ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮುತ್ತುಸ್ವಾಮಿ ದೀಕ್ಷಿತರು

ಶ್ರೀ ಶುಕ್ರಭಗವಂತಂ

ಶ್ರೀ ಶುಕ್ರಭಗವಂತಂ

ರಾಗ: ಘರಜ್
ತಾಳ: ಅಟತಾಳ

ಪಲ್ಲವಿ:
||ಶ್ರೀಶುಕ್ರ ಭಗವಂತಂ ಚಿಂತಯಾಮಿ||
|| ಸಂತತಂ ಸಕಲ ತತ್ವಜ್ಞಂ||

ಅನುಪಲ್ಲವಿ:
||ಹೇ ಶುಕ್ರಭಗವನ್ ಮಾಂ ಆಶು ಪಾಲಯ, ವೃಷ ತುಲಾಧೀಶ ದೈತ್ಯ||‌
||ಹಿತೋಪದೇಶ, ಕೇಶವಕಟಾಕ್ಷೈಕನೇತ್ರಂ ಕಿರೀಟಧರಂ ಧವಳಗಾತ್ರಂ||

ಚರಣ:
||ವಿಂಶತಿ ವತ್ಸರೋಡುದಶಾವಿಭಾಗಮಷ್ಟವರ್ಗಂ||
||ಕವಿಂ ಕಳತ್ರಕಾರಕಂ ರವಿನಿರ್ಜರ ಗುರುವೈರಿಣಂ||
||ನವಾಂಶ ಹೋರಾದ್ರೇಕ್ಕಾಣಾದಿ ವರ್ಗೋತ್ತಮಾವಸರಸಮಯೇ||
||ವಕ್ರೋಚ್ಚನೀಚ ಸ್ವಕ್ಷೇತ್ರವರಕೇಂದ್ರ ಮೂಲತ್ರಿಕೋಣೇ||
||ತ್ರಿಂಶಾಂಶಷಷ್ಟ್ಯಾಂಶೈರಾವತಾಂಶ ಪಾರಿಜಾತಾಂಶ ಗೋಪುರಾಂಶ||
||ರಾಜಯೋಗಕಾರಕಂ ರಾಜ್ಯಪ್ರದಂ ಗುರುಗುಹಮುದಂ||

ತಾತ್ಪರ್ಯ:

ಬೃಹಸ್ಪತೇ

ಬೃಹಸ್ಪತೇ

ರಾಗ: ಅಠಾಣ.
ತಾಳ: ತ್ರಿಪುಟತಾಳ (ತ್ರಿಶ್ರಜಾತಿ)

ಪಲ್ಲವಿ:
||ಬೃಹಸ್ಪತೇ ತಾರಾಪತೇ ಬ್ರಹ್ಮಜಾತೇ ನಮೋಸ್ತುತೇ||

ಅನುಪಲ್ಲವಿ:
||ಮಹಾಬಲವಿಭೋ ಗೀಷ್ಪತೇ ಮಂಜುಧನುರ್ಮೀನಾಧಿಪತೇ||
||ಮಹೇಂದ್ರಾದ್ಯುಪಾಸಿತಾಕೃತೇ ಮಾಧವಾದಿವಿನುತಧೀಮತೇ||

ಚರಣ:
||ಸುರಾಚಾರ್ಯವರ್ಯ ವಜ್ರಧರ, ಶುಭಲಕ್ಷಣ ಜಗತ್ರಯಗುರೋ||‌
||ಜರಾದಿ ವರ್ಜಿತಕ್ರೋಧ, ಕಚಜನಕಾಶೃತಜನಕಲ್ಪತರೋ||
||ಪುರಾರಿಗುರುಗುಹ ಸಮ್ಮೋದಿತ, ಪುತ್ರಕಾರಕ ದೀನಬಂಧೋ||
||ಪರಾದಿ ಚತ್ವಾರಿವಾ ಕ್ಸ್ವ ರೂಪಪ್ರಕಾಶಕ ದಯಾಸಿಂಧೋ||
||ನಿರಾಮಯಾಯ ನೀತಿಕರ್ತ್ರೇ, ನಿರಂಕುಶಾಯ ವಿಶ್ವಭರ್ತ್ರೇ||‌
||ನಿರಂಜನಾಯ ಭುವನಭೋಕ್ತ್ರೇ, ನಿರಂಶಾಯ ಸುಖಪ್ರದಾತ್ರೇ||‌

