22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಾರ್ಥಕ ಪಯಣ ( ಕವನ )

May 24, 2012 - 9:00pm
H A Patil

ಸಾಗಿದೆ ಪಯಣ ಹಾಗೆಯೆ ಸುಮ್ಮನೆ

ಕಡುಗತ್ತಲಲಿ ನಡೆದು ಹೋದಂತೆ

ಹೆಜ್ಜೆ ಗುರುತುಗಳಿಲ್ಲದ

ದಾರಿಯಲಿ ಸುಮ್ಮನೆ ಸಾಗಿ ಹೋದಂತೆ

ಗಿಜಿಗುಟ್ಟುವ ಜನ ಜಂಗುಳಿಯ ಮಧ್ಯೆ

ಸಾಗಿರುವ ಅನಾಮಿಕನಂತೆ

 

ಹೇಗಿತ್ತು ಪಯಣ ? ಅಮಾಯಕ ಮಗು 

ಅಂಬೆಗಾಲಿಕ್ಕಿ ಸಾಗಿ ಹೋದಂತೆ

ಪದಗಳ ರೂಹೇ ಇಲ್ಲದೆ 

ಕವನ ರಚನೆಗೊಂಡಂತೆ 

ಕುರುಡುಗಂಗಳು ಪ್ರಕೃತಿ ಸೌಂದರ್ಯ

ಅನುಭವಿಸಿದಂತೆ ಎದೆಯಾಳದಲಿ 

ಮೂಡಿದ ಸೂಕ್ಷ್ಮ ಬಿಂಬದಂತೆ

 

ಸಾಗಿದ ಪಯಣ ವ್ಯರ್ಥವಲ್ಲ 

ವ್ಯಾಪಿಸಲಿದೆ ಬೆಳಕು ಕತ್ತಲನು

ಮೆಟ್ಟಿ ದಿಗ್ದಿಗಂತದಾಚೆ ಈಚೆ 

ನನಸಾಗಲಿವೆ ಕಂಡ  ಕನಸುಗಳು 

                 ***

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by tthimmappa on
ಸಾಗಿದ ಪಯಣ ವ್ಯರ್ಥವಲ್ಲ ವ್ಯಾಪಿಸಲಿದೆ ಬೆಳಕು ಕತ್ತಲನು ಮೆಟ್ಟಿ ದಿಗ್ದಿಗಂತದಾಚೆ ಈಚೆ ನನಸಾಗಲಿವೆ ಕಂಡ ಕನಸುಗಳು ಎಷ್ಟೊಂದು ಅರ್ಥಪೂರ್ಣವಾದ ಪದಗಳು ಸಾರ್.... ಸವಿದವನಿಗೇ ಗೊತ್ತು ಸಾಹಿತ್ಯದ ಸಿಹಿ.

Submitted by H A Patil on
ಟಿ.ತಿಮ್ಮಪ್ಪ ರವರಗೆ ವಂದನೆಗಳು ಕವನ ನಿಮ್ಮ ಮೆಚ್ಚುಗೆಗೆ ಪಾತ್ರವಾಗಿದೆ, ಮೆಚ್ಚುಗೆಗೆ ಧನ್ಯವಾದಗಳು.

Submitted by venkatb83 on
ಹ್ರಿಯರೇ (ಡಾ :ರಾಜ್ ಬಗ್ಗೆ ಬರಹ ಬರೆದು ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಮರು ಪ್ರತಿಕ್ರಿಯಿಸಿ ಹೋದ ನೀವು ಮತ್ತೆ ಸಂಪದಕ್ಕೆ ಕೆಲವು ದಿನಗಳ ನಂತರ ಮರಳಿರುವಿರಿ.. ನಿಮ್ಮ ಪುನರಾಗಮನ ಸಂತೋಷ ತಂತು.. ಅರ್ಥಪೂರ್ಣ ಕವನವನ್ನು ಬರೆದಿರುವಿರಿ.. ಮೊದಲಿಗೆ ನಕರಾತ್ಮಕವಾಗಿದ್ದಂತೆ ತೋರಿದರೂ ಕೊನೆಯಲ್ಲಿ ಸಕಾರಾತ್ಮಕ ಚಿಂತನೆಯೊಂದಿಗೆ ಮುಕ್ತಾಯವಾಯ್ತು.. ಅದಕ್ಕೆ ಹೇಳಿಲ್ಲವೇ ಭರವಸೆಯೇ ಬೆಳಕು ಅಂತ.. ನಿಮ್ಮಿಂದ ಕವನ ಬಂದೂ ತುಂಬಾ ದಿನಗಳೇ ಆಗಿತ್ತು..!! ಶುಭವಾಗಲಿ.. ನನ್ನಿ \|/

