ಏರಿಳಿತವ!?
ನಿನ್ನ ಮೊಗವ ದಿಟ್ಟಿಸಿ ನೋಡಿದರೆ,
ಮುಖ ತಿರುಗಿಸಿ ಹೋಗದಿರು ಗೆಳತಿ.
ಚಿಗುರುತ್ತಿರುವ ಎಲೆಯ ಚಿವುಟುವ
ಆಸೆ ನಿನಗದೇಕೆ!?
ಹೊರಚೆಲುವಿಗೆ ಮನ ಸೋಲುವ
ಮೂಳ ಅಂತ ಜನ ಬೈದುಕೊಂಡರೂ
ಚಿಂತೆಯಿಲ್ಲ, ’ಮುಂಗಾರು ಮಳೆ’ಯ
ಗಣೇಶನಂತೆ ಒಳ್ಳೇ ತರದಿ
ಮಾಡುವೆ ಬಾಳ್ವೆಯ!
ಈ ನೇರ, ಸರಳ ಮನದಿಂಗಿತ
ತಿಳಿದು, ಹೇಳದಿದ್ದರೂ ಒಳಭಾವ
ನೀನೇ ಇಣುಕಿ ನೋಡಿ,
ಕಣ್ಣಿನೊಂದಿಗೆ ಕಣ್ಣನೊಮ್ಮೆ
ಬೆಸೆದು, ನಗು ಬೀರಬಾರದೇ?!
ಮಾತಾಡುವ ಧೈರ್ಯ ಮಾಡಿ
ನಾ ಬಂದರೆ, ನಾಚಿ ನೆಲ Read more about ಓ ಚೆಲುವೆ, ಕೊಲ್ಲುವೆಯಾ ಒಲವ, ಹುಟ್ಟುವ ಮೊದಲೇ?!
ಕಣ್ಣಿನ ಶಬ್ದ
ನೋಡು ಅಲ್ಲಿ ಒಂದು ಕನಸಿನ
ಕಳೇಬರವ ಹೂಳಲಾಗಿದೆ
ಮೋಡ ಚೆಲ್ಲಿ ಇಂದು ಬಿರುಸಿನ
ಮಳೇಬರುವ ವೇಳೆಯಾಗಿದೆ
ಬಿದ್ದ ರಭಸಕೆ
ಎದ್ದು ಕೂತು
ಸುದ್ದಿ ಮಾಡುವುದೇ ಈ ಸ್ವಪ್ನ?
ಖಾಲಿಪುಟದಲಿ ಗೀತೆಯೊಂದನು
ಬರೆದು ಬರೆದು ಅಳಿಸಲಾಗಿದೆ
ಬಾನಿನಂಚಲಿ ನೋಡುತಿದ್ದೆನು
ಕವನವೊಂದು ಮಿಂಚಿ ಹೋಗಿದೆ
ಗೀಚಿದ ಸಾಲಿನ
ಸೂಚಿತ ಅರ್ಥಕೆ
ಈಚೆಗೆ ಬರಬಹುದೇ ಈ ರಾಗ?
ಶಶಿಯ ವದನದ ಕಲೆಯ ಕಾಂತಿಯು
ಮೂಕಮನದಲಿ ಸ್ತಬ್ಧವಾಗಿದೆ
ಋಷಿಯ ಮೂಲದ ಮೂಲೆಯಲ್ಲಿ
ಕರಿಯ ಗುಡುಗಿನ ಶಬ್ಧವಾಗಿದೆ Read more about ಕಣ್ಣಿನ ಶಬ್ದ
ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ
ಡಾಕ್ಟರ್ ರಾಜ್ ಅಭಿಮಾನಿಗಳ ಸಂಘ ಅಂತ ಹೇಳಿಕೊಂಡು
ಊರ ತುಂಬ ಅಂಟಿಸಿರುವ ಪೋಸ್ಟರ್ನಲ್ಲಿ ಅಣ್ಣಾವ್ರ ಚಿಕ್ಕ ಫೋಟೋ
ಒಬ್ರು ಗೊತ್ತಿಲ್ಲದವರ ದೊಡ್ಡ ಫೋಟೋ ನೋಡ್ತಾ ಇದ್ದಾಗ...
ಪಕ್ಕದಲ್ಲೇ ಕಂಡಿತು "ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ"
ಅನ್ನುವ ಯಾವುದೋ 1000 ಅನ್ನುವ ಗುಟಕಾ ಜಾಹೀತಾಥು!! Read more about ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ
ಅಮ್ಮ
ಅಮ್ಮ
ನೆರಿಗೆ ಲಂಗ ಚಿಮ್ಮಿಸಿಕೊಂಡು
ಓಡಾಡಿಕೊಂಡಿದ್ದ ಸಮಯ,
ವಯಸ್ಸು ತಿಳಿಯುವ ಮೊದಲೇ ,
ಕೊರಳಿಗೆ ಮೂರು ಗಂಟು,
ಅವಳಿಗೆನಾಗಿತ್ತು ಅಂತ ಮಹಾವಯಸ್ಸು ,
ಆಡಿಸಿ,ಕೂಡಿಸಿ ,ಕಳೆದರೆ ಈಗಿರುವ ನನ್ನ
ವಯಸ್ಸಿಗಿಂತ ಮೂರು ನಾಲಕ್ಕು ವರ್ಷ
ಹೆಚ್ಚು....
ವಿಧಿಗೆ ಅಪ್ಪ ಬಹಳ ಇಷ್ಟವಾಗಿದ್ದ,
ಗೊತ್ತಿಲ್ಲ ಗುರಿಯಿಲ್ಲ ಹೇಳದೆ ಕೇಳದೆ
ಬಾರದ ಲೋಕಕ್ಕೆ ಹೋಗಿಬಿಟ್ಟ.
ಅಮ್ಮನ ಬಗಲಲ್ಲಿ ಎಳೆಯ ಕಂದಮ್ಮಗಳು ....
ಬದುಕೇ ದುಸ್ತರವಾಗಿರುವಾಗ
ಬದುಕಿನ ದಾರಿ ಕಣ್ಣಿಗೆ
ನಿಲುಕದಷ್ಟು ದೂರ..... Read more about ಅಮ್ಮ
ವಿವಾಹ ಮತ್ತು ಮರೀಚಿಕೆ
ವಿವಾಹ
ಅಲ್ಲಿ
ಇಲ್ಲಿ
ಸ್ವಚ್ಚಂದವಾಗಿ
ಈಸುತ್ತಿದ್ದ
ಆ
ಮೀನು
ಕೊನೆಗೂ
ಸಿಕ್ಕೇ
ಬಿಡ್ತು
ಆ
ಗಾಳಕ್ಕೆ
ಮರೀಚಿಕೆ
ಇಲ್ಲಿಲ್ಲ
ಚೇತೋಹಾರೀ
ವನವಿಹಾರ
ಓ
ನನ್ನ
ಸುಂದರ
ಕನಸುಗಳೇ
ನೀವೇ
ಜತೆಯಾಗಿ
ಹಸಿರಾಗಿ
ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವ
ಆಗಬೇಕಿದೆ....ನನ್ನ.. ರೂಪಾಂತರ
ಬೆಳೆಯಬೇಕಿದೆ ನಾನು
ಪ್ರತಿ ಕಣದ ಅವಸ್ಥೆಯ ಮೀರಿ
ಸಂಭಂಧಗಳ ಕ್ಷಿತಿಜವ ಹಾರಿ
ಸಾಗಬೇಕಿದೆ
ಬಹು ದೂರದ ದಾರಿ
ಯಾರದೋ ಕಾಳಜಿಯ ಕಕ್ಕುಲತೆಯ ಭಾವದ
ಸನಿಹದಲ್ಲಿಯೇ ತಾಕುವ ಸುಗಂಧ
ಹಸೀ ಅವಸ್ಥೆಗೆ ಬಸಿವ ಅನುಭವ
ನಿರ್ಲಿಪ್ತತೆಯ ತಲ್ಲಣದ ಪ್ರತಿ ಕ್ಷಣ,
ನಾಳೆಯ ನಿನ್ನೆಯ ನೆನಪೆಲ್ಲವ
ಆವರಿಸೋ ಭಯ
ರಸಾನುಭೂತಿಯೇ ತಾಕದೇ
ಸಂಬಂಧ ಘಾಸಿ ಮಾಡದೇ
ನನ್ನನ್ನೇ ದಹಿಸ ಬೇಕಿದೆ
ಮೌನ, ಶ್ಶಬ್ದ, ನಿರ್ವಾತ
ಬದಲಾವಣೆ ಆಗಬೇಕಿದೆ
ನಿಕ್ಷಿಪ್ತ, ನಿರ್ಲಿಪ್ತ ,ನಿಗೂಢ,
ಜಯಿಸಿ
ರೂಪಾಂತರ Read more about ಆಗಬೇಕಿದೆ....ನನ್ನ.. ರೂಪಾಂತರ
ಕವನ ಬರೆಯುವ ಕನಸು!!!
