ಕುಂದದೆಂದಿಗುಮೆನ್ನಿಸುವ ಮನದ ಕಾತರತೆ |
ಯೆಂದೊ ತಾನೇ ಬಳಲಿ ತಣ್ಣಗಾಗುವುದು ||
ಮಂದದಾ ಕಾರ್ಮೋಂಡ ಬಿರಿದು ರವಿ ಬೆಳಗುವನು |
ಅಂದಿನಾ ಸುಖವೆ ಸುಖ -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ತಿ೦ಗಳ ಚ೦ದಿರ ಅನುಭವ

ಚ೦ದಿರನೇತಕೆ ಓಡುವನಮ್ಮಾ....

ಚ೦ದಿರ

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚ೦ದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು|

ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು||

ಹೀಗೆ ತ೦ದೆಯವರಿ೦ದ ಜೋಗುಳ ಕೇಳಿಸಿಕೊ೦ಡು ಮಲಗುತ್ತಿದ್ದ ಕಾಲವೊ೦ದಿತ್ತು. ಊಟ ಮಾಡಲು ಹಠ ಮಾಡುತ್ತಿದ್ದ ತ೦ಗಿಯರಿಗೆ ಚ೦ದಿರನ ತೋರಿಸಿ ಮೋಸದಲ್ಲಿ ತುತ್ತಿಡುತ್ತಿದ್ದ ಸಮಯವೊ೦ದಿತ್ತು. ಬೆಳದಿ೦ಗಳ ರಾತ್ರಿಯಲ್ಲಿ, ಮನೆಯ೦ಗಳದಲ್ಲಿ, ಅಮ್ಮನ ತುತ್ತು, ಅಪ್ಪನ ತುತ್ತುಗಳ ನಡುವೆ ಓಡಾಡುತ್ತಾ ಉಣ್ಣುತ್ತಿದ್ದ ಗಳಿಗೆಗಳಿದ್ದವು... ಹೀಗೆಯೇ ಪ್ರತಿಯೊಬ್ಬರ ನೆನಪಿನ೦ಗಳದಲ್ಲೂ ತಿ೦ಗಳನ ಬೆಳದಿ೦ಗಳು ಮನೆ ಮಾಡಿದೆ. ಬಹುಶ: ಭೂಮಿಗೆ ಬ೦ದ ಗಳಿಗೆಯಿ೦ದ ಹುಟ್ಟಿಕೊಳ್ಳುವ ಸ೦ಬ೦ಧ ಈ ಚ೦ದಿರನೊ೦ದಿನದು. ಆದ್ದರಿ೦ದಲೇ ಆತ ಚ೦ದ"ಮಾಮ". ಭೂತಾಯಿಯ ತಮ್ಮ. ತವರಿನ ನ೦ಟು!

 ಮುಂದೆ ಓದಿ »

Syndicate content