Submitted by venkatesh on
ಪಯಣ ಎಂದಿಗೂ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುತ್ತದೆ. ಅವು ಮರೆಯಲಾರದ ಹೆಜ್ಜೆ ಗುರುತುಗಳು ! ಸಚ್ಚಿ ವೇ ಅಪ್ನೆ ಯಾದೆ ಛೋಡ್ ಜಾತೆ ಹೈ

Submitted by ashoka_15 on
ಬೆಳಕಿಲ್ಲದೆ ಬದುಕುಂಟೆ ಸಾರ್ಥಕತೆಗೆ ಕತ್ತಲಿಲ್ಲದೆ ಭಯವುಂಟೆ ಪ್ರೇತಕತೆಗೆ ಭಕ್ತಿಯಿಲ್ಲದ ದೇವಾಲಯವುಂಟೆ ಹನುಮಂತನಿಗೆ ಇಂಥಾ ಕವನವಿಲ್ಲದೆ ಕಳೆಯುಂಟೆ ಸಂಪದಕೆ. ಅರ್ಥಪೂರ್ಣವಾಗಿದೆ,,,,ನಿಮ್ಮ ಕವನ,

Submitted by H A Patil on
ಅಶೋಕ ಬಿ.ಆರ್. ರವರಿಗೆ ವಂದನೆಗಳು ಕವನ ರೂಪದ ನಿಮ್ಮ ಮೆಚ್ಚುಗೆ ಚೆನ್ನಾಗಿದೆ, ನಿಮ್ಮಂತಹ ಸಂಪದಿಗರ ಮೆಚ್ಚುಗೆಯೆ ನಮಗೆ ಪ್ರೇರಣೆ, ಧನ್ಯವಾದಗಳು

Submitted by ashoka_15 on
ಬೆಳಕಿಲ್ಲದೆ ಬದುಕುಂಟೆ ಸಾರ್ಥಕತೆಗೆ ಕತ್ತಲಿಲ್ಲದೆ ಭಯವುಂಟೆ ಪ್ರೇತಕತೆಗೆ ಭಕ್ತಿಯಿಲ್ಲದ ದೇವಾಲಯವುಂಟೆ ಹನುಮಂತನಿಗೆ ಇಂಥಾ ಕವನವಿಲ್ಲದೆ ಕಳೆಯುಂಟೆ ಸಂಪದಕೆ. ಅರ್ಥಪೂರ್ಣವಾಗಿದೆ,,,,ನಿಮ್ಮ ಕವನ,

Submitted by H A Patil on
ಸಪ್ತಗಿರಿಯವರಿಗೆ ವಂದನೆಗಳು ನನ್ನಲ್ಲಿ ಸ್ವಂತ ಕಂಪ್ಯೂಟರ್ ಇಲ್ಲ, ಸ್ನೇಹಿತರ ಕಂಪ್ಯೂಟರ್ ನಲ್ಲಿ ನಾನು ನನ್ನ ಬರವಣಿಗೆ ಮಾಡುತ್ತ ಬಂದಿದ್ದೇನೆ, ಕಳೆದ ಒಂದು ತಿಂಗಳ ಲಾಗಾಯ್ತಿನಿಂದ ನಾನು ಉಪಯೋಗಿಸುವನ ಕಂಪ್ಯೂಟರ್ ಹಾಳಾಗಿದೆ, ಸಮ್ಮಂಧಿಕರೊಬ್ಬರು ತೀರಿಕೊಂಡಿದ್ದ ಕಾರಣ ನಾಲ್ಕೈದು ದಿವಸ ಊರಲ್ಲಿ ಇರಲಿಲ್ಲ, ಹೀಗಾಗಿ ಸಂಪದದಲ್ಲಿ ಕಾಣಿಸಿಕೊಂಡಿರಲಿಲ್ಲ. ಕವನದ ಮೆಚ್ಚುಗೆಗೆ ಧನ್ಯವಾದಗಳು.