ಶಾಯಿ ಪೆನ್ನನು ಕೈಯಲ್ಹಿಡಿದು
ಕವಿತೆ ಬರೆಯುವೆನೆ೦ದು
ನಾ ಕುಳಿತಾಗ !! ಗೀಚುತ್ತಾ ಹೋದಾಗ?
ನೆನಪಾಯಿತೊಮ್ಮೆ ಆಸುಮನ!!
ಕಣ್ಣ ಮು೦ದೆ ಕಾಫೀ ಲೋಟ!
ಸಣ್ಣ ನಗುವಿನ ಸ೦ತೋಷ!
ಸದಾ ಹಸನ್ಮುಖದ ಗೋಪೀನಾಥಾ....
ತಲೆ ಅಲ್ಲಾಡಿಸಿದೆ ಇದೇನು ಕನಸೋ ಯಾ ನಿಜವೋ?
ಹೌದು! ಅಲ್ಲಲ್ಲ! ಎ೦ದಿತು ಮನಸೊಮ್ಮೆ!
ಮತ್ತೆ ಕಣ್ಣ ಮು೦ದೆ ಕ೦ದನ ಹಿಡಿದ ನಾಗರಾಜ?
ಕನ್ನಡಕದೊಳಗೇ ನಗುವ ಮ೦ಜುನಾಥಾ...!!
ಪಿಕಳಾರದೊ೦ದಿಗೆ ಹರ್ಷನೂ...
ಗುರ್ರೆನುತಲೇ ಶ್ರೀಹರ್ಷನೂ...!!!
ಯಾಕೋ ಇ೦ದು ಸರಿಯಿಲ್ಲ ಎ೦ತೆನಿಸಿ
ಕಣ್ಣು ಕೊಡವಿ ನೋಡಿದರೆ..
ಪೆನ್ನು ವಾಲಿ, ಶಾಯಿ ಖಾಲಿ! Read more about ಕವನ ಬರೆಯುವ ಕನಸು!!!
ನೀ ಕಲಿಸಿದ ಪಾಠ

ಹೌದಲ್ಲಪ್ಪಾ ಕಾಲ ಮಿಂಚಿದೆ
ನೀನೇ ತಾನೇ ಕಲಿಸಿದೋನು
ನಿಮ್ಮ ಸುಖಕ್ಕೆ ಅಡ್ಡಿ ಕೂಳಿಗೆ ದಂಡ
ಅಂತ ನಿನ್ನಪ್ಪ ಅಮ್ಮನ್ನ ಹೊರಹಾಕಿದೆ
ನನ್ನನ್ನ ಒಂಟಿ ಒಂಟಿಯಾಗಿ ಬೆಳೆಸಿದೆ
ಆಗ ನಿನಗೆ ನೆನಪಿಗೆ ಬರಲಿಲ್ಲವಲ್ಲ
ನೀ ಕಲಿಸಿದ ಪಾಠ ಇದೇ ತಾನೆ
ಪ್ರಕೃತಿಯಲ್ಲೇ ನೀನು ಕಲಿತ ಪಾಠ
ಹಿರಿಯರ ಪ್ರೀತಿ,ಕಿರಿಯರಸ್ನೇಹ,
ಹೊಂದಿ ಬಾಳುವ,ಹಂಚಿ ತಿನ್ನುವ ಗುಣ
ನೀನೆಷ್ಟು ನಿನ್ನ ಮಕ್ಕಳಿಗೆ ಕೊಟ್ಟೆ?
ಕಲಿಸಲು ನಿನಗೆ ಸಮಯವೆಲ್ಲಿತ್ತು? Read more about ನೀ ಕಲಿಸಿದ ಪಾಠ
ಜೀವನವೇ ಸ೦ಕಲನ
ಕೂಡುವುದೂ ಬೇಡ, ಕಳೆಯುವುದೂ ಬೇಡ.
ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು,
ಅದಕ್ಕೇಕೆ ಭೀತಿ?
ಬಿರುಬಿಸಿಲು ಗ೦ಡಾ೦ತರ,
ಶೀತಲ ಸಮರಕೆ ನಾ೦ದಿ,
ನೀ ನಡೆಯುವ ಹಾದಿಯಲಿ ಕಲ್ಲು ಮುಳ್ಳು.
ಕೂಡುತಲೇ ಹೋದರೆ ಆಗುವುದು ಗ೦ಟು,
ನೀ ಬಿಡಿಸುವೆನೆ೦ದರೂ ಬಿಡಿಸಲಾಗದ ಕಗ್ಗ೦ಟು!
ಕಾಲದ ಕನ್ನಡಿಯಲ್ಲೊಮ್ಮೆ ಇಣುಕಿ ನೋಡು,
ಕಾಣುವುದು ನಿನ್ನ ಹೆಜ್ಜೆಯ ಜಾಡು!
ಬಿ೦ಬ-ಪ್ರತಿಬಿ೦ಬಗಳಲಿ
ಕಾಣದೇ ಪ್ರೀತಿಯ ಸಿ೦ಚನ?
ಏನನ್ನು ಮರೆತೆ ನೀನು?
ಹಾದಿಯೋ,ಪ್ರೀತಿಯೋ, ಕಾಲದ ಕನ್ನಡಿಯೋ?
ಮರೆಯಬೇಕು ಹಿ೦ದಿನದು,
"ಅರಿ ನೀ ಇಂದಿನದನು
ನಿನ್ನೊಳಗೇ ಗುಣಿಸಿಕೋ ಮುಂದಿನದನು
ಕಿರಿ ಕಿರಿ .......ಕವನಗಳು
ಸಾಕೇ.....ಬೇಕೆ
ಸಾಕು ...ಎಂದರೆ ಸಾಕೇ?
ಬೇಕು ....ಎಂದರೆ ಬೇಕೇ ?
ಸಾಕು ಎಂದರೆ ಸಾಕಾಗುವದಿಲ್ಲ!
ಬೇಕು ಎಂದರೆ ಬೇಕಾಗುವದಿಲ್ಲ
ನನ್ನ ಈ ಕಿರು ಕವನ ಓದಿ...
ಸಾಕು....... ಬೇಕಾಯಿತಲ್ಲ !
ಓಡಿ.....ಓಡಿ...!
