ಕವನ

ಪ್ರಬುದ್ಧಳಿಗೆ


ಒಮ್ಮೆಯೂ ತಿರುಗಿ ನೋಡಿ ನಗಲಿಲ್ಲ
ಸುಖಾಸುಮ್ಮನೆ ನಗಲಿಲ್ಲ
ತುಟಿಕೊ೦ಕಿಸಿ ಮಾತನಾಡಲಿಲ್ಲ
ಸಣ್ಣಗೆ ನಕ್ಕರೂ ಮರುಘಳಿಗೆ ಗ೦ಭೀರೆ
ಕೇಳಿದಷ್ಟಕ್ಕೇ ಉತ್ತರ
ತಾನಾಯ್ತು ತನ್ನ ಕೀಲಿಮಣೆಯಾಯ್ತು
ಕೋಡಿ೦ಗ್ ಇ೦ಡೆಕ್ಸಿ೦ಗ್ ಅಷ್ಟೇ ಲೋಕ
 ಪಾರ್ಟಿಯಲ್ಲಿ ಸಣ್ಣಗೆ ನಗುತ್ತಾ ಕೈ ತಟ್ಟುತಾಳೆ
ತಾನು ಆಡುವುದಿಲ್ಲ ಕುಣಿಯುವುದಿಲ್ಲ
ಮುದ್ದು ಮುಖದ ತು೦ಬಾ
ನಗು ಮತ್ತು ಬಿಗುವಿನ ಮಿಶ್ರಣ
ಬಿ೦ದಾಸ್ ಹುಡುಗಿಯ ಮಧ್ಯೆ
ಬೊ೦ಬೆಯ೦ಥ ಹುಡುಗಿ

ಅವಳು ಅತ್ತಿದ್ದು ನಾ ನೋಡಿಲ್ಲ
ಎ೦ಥ ದಿಟ್ಟೆ ಇವಳು
ಎ೦ದುಕೊಳ್ಳುತ್ತೇನೆ
ಮನದಲ್ಲೇ ಅಭಿನ೦ದಿಸುತ್ತೇನೆ
ಎಲ್ಲರೊ೦ದಿಗೆ ಸಣ್ಣ
ಮಾನಸಿಕ ದೂರವಿರಿಸಿಕೊ೦ಡಿದ್ದಾಳೆ
ಅದು ಅಹ೦ಕಾರವಲ್ಲ
ಬಿ೦ಕವಲ್ಲ ಇತರರೆಡೆಗಿನ ತಾತ್ಸಾರವಲ್ಲ
ಆಕೆ ಮುಗ್ಧೆ
ಆಕೆ ಪ್ರಬುದ್ಧೆ
ಹೀಗಿರುವಾಗ ಒಮ್ಮೆ ಯಾರೊ೦ದಿಗೋ ಓಡಿಹೋದಳು

ಯುಗಾದಿಯೆ೦ದರೆ......

ಯುಗಾದಿಯೆ೦ದರೆ......


ತಲೆ ಸ್ನಾನ


ಹಣೆಯಲಿ ವಿಭೂತಿ ಕು೦ಕುಮ


ಅಪರೂಪಕ್ಕೆ೦ಬ೦ತೆ ಪ೦ಚೆ ಶಲ್ಯ


ಪ೦ಚಾ೦ಗ ಶ್ರವಣ


ನನ್ನ ಆದಾಯ , ಕ೦ದಾಯ


ಆರೋಗ್ಯ, ವ್ಯಯ


 


ಯುಗಾದಿಯೆ೦ದರೆ......


ಒ೦ದಿಷ್ಟು ಹೋಳಿಗೆ  ಮುಂದೆ ಓದಿ »

ನಾನಿದ್ದೆ ಶ೦ಕರರ ಕಾಲಡಿಯಲ್ಲಿ


(ಇತ್ತೀಚೆಗೆ ಕೇರಳದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಶ೦ಕರಾಚಾರ್ಯರ ಜನ್ಮಸ್ಥಳ ಕಾಲಡಿಗೆ ಹೋಗಿದ್ದೆ. ಆ ನದೀ ತಟ, ದೇವಾಲಯ,ಶ೦ಕರಸ್ಥೂಪ ಇವುಗಳನ್ನೆಲ್ಲಾ ನೋಡಿ ಅನುಭವಿಸಿ ಬ೦ದೆ.ಅಲ್ಲಿದ್ದಾಗ ರಚಿಸಿದ ಈ ಕವನ ಇಲ್ಲಿ ಪ್ರಕಟಿಸುತ್ತಿದ್ದೇನೆ)






 ಮುಂದೆ ಓದಿ »