ತಾತ್ಪರ್ಯ:

ಬುಧಮಾಶ್ರಯಾಮಿ

ಬುಧಮಾಶ್ರಯಾಮಿ

ರಾಗ: ನಾಟಕುರಂಜಿ.
ತಾಳ: ಮಿಶ್ರಜಾತಿ ಝಂಪೆತಾಳ

ಪಲ್ಲವಿ:
||ಬುಧಮಾಶ್ರಯಾಮಿ ಸತತಂ||
||ಸುರವಿನುತಂ, ಚಂದ್ರತಾರಾಸುತಂ|| (ಬುಧ)

ಅನುಪಲ್ಲವಿ:
||ಬುಧಜನೈರ್ವೇದಿತಂ ಭೂಸುರೈರ್ಮೋದಿತಂ||
||ಮಧುರ ಕವಿತಾಪ್ರದಂ ಮಹನೀಯ ಸಂಪದಂ || (ಬುಧ)

ಚರಣ:
||ಕುಂಕುಮ ಸಮದ್ಯುತಿಂ, ಗುರುಗುಹಮುದಾಕೃತಿಂ||
||ಕುಜವೈರಿಣಂ ಮಣಿ ಮಕುಟಹಾರ ಕೇಯೂರ ಕಂಕಣಾಧಿಧರಣಂ||
||ಕಮನೀಯತರ ಮಿಥುನ ಕನ್ಯಾಧಿಪಂ ಪುಸ್ತಕಕರಂ ನಪುಂಸಕಂ||
||ಕಿಂಕರ ಜನಮಹಿತಂ ಕಿಲ್ಬಷಾದಿರಹಿತಂ||‌
||ಶಂಕರ ಭಕ್ತಹಿತಂ ಸದಾನಂದಸಹಿತಂ|| (ಬುಧ)

ಅಂಗಾರಕಂ

ಅಂಗಾರಕಂ

 

ಇವತ್ತು ಮಂಗಳವಾರ.
ಈ ದಿನ ನೆನಪಾದದ್ದು ದೀಕ್ಷಿತರ 'ಅಂಗಾರಕಂ' ಕೃತಿ.
ಈ ಕೃತಿಯೂ ಸಹ ಸಾಹಿತ್ಯ ತಂದೆಯವರ ಸಂಗೀತ ಪುಸ್ತಕದಲ್ಲಿತ್ತು.
(ನವಗ್ರಹ ಕೀರ್ತನೆಗಳು ತಂದೆಯವರ ಸಂಗೀತ ಪುಸ್ತಕದಲ್ಲಿದೆ).

ಈ ಕೃತಿ ಸುರುಟಿ ರಾಗದಲ್ಲಿದ್ದು, ರೂಪಕತಾಳದಲ್ಲಿದೆ.
ಇದರ ತಾತ್ಪರ್ಯವನ್ನು ಬರೆಯಲು ನನ್ನ ಪ್ರಯತ್ನ.

ಪಲ್ಲವಿ:
||ಅಂಗಾರಕಮಾಶ್ರಯಾಮ್ಯಹಂ ವಿನತಾಶ್ರಿತಜನ ಮಂದಾರಂ||
||ಮಂಗಳವಾರಂ ವಾರಂ ವಾರಂ|| (ಅಂಗಾರಕಂ)

ಅನುಪಲ್ಲವಿ:
||ಶೃಂಗಾರಕ ಮೇಷವೃಶ್ಚಿಕ ರಾಶ್ಯಾಧಿಪತಿಂ||
||ರಕ್ತಾಂಗಂ ರಕ್ತಾಂಬರಾದಿಧರಂ ಶಕ್ತಿ ಶೂಲಧರಂ||
||ಮಂಗಳಂ ಕಂಬುಗಳಂ ಮಂಜುಳತರ ಪದಯಗಳಂ||
||ಮಂಗಳದಾಯಕ ಮೇಷತುರಂಗಂ ಮಕರೋತ್ತುಂಗಂ|| (ಅಂಗಾರಕಂ)

ಚಂದ್ರಂಭಜ

ಚಂದ್ರಂಭಜ

ನಾಳೆ ಹುಣ್ಣಿಮೆ.

