ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪತ್ರಿಕೋದ್ಯಮ

ಪತ್ರಿಕೋದ್ಯಮದ ಅನಿವಾರ್ಯತೆಗಳು

ಸತ್ಯ ಹೇಳಲಾಗದ ಸಂದಿಗ್ಧತೆ

ಸಾವಿನಲ್ಲಾದರೂ ಸತ್ಯ ಹೊರಬರಬಾರದೇ? ಪ್ರತಿಯೊ೦ದು ಸಾವನ್ನು ಕ೦ಡಾಗಲೂ ನನ್ನ ಮನಸ್ಸು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಹೋಗುತ್ತದೆ. ಇತ್ತೀಚೆಗೆ ತು೦ಬಾ ಜನ ಅನಿರೀಕ್ಷಿತವಾಗಿ ಸಾಯತೊಡಗಿದ್ದಾರೆ. ಬಡವರ ಸಾವುಗಳಲ್ಲಿ ಸತ್ಯ ಬಲು ಬೇಗ ಹೊರಬ೦ದರೆ, ಅಧಿಕಾರದಲ್ಲಿರುವವರ ಹಾಗೂ ಹಣವ೦ತರ ಸಾವುಗಳಲ್ಲಿ ಮೊದಲು ಸುಳ್ಳು ಬಲು ಬೇಗ ಹರಡುತ್ತದೆ. ಸತ್ಯ ನ೦ತರ, ನಿಧಾನವಾಗಿ ಹೊರಬರುತ್ತಾ ಹೋಗುತ್ತದೆ. ಅಷ್ಟೊತ್ತಿಗೆ ಪತ್ರಿಕೆಗಳಲ್ಲಿ ಚರಮಗೀತೆ ಪ್ರಕಟವಾಗಿರುತ್ತದೆ. ಪುಟಗಟ್ಟಲೇ ಶ್ರದ್ಧಾ೦ಜಲಿಗಳು ಅಚ್ಚಾಗಿರುತ್ತವೆ. ಅದಕ್ಕಿಂತ ತೀವ್ರವಾಗಿ ದೃಶ್ಯಮಾಧ್ಯಮದಲ್ಲಿ ಸುದ್ದಿ ಪುನರಾವರ್ತನೆಯಾಗಿರುತ್ತದೆ. ಅಲ್ಲಲ್ಲಿ ಶೋಕಸಭೆಗಳಾಗಿರುತ್ತವೆ. ಸತ್ತವರ ತಿಥಿ ಊಟ ಕೂಡಾ ಜೀರ್ಣವಾಗಿ ಹೋಗಿ, ಸಾವಿನ ಮನೆಯಲ್ಲಿ ಬದುಕು ಸಹಜ ಸ್ಥಿತಿಯತ್ತ ಕು೦ಟುತ್ತಾ ಬರುತ್ತಿರುತ್ತದೆ.  ಮುಂದೆ ಓದಿ »

ತಿರುಚುವಿಕೆಯೇ ವರದಿಗಾರಿಕೆ

ರೋಚಕವಾಗಿ ವರದಿ ಮಾಡಲು ಹೋಗಿ ಬೇಸ್ತು ಬೀಳುವುದಕ್ಕೆ ಉತ್ತಮ ಉದಾಹರಣೆ ಇವತ್ತಿನ ಕನ್ನಡಪ್ರಭ ದಿನಪತ್ರಿಕೆಯ ಮುಖಪುಟದ ಮುಖ್ಯ ಸುದ್ದಿ.  ಮುಂದೆ ಓದಿ »

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ

Writing.gif

’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ.

ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ.   ಮುಂದೆ ಓದಿ »

ಮಧ್ಯಮದಲ್ಲೇ ಉಳಿದ ಮಾಧ್ಯಮ

images.jpg

(ಶಶಿಕುಮಾರ್‌ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/a... ದಲ್ಲಿ ನೋಡಬಹುದು )  ಮುಂದೆ ಓದಿ »

ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

ನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ.

ಏಕೆಂದರೆ, ಮಾಧ್ಯಮಗಳು ಇಬ್ಬದಿ ನೀತಿ ಪ್ರದರ್ಶಿಸುತ್ತಿವೆ. ಖಾಸಗಿ ಬದುಕನ್ನು ರಸವತ್ತಾಗಿ ಬಣ್ಣಿಸುವ ಹಿಂದೆ ವಿಕೃತ ಮನಸ್ಸು ಮಾತ್ರ ಇರಲು ಸಾಧ್ಯ. ಏರಿದವನು ಕೆಳಗೆ ಬಿದ್ದರೆ ಮಾಧ್ಯಮಕ್ಕೆ ಎಂಥದೋ ವಿಕೃತ ಆನಂದ. ತಕ್ಕ ಶಾಸ್ತಿಯಾಯಿತು ಎಂಬ ಭಾವನೆ. ಸಲ್ಮಾನ್‌ಖಾನ್‌ ಹಾಗೈ ವಿವೇಕ್‌ ಒಬೆರಾಯ್‌ ಜೊತೆ ಐಶ್ವರ್ಯಾ ರೈ ಸಂಬಂಧ ಮುರಿದಾಗ ಮಾಧ್ಯಮ ಆನಂದಪಟ್ಟಂತೆ ವರ್ತಿಸಿತು. ಮಾನ್ಯತಾ-ಸಂಜಯ್‌ ದತ್ತ ವಿವಾಹ ವಿವಾದ ಹುಟ್ಟಿದ್ದೂ ಇಂಥದೇ ಮನಃಸ್ಥಿತಿಯಿಂದ.

ನನಗೆ ಗೊತ್ತಿರುವಂತೆ, ಮಾಧ್ಯಮದಲ್ಲಿ ಕೆಲಸ ಮಾಡುವ ಬಹುತೇಕ ಜನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು. ಆದರೆ, ಅವರ ಒಡನಾಟ ಮೇಲ್ವರ್ಗದ (ಆರ್ಥಿಕವಾಗಿ) ಜನರ ಜೊತೆ. ನಿತ್ಯ ಅವರ ಜೀವನಶೈಲಿ, ಖ್ಯಾತಿ, ರೂಪ, ಅವಕಾಶ ಕಂಡು ಮಾಧ್ಯಮದವರಲ್ಲಿ ಮತ್ಸರ ಉಂಟಾಗುತ್ತದೆ ಎಂದು ಕಾಣಿಸುತ್ತದೆ. ಅದಕ್ಕೆಂದೇ ಅದನ್ನು ವಿಕೃತವಾಗಿ ಚಿತ್ರಿಸುವ ಮೂಲಕ, ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸುವ ಮೂಲಕ ಇವರು ವಿಕೃತ ಆನಂದ ಅನುಭವಿಸುತ್ತಾರೆ.  ಮುಂದೆ ಓದಿ »

Syndicate content