ಓಡಿ ಓಡಿ ಓಡಿ..
ಗಾಡಿ ಬಂತು ಓಡಿ
ಎಲ್ಲೂ ನಿಲ್ಲ ಬೇಡಿ
ನಿಂತರೆ ಬದುಕು ರಾಡಿ
ಅವಳ ಈ ಮನಸ್ಸೇ ಹೀಗೆ..
ಅವಳ ಈ ಮನಸ್ಸೇ ಹೀಗೆ...
ಏನೆಲ್ಲ ಹೂತಿಟ್ಟು ಬೇಯಿಸುತ್ತದೆ.
ಬಾಡಿಗೆ ಮನೆಯ ಮುರುಕು
ಗೇಟಿನ ಹಿಂದೆ ನಿಂತ ಅವಳಿಗೆ
ಮದುವೆಗೆ ಮುಂಚಿನ
ದಿನದ ಕನಸುಗಳ ನೆನಪು.........
ರಸ್ತೆಯಂಚಿನಲಿ ಹಾದು ಹೋಗುತ್ತಿರುವ
ಕಟ್ಟುಮಸ್ತಾದ ಯುವಕ..
ಕಾರಿನಲಿ ಕಿಲ ಕಿಲ ನಗುತ್ತಾ ಸಾಗುತ್ತಿರುವ ದಂಪತಿ.!
ಎದುರಿಗಿರುವ ಭವ್ಯ ಬಂಗಲೆ..
ಇನ್ನೂ.. ಏನೇನೊ
" ನಾನು ಮೋಸ ಹೋದೆ!"
ನಡುಗುವ ಕರಗಳಿಂದ......
ಗೇಟಿನ ಸರಳು ಹಿಡಿದು.. Read more about ಅವಳ ಈ ಮನಸ್ಸೇ ಹೀಗೆ..
ಉಗ್ರವಾದ
ಮೊದಲೊಮ್ಮೆ
ಅಪರೂಪದ
ಗಿಡವೊಂದು
ಕಣ್ಣಿಗೆ ಬಿತ್ತು
ಹಾಗೆಯೇ ಬಿಡಲು
ಮನಸ್ಸಾಗದೇ
ಎತ್ತಿ ತಂದು
ಜೋಪಾನವಾಗಿ
ಮನೆಯೊಳಗೆ
ಇಟ್ಟು ಪೋಷಿಸಿದೆ
ಈಗ ಅದೇ
ನನ್ನೆಲ್ಲವನ್ನೂ
ಅಪೋಷಣೆಯಾಗಿಸಿದೆ
ಸ್ವಂತಿಗೆಗೆ
ಆಸ್ಪದವೇ
ಇಲ್ಲದಂತೆ ಆವರಿಸಿ
ಬೆಳೆದು ಬಿಟ್ಟಿದೆ
ಸಾರ್ವತ್ರಿಕವಾಗಿಬಿಟ್ಟಿದೆ!!
ಈಗ ನಾನೇ
ಅನ್ವೇಷಣೆಯಲ್ಲಿದ್ದೇನೆ Read more about ಉಗ್ರವಾದ
ಎಲ್ಲಿದೆ ನಮ್ಮೆಲ್ಲರ ಸಂತೋಷ... ?

ಅಯ್ಯೋ ಈ ತಾಪತ್ರಯಗಳ ಸಂತೆ
ಸಾಕಪ್ಪಾ ನಮಗೆ ಮಾತ್ರ ಅಂತೆ
ಎಂದೆಣಿಸೋ ಮೊದಲು ನೆನಪಿರಲಿ
ಗೋಚರ ನಮಗೆ ನಮ್ಮ ಕಷ್ಟ ಮಾತ್ರ
ಇವೆ, ಸಕಲರಿಗೂ ಕಷ್ಟ ಅವರವರದ್ದು
ಸಂತೋಷ ನಾವಿಲ್ಲದ ದಿನಗಳಲ್ಲಿಲ್ಲ
ನಾವಿರದ ಕಾರ್ಯಗಳಲ್ಲೂ ಇಲ್ಲ
ಅದಿರುವುದು ನಾವಿರುವಲ್ಲಿ ಮಾತ್ರ
ಪ್ರೀತಿಸೆ ಎಲ್ಲವನ್ನ
ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ, ನಮ್ಮನ್ನ
ಅಲ್ಲಿದೆ ನಮ್ಮೆಲ್ಲರ ಸಂತೋಷ
ನಿನ್ನೆಯೋ ಮುಗಿದ ಕಥೆ Read more about ಎಲ್ಲಿದೆ ನಮ್ಮೆಲ್ಲರ ಸಂತೋಷ... ?
ಸನ್ನಾಹ
ತಲೆ ಬಗ್ಗಿಸಿ ನೆಲ ನೋಡುತ,
ಹೆಬ್ಬೆರಳಲಿ ನೆಲ ಕೆರೆಯುತ,
ನನ್ನತ್ತ ನೋಡುವ ನಿನ್ನ ನೋಟದಲಿ,
ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ
ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ,
ಜಿಟಿ - ಜಿಟಿ ಮಳೆಯಲಿ,
ಢವ-ಢವ ಎದೆಯಲಿ!
ಬೆಚ್ಚನೆಯ ಸ್ಪರ್ಶ,
ನಿಮಿರುವ ರೋಮ!
ಫಕ್ಕನೇ ಕಾಣುವ ಮಿ೦ಚಿನ೦ತೆ,
ಛ೦ಗನೇ ಜಿಗಿಯುವ ಚಿಗರೆಯ೦ತೆ,
ತಲೆಯೆತ್ತುವ ಬಯಕೆಯ ಬೆ೦ಕಿಗೆ
ತುಪ್ಪ ಸುರಿಯುವ ಮದನನ೦ತೆ,
ಮಿಲನಕೆ ಕರೆಯುವ ಸನ್ನಾಹವೇ ನಲ್ಲೆ? Read more about ಸನ್ನಾಹ
ಹೃದಯದ ಭಾವದೇ ಅರ್ಥವನರಿಯದೇ
ಕಾಣದ ಪ್ರೀತಿಯ ಆಂತರ್ಯವರಿಯದೇ
ಅರಸುತಲಿದ್ದೆ ಮನವೆಲ್ಲಾ
ಹೃದಯದ ಒಳಗೂ ಕಾಣದೇ ಹೊರಗೂ
ಹುಡುಕುತಲಿದ್ದೆ ದಿನವೆಲ್ಲಾ
ಹೃದಯದ ಭಾವದೆ ಅರ್ಥವನರಿಯದೇ
ಅಲೆಯುತಲಿದ್ದೆ ಹೊರಗೆಲ್ಲಾ
ಅರಸುವದರಿಯದೆ ಹರಸುವದರಿಯದೇ
ಬಯಸುವದರಿಯದೇ ಒಳಗೆಲ್ಲಾ
ಎಲ್ಲೋ ಹುಟ್ಟಿದೆ ಎಲ್ಲಿಯೋ ಬೆಳೆದೆ
ಅರಿಯದೆ ನನ್ನ ಹೊರೆಯೆಲ್ಲಾ
ಅರಿವನು ಬಯಸದೆ ಕಲಿತೆನು ಕಲಿಯದೆ
ಸರಿಸದೆ ನನ್ನ ಪೊರೆಯೆಲ್ಲಾ
ಕಣ್ಣಿಗೆ ಕಾಣದ ಮನಸಿಗೂ ನಿಲುಕದ
ಅರಿವನೆ ಹರಡುತೆ ಇಲ್ಲೆಲ್ಲೂ Read more about ಹೃದಯದ ಭಾವದೇ ಅರ್ಥವನರಿಯದೇ
ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು
ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು
ತುಟಿ ತೆರೆಯದಿದ್ದರೂ...
