ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಾಲ್ಕು ಹನಿ

ಬರಗಾಲ

ಸಾವು ಹುಡುಕುತ್ತಿದೆ

ಚದುರಿ ಹಾರುತ್ತಿವೆ ಕವಿದ ಕಾರ್ಮೋಡ
ಬಾನು ಬರಡಾಗಿಸಿ ವ್ಯಂಗಿಸಿ ನಕ್ಕು
ಪಯಣಿಸುತ್ತಿವೆ ಬಾನಂಚಿನ ಕಡೆಗೆ ||
ತಿಂಗಳು ಕಲವು ಕಳೆದರೂ ಓಡುತ್ತಿರುವ
ಮುಗಿಲ ನಿಂತು ಮಳೆ ಬರದಾಗ ಉರಿ ಬಿಸಿಲು
ನೆಲವನ್ನು ಕರೆ ಕೊಂಡು ಹೋಯಿತು ಬರಗಾಲದ ಕಡೆಗೆ ||
ಹಲವು ಕಣ್ಣುಗಳು ಮೋಡಕ್ಕೆ ಕನಿಕರಿಸುತ್ತಾ
ಮಳೆ ಕಾಯುತ್ತಾ ಜಾತಕ ಪಕ್ಷಿ ಆಗಿವೆ  ಮುಂದೆ ಓದಿ »

ಶಿಕ್ಷಣ ಮತ್ತು ಜೀವನ

ಜೀವನ ಕಲಿಸದ ಡಿಗ್ರಿಗಳು

"ಬೆವರಿನ ಬದಲು ಹನಿ ರಕ್ತ ಕೊಡುವ ಒಂದು ಯುವಕರ ಗುಂಪು ಕೊಡಿ, ಇಡಿ ಜಗತ್ತನ್ನೆ ಗೆಲ್ಲುತ್ತೇನೆ" ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಎಲ್ಲರೂ ನಂಬಬಹುದಾದ ಹುರುಳಿದೆ ಆದರೆ ಇಪ್ಪತ್ತೊಂದನೆ ಶತಮಾನ ಯುವಕರು ಎಂದಾಗ ನಮ್ಮ ಮುಂದೆ ಮೂಡುವುದು ಒಂದು ದೊಡ್ಡ ಪ್ರಶ್ನೆಯೋ? ಅಥಾವ ದೊಡ್ಡ ಶೂನ್ಯವೋ?!.  ಮುಂದೆ ಓದಿ »

ಬಾರೆ ರಾಧೆ

ಹೋಗೋಣ ಬಾರೆ
ಗೆಳತಿ ರಾಧಾ ಮೋಹನ
ಸನಿಹಕೆ |
ರಂಗಿನಾಟ ನಿರತ
ತುಂಗಾ ನದಿ
ತೀರಕೆ |
ವೇಣುಗಾನಕೆ
ಸೋತ ಗೋವುಗಳ
ದಂಡಿನಲ್ಲಿಗೆ |
ರಂಗಿನಾಟದಿ
ಮರೆತ ಗೋಪರ
ಗುಂಪಿನಲ್ಲಿಗೆ |
ರಾಧಾ ಮೋಹನರು ಈಗಿಲ್ಲ
ನಾವು ಆಟ ಆಡೋಣ
ಬಾರೇ ಗೆಳತಿ |
ತುಂಗಾ ತೀರದೀ ಜಲದಾಟ
ಆಡಿ ತನುಮನ ತಣಿಸೋಣ
ಬಾರೇ ಗೆಳತಿ |
ನೀನೇ ರಾಧೆ ನಾನೇ ಮೋಹನ
ಒಮ್ಮೆ ನುಡಿಸಲೇ ವೇಣು
ಹಾಡುತ್ತ ಬಾ ರಾಧೆ |  ಮುಂದೆ ಓದಿ »

ಓ ಹೆಣ್ಣೆ ನೀನು ಹೀಗೇಕೆ?!

