ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮನಸ್ಸು

ಧರ್ಮಗಳೆಂಬ ಮನಸ್ಸಿನ ಮುಖಗಳು

( ಮೂಲ: ಓಶೋ ರಜನೀಶರ ಝೆನ್, ಜೆಸ್ಟ್, ಜಿಪ್, ಜಾಪ್ ಅಂಡ್ ಜ್ಯಾಂಗ್ ಉಪನ್ಯಾಸ ೧)

ಮನುಷ್ಯನ ಮನಸ್ಸಿಗೆ ಹಲವು ಮುಖಗಳಿವೆ. ಒಂದೊಂದು ಧರ್ಮವೂ ಮನಸ್ಸಿನ ಒಂದೊಂದು ಮುಖವನ್ನು  ವೈಭವೀಕರಿಸಿ, ಅದನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವ ಕೆಲಸ ಮಾಡಿದೆ.  ಮುಂದೆ ಓದಿ »

ಮನಸಿದು ಹಕ್ಕಿಯ ಗೂಡು!

ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ!


ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ


ಪೊಗಳುವದು ಮಣ್ಣನ್ನೇ ಹೊನ್ನೆಂದು!


 


ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ.


ಸಂತಸದಿಂದಿದ್ದರೆ ಮಳೆಯದು ಅಮ್ರುತ ಸಿಂಚನ,


ಮನ ಮುದುಡಿದ್ದರದುವೇ ಆಗಸದ ಆಕ್ರಂದನ!


 


ಎಲ್ಲಿ ನೋಡಿದರಲ್ಲಿ ಮನಗಳ ನರ್ತನ,


ಬಯಕೆಗಳ ಹಿಂದೆ ಬೆಂಬಿಡದ ಪಯಣ.


ಓ ಸೂತ್ರಧಾರ ಪ್ರಭುವೇ ಬಂದು ಸಲಹು,


ಮೂಡಲಿ ನಿನ್ನೆಡೆ ಒಲವು ಎಲ್ಲರಲೂ.

ಮನದಾಟ

subhashita1
ಸು-
ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ
ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ
ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು
ನನ್ನ ಮನದ

ನಗುತ್ತಿರಲಿ ಮನಸು

ನಗುತಿರಲಿ ಮನಸು
ಬಾರದಿರಲಿ ಮುನಿಸು
ನಗುತಿರುವುದೇ ಸೊಗಸು
ಕನಸ ಕಾಣಲಿ ಮನಸು
ನನಸಾಗಲಿ ಕನಸು
ಸಿಹಿ ಕನಸು......

ಪ್ರೀತಿಯಿಂದ ನಿಮ್ಮ ಗೆಳತಿ
ಕಾವ್ಯಾ.......... ;)

ಮನಸ್ಸು

ಮನಸ್ಸಿನ ಮಾತುಗಳು, ಕಣ್ಣಿನ ಚಡಪಡಿಕೆಗಳು
ಈವುಗಳ ಸಾಮೀಪ್ಯದ ಸಂಧರ್ಬಗಳು,
ಮಾನವನ ಸಂಭಂಧಗಳನು ಬೆಸೆದಿದೆ.
ಮನದ ಭಾವನೆಗಳು ಬಂಡೆಕಲ್ಲಿಗೆ ಅರ್ಥವಾಗುವುದೇ??? - ಆನಂದ ನಂದ

ಆಸೆ

ಒಂದಾನೊಂದು ಕಾಲದಲ್ಲಿ ನನಗೆ ಎಂತಹ ಆಸೆ ಇತ್ತೂಂತಿರಿ, ಕಂಡ ಕಂಡ ವಸ್ತುಗಳೆಲ್ಲ ನನ್ನದಾಗಿದ್ದರೆ ಅಂತ ಮನಸ್ಸು ಆಸೆ ಪಡುತ್ತಿತ್ತು. ಆಗ ಕೈಯಲ್ಲಿ ಕಾಸಿರಲಿಲ್ಲ, ಮನೆಯಲ್ಲಿ ಪರಿಸ್ಥಿತಿ ಸರಿಯಿರಲಿಲ್ಲ. ಆ ಆಸೆಯೇ ನನ್ನನ್ನು ಕಷ್ಟಪಟ್ಟು ಓದಿ, ಸಂಪಾದಿಸಿ, ಒಂದು ನೆಲೆ ಕಂಡುಕೊಳ್ಳುವ ಹಾಗೆ ಪ್ರೇರೇಪಿಸಿತು.  ಮುಂದೆ ಓದಿ »

ಮನಸ್ಸಿಗೂ ಅಂಗಿ. . ?

ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೂವಿನಂಗಿ ಗೆರೆಯಂಗಿ
ಚುಕ್ಕಿಯಂಗಿ ಚಮಕಿಯಂಗಿ
ಚಳಿ ಅಂಗಿ, ಮಳೆ ಅಂಗಿ
ಎಲ್ಲದಕ್ಕೂ ಒಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಬಣ್ಣದ ಬಣ್ಣದ ಅಂಗಿ
ಒಗೆದು, ಒಣಗಿಸಿ, ತಿರುಚಿ
ಹಾಕಿಕೊಳ್ಳುವ ಅಂಗಿ
ಇದಿಲ್ಲದಿದ್ದರೆ ಇನ್ನೊಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೊತ್ತೊತ್ತಿಗೊಂದು ಅಂಗಿ  ಮುಂದೆ ಓದಿ »

ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !

ಇತ್ತೀಚಿಗೆ ಸುನೀಲ್ ಒಂದು ಪ್ರಶ್ನೆ ಎತ್ತ್ದ್ರು. http://sampada.net/f...
ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ? ಅಂತ.

ಈ ಪ್ರಶ್ನೆ ನಾನು PLL ದೃಷ್ಟಿ ಕೋನದಲ್ಲಿ ಯೋಚಿಸಿ ಬರೀತಾ ಇದ್ದೀನಿ.

ನೆನಪಿಟ್ಟುಕೊಳ್ಳಿ ಇದು PLL ಕಡೆಯಿಂದ ಮನಸ್ಸಿನ ನೋಟ. ಮನಸ್ಸಿನ ಕಡೆಯಿಂದ ಆರಂಬಿಸಿ ನೋಡಿದರೆ ಸ್ವಲ್ಪ ಬೇರೆ / ತಪ್ಪು ಅನಿಸಬಹುದು.  ಮುಂದೆ ಓದಿ »

ಶ್ರದ್ಧೆ

ಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ.....

"ಶ್ರದ್ಧೆ"  ಮುಂದೆ ಓದಿ »

ಗಾಯ

ಹೂವಿಗಾಗಿ ಕೈ ಮಾಡಿದೆ

ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ

 

ಹಣ್ಣಿಗಾಗಿ ಮರವೇರ ಹೋದೆ

ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ

 

ಹಾಲು ಕೊಡೆಂದು ಹಸುವ ಕೇಳಿದೆ

ಸಿಕ್ಕಿದ್ದು ಬರೀ ಅದರ ಒದೆತದ ಗಾಯ

 

ನಲಿವಿನ ಹೊತ್ತು ನೀಡಲು ನೆನಪನು ಕೇಳಿದರೂ

ಸಿಕ್ಕಿದ್ದು ಬರೀ ಮನನೊಂದ ಹಸಿ ಗಾಯ

Syndicate content