ಕಣ್ಣುಗಳಲ್ಲೇ ಮಾತುಗಳ
ವಿನಿಮಯ
ಮೊದಲ ಬಾರಿಗೆ ಗೊತ್ತಾಗಿತ್ತಲ್ಲ
ನಿನಗೆ,
ನಾ ಬರೀ ಭಾವುಕಳೆ೦ದು
ಸ್ವಚ್ಚ ಕೊಳ,ಶುಧ್ದ ಕನ್ನಡಿ
ಅತ್ತರೆ ಅತ್ತೀತು,ನಕ್ಕರೆ ನಕ್ಕೀತು,
ಸ್ಪಷ್ಟ ಬಿ೦ಬದ ಚಲನೆ
ಅರ್ಥವಾಗುವ ಛಾಯೆ
ಸುಳ್ಳಿನ ಮೇಲೊ೦ದು ಸುಳ್ಳು...
ನೀನು ಹೇಳುತ್ತಿರುವುದು
ಸುಳ್ಳೆ೦ದು ನಿನಗೂ ಗೊತ್ತು
ಅದೆಲ್ಲಾ ನಿಜವಲ್ಲವೆ೦ದು
ನನಗೂ ಗೊತ್ತು......
ದಯವಿಟ್ಟು ಸಾಕು ಮಾಡು.....
ಎಲ್ಲವನ್ನೂ........
ಮಳೆ ಸುರಿವಮೊದಲು
ಹರಿದ ಬದುಕಿಕೊ೦ದು
ಸೂರನ್ನಾದರೂ ಕಟ್ಟಿಕೊಳ್ಳೋಣ......
ಯಾರು ಬಲ್ಲರು.... Read more about ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು
ಮರ ಹೇಳಿದ್ದು.....
ಗೆಳೆಯರೇ.....!
ಮಾನವೀಯತೆ ಮರೆತು
ಹೊತ್ತೊಡಲ ಬಂಜೆಯಾಗಿಸುವ
ಛಲವೇಕೆ ?
ಶುದ್ಧುಸಿರು,ಹಸಿರು ಬೆಳೆ
ನೀಡುವ ನನ್ನೊಡಲಿಗೆ
ಕೊಡಲಿಯೇಟು ಹಾಕುವ
ಕಟುಕರಾದಿರೇಕೆ ?
ಸಾಯದಿರಿ...ಸಾಯಿಸದಿರಿ !
ತಾಯ್ ತಲೆಯ ಬೋಳಾಗಿಸಿ
ವಿಧವೆಯ ಪಟ್ಟ ಕಟ್ಟುವ ಹಂಬಲ ಬಿಟ್ಟು
ನಿಮ್ಮ ಹೊಲದ ಬದಿಯಲ್ಲಾದರೂ
ಬೆಳೆಯುವ ಅವಕಾಶ ಕೊಡಿ ದಯವಿಟ್ಟು...
( ಸಂಪದದಲ್ಲಿ ಮಹಿಳಾ ಸಾಹಿತಿ ಹಾಗೂ ಕವಿಗಳಿಗೆ ದೊರೆಯುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ ಅರ್ಪಿಸುವೆ) Read more about ಮರ ಹೇಳಿದ್ದು.....
ಅಂದು-ಇಂದು
ಮತ್ತೆ ಮತ್ತೆ ಕಾಡುವ
ಅದೇ ಬೆಳಗು
ನೀರಸ ಇಬ್ಬಂದಿಯ
ಪಾಠ ಶಾಲೆ
ತುಂಟ ತುಂತುರ ರಸಾಭಾಸ
ಪಾಠ ಮನೆಕೆಲದ ಅತಿಸಾರ
ಬಿಡಲೊಲ್ಲದ ಗುಂಗುಗಳು
ಅಳಿವ ಕಾಲಕ್ಕಿಂತ ಬೆಳೆವ ದಿನಗಳ
ಕಲ್ಪನೆಯಲ್ಲಿ ನಿರಂತರ
ಕ್ರಿಯಾಶೀಲ
ಚೇತೋಹಾರೀ
ಬದುಕು
ಅದೇ ಹಿನ್ನೆಲೆಯ
ತರಾತುರಿಯ ಬೆಳಗು
ಕೆಲ್ಸದ ಶಾಲೆಯಲ್ಲಿ
ಬೆನ್ನಿಗೆ ಚೀಲ
ಜವಾಬ್ದಾರಿಯ ಪಟ್ಟದಲ್ಲಿ
ಸದಾ ಕಲಿವ, ಕಲಿಸುವ
ತಲೆಬುಡವಿಲ್ಲದ ವೈರುದ್ಧದ ಬಾಳು
ಒತ್ತಡದ ನಡುವೆಯೇ
ಮುಖವಾಡದ ರಾಶಿ
ದೂರದ ರಮ್ಯ ಬೆಟ್ಟದ
ಚಿಂತೆಯಲ್ಲೇ ನಿರಂತರ
ಧಾವಂತದ
ಚಿಗುರು
Read more about ಅಂದು-ಇಂದು
ವಿಷ ದಂಶನ ಮತ್ತು ಪ್ರತಿವಿಷ

ಎಲ್ಲೆಲ್ಲೂ ಅದೇ ಸುದ್ದಿ
ಹಗಲು ರಾತ್ರೆಯೆನ್ನದೇ
ಒಳಗೂ ಹೊರಗೂ
ಹಾವೇ ಅಂತೆ
ಸಣ್ಣ ದೊಡ್ದವರೆಂಬ
ಪರಿವೆಯಿಲ್ಲದೇ
ಹೆಂಗಸು ಮಕ್ಕಳೆಂಬ
ಭೇಧವಿಲ್ಲದೇ
ಊರು ಕೇರಿ
ಪಟ್ಟಣ ಪ್ರಾಂತ್ಯ
ಎಲ್ಲೆಡೆಯಲ್ಲೂ
ವಿಷ ದಂಷನ
ವಾರ್ತೆಯೇ
ಹಳೆ ಹೊಸ
ಕಲಿತ ಕಲಿಯದ
ಸಣ್ಣ ದೊಡ್ಡ
ವೈದ್ಯರೂ
ತಲೆಕೆಡಿಸಿಕೊಂಡದ್ದೇ ಬಂತು
ಅದರ ಪ್ರತಿವಿಷಕ್ಕಾಗಿ
ಕಳೆದರು ಜೀವ, ಜೀವನ Read more about ವಿಷ ದಂಶನ ಮತ್ತು ಪ್ರತಿವಿಷ
ಭರವಸೆಯ ಬೆಳಕು ನನ್ನ ಗೆಳೆಯ.
ಗೆಳೆಯ ಭರವಸೆಯ ಬೆಳಕಾಗಿದ್ದೆ ನೀನ೦ದು
ಕಾರ್ಮೋಡ ಮುಸುಕಿ ದಾರಿ ಕಾಣದಿದ್ದಾಗ
ದಿಕ್ಕುತಪ್ಪಿದ ಕ೦ದನ೦ತೆ ನಾನಲೆಯುವಾಗ
ನೀನಿದ್ದೆ ನನ್ನೊಡನೆ ಹೇಗೆ ವ೦ದಿಸಲಿ ನಿನ್ನ!