Submitted by H A Patil on
ಸಿದ್ಧಕೀರ್ತಿ ಯವರೆ ಕವನ ಮೆಚ್ಚುಗೆ ಪಾತ್ರ ವಾಗಿದ್ದಕ್ಕೆ ಸಂತಸ ವಾಗಿದೆ ಧನ್ಯವಾದಗಳು.

Submitted by H A Patil on
ಮೇಡಂ ವಂದನೆಗಳು ನಿಮ್ಮ ಅಂತಃಕರಣಕ್ಕೆ ಮತ್ತು ಕವನದ ಮೆಚ್ಚುಗೆಗೆ ಧನ್ಯವಾದಗಳು.

Submitted by swara kamath on
ನಮಸ್ಕಾರಗಳು ಪಾಟೀಲರೆ, ಎಂದಿನಂತೆ ತಮ್ಮ ಸಂಪದ ನಡಿಗೆಯಲ್ಲಿ ಕವನಗಳು, ಲೇಖನ ಹಾಗು ಬ್ಲಾಗ್ ಬರಹ ಗಳು ಬರುತ್ತಿದ್ದರೂ ಕೆಲವೊಮ್ಮೆ ಯಾವ ಬರವಣಿಗೆ ಇಲ್ಲದೆ ನೀವು ವಿಶ್ರಮಿಸಿದಾಗ ನಮಗೆ ನಿಮ್ಮ ಅನುಪಸ್ಥಿತಿಯ ಕಾರಣ ಕೊಂಚ ಯೋಚನೆಗೆ ದಾರಿಮಾಡಿತ್ತು. ತಮ್ಮ ನಿಜವಾದ ತೊಂದರೆ ಗಳನ್ನು ನೀವು ಸಪ್ತಗಿರಿ ಅವರಿಗೆ ವಿವರಿಸಿದಾಗ ವಿಚಾರ ಅಭಿಪ್ರಾಯವಾಯ್ತು. ' ಸಾರ್ಥಕ ಪಯಣ ' ಕವನ ಚನ್ನಾಗಿದೆ. ಬದುಕಿನ ದಾರಿಯನ್ನು ಅಂಬೆಗಾಲಿಡುತ್ತಾ ಸವೆಸಿದಂತೆ ಮುಂದಿನ ಪಯಣದ ಗುರಿಯು ಆಶಾವಾದ ದತ್ತ ಸಾಗಬೇಕೆನ್ನುವ ತಿರುಳು ನನಗೆ ಹಿಡಿಸಿತು. ವಂದನೆಗಳು

Submitted by nanjunda on
ಹೇಗಿತ್ತು ಪಯಣ ? ಅಮಾಯಕ ಮಗು ಅಂಬೆಗಾಲಿಕ್ಕಿ ಸಾಗಿ ಹೋದಂತೆ ಪದಗಳ ರೂಹೇ ಇಲ್ಲದೆ ಕವನ ರಚನೆಗೊಂಡಂತೆ ಕುರುಡುಗಂಗಳು ಪ್ರಕೃತಿ ಸೌಂದರ್ಯ ಅನುಭವಿಸಿದಂತೆ ಎದೆಯಾಳದಲಿ ಮೂಡಿದ ಸೂಕ್ಷ್ಮ ಬಿಂಬದಂತೆ || ಸೂ.....ಪ......ರ್ರ್.....ರ್ರ್.....ರ್ರ್.....ರ್ರ್...

Submitted by H A Patil on
ಡಿ.ನಂಜುಂಡ ರವರೆ ವಂದನೆಗಳು, ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು

Submitted by H A Patil on
ಎನ್ ರಮೇಶ ಕಾಮತರಿಗೆ ವಂದನೆಗಳು ಕವನದ ಮೂಲ ನಾಡಿಯನ್ನು ಗ್ರಹಿಸಿ ಬರೆದಿದ್ದೀರಿ, ಒಂದೊಂದು ಸಲ ನಾನು ಬರೆಯುತ್ತಿರುವುದು ಅತಿಯಾಯಿತೇನೋ ಎಂದೆನಿಸುತ್ತಿತ್ತು ಅದು ಅಲ್ಲದೆ ಗಣಕ ಯಂತ್ರದ ಅವಿರತ ನಿರಶನ, ಅದು ಮುಷ್ಕರವನ್ನು ನಿಲ್ಲಿಸಲು ಇನ್ನೂ ತಯಾರಿಲ್ಲ, ಅದರದೋ ದುಬಾರಿ ಬೇಡಿಕೆಗಳು. ನಮ್ಮಿಬ್ಬರ ಸಂಧಾನಗಳು ಇನ್ನೂ ಫಲಕಾರಿಯಾಗಿಲ್ಲ, ಸ್ನೇಹಿತರ ಲ್ಯಾಪ್ ಟಾಪ್ ನಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ. ನಿಮ್ಮ ಗ್ರಹಿಕೆಗೆ ಮೆಚ್ಚ್ಚಗೆಗೆ ಮತ್ತು ಕಳಕಳಿಗೆ ಧನ್ಯವಾದಗಳು.

