ಪ್ರಚಲಿತ
ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
July 18, 2008 - 1:37pm — ರಾಘವೇ೦ದ್ರ_ಸೊರಬಸತ್ಯಹರಿಶ್ಚ೦ದ್ರ ಚಿತ್ರದಲ್ಲಿ ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಮನದಲ್ಲಿ ಮೇಲ್ಯಾವುದೊ............. ಎ೦ದು ಕುಣಿದು ಎಲ್ಲರ ಮನ ಗೆದ್ದ ವೀರಭಾಹು (ಎ೦.ಪಿ.ಶ೦ಕರ್) ಅಸ್ತ೦ಗತ ವಾಗಿರುವುದು ನಮ್ಮ ಕನ್ನಡ ಚಲನ ಚಿತ್ರರ೦ಗಕ್ಕೆ ದೊಡ್ದ ನಷ್ಟ.........

- ರಾಘವೇ೦ದ್ರ_ಸೊರಬ ರವರ ಬ್ಲಾಗ್
- Login or register to post comments
- 122 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಗೊಬ್ಬರಕ್ಕಾಗಿ ಧಗಧಗಿಸಿದ ಧಾರವಾಡ-೨
June 16, 2008 - 1:47pm — pallavi.dharwadಗಲಾಟೆ ಪ್ರಾರಂಭವಾಗುವ ಯಾವ ಮುನ್ಸೂಚನೆಯೂ ಅಂದು ಇರಲಿಲ್ಲ. ಮುಂದೆ ಓದಿ »

- pallavi.dharwad ರವರ ಬ್ಲಾಗ್
- Login or register to post comments
- 139 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹಾವೇರಿಯ ಸಾವು , ಯಾರು ಹೊಣೆ ?
June 13, 2008 - 11:45am — csomsekraiahವ್ಯವಸ್ಥೆಯ ಅಧ್ವಾನಕ್ಕೆ ಮುಗ್ಧ ಜೀವವೊಂದು ಬಲಿಯಾಯಿತು ; ಬಲಿಯ ನಂತರ ಬಲಿಯ ಮೇಲೆ ಹದ್ದಿನಂತೆ ಎರಗಿದ ಎಲ್ಲರಲ್ಲೂ ಇದ್ದದ್ದು ಮಾತ್ರ ಹೇಸಿಗೆ ತರಿಸುವಷ್ಟು ಸ್ವಾರ್ಥ ಮತ್ತು ಲೋಲುಪತೆ .
ನಮ್ಮ ಸರ್ಕಾರದ ಆಡಳಿತಾಂಗ ಎಷ್ಟು ನೈತಿಕ ಅಧಃಪಾತಾಳವನ್ನು ತಲುಪಿದೆಯೆಂದರೆ , ಯಾರೆಂದರೆ ಯಾರಿಗೂ ಅವರೂ ಸೇರಿದಂತೆ , ಎಲ್ಲರೂ ಜೀವಿಸುತ್ತಿರುವ ಸಾಮಾಜಿಕ ವಲಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇಲ್ಲದ ಸ್ಥಿತಿಯನ್ನು ಮುಟ್ಟಿರುವುದು .ಪ್ರತಿಯೊಬ್ಬ ಅಧಿಕಾರಿಯೂ ಅವರವರ ಸಂಬಳ ,ಭತ್ಯೆ , ಗಿಂಬಳ ,ವರ್ಗಾವರ್ಗಿಗಳ ಚಿಂತೆಯಲ್ಲಿಯೇ ಮುಳುಗಿ , ಸಮಾಜಿಕ ಜೀವನವೇ ಮರೆತು ಹೋಗಿರುವ ಸ್ಥಿತಿಯಲ್ಲಿರುವುದು . ರಾಜ್ಯಪಾಲರ ಅವಧಿಯೆಂಬುದು , ಮತ್ತೂ ಕಡಿವಾಣವಿಲ್ಲದ ಸ್ಥಿತಿಯಾಗಿ ಅಧಿಕಾರ ಶಾಹಿಯ ಸುಗ್ಗಿಯ ಸಮಯವಾಗಿತ್ತು . ಮುಂಗಾರಿನ ಮಳೆಗೆ ಈ ರಾಜ್ಯದ ರೈತರಿಗೆ ಏನು ಬೇಕು ? ಎಂಬ ವಿಷಯ ಯಾರ ತಲೆಗೂ ಹೋಗಲೇ ಇಲ್ಲ .
ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷ ,ಅದರ ಅಮಲಿನಲ್ಲಿ ಮಂತ್ರಿ ಪದವಿಗೆ ; ನಂತರ ಖಾತೆಗಳಿಗೆ , ಅಧಿಕಾರ ಸಿಕ್ಕ ಘಳಿಗೆಯಿಂದ ಒದ್ದಾಡಿದ್ದರ ನೂರರಲ್ಲಿ ಹತ್ತು ಭಾಗದಷ್ಟು ಪ್ರಚಲಿತ ಸಮಸ್ಯೆಗಳಿಗೆ ಗಮನವನ್ನು ಕೊಟ್ಟು ಒದ್ದಾಡಿದ್ದರೆ ನಡೆದುಹೋದ ಅನಾಹುತದ ಬಹುಪಾಲು ಸಾಧ್ಯತೆಯನ್ನು ತಪ್ಪಿಸಬಹುದಾಗಿತ್ತು. ಮುಂದೆ ಓದಿ »