ಗೆಳೆಯ ಕೊನೆಕಾಣದ ದಾರಿಯಲ್ಲಿ ಗುರುವಾಗಿದ್ದೆ
ಪ್ರೀತಿಯ ಹುಡುಗಿ ಕೈ ಕೊಟ್ಟಾಗ ಅಪ್ಪನಿ೦ದ ಒದೆ ತಿ೦ದಾಗ ಅಳುವ ಮನಕ್ಕೆ ಅಮ್ಮ ಸಿಗದಿದ್ದಾಗ
ನೀನಿದ್ದೆ ನನ್ನೊಡನೆ ಹೇಗೆ ತೊರೆಯಲಿ ನಿನ್ನ!
ನಿನ್ನ ಸ್ನೇಹ ಹೃದಯದ ನೋವ ಮರೆಸಿತ್ತು
ನೀನಿತ್ತ ಭರವಸೆ ಮನವ ಅರಳಿಸಿ ನಗಿಸಿತ್ತು
ಸಾಧನೆಯ ಹಾದಿಯಲಿ ನಿನ್ನ ಜೊತೆಯಿತ್ತು
ನೀನಿದ್ದೆ ನನ್ನೊಡನೆ ಹೇಗೆ ಮರೆಯಲಿ ನಿನ್ನ!
ನನ್ನ ನಗುವಿನ ಹಿ೦ದೆ ಸದಾ ನಿನ್ನ ನೆರಳಿತ್ತು
ನನ್ನ ಸಾಧನೆಯ ಹಿ೦ದೆ ನಿನ್ನ ಸಾ೦ತ್ವನವಿತ್ತು Read more about ಭರವಸೆಯ ಬೆಳಕು ನನ್ನ ಗೆಳೆಯ.
ಓ ನೀಲ ಮೇಘವೆ........

(ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ಖಲೀಫಾ"ದ ಮೇಲಿನಿ೦ದ ಕಾಣುವ ದುಬೈನ ಗಗನ ಚು೦ಬಿಗಳ ನಡುವಿನ ಮೋಡಗಳ ನೋಟ. ಚಿತ್ರ ಕೃಪೆ: ಅ೦ತರ್ಜಾಲ.)
ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..
ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು
ಬಿಸಿ ನೀರು ಕಾಯಿಸುವ ಒಲೆಗೆ ಉರುವಲು
ಹಾಕಿ ಕಡ್ಡಿ ಕೀರಿ, ನೋಡ್ತೇನೆ!
ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ
ನ೦ತರವೇ ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದಾರೆ!
ಅಲೆಲೆ! ಏನೇ ಇದು? ಇಷ್ಟು ಬೇಗ?
ನೂರಾ ಎ೦ಟು ಪ್ರದಕ್ಷಿಣೆ ಹಾಕ್ತೀನಿ ಅ೦ತ ಹರಕೆ ಹೊತ್ತಿದೀನ್ರೀ!
ದಿಗಿಲಾಯಿತು ನನಗೆ! ಇದೇನಪ್ಪಾ ಇಷ್ಟು ಬೆಳಿಗ್ಗೆನೇ
ನನ್ನನ್ನು ಸುತ್ತು ಹಾಕೋದು ಅ೦ದ್ರೆ?
ನನಗೇನೇ? ಸ್ವಲ್ಪ ತಡಿಯೇ, ಸ್ನಾನ ಮಾಡಿ ಬ೦ದು ಬಿಡ್ತೀನಿ!
ನಿಮಗ್ಯಾರ್ರೀ? ಅದೂ ನೂರಾ ಎ೦ಟು!
ಈಗ ನಾಲ್ಕು ವರ್ಷದಿ೦ದ ಪ್ರತಿದಿನವೂ ಹಾಕ್ತಾ ಇಲ್ವೇ?
ಅದರ ಲೆಕ್ಕ ಕೋಟಿಯೇ ಅಗಬಹುದೇನೋ?
ವ್ಯ೦ಗ್ಯವಿತ್ತೇನೋ? ಬೆಳ ಬೆಳೆಗ್ಗೇನೆ?
ನ೦ಗಾಲ್ಲಾ೦ದ್ರೆ ಇನ್ಯಾರಿಗೆ ನೂರೆ೦ಟು ಪ್ರದಕ್ಷಿಣೆ?
ನೀವು..ನೀವು.. ನನ್ನನ್ನು ಹೆಣ್ಣು ನೋಡೋಕೆ ಅ೦ಥ ಬ೦ದಿದ್ರಲ್ಲ,
ಹೌದು, ಆಗ ನೀವೇ ನನ್ನ ಗ೦ಡ ಆಗಲಿ, Read more about ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..
ಮತ್ತೆ ಮುಂಗಾರು
ನೀ ಬರೆದ ಸಾಲೊಂದು ಕಾಡಿದೆ ಇಂದು Read more about ಮತ್ತೆ ಮುಂಗಾರು
ವಿರೋಧಾಭಾಸ!
ಏನೆಲ್ಲ ಭಾವನೆಗಳು ಮನದಲ್ಲಿ ಹಸಿರು ಸಿರಿಯ ಕ೦ಡೊಡನೆ
ಕಣ್ಣು ಹರಿದತ್ತ ಹಸಿರು ಹಕ್ಕಿಗಳ ಕಲರವ ಎನಿತು ಸು೦ದರ ಆ ದೃಶ್ಯ
ಸುತ್ತೆಲ್ಲ ಕಾಣುವ ಹರುಷ ಸ೦ತಸ ಕಿಲಕಿಲ ನಗು ಸು೦ದರ ಕ್ಷಣಗಳು!
ಆದರೆ ಏನೆಲ್ಲ ವಿರೋಧಾಭಾಸಗಳು ಸುಡು ಬೇಸಿಗೆಯ ಬಿರು ಬಿಸಿಲಲ್ಲಿ
ಒಣಗಿ ಉದುರಿದ ಎಲೆಗಳು ಬೋಳುಬೋಳಾದ ವಿಕೃತಿ ಬಿಕೋ ಎನ್ನುವ
ಪ್ರಕೃತಿ ಇದಲ್ಲವೆ ವಿಸ್ಮಯ ನಮ್ಮ ಅರಿವಿಗೆಟುಕದ್ದು ತಿಳಿವಿಗೆ ಬಾರದ್ದು! Read more about ವಿರೋಧಾಭಾಸ!
ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......
ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿ
ಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ
ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆ
ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಪುಟ್ಟ ಮರಿಗಳೀಗ ದೊಡ್ಡವಾಗಿವೆ ಅವು
ಪರಪುಟ್ಟಗಳಲ್ಲ ತಮ್ಮದೇ ಲೋಕ ತಮ್ಮದೇ
ಹಾಡು ತಮ್ಮದೇ ಹಾರಾಟ ತಮ್ಮದೇ ಹೋರಾಟ
ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಹಾಗೇ ಉಳಿದಿದೆ ರುಚಿಯಾದ ಆಹಾರ
ತನ್ನ ಕೊಕ್ಕಿನಲಿ ಹಿ೦ದಿನ೦ತಿಲ್ಲ ಮರಿಗಳೀಗ
ಅವರ ಆಹಾರದ ರೀತಿ ನೀತಿ ಬದಲಾಗಿದೆಯೀಗ
ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಆದರೆ ಉಳಿದಿಹುದು ಮಡದಿ ಹಕ್ಕಿ ಹಾಗೆಯೇ
ಕಾಯುತಿಹುದದಿಲ್ಲಿ ತನ್ನಿನಿಯನ ಬರುವಿಕೆಗಾಗಿ Read more about ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......
ರಿಮೋಟ್ ಎಲ್ಲಿ?
ರಿಮೋಟ್ ಎಲ್ಲಿ?
ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ
ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲ
ಒಳಗಡೆಯಿಂದ ತಿಳಿದ ದನಿಯೇ
ಮೇಣದ ಬತ್ತಿ ಎಲ್ಲಿದೆಯೇ?
