ರಾಜಕೀಯ
ಕುಮಾರಸ್ವಾಮಿ ರಾಮನಗರವನ್ನು ಮರೆತರೇ?
ಏನು ಮಾಯೆಯೋ... ಏನು ಮರ್ಮವೋ...?
ಅಂತೂ " ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ..." ಅನ್ನುವ ನುಡಿಯಂತೆ ನಮ್ಮ ಬಿ.ಜೆ.ಪಿ ಸರ್ಕಾರದ "ಅಂತರಿಕ ಜಗಳ..." "ದಿಲ್ಲಿಗೆ ಹೋಗಿ ಗಣಿದೊರೆಗಳ ಜೊತೆ ರಾಜಿಯಾಗುವ ತನಕ..." ಎಂಬಂತಾಗಿದೆ...! ಸರಿ ಸುಮಾರು ಕೆಲವು ವಾರಗಳ ವರೆಗೆ ನೆಡೆದ "ಅಂತರಿಕ ಯುದ್ಧ" ಅಂತೂ ಅಡ್ವಾಣಿಯರ ಹುಟ್ಟುಹಬ್ಬದ ದಿನ ಸಮಾಪ್ತಿಗೊಂಡಿದ್ದು ( ನಮಗೆ ಕಾಣಿಸುವಂತೆ...!) ಪಾಪ ಅಡ್ವಾಣಿ ಯವರಿಗೆ "ಅಮೃತ" ಕುಡಿದಷ್ಟೇ ಸಂತೋಷವಾಗಿರಬಹುದು...! ಬಹಳ ದಿನ ನಮ್ಮ ರಾಜ್ಯದ ಮು.ಮ ಮತ್ತು ಬಿ.ಜೆ.ಪಿ ಯ ಅಧ್ಯಕ್ಷರು/ಹಿರಿಯ ನಾಯಕರು ತಮ್ಮ ತಲೆ ಕೆರೆದು-ಕೆರೆದು...(ಮುಂಗಾರು ಮಳೆಯ ಗಣೇಶ್ ಹೇಳಿದಂತೆ ಅದು ಹುಣ್ಣಾಗಿ ಮತ್ತೇನೋ ಅಗಲಿಲ್ಲ... Read more about ಏನು ಮಾಯೆಯೋ... ಏನು ಮರ್ಮವೋ...?
ಲೋಕಾಯುಕ್ತರಿಗೆ ಪರಮಾಧಿಕಾರ: ಮುಖ್ಯ ಮಂತ್ರಿಯ ಕಟುನಿರ್ಧಾರ..?
ಇತ್ತೀಚಿನ ವರ್ಷಗಳಲ್ಲಿ ವಿಜಯ ಕರ್ನಾಟಕ ನನ್ನ ಮೆಚ್ಚಿನ ದಿನ ಪತ್ರಿಕೆಯಾಗಿದೆ. ಪತ್ರಿಕೆಯ ಅಂತರ್ಮುಖಿ ಮತ್ತು ಮುಖಾಮುಖಿ ಪುಟದ ಲೇಖನಗಳು ಬಹಳ ಮೆಚ್ಚುಗೆಯಾಗುತ್ತವೆ. ವಿ.ಕ.೨೮ ಜನವರಿ ೨೦೧೦ರ ಸಂಚಿಕೆಯಲ್ಲಿ ಸಂಪಾದಕರ ಅಂಕಣದಲ್ಲಿ(ನೂರೆಂಟು ಮಾತು) "ಮರ್ಜಿಗೆ ಬೀಳದವ ನಾಯಕ, ಉಳಿದವ ಹಿಂಬಾಲಕ" ಎಂಬ ಲೇಖನದಲ್ಲಿ ನಮ್ಮ "ಜನನಾಯಕ"ರುಗಳ ಬಗ್ಗೆ ಹೇಳುತ್ತಾ.... ಕೆಲವರಿರತ್ತಾರೆ ಅವರಿಗೆ ಕಟು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಪರಿಣಾಮದ ಭಯ. ಹೀಗಾಗಿ ಅವರು ಯಾವುದೇ ಕಟು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ...ಇನ್ನು ಮೊರುವರ್ಷ ಸರಕಾರಿ ನೌಕರರಿಗೆ ತುಟ್ಟಿಭತ್ತೆ ನೀಡಲಾಗವುದಿಲ್ಲ, ನಾನು ಅಧಿಕಾರದಲ್ಲಿರುವಷ್ಟು ದಿನ ರೈತರಿಗೆ ಪುಕ್ಕಟ್ಟೆ ವಿದ್ಯುತ್ ನೀಡಲಾಗುವುದಿಲ್ಲ. Read more about ಲೋಕಾಯುಕ್ತರಿಗೆ ಪರಮಾಧಿಕಾರ: ಮುಖ್ಯ ಮಂತ್ರಿಯ ಕಟುನಿರ್ಧಾರ..?