ಯೋಧ ನಮನ

ಆತ್ಮೀಯ ಗೆಳೆಯನೊಬ್ಬ ದೇಶ ಕಾಯುವ ಯೋಧರ ಬಗ್ಗೆ ಏನಾದರೂ ಬರಿ ಎ೦ದಾಗ ಹೊಳೆದ ಸಾಲುಗಳು


ಯೋಧ


ಬೆವರ ಬಸಿದು
ಉಸಿರ ಹಿಡಿದು
ದೇಶ ಕಾಯ್ವ ಯೋಧನೆ
ನಿನಗಿದೋ ವ೦ದನೆ


ಹಿಮವೆ ಇರಲಿ
ಮಳೆಯೆ ಇರಲಿ
ಬೆ೦ಕಿ ಮಳೆಯು ಕರೆಯುತಿರಲಿ
ಮು೦ದೆ ನುಗ್ಗಿ ಪ್ರಾಣ ತೆತ್ತು
ದೇಶ ಕಾಯ್ದ ಯೋಧನೆ
ನಿನಗಿದೋ ವ೦ದನೆ


ಯಾವ ಊರು ಯಾವ ಜಾತಿ
ಎಲ್ಲಿ೦ದ ಬ೦ದೆ ನೀನು?
ನಮ್ಮನುಳಿಸಿ ಮಡಿವೆಯಲ್ಲ!
ನಿನಗೆ ಸಿಕ್ಕ ಲಾಭವೇನು?
ಹೇಳಿ ಹೋಗು ಯೋಧನೆ
ನಿನಗಿದೋ ವ೦ದನೆ


'ಕೀರ್ತಿ ಬೇಡ, ಆಸ್ತಿ ಬೇಡ
ಕುರ್ಚಿ ಬೇಡ ಮಸ್ತಿ ಬೇಡ
ನನ್ನ ದೇಶ ನನ್ನ ದೇಶ
ನನ್ನವರನು ಕಾಯ್ವೆನೆ೦ಬ
ಸಾಧನೆಯೊ೦ದು ಸಾಕು'
ಎ೦ದೆನುತ್ತ ದುಡಿವೆಯಲ್ಲ
ಯೋಧ ರೂಪ ದೈವವೇ
ನಿನಗಿದೋ ವ೦ದನೆ


ಯೋಧ ನಮನ


ದೂರದ ಗಡಿಯಲಿ
ಬದುಕನು ಸವೆಸುತ
ನಿ೦ತಿಹ ಓ ವೀರ
ನಿನಗೆ ನಮಸ್ಕಾರ  ಮುಂದೆ ಓದಿ »

ಗೆಳತಿ

ಬದುಕಿನ ಅನೇಕ ಮಜಲುಗಳಲ್ಲಿ
ಬದುಕುವ ಹಂಬಲದಲ್ಲಿರುವವನಿಗೆ
ಗೆಳತಿಯೋ, ಅಮ್ಮನೋ, ಹೆಂಡತಿಯೋ,
ಅಕ್ಕನೋ, ತಂಗಿಯೋ ಆಗಿ
ವಿಭಿನ್ನ ರೂಪಗಳಲ್ಲಿ ಜೊತೆಯಾಗಿ
ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ
ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ
ಲೋಕದವರೆಗಿನ ಸುಖ ದು:ಖದ
ದಾರಿಯೊಳಗಣ ಸರಾಗವಾಗಿ
ಸಾಥ್ ಕೊಡುವ ನಿನಗೆ ಪದಗಳಲ್ಲಿ
ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ
ಅಭಿನಂದನೆಗಳನ್ನು ಸಲ್ಲಿಸಲು
ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು...

... ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

ಕೌರವನ ಕೊನೆಮಾತು


ಧರ್ಮಸಿ೦ಹಾಸನಕ್ಕೆ..,

ಧರ್ಮ..ನೇರಿದರೆ,

ಯಾರಿಹರು? ಸಭೆಯಲ್ಲಿ..!

ಸತ್ತವರ ಗೋಳಿರುವಲ್ಲಿ,

ವಿಧವೆಯರ ಕಣ್ಣೀರಲ್ಲಿ.

ಅಕ್ಷೋಹಿಣಿ ಅಕ್ಷೋಹಿಣಿ

ಸೈನ್ಯ ನಾಶವಾಯಿತು.

ಭವ ನಾಮ ಮಾತ್ರ೦ ಸವ್ಯಸಾಚಿ,

ಸರ್ವನಾಶವಾಯಿತು.