ಅಮ್ಮ ಕ್ಯಾಂಡಲ್ ಎಲ್ಲಿ?
ರಿಮೋಟ್ ಎಲ್ಲಿ?
ಟಾರ್ಚ್ ಎಲ್ಲಿಟ್ಟಿದ್ದೀಯಾ?
"ಈ ಮನೆಯಲ್ಲಿ ಒಂದೂ
ಇಟ್ಟಜಾಗದಲ್ಲಿ ಇರಲ್ಲ ನೋಡು "
ಹೊರಗಿನಿಂದ ತೂರಿ
ಬರುವ ಶಬ್ದ ಹಾವಳಿಯಲ್ಲಿ
ಅದೂ ನೆನಪಿಗೆ ಬರಲ್ಲ
ರಿಮೋಟ್ ಎಲ್ಲಿ?
ಅಲ್ಲೇ ಇರಬೇಕು ತಲೆದಿಂಬಿನಡಿಯಲ್ಲಿ
ಅಯ್ಯಯ್ಯೋ? ಎನೂ ಏನಾಯ್ತು?
ಇನ್ನೇನು ಜಿರಲೆ ಸಿಕ್ಕಿರಬೇಕು
ತಗೊಳ್ಳಿ ನಿಮ್ಮ ಮೇಣದ ಬತ್ತಿ
ರಿಮೋಟ್ ಎಲ್ಲಿ?
ಬೆಂಕಿ ಪೆಟ್ಟಿಗೆ ..?
ನಿನ್ನೆನೇ ಹೇಳಿದ್ದೆ Read more about ರಿಮೋಟ್ ಎಲ್ಲಿ?
ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!
ಏನಾಗಬೇಕೋ ಅದು ಖ೦ಡಿತ ಆಗಿಯೇ ಆಗುತ್ತದೆ
ಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!
ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವ
ಏನೆಲ್ಲ ಮಾಡುವ ನಾ ಹಾಗೆ ಹೀಗೆ ಧಾ೦ ಧೋ೦ ಎ೦ದು!
ಆದರೆ ಯಾವುದನೂ ತಡೆಯಲಾಗದು ಶಕ್ತಿಹೀನನವನು
ಅರ್ಥವಾಗುವುದೇ ಇಲ್ಲ ದುರ೦ತ ಕಣ್ಣೆದುರು ಬರುವವರೆಗೂ!
ಎಷ್ಟು ಪರಿತಪಿಸಿದರೇನು ದುರ೦ತಕೆ ಬಲಿಯಾದ ಜೀವ
ಮತ್ತೆ ಬರುವುದೇ? ಅರ್ಥವಿರುವುದೇ ಈ ಹಪಹಪಿತನಕೆ?
ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ! Read more about ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಕುಲುಕುತ್ತಾ ಮುಲುಕುತ್ತಾ.........!
ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರು
ಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ ಕಾರು
ಭೋರ್ಗರೆವ ಸಾಗರದ ಅಲೆಗಳು ಗಢಚಿಕ್ಕುವ ಸಿಡಿಲಿನ ಅಬ್ಬರ
ಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿರ೦ತರ
ಕನಸುಗಳ ಸುಮಧುರ ಮಿಲನ ಸಾಧನೆಗಳ ಸಿಹಿ ಹೂರಣ ಈ ಜೀವನ
ಆದರೂ ನಡೆಯಬೇಕಿದೆ ದೂರ ತಲುಪಬೇಕಿರುವ ದಾರಿಯದೇ ಗಮನ
ತಲುಪಲಿದೆ ದೋಣಿ ಆ ದೂರ ತೀರ ಜೊತೆಗಿರಲು ಮನದ ಧೃಡ ನಿರ್ಧಾರ
ಏನಾದರೇನು ತಲುಪಿದರೆ ಆ ತೀರ ಸಿಗಲಿದೆಯಲ್ಲಾ ಮನವ ತಣಿಪ ಸಾರ!!
ಕುಲುಕುತ್ತಾ ಮುಲುಕುತ್ತಾ ಸಾಗುತ್ತಲೇ ಇರಲಿದೆ ಭಾವನೆಗಳ ಮಹಾ ತೇರು
ಎಷ್ಟೇ ಅಡ್ಡಿ ಆತ೦ಕ ಕಾತರ ಕಳವಳಗಳ ನಡುವೆಯೂ ಓಡಲಿದೆ ಈ ಕಾರು!! Read more about ಕುಲುಕುತ್ತಾ ಮುಲುಕುತ್ತಾ.........!
ನಾನೊ೦ದು ಹಿಮಬಿ೦ದು
(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)
ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!
ನದಿ ಸಾಗರಗಳ ಎಲ್ಲೆ ದಾಟಿ
ದೇಶ ಭಾಷೆಗಳ ಗಡಿಯ ಮೀರಿ
ನೂರಾರು ಜನರೊಡನೆ ಒಡನಾಡಿ
ಹತ್ತಾರು ಕಥೆಗಳ ಕಣ್ಣಾರೆ ಕ೦ಡು
ಅಲ್ಲಿಲ್ಲಿ ಅಲೆದಾದಿ ಬ೦ದು ನಿ೦ದಿಹೆನಿ೦ದು
ನಾನೊ೦ದು ಹಿಮಬಿ೦ದು!
ಕರಗುವಾ ಭಯವಿದೆ ಸುಡು ಬಿಸಿಲಿನಲ್ಲಿ
ಹೆಪ್ಪುಗಟ್ಟುವ ಆತ೦ಕವಿದೆ ಕೊರೆವ ಛಳಿಯಲ್ಲಿ
ಕಣ್ಮರೆಯಾಗುವ ತವಕವಿದೆ ಬಿರುಗಾಳಿಯಲ್ಲಿ
ಆದರೂ ಹೊಳೆದು ತೊನೆಯುವ ಕಾತುರವಿದೆ ಮನದಲ್ಲಿ
ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು! Read more about ನಾನೊ೦ದು ಹಿಮಬಿ೦ದು
ಎ೦ಥ ವಿಸ್ಮಯ......!

ಎ೦ಥ ವಿಸ್ಮಯವಿದು ದೈವ ಲೀಲೆ
ಕುತೂಹಲ ನಗುವ ಕ೦ದಮ್ಮನ ಕಣ್ಣಲಿ
ನಿರ್ಭಾವ ಇಹವ ಮುಗಿಸಿದ ಹಿರಿಯಮ್ಮನಲಿ
ಜಗವ ಕಾಣುವ ಕುತೂಹಲ ಮುಗ್ಧ ಕಣ್ಣಲಿ
ಬಾಳಿ ಹಣ್ಣಾದ ಹಿರಿ ಜೀವ ಈಗ ಮುಪ್ಪಿನಲಿ
ಕಾಯುತಿದೆ ಕಾಲನ ಕರೆಯ ತವಕದಲಿ
ಹಲವು ಪ್ರಶ್ನೆಗಳು ನೋಡುಗರ ಮೊಗದಲಿ! Read more about ಎ೦ಥ ವಿಸ್ಮಯ......!
ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ!
ನೋಡು ಗೆಳತಿ ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ
ದುಡಿದು ದಣಿದಿಹನು ದಿನವಿಡೀ ಬೇಕವನಿಗೀಗ ನಿಜದಿ ರಜ!
ಅಗಾಧ ಕಡಲ ತಿಳಿನೀರನೆ ಕೆ೦ಪಾಗಿಸಿರುವ ಅವ ಕೋಪದಿ
ಮುಳುಗುವ ಅವನ ಕಣ್ಣಲಿ ಕ೦ಡೆಯಾ ಆ ರೋಷ ಬೇಗುದಿ!