ನೀನಾರಿಗಾದೆಯೋ ಎಲೆ ಮಾನವ!
June 6, 2008 - 11:05pm — shylaswamy "ಕಷ್ಟಗಳು ಮನುಷ್ಯನಿಗೆ ಬಾರದೇ ಮರಕ್ಕೆ ಬರುವುದೆ?" ಎಂಬ ಸಾಂತ್ವಾನದ ನುಡಿ ನಾವೆಲ್ಲಾ ಪದೇಪದೇ ಕೇಳಿದ್ದೆವಷ್ಟೆ. ಆದರೆ ಹಾಗೆ ಯಾರಾದರೂ ಮಾತನಾಡಿದರೆ ನನಗೆ ತುಂಬಾ ಕೋಪವೂ ಬ್ರುತ್ತದೆ ಹಾಗೂ ದುಃಖವೂ ಆಗುತ್ತದೆ. ಕಾರಣ ಇಷ್ಟೆ. ಆ ರೂಢಿಮಾತು ಎಳ್ಳಷ್ಟೂ ಸರಿಯಲ್ಲ. ಮರಗಳಿಗೆ ಬಂದಷ್ಟು, ಬರುತ್ತಿರುವಷ್ತು ಕಷ್ಟ ಮನುಷ್ಯನಿಗೆ ಬಂದಿಲ್ಲ. ಅಕಸ್ಮಾತ್ ಬಂದಿದ್ದರೂ ಅದಕ್ಕೆ ಬೇರೆಯವರು ಹೊಣೆಯಲ್ಲ ಮರದ ಕಷ್ಟಕ್ಕೆ ಮಾನವ ಹೊಣೆಯಾಗುವ ಹಾಗೆ. ಇಂಥ ಸಂದರ್ಭದಲ್ಲಿ ಈ ಮೇಲಿನ ನುಡಿಗಟ್ಟು ಯಾರಿಗಾದರೂ ಕೋಪ ಬರಿಸುವುದು ಸಹಜತಾನೆ?
ಮರಕ್ಕೇನಾದರೂ ಮಾತನಾಡಲು ಬಂದಿದ್ದರೆ ಅದು ನಮ್ಮನ್ನು ನೋಡಿ ಏನು ಹೇಳಬಹುದು?
"ನಿನ್ನುಳಿವಿಗಾಗಿಯೇ ನನ್ನುಳಿವಿನ ಅವಶ್ಯಕತೆ ಇದೆ ಎಂದರಿಯದೆ ನನ್ನನ್ನು ನಾಶಪಡಿಸುತ್ತಿರುವ ಎಲೆ ಮಾನವಾ, ನಿನ್ನಿಂದಲೇ ನನಗೆ ಕಷ್ಟಗಳ ಸರಮಾಲೆ ಬಂದಿರುವಾಗ ನಿನ್ನ ಕಷ್ಟಗಳು ಅದಾವ ಲೆಕ್ಕವೋ ಎಲೆ ಮನುಜನೆ. ವಿಶ್ವ ಪರಿಸರ ದಿನವನ್ನಾಚರಿಸಿದರೆ ಸಾಕೆ? ನಿನ್ನ ಹೊರತು ಉಳಿದೆಲ್ಲ ಜೀವಿಗಳೂ ಪ್ರೊಪಕಾರೀ ಜೀವಿಗಳು. ನೀನಾರಿಗಾದೆಯೋ ಎಲೆ ಮಾನವಾ?" ಎನ್ನಬಹುದೆ?
ನೀವೇನು ಹೇಳುವಿರಿ ಸ್ನೇಹಿತರೆ?


RSS: