18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪಶ್ಚಿಮದಲ್ಲಿ ಲಕ್ಷ್ಮಣ

ಕಥೆ : ಪಶ್ಚಿಮದಲ್ಲಿ ಲಕ್ಷ್ಮಣ

February 24, 2012 - 11:02pm
partha1059

ಮದ್ಯಾನದ ಬೋಜನದ ನಂತರ , ಅಂತಃಪುರದಲ್ಲಿ ಸ್ವಲ್ಪಕಾಲ ಮಲಗಿ ವಿಶ್ರಾಂತಿ ಪಡೆಯುವುದು ಲಕ್ಷ್ಮಣನ ಅಭ್ಯಾಸ, ಆದರೆ ಇಂದೇಕೊ ಆ ರೀತಿ ವಿಶ್ರಾಂತಿಗೆ ಹೋಗದೆ ಅರಮನೆಯ ಹಜಾರದಲ್ಲಿ ಸುಖಾಸನದ ಮೇಲೆ ಸುಮ್ಮನೆ ಕುಳಿತಿದ್ದ. ಊಟ ಮುಗಿಸಿ ಬಂದ ಊರ್ಮಿಳಾದೇವಿ ಲಕ್ಷ್ಮಣನತ್ತ ನಡೆದುಬಂದಳು,
ಸ್ವಲ್ಪ ಆಶ್ಚರ್ಯದಿಂದಲೆ ಕೇಳಿದಳು,
"ಇದೇನು ಇಲ್ಲಿ ಕುಳಿತಿರಿ? ಮಲಗಿ ವಿಶ್ರಾಂತಿ ಪಡೆಯುವದಿಲ್ಲವೆ?"
ತುಸು ಅನ್ಯ ಮನಸ್ಕತೆಯಿಂದ ನುಡಿದ ಲಕ್ಷ್ಮಣ ,
"ಸ್ವಲ್ಪ ಅರಮನೆಯತ್ತ ಹೋಗಿ ಬರೋಣವೆಂದು ಅನ್ನಿಸಿತು, ಹಾಗಾಗಿ ಕುಳಿತೆ"
ನಗುತ್ತ, ಊರ್ಮಿಳ ಅಂದಳು
"ಈ ಬಿರು ಬಿಸಿಲಿನಲ್ಲಿಯೆ, ಸ್ವಲ್ಪ ಬಿಸಿಲು ಕಂದಲಿ ಬಿಡಿ, ಹೋದರಾದಿತು, ಅಣ್ಣನ ಅರಮನೆಗೆ ತಾನೆ"
ಲಕ್ಷ್ಮಣ ಸ್ವಲ್ಪ ಸಂಕೋಚ, ಸ್ವಲ್ಪ ಗಲಿಬಿಲಿ, ಮತ್ತೇನೊ ಭಾವ ತುಂಬಿ ನುಡಿದ
"ಇಲ್ಲ ಕೆಲಸವಿದೆ, ಅರಮನೆಗೆ ಹೋಗಬೇಕೆನಿಸಿದೆ, ನಿನಗೆ ಬೇಸರವೆ?" , ಊರ್ಮಿಳ ಜೋರಾಗಿ ನಕ್ಕುಬಿಟ್ಟಳು. Read more about ಕಥೆ : ಪಶ್ಚಿಮದಲ್ಲಿ ಲಕ್ಷ್ಮಣ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪಶ್ಚಿಮದಲ್ಲಿ ಲಕ್ಷ್ಮಣ