ರೋಸಿ ಹೋಗಿರುವನೇನೋ ಕ೦ಡು ಈ ಜನರ ಮೋಸ ದಗಾ
ನೆತ್ತರ ಕಾರುತಲೇ ಈ ಲೋಕಕೆ ಧಿಕ್ಕಾರ ಎನ್ನುತಿರುವನೀಗ!
ನೆನಪಿದೆಯೇ ಅ೦ದು ನಾ ಓಡುತಲಿದ್ದೆ ಇವನ೦ತೆಯೇ
ಕಾರ್ಯ ನಿಮಿತ್ತ ಧಾವ೦ತದ ನಗರ ಜೀವನದಲ್ಲಿಯೇ!
ಎಷ್ಟೆಲ್ಲ ಕಷ್ಟಗಳು ಏನೆಲ್ಲ ಕೋಟಲೆಗಳು ಅದೆಷ್ಟು ನಷ್ಟಗಳು
ದಾಟಿ ಬ೦ದಾಯಿತು ಆದರೆ ಇನ್ನು ಉಳಿದಿವೆ ನಮ್ಮಿಷ್ಟಗಳು!
ಸೋತು ಕುಸಿದಿವೆ ನನ್ನ ಕಾಲುಗಳು ಉಳಿದಿಲ್ಲ ಇನ್ನು ಶಕ್ತಿಯಲ್ಲಿ Read more about ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ!
ನಮ್ಮ ಬದುಕು ನಮ್ಮದು..!!!
ಒಮ್ಮೊಮ್ಮೆ ಗುಟುರು ಹಾಕುವ ಗೂಳಿಯ೦ತೆ
ಸಣ್ಣದೊ೦ದು ಕಣ್ಣಾಮುಚ್ಚಾಲೆ
ಮಕ್ಕಳ ನಡುವಿನ ಕಳ್ಳ ಪೋಲೀಸ್ ಆಟ
ಪ್ರಕೃತಿ-ಮನುಜರ ನಡುವಿನ ಹೊಯ್ ಕೈದಾಟ
ಕನಸು ಕ೦ಡಾಗಲೆಲ್ಲಾ ಮನಸ್ಸು ಹೇಳುತ್ತದೆ
ಅವೆಲ್ಲಾ ಆಗೇ ಆಗುತ್ತದೆ೦ದು
ಆಗದಿದ್ದಾಗಲೂ ಮನಸ್ಸು ಹೇಳುತ್ತದೆ
ಮು೦ದೆ೦ದಾದರೂ ಸ೦ಭವಿಸಬಹುದೆ೦ದು!
ಆಗದೆ೦ದು ಸುಮ್ಮನೆ ಕುಳಿತು
ಅಗುವುದೆ೦ದು ಭರವಸೆ ಇಟ್ಟು
ಕಳೆಯುವುದು ಹೇಗೆ೦ಬ ಚಿ೦ತೆಯೇತಕೆ?
ಸೋಲು-ಜಡತ್ವಗಳ ಒಮ್ಮೆ ಬದಿಯಲ್ಲಿಟ್ಟು
ಸಮಚಿತ್ತತೆಯ ಬಾಳುವೆಯಲ್ಲಿ
ಬೇಸರ ಬೇಡ ಈ ದಿನ ಮಜ
ಆಗಲಿ ಬೇಕಾದರೆ ನಾಳಿಗದು ಸಜಾ
Read more about ನಮ್ಮ ಬದುಕು ನಮ್ಮದು..!!!
ಬೆಳಕಿನ ಸಿ೦ಚನ..
ಯೋಚಿಸುತ್ತಲೇ ಇರುತ್ತೇನೆ!
ಖಾಲಿ ಮನಸ್ಸೀಗ ಗರಿಗೆದರತೊಡಗಿದೆ..!!
ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ
ಕಾವ್ಯ ಕೃಷಿ!!
ಯೋಗಿ-ಜೋಗಿ..!!
ಪಾಠ...(?)
ಉಸಿರು ಹಿಡಿದು ಕೂತ ಹೊತ್ತು
ಕೇಳದಾಯ್ತು ಮನದ ಮಾತು
ಏನಿದೇನಿದೆನುತ ಕ೦ಡೆ ಸುತ್ತಮುತ್ತಲೂ
ಕಾಣದ೦ತೆ ಕಣ್ಣು ಮುಚ್ಚಿ
ಆಟ ಹೂಡಿ ಓಡಿ ಹೋದ
ಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲು
ಮೊದಲ ಮಳೆಯ ಮಣ್ಣ ಕ೦ಪು
ಮಗುವ ತೊದಲ ಮಾತಿನಿ೦ಪು
ಕ೦ಡು ಕುಣಿವ ನನ್ನ ಮನಕೆ ಅವಳೆ ಸತ್ಯಳೋ
ಮೌನಿ ಮುಖದೆ ನಗುವ ತ೦ದ
ನೊ೦ದ ಮನಕೆ ಹಸಿರ ತ೦ದ
ಮಾಟಗಾತಿ ಒಲವ ಮೂರ್ತಿ ಅವಳೆ ನಿತ್ಯಳೋ
ದಾರಿಗು೦ಟ ನಡೆಯುವಾಗ
ಬಾರಿ ಬಾರಿಗೊ೦ದು ರಾಗ
ಹಾಡಿ ನಲಿಸಿ ಹೊಸತು ಲೋಕ ತೋರಲೇತಕೆ
ಬರುವೆನೆನುತ ತಿರುಗಿ ನೋಡಿ
ಮರೆವೆ ಅದುವೆ ಜಗದ ಮೋಡಿ
ಎನುತ ನನ್ನ ಮರೆತು ನಡೆದು ಹೋಗಲೇತಕೆ
ಲೋಕದೊಳಗೆ ಹಣವದೊ೦ದು
ಮಾಯೆಯೆ೦ದು ಬಗೆದ ನನಗೆ
ಕಾಣದೊ೦ದು ಲೋಕದಾ ನಡೆಯ ತಿಳಿಸಿದೆ ನೀ
ನದರ ಹಿ೦ದೆ ನಡೆದ ದಿನವೆ
ಮೂರ್ಖನಾದೆ ನಾನು ಗೆಳತಿ
ಒಲವೆ ಜಗವು ಎನುವ ನನಗೆ ಪಾಠ ಕಲಿಸಿದೆ
ಡಿವಿಜಿ ಅವರ
ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ Read more about ಪಾಠ...(?)
ಬೂಟ್ ಪಾಲೀಶ್ ಹುಡುಗ ಮತ್ತು ಸ್ವಾತಂತ್ರ್ಯೋತ್ಸವ
ಶಾಲೆಯೆದುರು ಬೀದಿಯಲ್ಲಿ ಕುಳಿತ
ಅವನ ಕಣ್ಣಗಳಲ್ಲಿಂದು ಹೊಸ ಹೊಳಪು !
ಇದೊಂದು ದಿನವಾದರೂ.........
ಖಾದಿ ಬಟ್ಟೆ ತೊಟ್ಟ ಬೆರಳೆಣಿಕೆಯ ಮಂದಿಯ
ಪಾದರಕ್ಷೆಗೆ ಪಾಲೀಶ್ ಯೋಗ..!
ಸಿಗಬಹುದಿಂದು ಬಹಳಷ್ಟು ಗಿರಾಕಿ..
ಜೈಲಿನಲಿ ಬಂಧಿಯಾಗಿಹ ತನ್ನ ತಾಯಿಗೆ
ಕೊಡಬಹುದು ಒಂದಿಷ್ಟು ಸಿಹಿ..!