ಬಿ.ಬಿ.ಎಮ್.ಪಿ ಚುನಾವಣೆ ಬರ್ತಿದೆ... ನಿಮ್ ಪಕ್ಷ ಯಾವ್ದು??
ನಮ್ ಕನ್ನಡಿಗರನ್ನ ನೋಡೆ "ಮನೆಗೆ ಮಾರಿ ಊರಿಗೆ ಉಪಕಾರಿ"ಅಂತ ಮಾತು ಸೃಷ್ಟಿ ಆಗಿರ್ಬಹುದು ಅಂತೀನಿ.. ಚಿಲ್ರೆ ಪಲ್ರೆ ವಿಷ್ಯಕ್ಕೆ ಆನ್ಲೈನ್ನಲ್ಲಿ ಇಷ್ಟಿಷ್ಟುದ್ದ ಲೇಖನಗಳು, ಅದಕ್ಕೆ ಅದಕ್ಕಿಂತಲು ಉದ್ದವಾದ ಕಾಮೆಂಟುಗಳು!! ಸಂವಾದವೇನು ಚರ್ಚೆಯೇನು.. ಕೈಗೆ ಸಿಕ್ಕಿದ್ದರೆ ಹೊಡೆದೆಬಿಡುವ ರೊಚ್ಚು ಕಿಚ್ಚು ಕಾಮೆಂಟಿಸುವ ಭರ!!ಎಷ್ಟು ಸಂತೋಷವೆನಿಸುತ್ತದೆ ಈ ರೀತಿಯ involvement, ಹೌದು ಪಾಲ್ಗೊಳ್ಳುವಿಕೆ ಇರಲೆಬೇಕು ಆಗಲೆ ಚೆಂದ ಸರಿ ತಪ್ಪು, ಸೋಲು ಗೆಲುವು ಆಮೇಲಿನ ವಿಚಾರ ಅಲ್ಲವೆ. Read more about ಬಿ.ಬಿ.ಎಮ್.ಪಿ ಚುನಾವಣೆ ಬರ್ತಿದೆ... ನಿಮ್ ಪಕ್ಷ ಯಾವ್ದು??
’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!
’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!
ಕೆಟ್ಟ ಭೂಕಬಳಿಕೆಯ ವೃತ್ತದಲಿ ಬ೦ಧಿಯವನೀಗ
ಸಿಎ೦ ಯಡ್ಡಿ ಉಲಿದರು ಅರೆರೆ ಇವನೆ೦ಥಾ ಮಗ
ಮಗ ಮಾಡಿದ ತಪ್ಪಿಗೆ ಅಪ್ಪ ಹೊಣೆಯಲ್ಲವೀಗ!!
ಅರ್ಕಾವತಿ ಬಡಾವಣೆಯ ದಾಳ ಕುಮಾರನ ಕೈಲೀಗ
ರಾಘವೇ೦ದ್ರ ವಿಜಯೇ೦ದ್ರರ ಆಟಕೆ ಬೀಳಲಿದೆ ಬೀಗ
ಮತ್ತೇನು ನುಡಿಮುತ್ತನುದುರಿಸುವರೋ ಸಿಎ೦ ಆಗ
ಕಾದು ನೋಡೋಣ ಅದೆಷ್ಟು ಹೊಡೆದಿದ್ದಾರೆ ಅಪ್ಪ ಮಗ!! Read more about ’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!
ನಿನ್ನೆ ಖುಷಿಯಾಯಿತು ನನಗೆ, ಆದರೆ ಇ೦ದು.........!
ನಿನ್ನೆ ಖುಷಿಯಾಯಿತು ನನಗೆ..........................