ಆದರೆ, ಇಂದು, ಆಗಸದಲ್ಲಿ ಚಂದ್ರನನ್ನು ನೋಡಿದಾಗ ನೆನಪಾದದ್ದು, ಮುತ್ತುಸ್ವಾಮಿ ದೀಕ್ಷಿತರ ಕೃತಿ ’ಚಂದ್ರಂಭಜ!’

ಅದೃಷ್ಟವಶಾತ್, ಈ ಕೃತಿ ತಂದೆಯವರ ಸಂಗೀತದ ಪುಸ್ತಕದಲ್ಲಿತ್ತು.
ಇದು ಅಸಾವೇರಿ ರಾಗದಲ್ಲಿದ್ದು, ಮಠ್ಯತಾಳದಲ್ಲಿದೆ.

ಆ ಕೃತಿ ಇಲ್ಲಿದೆ. ಇದರ ತಾತ್ಪರ್ಯವನ್ನು ಬರೆಯಲು ನನ್ನ ಪ್ರಯತ್ನ.

ಪಲ್ಲವಿ:
||ಚಂದ್ರಂ ಭಜ ಮಾನಸ ಸಾಧುಹೃದಯಸದೃಶಂ|| (ಚಂದ್ರಂಭಜ)

ಅನುಪಲ್ಲವಿ:
||ಇಂದ್ರಾದಿ ಲೋಕಪಾಲೇಡಿತ ತಾರೇಶಂ||
||ಇಂದುಂ ಷೋಡಶಕಲಾಧರಂ ನಿಶಾಕರಂ||
||ಇಂದಿರಾ ಸಹೋದರಂ ಸುಧಾಕರ ಮನಿಶಂ|| (ಚಂದ್ರಂಭಜ)

ಸೂರ್ಯಮೂರ್ತೇ ನಮೋಸ್ತುತೇ!

ಸೂರ್ಯಮೂರ್ತೇ ನಮೋಸ್ತುತೇ!

ಶನಿವಾರ ಬೆಳಿಗ್ಗೆ ರವಿಯು ಉದಯಿಸುತ್ತಿರುವಾಗ ನಮ್ಮ ಮನೆಯ ಮಹಡಿಯಿಂದ ಹೀಗೆ ಕಾಣಿಸಿದ. ಆಗ ಸೆರೆಹಿಡಿದ ಚಿತ್ರ.

ಉದಯರವಿ  ಮುಂದೆ ಓದಿ »

ಬಂಗಾರಿ ಲಕುಮಿಯ ಸದಾ ನೆನೆವೆ

ಲಕ್ಷ್ಮೀ ನೆಲೆನಿಲ್ಲುವ ಕಮಲ - ಕೃಪೆ: ಎಂ ಎನ್ ಆರ್ ಪ್ರಸಾದ್

ಅಗಸ್ಟ್ ೧೫-೨೦೦೮

ಇವತ್ತು ಸ್ವಾತಂತ್ರೋತ್ಸವ, ಮತ್ತೆ ಕಮಲದಲಿ ನಿಂದಿಹ, ಕಮಲವ ಕೈಯಲ್ಲಿ ಹಿಡಿದ, ಕಮಲಮುಖಿಯಾದ ವರಲಕ್ಷ್ಮಿಯ ಪೂಜೆಯ ದಿನ.

ಇವತ್ತು ಸರಸ್ವತಿ ಮತ್ತೆ ಲಕ್ಷ್ಮಿ ಇಬ್ಬರನ್ನೂ ನೆನೆಯಬಹುದಾದ ದಿನ ಅನ್ನಬಹುದು. ಯಾಕಂದ್ರೆ, ನಮ್ಮ ತಾಯಿ ಭಾರತಿ. ಭಾರತಿ ಅಂದರೆ ಸರಸ್ವತಿ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಇನ್ನು ಶ್ರಾವಣ ಪೂರ್ಣಿಮೆಯ ಮುಂಚಿನ ಶುಕ್ರವಾರದಲ್ಲಿ ಮಾಡುವ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಸುಮಾರು ದಕ್ಷಿಣಭಾರತದಲ್ಲೆಲ್ಲ ಇದೆ.

