ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಂಗಳೂರು

ಸುದ್ದಿ ಅಂದ್ರೆ ಹೀಗೇನಾ ?

ಸುದ್ದಿ ಮಾಧ್ಯಮಗಳು ಎಂದರೆ ಸದಾ ಕಣ್ಣು ಕಿವಿ ಜಾಗೃತವಾಗಿರಬೇಕು ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತರು. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವುದಾದರೂ ಏನು ? ಒಮ್ಮ ಸೂಕ್ಷ್ಮವಾಗಿ ಗಮನಿಸಿದರೆ ಸಾಕು... ಪ್ರಚಾರಕ್ಕಾಗಿ ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು ನಡೆಸುವ ಕಸರತ್ತಿಗಿಂತ ಸುದ್ದಿ ಮಾಧ್ಯಮಗಳ ಸುದ್ದಿಯೇ ಬಹುಪಾಲು ಕೆಲಸ ಮಾಡುವಂತೆ ಕಾಣುತ್ತಿದೆ. ಇದೆಲ್ಲಾ ಗಮನಿಸಿದ್ರೆ ಸುದ್ದಿ ಅಂದ್ರೆ ಹೀಗೇನಾ ? ಸ್ವಲ್ಪ ಸಿಹಿ ಸ್ವಲ್ಪ ಕಹಿ ಎಂಬಂತೆ ಪರ ವಿರೋಧ ಚರ್ಚೆ ನಡೆಯಲೇ ಬೇಕಲ್ಲವೇ ?

ಕಳೆದ ಆರು ವರ್ಷಗಳಿಂದ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರೂ ನನಗೆ ಅರ್ಥವಾಗದ ಪ್ರಶ್ನೆ ಎಂದರೆ ಇದೇ. ಯಾವುದೇ ಸುದ್ದಿ ಇರಲಿ. ಅದನ್ನು ವಸ್ತು ನಿಷ್ಠವಾಗಿ ಕೊಡಬೇಕೋ ಅಥವಾ ರಂಗು ರಂಗಾಗಿ ರಂಜಿತವಾಗಿ ಕೊಡಬೇಕೇ ?  ಮುಂದೆ ಓದಿ »

ಚಂದ್ರ ಮತ್ತು ಗೊಮ್ಮಟರ ಜೂಟಾಟ

ಕಾರ್ಕಳದ ೪೨ ಅಡಿ ಎತ್ತರದ ಗೊಮ್ಮಟ ಚಂದ್ರನೊಡನೆ ಚರ್ಚಿಸ್ತಿದಾನೆ. ವಿಷಯ ಏನಿರಬಹುದು ಹೇಳ್ತೀರಾ?

ವಾಯ್! ಶ್ರೀರಾಮಸೇನೆ ಯಾಕೆ "ಕಪಿಚೇಷ್ಟೆ" ಮಾಡ್ತಾ ಉಂಟು ಮಾರಾಯ?

Sri Rama

ಶ್ರೀರಾಮಸೇನೆಯೆಂದರೆ ಕಪಿಸೈನ್ಯ ತಾನೆ. ಕಪಿಗಳು ತಾನೆ ಹೀಗೆ ಇಲ್ಲದ ಅವಾಂತರಗಳನ್ನು ಸೃಷ್ಟಿಸುವುದು! ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣ ರಾಷ್ಟ್ರಮಟ್ಟದ ಸುದ್ದಿಯಾದದ್ದು.  ಮುಂದೆ ಓದಿ »

ಹಾವು, ಗುಬ್ಬಚ್ಚಿ, ಯಕ್ಷಗಾನ

ಮತ್ತಷ್ಟು ಚಿತ್ರಗಳು. ಇಂದು ಸಮಯವಾಗಿದೆ ಎಂದು ಆದಷ್ಟು ಅಪ್ಲೋಡ್ ಮಾಡಿರುವೆ - ಇಲ್ಲವಾದರೆ ಎಂದಿನಂತೆ ಅದು ಕಂಪ್ಯೂಟರಿನಲ್ಲೇ ಉಳಿಯುವುದು.

ಪುತ್ತೂರಿನ ಹೋಟೆಲೊಂದರ ಪಾರ್ಕಿಂಗ್ ಏರಿಯ ಅದು - ಗುಬ್ಬಚ್ಚಿಗಳ ಚಿಲಿಪಿಲಿ ಗಲಾಟೆ ಅಲ್ಲಿ ನಡೆದಿತ್ತು.   ಮುಂದೆ ಓದಿ »

ಹೂ ಗಿಡಗಳೊಂದಿಗೆ

ಪಾಲಚಂದ್ರರ ಪುಸ್ತಕದ ಹಾಳೆಯೊಂದನ್ನು ಹಾರಿಸುತ್ತ, ಇದೋ ಕೆಲವು ಫೋಟೋಗಳು. ಕಳೆದ ತಿಂಗಳ ಕೊನೆಯಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ ತೆಗೆದದ್ದು:

ಕೆಂಪು ಬಣ್ಣದ ಹೂಗಳು  ಮುಂದೆ ಓದಿ »

ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

ಮಂಗಳೂರಿನ ಪಬ್ ಮೇಲೆ ದಾಳಿ, ಯುವತಿಯರ ಮೇಲೆ ಥಳಿತ ಎಲ್ಲ ಖಂಡನೀಯ. ಆದರೆ ಮಾಧ್ಯಮಗಳು ಅದಕ್ಕೆ ಕೊಟ್ಟ ಪ್ರಾಮುಖ್ಯತೆ ಮಾತ್ರ ಅತಿಯಾಯಿತೆಂದು ಅನ್ನಿಸುವುದಿಲ್ಲವೇ?  ಮುಂದೆ ಓದಿ »

ವಾರೆವ್ಹಾ ಕ್ರಿಸ್ಮಸ್ ಬಂತು

ಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮಸ್ ಸಂದೇಶಗಳುಳ್ಳ ಸಂದೇಶಗಳ ರವಾನೆ, ಕ್ರಿಸ್ಮಸ್ ಸ್ನೇಹಿತರಿಗಾಗಿ ಉಡುಗೊರೆಯ ಖರೀದಿ, ನಕ್ಷತ್ರಗಳ ತಯಾರಿ ಗಡದ್ದಾಗಿಯೇ ನಡೆಯುತ್ತಿದೆ.

ಮಂಗಳೂರಿನಲ್ಲಂತೂ ಕ್ರಿಸ್ಮಸ್ ಗಾಗಿ ಕುಸ್ವಾರ್ ತಯಾರಿಸುತ್ತಾರೆ. ಕ್ರಿಸ್ಮಸ್ ತಿಂಡಿಯನ್ನು ಇಲ್ಲಿನ ಜನ ಪ್ರೀತಿಯಿಂದ ಕುಸ್ವಾರ್ ಎನ್ನುತ್ತಾರೆ. ಕ್ರಿಸ್ಮಸ್ ಕೇಕ್ ಕುಸ್ವಾರ್ ನ ಯಜಮಾನ. ಕುಸ್ವಾರ್ ನಲ್ಲಿ ಕೇಕ್ ಜೊತೆಗೆ ಕಿಡಿಯೊ, ಗುಳಿಯೊ, ಲಾಡು, ಚಕ್ಕುಲಿ, ಚಿಪ್ಸ್, ನಿವ್ರ್ಯೊ, ಚಕ್ಕುಲಿ... ಮುಂತಾದ ಇನ್ನೂ ಕೆಲವು ತಿಂಡಿಗಳಿರುತ್ತವೆ.  ಮುಂದೆ ಓದಿ »

Syndicate content