Submitted by partha1059 on
ಸಾಗಿದ ಪಯಣ ವ್ಯರ್ಥವಲ್ಲ ವ್ಯಾಪಿಸಲಿದೆ ಬೆಳಕು ಕತ್ತಲನು ಮೆಟ್ಟಿ ದಿಗ್ದಿಗಂತದಾಚೆ ಈಚೆ ನನಸಾಗಲಿವೆ ಕಂಡ ಕನಸುಗಳು ‍‍‍‍‍‍‍‍‍‍‍‍‍‍‍‍_______________________ ಪಾಟೀಲರೆ ಉತ್ತಮ ಕವನಕ್ಕೆ ಅಭಿನಂದನೆಗಳು ತಮ್ಮ ಸಂಪದದಲ್ಲಿ ಚಟುವಟಿಕೆಗೆ ಕಂಪ್ಯೂಟರೆ ನೆರವು ನೀಡುತ್ತಿರುವ ನಿಮ್ಮ ಗೆಳೆಯರು ಅಭಿನಂದನೆಗೆ ಅರ್ ಹರು ಪಾರ್ಥಸಾರಥಿ

Submitted by S.NAGARAJ on
ಮಾನ್ಯ ಪಾಟೀಲರೆ, ಅರ್ಥ ಗರ್ಭಿಥ ಕವನ. ಸಂಪದ ದೆಸೆಯಿಂದ ಕಾವ್ಯ ಪ್ರಿಯರಿಗೆ ರಸದೌತಣ.

Submitted by ashoka_15 on
ಒಮ್ಮೆ ನೋಡಿದೆ ಮತ್ತೆ ನೋಡಿದೆ ಮಗದೊಮ್ಮೆ ನೋಡುವಾಸೆ 'ರೈತ ನುತ್ತ ಸಾಲುಗಳ‌ ಗಾಂಧಿಎತ್ತ ತತ್ತ್ವಗಳ‌ ಸೈನಿಕನೊತ್ತ ಹೋಣೆಗಳ‌ ಹನುಮಂತರಿತ್ತ ಪದಗಳ' ಪ್ರತಿಯೋಂದು ಪದಗಳಿಗೂ ಪ್ರತಿಯೋಂದು ಪ್ರತಿಕ್ರಿಯೆ ನಿಮ್ಮದಾಗಲಿ

Submitted by H A Patil on
ಅಶೋಕ ಬಿ.ಆರ್ ರವರೆ ವಂದನೆಗಳು ಕವನ ರೂಪದ ನಿಮ್ಮ ಪ್ರತಿಕ್ರಿಯೆ ಓದಿದೆ, ವಿಪರೀತವಾಗಿ ಹೊಗಳಿ ಬಿಟ್ಟಿದ್ದೀರಿ, ತಮ್ಮ ಮೆಚ್ಚುಗೆಗೆ ಧನ್ಯವಾದಗಳು ಎಂದು ಮಾತ್ರ ಹೇಳಬಲ್ಲೆ.

Submitted by H A Patil on
ಎಸ್.ನಾಗರಾಜ ರವರಿಗೆ ವಂದನೆಗಳು ನಿಮ್ಮ ಪ್ರತಿಕ್ರಿಯೆ ಓದಿದೆ, ಮೆಚ್ಚುಗೆಗೆ ಧನ್ಯವಾದಗಳು.