ಸಂಗೀತ ತ್ರಿಮೂರ್ತಿಗಳಲ್ಲ್ಲಿ ಒಬ್ಬರು ಮುತ್ತುಸ್ವಾಮಿ ದೀಕ್ಷಿತರು. ಅವರ ಶ್ರೀವರಲಕ್ಷ್ಮೀ ನಮಸ್ತುಭ್ಯಂ ಅನ್ನುವ ರಚನೆ ಪ್ರಖ್ಯಾತವಾಗಿದೆ. ಅದರಲ್ಲಿ ಲಕ್ಷ್ಮಿಯನ್ನು ಭಕ್ತರಿಗೆ ಸುಲಭವಾಗಿ ದೊರೆಯುವ ವರಲಕ್ಷ್ಮಿಯನ್ನು ಸ್ಮರಿಸುತ್ತಾರೆ.

ಸಂಗೀತ ಸರಸ್ವತಿಯ ಉಪಾಸಕರಾದ ಮುತ್ತುಸ್ವಾಮಿ ದೀಕ್ಷಿತರು ಲಕ್ಷ್ಮಿಯನ್ನು (ಅಂದರೆ ಸಂಸಾರ ನಡೆಸಲು ಬೇಕಾದ ಹಣವನ್ನು) ಕಡೆಗಣಿಸಿದ್ದರೆಂದು ಅವರ ಹೆಂಡತಿಗೆ ಸ್ವಲ್ಪ ಅಸಮಾಧಾನವಿತ್ತಂತೆ. ಅದನ್ನು ಅವರು ಗಂಡನೆದುರು ತೋರಿಸಿಯೂಬಿಟ್ಟರಂತೆ. ಯಾರಾದರೂ ರಾಜರದೋ, ಜಮೀನ್ದಾರರದೋ ಆಶ್ರಯ ಹಿಡಿದು ಹಣಗಳಿಸಬಾರದೇ ಅಂದರಂತೆ. ಆಕೆಯದೇನು ತಪ್ಪಿಲ್ಲ ಬಿಡಿ - ಮನೆಯ ಬಗ್ಗೆ ಹರಿಸಬೇಕಾದಷ್ಟು ಗಮನ ಹರಿಸದ ಗಂಡನಾದರೆ, ಯಾವ ಹೆಂಡತಿಯೂ ಅದನ್ನೇ ಅಂದಾಳು!ಅಲ್ಲವೇ?  ಮುಂದೆ ಓದಿ »

ಶೃಂಗಾರ ರಸಮಂಜರಿ

ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ. ಆದರೆ, ಅವುಗಳಲ್ಲಿ ಸಾಹಿತ್ಯ ಗೌಣ. ಸಂಗೀತ ಮುಖ್ಯ.

ಹಿಂದಿನಿಂದಲೂ ರಸಗಳ ಪಟ್ಟಿ ಮಾಡುವಾಗ ಶೃಂಗಾರವೇ ಮೊದಲಿನದು. ಅಮರಕೋಶ ರಸಗಳನ್ನು "ಶೃಂಗಾರ ವೀರ ಕರುಣಾ ಅಧ್ಬುತ ಹಾಸ್ಯ ಭಯಾನಕಾ: ಭೀಭತ್ಸ ರೌದ್ರೋ ಚ ರಸಾ:" ಎಂದು ಎಂಟು ರಸಗಳನ್ನು ಪಟ್ಟಿಮಾಡುತ್ತದೆ. ಭರತನ ನಾಟ್ಯಶಾಸ್ತ್ರದಲ್ಲಿ, ಈ ಎಂಟರ ಜೊತೆಗೆ ಒಂಬತ್ತನೆಯದಾದ ’ಶಾಂತ’ವೆಂಬ ರಸವೂ ದೊರೆಯುತ್ತೆ. ಒಟ್ಟಿನಲ್ಲಿ ಶೃಂಗಾರವೇ ಮೊದಲ ರಸವಾಗಿತ್ತು ಎಂದು ನಾವಂದುಕೊಳ್ಳುವುದರಲ್ಲಿ ತಪ್ಪಿಲ್ಲ.  ಮುಂದೆ ಓದಿ »

Syndicate content