ರಾರಾಜಿಸುವ ಅದೆಷ್ಟು ಸಾಹಿತ್ಯ
ಕಲೆ ಪ್ರತಿಭೆಗಳು ಚಿತ್ರಿಸಿದ್ದವು
ಅವು ನನ್ನ ಕುರಿತವು ನನ್ನ;
ಜೀವನದ ನಗ್ನ ಸತ್ಯದದ ಪುಟ್ಟಗಳು. ||
ರಾಜ್ಯ-ಸಾಮ್ರಾಜ್ಯಗಳು
ಗೆಜ್ಜೆ ಧ್ವನಿಗಳಿಂದಲೇ ವಿಜಯದ
ಸುಖ ಅನುಭವಿಸಿದ್ದವು;
ಹಲವು ಬಾರಿ ಅನಾಥ
ಸಿಂಹಾಸನದ ವೀರ ಕಥೆಯಾಗಿದ್ದವು. ||
ಅದೆಷ್ಟು ರಣ ಕಹಳೆಗಳು
ನನ್ನ ಎದುರು ಗರ್ಜಿಸಿದ್ದರೂ,
ಕತ್ತಿಯ ಎದುರು ಜೀವ ಕಳೆದುಕೊಂಡು;  ಮುಂದೆ ಓದಿ »

ಮನವು ಹೀಗೇಕೆ ಗೆಳತಿ ?!!

ತಿಳಿ ನೀರ ಕೊಳದಂತೆ ನಿನ್ನ
ಮನವು ಹೀಗೇಕೆ ?! ಬಾಡಿ
ರವಿ ಕಾಣದ ಕಮಲದಂತಾಯಿತು ||
ಅಂತರಾಳದ ಭಾವನೆ ಹೃದಯದಲ್ಲೇ
ಅಡಗಿಸಿಟ್ಟು ಹೊರಗೇಕೆ ನಗುವ
ಮುಖವಾಡ ತೊಟ್ಟಿರುವೆ ||
ಎದೆಯೊಳಗೆ ಬಣ್ಣ ತುಂಬಿ
ಮತ್ತೇಕೆ ಕನಸನ್ನು ಕತ್ತಾಗಿಸಿ
ಕೊರಗಿ ನೀರಾಗಿ ಬತ್ತುತ್ತಲಿರುವೆ ||
ಹೇಳಬೇಕು ಎನ್ನುವ ಮಾತು
ಗಂಟಲಲ್ಲೇ ನುಂಗಿ ಯಾರಿಗೂ
ತಿಳಿದಿಲ್ಲ ಎಂದು ಹೇಳುತ್ತಿರುವೆ ||  ಮುಂದೆ ಓದಿ »

ಜಲಧಾರೆ ಗಾನ

ಜುಳು ಜುಳು ಜಲಧಾರೆ ಗಾನ
ಹಸುರಿನ ದಡದ ಸದನ ||
ಹೊಂಬಣ್ಣ ಬಾನಿಗೆ ಉಷೆಯ ಗಾಯನ
ದುಂಬಿ ಝೆಂಕಾರಕ್ಕೆ ಅರಳುವ ಹೂ ವದನ ||
ಗಿಡ ಮರದ ಎಲೆಯಲ್ಲಿ ಮಂಜಿನ
ರಾಗ ರಂಜಿತ ಹೊನಲು
ಭೂ ತಾಯಿಯ ಮಡಿಲು
ನರ್ತನದ ನವಿಲು||
ತುಂಬಿ ಹರಿಯುವ ಜೀವಗಾನದಲ್ಲಿ
ತಲೆ ಎತ್ತಿ ನಲಿಯುತ್ತಿದೆ ಹಸುರಿನ ಬನ
ಜನನದಿಂದ ಮಿಲನದವರೆಗೆ
ಸಕಲವು ಅಡಗಿದೆ ಆನಂದದಲ್ಲಿ||

ನಿನ್ನ ಕನಸು

ನಿನ್ನ ಕನಸು
ಕನ್ನಡಿಯೊಳಗಿನ
ನಿಧಿ |
ಆಗಾಗ್ಗೆ ಬಂದು
ಮುಖ ತೋರಿಸಿ
ಮತ್ತೆ ಮರೆಯಾಗಿ
ಮಸುಕಾಗಿ ಪರದೆ
ಹಿಂದೆ ನೆಡೆಯುವ
ನಾಟಕದಂತೆ |
ನದಿಯೋ, ಕೆರೆ ಯೋ
ದಡದಲ್ಲಿ ಕುಳಿತಾಗ
ಆ ನೀರಿನಲ್ಲಿ ನಿನ್ನ ಬಿಂಬ
ಎತ್ತಲಿಂದಲೋ ತೂರಿ ಬಂದ
ಕಲ್ಲು ಎಸಗಿದ
ತೆರೆಯಂತೆ |
ಕನ್ನಡಿಯೊಳಗೆ
ಶ್ರಂಗರಿಸಿದ ನೀನು
ಎದುರಿನ ಯಾವುದೋ
ಸೆಳೆತಕ್ಕೆ ದಕ್ಕಿ ಹೋದಾಗ
ತಾರೆ ಚಂದ್ರರಿಲ್ಲದ  ಮುಂದೆ ಓದಿ »

ನಲ್ಲೆ ಎಂದಾಗ

ನಲ್ಲೆ ಎಂದಾಗಲೆಲ್ಲ
ನಗುವೆ ಗಲ್ಲ ಅರಳಿಸಿ
ಮಲ್ಲಿಗೆ ಮೊಗ್ಗುಗಳ
ಮೇಲೆ ಹಾಲಿನ
ಮಳೆ ಸುರಿದಂತೆ ||
ಮಾಗಿದ ಬಾನಿನ ಕಿರಣವು
ಹೊನ್ನಿನ ಚಿತ್ತಾರ ನೈದಂತೆ ||
ತೊರೆಯಾಗಿ ಬಾ ಬಳಿಗೆ
ಮಳೆಯಾಗಿ ಬಾ ಇಳೆಗೆ
ಮನಕ್ಕೆ ತಂಪೇರೆಯುವ
ತಂಗಾಳಿಯಾಗಿ ಬಾ ನನ್ನ ಬಾಳಿಗೆ||

ಮಳೆ ಬಂದಾಗ

ಮೋಡ ಮೋಡ ಕಲೆತು
ಸುರಿಯ ಬೇಕು
ಹನಿ ಹನಿ ಮಳೆ |
ಹೊಲವೆಲ್ಲ ನೀರಾಗಿ
ರೈತನ ಉಸಿರಾಗಿ
ಹಸಿರಾಗ ಬೇಕು ಬೆಳೆ |
ಹನಿ ಹನಿ ಕೂಡಿ
ಹರಿಯಬೇಕು
ಕೆರೆ ಹಳ್ಳ ತೋರೆ |
ವನವೆಲ್ಲ ಚಿಗುರಿ
ತಂಗಾಳಿ ಬೀಸಿ
ಹಸನಾಗ ಬೇಕು ಧರೆ |
ಬಾನೆಲ್ಲ ಕತ್ತಲಾಗಿ
ಗುಡುಗು ಮಿಂಚಿನ
ದಿಬ್ಬಣದ ಕಹಳೆ |
ಬಿಸಿಯುಸಿರು ಕಳೆದು
ಕೊಳೆಯನ್ನು ತೊಳೆದು
ಮೂಡಲಿ ಜೀವನದ ಕಲೆ |

ಸವಿನೆನಪೊಂದೆ ಸಾಕು!

ನಿನ್ನ ಸವಿನೆನಪೊಂದೆ
ನೀ ಕೊಟ್ಟ ಕಾಣಿಕೆ|
ಹತ್ತು ಹಲವು ಕನಸುಗಳು
ಗರಿಗೆದರಿ ಹಾರಿದವು
ಅಂದಿನ ಆ ದಿನಗಳಲ್ಲಿ||
ಗಲ್ಲಕ್ಕೆ ಅಚ್ಚೊತ್ತಿದ್ದ ಸಿಹಿ ಮುತ್ತಿನ
ರಸಾನುಭವದ ಪುಳಕವು
ಮೈ ಮನದಲ್ಲಿ||
ಕೈ ಕೈ ಸಂಗಮದ ಸಮಯ
ಹರಿದ ರೊಮಾಂಚನದ ಮಿಂಚು
ಈಗಲೂ ಮಿಂಚುತ್ತಿದೆ ಆದರೆ ಬೆಳಕಿಲ್ಲ||
ಮರಳನಲ್ಲಿ ಕಟ್ಟಿದ ಗೋಪುರ
ನೀರ ಅಲೆಗೆ ಕುಸಿದು ವ್ಯಥೆಯಾಗಿದೆ,  ಮುಂದೆ ಓದಿ »

Syndicate content