ಕಣ್ಣೆದುರಿಗೆ....
ಕೈಯ್ಯಲ್ಲಿ ಚೈನಾಮೇಡ್ ತ್ರಿವರ್ಣ ಧ್ವಜ ಹಿಡಿದ
ಮಕ್ಕಳ ಶಿಸ್ತಿನ ದಂಡು.....
ಅವರ ಹಿಂದೆ ನಿಸ್ತೇಜ ಕಣ್ಣುಗಳ ಒಂದಿಷ್ಟು ಹಿರಿಯರ ಹಿಂಡು
ವಸ್ತ್ರ ಮಾತ್ರ ಗರಿ...ಗರಿ
ಸಾಗಿತ್ತು ಪಥ ಸಂಚಲನ....ಅವರ ಹಿಂದೆಯೇ....
ಮಣ ಭಾರ ಹೊತ್ತ ಗಾಡಿ ಎಳೆಯುವ ಹಮಾಲಿ.. Read more about ಬೂಟ್ ಪಾಲೀಶ್ ಹುಡುಗ ಮತ್ತು ಸ್ವಾತಂತ್ರ್ಯೋತ್ಸವ
ಚುಟುಕಗಳು_(6)
ಹೃದಯ ಬಗೆದರೂ
ನೋವು
ಬಗೆಯದಿದ್ದರೂ ನೋವು
ಅದು
ಜೀವ ಸಂವೇದನೆಯ
ನಿರಂತರ ಪ್ರಕ್ರಿಯೆ
***
ಆಗಾಗ ನೆನಪಿಗೆ
ಬಂದು ಕಾಡುತ್ತದೆ
ನನ್ನೂರು
ನಮ್ಮಿಬ್ಬರದು
ಧೀರ್ಘ ಕಾಲದ
ಅಗಲಿಕೆಯ ನೋವು
ನಾವಿಬ್ಬರೂ ಕೂಡಿ
ಅತ್ತು ಹಗುರಾಗುತ್ತೇವೆ
***
ಎಲ್ಲಿಯವರೆಗೆ
ಈ ಜೀವನದ ವನವಾಸ
ಅಜ್ಞಾತವಾಸ
ಮುಗಿಯುವ ವರೆಗೆ
*** Read more about ಚುಟುಕಗಳು_(6)
ಯಾರೂ ನಡೆಯಬಹುದು...!
ದಾರಿ, ಅದು ನಿತ್ಯ ಮೌನಿ,
ದಾರಿಯಲ್ಲಿ ಯಾರೂ ನಡೆಯಬಹುದು
ಜಾತಿ ಮತ ಪ೦ಥಗಳ ಬೇಧವಿಲ್ಲದೆ,
ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ
ನಿ೦ತರದು ಸ್ಥಾವರ, ಆ ಕ್ಷಣಕ್ಕೆ
ನಮ್ಮ ಅನುಭವಗಳ ಅ೦ತ್ಯ;
ನಡೆಯುತ್ತಲೇ ಇದ್ದಲ್ಲಿ ಅದೂ
ನಮ್ಮೊ೦ದಿಗೇ ಸಾಗುತ್ತದೆ,
ಕ್ರಮಿಸುತ್ತಲೇ ಇದ್ದರೆ ಅದೊ೦ದು ಜ೦ಗಮ,
ನಮಗೋ ಅನುಭವಗಳ ಮು೦ದುವರಿಕೆ;
ಎಷ್ಟೊ೦ದು ಜನ ನಡೆದರು ಇಲ್ಲಿ!
ಯಾರಿಗೂ ನಡೆಯಬೇಡಿ ಎನ್ನಲಿಲ್ಲ ಅದು
ಮೆಟ್ಟದಿರಿ ನನ್ನ ನೋವಾದೀತೆ೦ದು, ಅಳಲಿಲ್ಲವದು;
ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು
ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;
ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ, Read more about ಯಾರೂ ನಡೆಯಬಹುದು...!
ಸ್ವಾತಂತ್ರ
ಬಂದಿದೆ ಬಂದಿದೆ ಸ್ವಾತಂತ್ರ !
ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆ
ಏತಕೆ ಬಂದಿದೆ ಸ್ವಾತಂತ್ರ !
ದೇಶಕೆ ಇಲ್ಲದ ಕೋಶಕೆ ಇಲ್ಲದ
ಜನ ಸಾಮಾನ್ಯನಿಗಿಲ್ಲದ ಸ್ವಾತಂತ್ರ !
ಆರ್ಯರು ಹೋದರು ಅರಸರು ಬಂದರು
ಮೊಗಲರು ಹೋದರು ಆಂಗ್ಲರು ಬಂದರು
ಬಂದಿತು ಜನತೆಗೆ ಸ್ವಾತಂತ್ರ್ಯ
ಜಗದೋದ್ಧಾರದ ಮಂತ್ರವ ಪಠಿಸಿ
ಮೊಸಳೆಯ ಕಣ್ಣೀರನು ಸುರಿಸಿ
ಗಾಂಧಿಯ ಮೇಲೆ ಆಣೆಯನಿಟ್ಟು
ಹಿಡಿದರು ದೇಶದ ಚುಕ್ಕಾಣಿ
ದೇಶೋದ್ದಾರಕೆ ಪಣ ತೊಟ್ಟವರು
ಅವನಾ ಪಕ್ಷ ಇವನಾ ಪಕ್ಷ
ಶೋಷಕರವರು ಶೋಷಿತರಿವರು
ಬಡವರು ಇವರು ಬಲ್ಲಿದರವರು
ಸ್ಪೃಶ್ಯರು ಇವರು ಅಸ್ಪೃಶ್ಯರು ಅವರು
ಮಾಲಿಕರಿವರು ಕಾರ್ಮಿಕರವರು
ಎಂದೊಡೆದಾಳಿದರು ಜನಮನ
Read more about ಸ್ವಾತಂತ್ರ
ಒ೦ದಾದ್ರೆ ಮತ್ತೊ೦ದು...!
ವಿವಾಹದ ಭಾವಚಿತ್ರ..!
ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!
ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್
ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ?
ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|
ಬರೋ ಸ೦ಬಳ ಊಟಕ್ಕೇ ಸಾಕಾಗದಿರುವಾಗ
ಸೈಟೆಲ್ಲಿ೦ದ ತಗೋಳ್ಳೋದೆ?
ನೀನೇನಾದ್ರೂ ಉಳಿಸಿದ್ಯೇನೆ?
ಎಷ್ಟಿದೆ? ಏನ್ಕಥೆ?
ಏನೇ... ನೆನಪು ಮಾಡಿಕೋ, ಆ ದಿವಸ
ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ
ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ ಸೌಧವ..
ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!
ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|
ಎಲ್ಲರೂ ಕಾಣೊ ಕನಸಲ್ಲ ಅದು? Read more about ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!
ಅಡ್ಡಡ್ದ – ಉದ್ದುದ್ದ ರೇಖೆಗಳು !!
೧.
ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ
ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ,
ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ
ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು!
೨
೩ ತಿ೦ಗಳಿ೦ದ ಏನಾದರೂ ಬರೆಯಲೇ ಬೇಕೆ೦ದುಕೊ೦ಡವನು
ಕೊನೆಗೊ೦ದು ದಿನ ಮನಸ್ಸು ಮಾಡಿ ಬರೆಯಲು ಕುಳಿತು
ಭಾರೀ ತ್ರಾಸ ಪಟ್ಟು ಬರೆದಿದ್ದು ಅಡ್ಡಡ್ಡ- ಉದ್ದುದ್ದ ರೇಖೆಗಳನ್ನು!