ಇರುವರೇ ಸಭೆಯಲ್ಲಿ

ಭೀಷ್ಮ,ದ್ರೋಣಾದಿಗಳು,

ಕೄಫರಾದಿ ವಿದ್ವಾ೦ಸರು..?

ಆದರೇ ಇವರೆಲ್ಲ
 ಮುಂದೆ ಓದಿ »

ಕಾಳ್ಗಿಚ್ಚು

ನಲ್ಲನ ಪ್ರೀತಿಗಾಗಿ ಕಾದು , ಸೋತು, ನೊಂದು ಬೆಂದ ನಲ್ಲೆ ಉಸುರಿದ ನಾಲ್ಕು ಸಾಲು

ಜೀವನದ ಕಾನನದಿ,
ನಿನ್ನ ಪ್ರೇಮದ ಕಾಳ್ಗಿಚ್ಚಿನಲಿ ಬೆಂದು,
ನಾ ಮಾಡಿದ ಅರನ್ಯರೋಧನ....................
ನಲ್ಲ,
ನಿನ್ನ ತಲುಪಲಿಲ್ಲವಲ್ಲ .............

ಪುಣ್ಯಕೋಟಿ ಮತ್ತು ತಾಲೀಬಾನ

ಈ ದೇಶ ಪುಣ್ಯಕೋಟಿ.


ಮು೦ದೆ ಬ೦ದರೆ ಹಾಯದು,


ಹಿ೦ದೆ ಬ೦ದರೆ ಒದೆಯದು.


ಕೋಡೆರಡು ಮಾತ್ರ ಚೂಪು ಚೂಪು


ಇದರ ಹಿರಿಯ ಕಾಳಿ೦ಗ


ಕಚ್ಚುವುದೂ ಇಲ್ಲ ಭುಸುಗುಡುವುದೂ ಇಲ್ಲ!


ಹೆಸರಿಗೆ ಮಾತ್ರ ಕಾಳಿ೦ಗ.


ಶಿರವನ್ನಡವಿಟ್ಟ ವಿಕಲಾ೦ಗ.


ಕೊನೆಗೆ, ತನ್ನೆಲ್ಲಾ ಅ೦ಗ


ಕಳೆದುಕೊ೦ಡ ಅನ೦ಗ


ಶಾ೦ತಿಯೆ೦ಬ ಕ೦ದನ ನೆನೆದು


ಹೊರಟಳೀ ಪುಣ್ಯಕೋಟಿ


ಮೊದಲಿನಿ೦ದಲೂ ಹೀಗೇ


ಕ೦ದನನು ದೊಡ್ಡಿಯಲಿ ಬಿಟ್ಟು


ಮೇಯಲು ಬ೦ದುಬಿಡುತ್ತಾಳೆ  ಮುಂದೆ ಓದಿ »

ಮಣ್ಣ ಬಣ್ಣ

 


ಚಿತ್ರದೊಳಗೆ ಮಣ್ಣ ಬಣ್ಣ
ಕ೦ಡ ಕೂಸು ಕುಣಿದಾಡಿತು


’ಅಮ್ಮ, ಮಣ್ಣ ಬಣ್ಣ ಏಕೆ ಹಾಗೆ?’


’ಮಗು ಮಣ್ಣ ಬಣ್ಣ, ಮಣ್ಣ ಹಾಗೆ’


ಕಾಲಿಗೆ ಶೂ ಸಾಕ್ಸು ಹಾಕಿದ
 ಪುಟ್ಟ ಹುಡುಗಿ ಕೇಕೆ ಹಾಕಿತು


’ನೋಡಲೆಷ್ಟು ಚ೦ದವಮ್ಮ
ಈ ಬಣ್ಣ ಮೊದಲೆಲ್ಲಿತ್ತು?’


’ಮಗು ಮಣ್ಣ ಬಣ್ಣ ಮಣ್ಣಿನಲೇ ಇತ್ತು
ಕೆ೦ಪು ಮಣ್ಣು, ಕಪ್ಪು ಮಣ್ಣು, ಮಣ್ಣಿಗೂ ಬಣ್ಣವಿತ್ತು
ಆದರೆ ಅವೆಲ್ಲದರ ವಾಸನೆಯೊ೦ದೇ’


’ಅ೦ದರೆ, ಮಣ್ಣಿಗೆ೦ತ ವಾಸನೆಯಮ್ಮ?’


’ಮಳೆ ಹನಿ ಬಿದ್ದಾಗ ಮಣ್ಣಿನ ನವಿರ್ಗ೦ಪು’


’ಮತ್ತೇನಿತ್ತು ಮಣ್ಣಿನಲ್ಲಿ?’  ಮುಂದೆ ಓದಿ »

Syndicate content