Submitted by H A Patil on
ಪಾರ್ಥಸಾರಥಿ ಯವರಿಗೆ ವಂದನೆಗಳು ನಿಮ್ಮ ಪ್ರತಿಕ್ರಿಯೆಯನ್ನು ಮೂರು ದಿನಗಳ ಹಿಂದೆಯೆ ನೋಡಿ ಪ್ರತಿಕ್ರಿಯೆ ಬೆರಳಚ್ಚು ಮಾಡಿದ್ದೆ, ಆದರೆ ಅಂತರ್ಜಾಲದ ಅಸಹಕಾರದಿಂದಾಗಿ ತಮಗೆ ತಲುಪಿಸಲು ಆಗಲಿಲ್ಲ. ಮತ್ತೆ ಈ ದಿನದಂದು ಈಗ ಸಂಪರ್ಕ ಸಾಧ್ಯವಾಗಿದ್ದು ಪ್ರತಿಕ್ರಿಯಿಸಲು ಕುಳಿತಿದ್ದೇನೆ. ಕವನ ಮೆಚ್ಚಿದ್ದೀರಿ, ಅದು ನಿಮ್ಮ ಉದಾರತನವೆಂದು ಮಾತ್ರ ಹೇಳಬಲ್ಲೆ. ಈಗ ಸುಮಾರು ಒಂದು ತಿಂಗಳ ಹಿಂದಿನಿಂದಲೂ ಗಣಕಯಂತ್ರ ಮತ್ತು ಅಂತರ್ಜಾಲಗಳ ಅಸಹಕಾರ ಹಾಗೂ ವೈಯಕ್ತಿಕ ಕಾರ್ಯ ದೊತ್ತಡಗಳಿಂದಾಗಿ ಸಂಪದಿಗರಿಗೆ ಪ್ರಕ್ತಿಕ್ರಿಯಯಿಸುವುದಾಗಲಿ ಬರವಣಿಗೆಯಾಗಲಿ ಸಾಧ್ಯವಾಗಿರಲಿಲ್ಲ. ಇನ್ನು ನೀವು ಹೇಳಿದಂತೆ ನನ್ನ ಸಂಪದದ ಚಟುವಟಿಕೆಗೆ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳ ನೆರವು ನೀಡುತ್ತಿರುವ ಗೆಳೆಯರು ಅಭನಂದನೆಗೆ ನಿಜಕ್ಕೂ ಅರ್ಹರು. ಅವರೆ ನನಗೆ ಸಂಪದ ಬ್ಲಾಗ್ ತೋರಿಸಿ ಸದಸ್ಯನನ್ನಾಗಿ ಮಾಡಿದರು, ಬರವಣಿಗೆಗೆ ಪ್ರೇರೇಪಸಿದರು. ಅವರ ಸಂಪದದ ಬಗೆಗಿನ ಪ್ರೀತಿ ಅನನ್ಯವಾದುದು. ಆದರೆ ಅವರ ಹೆಸರನ್ನು ಸಂಪದಿಗರಿಗೆ ಹೇಳ ಬೇಕೆಂದರೆ ಅವರು ಬೇಡವೆಂದು ನಿರಾಕರಿಸುತ್ತಾರೆ. ನಿಮ್ಮಲ್ಲರ ಮತ್ತು ಅವರ ಪ್ರೀತಿ ವಿಶ್ವಾಸಕ್ಕೆ ಅನಂತ ಕೃತಜ್ಞತೆಗಳು

Submitted by venkatesh on
ವಾಯುಪುತ್ರ, ಪವನಜ, ಮತ್ತು ರಾಮಭಂಟನಿಗೆ ಇಲ್ಲವೆನ್ನುವ ಧರ್ಯ ಯಾರಿಗಿದೆ ? ನಿಮ್ಮ ಕಾವ್ಯ, ಕವಿತಾ ಪೂಜೆ ಹೀಗೆಯೇ ಸಾಗಲಿ ! ಜೈ ವಾಯುಪುತ್ರ, ಹನುಮಂತರೆ ! ನಿಮ್ಮ ಪ್ರಿಯ ಓದುಗ (ಫ್ಯಾನ್) -ವಾಸ್ತವ್ಯ : ಟೊರಾಂಟೋನಗರ, ಕೆನಡ.

Submitted by H A Patil on
ವೆಂಕಟೇಶ ರವರಿಗೆ ವಂದನೆಗಳು ನಿಮ್ಮ ಪ್ರತಿಕ್ರಿಯೆ ಓದಿದೆ, ಅಷ್ಟು ದೂರದಿಂದ ವಾಯು ಸಂದೇಶ ಕಳಿಸಿದ್ದೀರಿ ವಿಶ್ವಾಸಕ್ಕೆ ಮತ್ತು ಪ್ರತಿಕ್ರಿಯೆಗೆ ಅನಂತ ಅನಂತ ಧನ್ಯವಾದಗಳು..