ಲಕ್ಷ್ಮಣನ ಛಲದಾಟ ಇಶಾ೦ತನ ತಾಳ್ಮೆಯಾಟ
ಜಯಮಾಲೆ ದಕ್ಕಿಸಿತು ಮುರಿದು ಕಾ೦ಗರೂಗಳ ಮೇಲಾಟ
ಅಭಿನವ ಬಿ೦ದ್ರಾ ಗಗನ್ ನಾರ೦ಗರ ಬ೦ದೂಕಿನಾಟ
ರಾಹಿ ಸರ್ನೊಬತ್ ಅನಿಶಾ ಸಯ್ಯದರ ಗುರಿಯ ಮಾಟ
ಕುಸ್ತಿಯಾಡಿದ ರವೀ೦ದರ್ ಸಿ೦ಗ್, ಸ೦ಜಯಕುಮಾರ
ಅನಿಲಕುಮಾರರ ಚಿನ್ನದ ಪದಕಗಳ ಬೇಟೆಯಾಡಿದ ಮೋಜಿನಾಟ
ನಿನ್ನೆ ಖುಷಿಯಾಯಿತು ನನಗೆ ಮೇರಾ ಭಾರತ್ ಮಹಾನ್!
ರಾತ್ರಿ ಶುರುವಾಯಿತು ರೇಣುಕಾಚಾರ್ಯನ ಆಟ.........
ಕುಮಾರ ಪುಟ್ಟಣ್ಣ ಜಮೀರ್ ಅಹ್ಮದರ ರಾಜಕೀಯದಾಟ
ಗುಲಬರ್ಗದಿ೦ದ ಬ೦ದ ಸಿಎ೦ಗೆ ಬರಿ ಕಣ್ಣೀರಿನೂಟ
ತಡೆಯಲು ಹೋದ ಆಪ್ತನಿಗೆ ಆಚಾರ್ಯನ ಒದೆಯ ಪಾಠ
ಬೆಳಗಾದೊಡನೆ ವಾರ್ತಾವಾಹಿನಿಗಳಲ್ಲಿ ಇದೇ ನೋಟ Read more about ನಿನ್ನೆ ಖುಷಿಯಾಯಿತು ನನಗೆ, ಆದರೆ ಇ೦ದು.........!
ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ....!
ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ
ಮುಖ್ಯಮ೦ತ್ರಿಯ ಮನೆ ಮು೦ದೆ
ದೇಶಪಾ೦ಡೆಯ ಲಬೊ ಲಬೋ
ಆಪರೇಷನ್ ಕಮಲ ಅ೦ತ ಬ೦ಬಡಾ
ಆದರೆ ಆತ ಮರೆತ! ಆ ಎಡ ಬಲಕ್ಕಿದ್ದವರು
ಯಾರು? ಜನತಾದಳದಲ್ಲಿದ್ದವರನ್ನು
ಆಪರೇಷನ್ ಹಸ್ತ ಮಾಡಿ ಎಳೆದುಕೊ೦ಡಿದ್ದು
ಈಗ ಹದಿನಾರು ಜನ ಭಾಜಪದವರು ಅವರ
ತೆಕ್ಕೆಯಲ್ಲೇ ಮಲಗಿರುವರು ಮಜವಾಗಿ
ರಿಸೋರ್ಟಿನ ಐಷಾರಾಮವನನುಭವಿಸುತ್ತಾ
ಆದರೂ ಯಾವನೋ ಒಬ್ಬ ಶಾಸಕ ರಾಜಿನಾಮೆ
ಕೊಟ್ಟನೆ೦ದು ಮುಖ್ಯಮ೦ತ್ರಿಯ ಮನೆ ಮು೦ದೆ
ದೇಶಪಾ೦ಡೆಯ ಲಬೋ ಲಬೋ! ನಮ್ಮ ಜನರ
ಮರೆವು ತು೦ಬಾ ಜಾಸ್ತಿ ಈವಯ್ಯ ನು೦ಗಿ ನೀರು
ಕುಡಿದ ಪ್ರವಾಹ ಸ೦ತ್ರಸ್ತರ ಪರಿಹಾರ ನಿಧಿಯ
ವಿಷಯ ಮರೆತೇ ಬಿಟ್ಟರು ಎಲ್ಲರೂ ಈಗ ತೊಗೊಳ್ಳಿ
ದೇಶಪಾ೦ಡೆಯ ಲಬೋ ಲಬೋ ಯಡ್ಯೂರಪ್ಪನ Read more about ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ....!
ನಾವೇನ್ ಮಾಡಬೇಕ್ರೀ ಯಜಮಾನ್ರೇ... ?
ನಾವೇನ್ ಮಾಡಬೇಕ್ರೀ ಯಜಮಾನ್ರೇ
ಈಗ ನಾವೇನ್ ಮಾಡಬೇಕ್ರೀ?
ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,
ಕುಡಿಯೋ ನೀರಿನ್ ನಲ್ಲಿ ಇಲ್ಲ!
ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲ
ಬೋರ್ವೆಲ್ ಹಾಕ್ಸೋಕ ದುಡ್ಡು ಮೊದಲೇ ಇಲ್ಲ!
ಊರಿನ್ ತು೦ಬೆಲ್ಲಾ ಹೊಲಗೇರಿ ಇದ್ರೂ
ಒ೦ದೂ ಸ್ನಾನದ ಮನೇನೇ ಇಲ್ಲ!
ನಾವೇನ್ ಮಾಡ ಬೇಕ್ರೀ ಯಜಮಾನ್ರೇ ಈಗ?
ಅಲ್ರೀ ,ನಾವು ಆರ್ಸಿ ಕಳುಸ್ದೋರೆಲ್ಲಾ
ಹಿ೦ಗೇ ದಗಲ್ಬಾಜಿಗಳಾಗ್ತಾ ಇದ್ರೆ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
ಸಾಧು ಸ೦ತ ಅ೦ಥ ಆರ್ಸಿ ಕಳುಸ್ದೊ,
ಅವನಿವತ್ತು ಗೊತ್ತೇ ಇಲ್ದವನ ಥರಾ ಇದಾನಲ್ಲ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
ಊರ್ನಾಗಿರೋದೊ೦ದೇ ಅರಳಿಕಟ್ಟೆ
ಬರ್ ಬರ್ತಾ ಆಗೋಗೈತೆ ಇಸ್ಪೀಟು ಅಡ್ಡೆ.
ಕೇಮೆ ಇಲ್ದೋರೆಲ್ಲಾ ಬರೋದೆಯಾ,ಎಳಿಯದೇಯಾ
ಹೇಳ್ಕೊ೦ಡ್ ಹೇಳ್ಕೊ೦ಡ್ ಸಾಕಾಗೈತ್ರಪ್ಪಾ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
ಸೋನಿಯಮ್ಮನ ಗಾನ!
ತು೦ಬಿ ನಿ೦ತಿಹರು ಸಾಲು ಸಾಲಾಗಿ ಹೊಗಳುಭಟರು
ಕಾಲಿಗೆ ದೀರ್ಘದ೦ಡ ಬಿದ್ದಿಹರು ಸಾಲಾಗಿ ಭಟ್ಟ೦ಗಿಗಳು
ಅವಳನ್ನು ಅಟ್ಟಕ್ಕೇರಿಸಿ ಸಿ೦ಹಾಸನದ ಮೇಲೆ ಕೂರಿಸಿ
ಅವಳ ಕಾಲ ನೆಕ್ಕುತ ತಮ್ಮ ಕೆಟ್ಟ ನಾಲಿಗೆಯ ಚಪ್ಪರಿಸಿ
ಕಜ್ಜಿ ನಾಯಿಗಳ೦ತೆ ಕಚ್ಚಾಡುತ ಸಿಕ್ಕದ್ದನ್ನೆಲ್ಲ ಸ್ವಾಹ ಮಾಡುತ್ತ
ಅಲ್ಪಸ೦ಖ್ಯಾತರನ್ನೆಲ್ಲ ಮುಖ್ಯವಾಹಿನಿಯಿ೦ದ ದೂರವಿಡುತ್ತ
ಮಹಾತ್ಮಗಾ೦ಧಿಯ ಬಗ್ಗೆ ಯಾವ ರೈಲೂ ಬಿಡದವರು
ಮದರ್ ಥೆರೇಸಾ ಬಗ್ಗೆ ದೊಡ್ಡ ರೈಲನ್ನೇ ಬಿಟ್ಟಿರುವರು
ಭಾರತ ಭಾರತ ಭಾರತ ಎ೦ದು ಇಟಲಿಯವರ ಕಾಪಡುವರು
ಆದರೂ ಅವರು ನಮಗೆಲ್ಲ ಅಧಿನಾಯಕಿಯೆ೦ದು ಕೈ ಮುಗಿವರು
ಇ೦ತಹ ಮ೦ದಿ ತು೦ಬಿರಲು ದೇಶದಲಿ ಭಾರತಾ೦ಬೆಯ ಮಾನ Read more about ಸೋನಿಯಮ್ಮನ ಗಾನ!




