19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಾವಿನ ಪದ್ಯಗಳು

August 18, 2012 - 1:03pm
ku.sa.madhusudan

1.

ಸಾವು ನಗುವ

ಸಮಾದಿಯ ಮೇಲೂ

ಅರಳುವವು

ಬಿಳಿ

ಹೂವು!

2.

ಕರೆದಾಗ

ಸಾವು

ಹಿಂಬಾಲಿಸುವುದಷ್ಟೆ

ನಾವು

ಮಾಡಬಹುದಾದ

ಕೆಲಸವು!

3.

ಮಣ್ಣು ಮಾಡಿ ಹೋದವರು

ಮರೆತರೂ

ಮರೆಯಲಿಲ್ಲ

ಮಣ್ಣೊಳಗೆ ಮಲಗಿದವನ

ಗೆದ್ದಲು

ಹುಳುಗಳು!

4.

ಬಾ ಎಂದಾಗ

ಬರದು

ಸಾವು

ಬಂದಾಗದು

ತಪ್ಪಿಸಿಕೊಳ್ಳಲಾರೆವು!

5.

ಸಾವೆಂದರೆ

ನಾಟಕದ

 ಅಂತ್ಯ ಮಾತ್ರ

ಅದಕ್ಯಾಕೆ

ಚಿಂತೆ-ಶಂಕೆ!

6.

ಹುಟ್ಟಿನೊಡನೆ

ಹುಟ್ಟುವ 

ಸಾವು

ಬದುಕಿನುದ್ದಕ್ಕೂ

ಕಾಡುವ

ಹೆಡೆಯೆತ್ತಿ

ನಿಂತ

ಬೆನ್ನ ಹಿಂದಿನ  ಹಾವು!

7.

ನಾವು 

ಸಾವಿನ ಹಿಂದೆ

ಸಾವು

ನಮ್ಮ

ಹಿಂದೆ

ಪರಿಣಾಮ

ಒಂದೇ!

------------------------------

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on
ಸಾವು ನಿಶ್ಚಿತ, ಬದುಕಿರುವುದೇ ಆಕಸ್ಮಿಕ ಎನ್ನುವ ಹಿರಿಯ ಕವಿಯೊಬ್ಬರ ಮಾತು ನೆನಪಾಯಿತು. ಬಹುಶ: ಡಿ.ವಿ. ಗುಂಡಪ್ಪನವರಿರಬೇಕು. ಚೆನ್ನಾಗಿದೆ ನಿಮ್ಮ ಸಾವಿನ ಸಾಲು..ಕವಿತೆ.

Submitted by ksraghavendranavada on
ನಿಮ್ಮ ಸಾವಿನ ಪದ್ಯಗಳಿಗೊ೦ದು ನನ್ನ ಪರಾಕು!! ಬಹಳ ಕಾಲ ಚಿ೦ತನೆಯನ್ನುಳಿಸುವಲ್ಲಿ ಯಶಸ್ವಿಯಾಗುತ್ತವೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

Submitted by GOPALAKRISHNA B... on
ನಿಮ್ಮ ಕವನ ಓದಿದೆ.ಚೆನ್ನಾಗಿದೆ.ಕೂಡಲೇ ನಾನೂ ಒಂದು ಕವನ ಗೀಚಿದೆ‍;ಸಂಪದದಲ್ಲಿ ಹಾಕಿದ್ದೇನೆ.

Submitted by venkatb83 on
"ಮಣ್ಣು ಮಾಡಿ ಹೋದವರು ಮರೆತರೂ ಮರೆಯಲಿಲ್ಲ ಮಣ್ಣೊಳಗೆ ಮಲಗಿದವನ ಗೆದ್ದಲು ಹುಳುಗಳು!" ಸಖತ್.... ಸಾಲುಗಳು.. ಕವನ ಸಾವಿನ ಬಗೆಗಿನ ವ್ಯರ್ಥ ಛಿಂತೆಯನ್ನು ಅದನ್ನು ತೊರೆವ ಬಗೆಯನ್ನು ಸರಳವಾಗಿ ತಿಳಿಸಿದೆ.. ಶುಭವಾಗಲಿ... \|/

Submitted by S.NAGARAJ on
ಆತ್ಮೀಯ ಮಧುಸೂದನ್ ಅವರೆ, ಬಹಳ ಹತ್ತಿರದಿಂದಲೇ ಇತ್ತೀಗಷ್ಟೇ ನೆಂಟರ‌ ಸಾವು ಕಂಡ ನನಗೆ ನಿಮ್ಮ ಕವನ ಆತ್ಮಾವಲೋಕನ ಚಿಂತನೆಗೆ ಗುರಿಮಾಡಿದೆ. ಶುಭವಾಗಲಿ.‌