ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಸಂಪದ ಆರ್ಕೈವಿನಿಂದ

ಕನ್ನಡ

ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ

ಈಚೆಗೆ ಮಂಡ್ಯಗೆ ಹೋಗಿದ್ದಾಗ ಹಲವು ಸಲ ಕೇಳಿದ್ದ ಅದೇ ಮಾತುಗಳನ್ನು(ಆಡುನುಡಿಯನ್ನು) ಹೊಸದಾಗಿ ಕೇಳಿ - ಅವುಗಳಿಗೆ ಸೊಲ್ಲರಿಮೆಯನ್ನು ವಿವರಿಸುವ ಮೊಗಸು ಇದು:-


ತಿರುಳು: ಈ ಆಡುನುಡಿಯಲ್ಲಿ ’ಹ’ಕಾರ ಬಿದ್ದುವೋಗಿರುವುದು ಮತ್ತು ದ್->ಜ್ ಆಗಿ ಮಾರ್ಪಾಡಾಗುವುದು


ಈ + ಹಯ್ದ = ಈವಯ್ದ( ಎಲ್ಲರ ಕನ್ನಡ), ಆದರೆ ’ದ್’-->’ಜ್’ ಆಗುವುದು ಕನ್ನಡದಲ್ಲಿ(ಆಡುನುಡಿಗಳಲ್ಲೂ) ಹಲವು ಕಡೆ ಕಣ್ದೋರುತ್ತವೆ.


ಹಾಗಾಗಿ ಈ + ವಯ್ ಜ= ಈವಯ್ಜ (ಮಂಡ್ಯದ ಆಡುನುಡಿ) = ಈವಯ್ದ(ಎಲ್ಲರಕನ್ನಡ)


ಇನ್ನು ಕೆಲವು ಎತ್ತುಗೆಗಳು : ಸಂಧ್ಯಾ(ಸಂ) => ಸಂಜೆ, ವಂಧ್ಯಾ(ಸಂ) => ಬಂಜೆ


ಕೆಲವು ಬಳಕೆಗಳು ( ಬರೀ ಮಂಡ್ಯಜಿಲ್ಲೆಯಲ್ಲಿ ಮತ್ತು ಸುತ್ತಮುತ್ತ ಕೇಳಸಿಗುತ್ತವೆ):-
೧. ಬಜ.. ಮಂಡ್ಯಕ್ಕೆ ವೋಮ ( ಬಾ ಹಯ್ದ - ಮಂಡ್ಯಕ್ಕೆ ಹೋಗುವ)
೨. ಯಾವನ್ ಜ ಅಮ ( ಯಾವನೊ ಹಯ್ದ ಅವನು)
೩. ಅಜೊ...ಅಜೊ ಸುಳ್ಳು ಯೋಳ್ಬೇಡ ಕಜೊ ( ಹಯ್ದ... ಹಯ್ದ ..ಸುಳ್ಳು ಹೇಳ್ಬೇಡ ಕಣೊ ಹಯ್ದ)  ಮುಂದೆ ಓದಿ »

’ತುಳು’ವಿನ ಹುಟ್ಟು

ಡಾ| ಪಾದೂರು ಗುರುರಾಜ ಬಟ್ಟರು ಬರೆದಿರುವ ’ತುಳುನಾಡು’ ಹೊತ್ತಿಗೆ ಓದುತ್ತಿದ್ದೆ. ಅವರು ತುಳುವಿನ ಹುಟ್ಟಿನ ಬಗ್ಗೆ ಹೇಳಿರುವುದು:-


 "..."ತುಳು" ಎಂಬ ಪದವು ’ತುರು’ವಿನ ಪರ್ಯಾಯ ಪದವಾಗಿ ಬಂದಿರುವುದೆಂದೂ, ಕನ್ನಡದಲ್ಲಿ ’ತುಱು’ವೆಂದರೆ ದನ, ಗೋವು ಅಂತೂ ಆಕಳು ಎಂಬ ತಿಳಿವು ಇರುವುದೆಂದೂ ಹೇಳಿದ್ದಾರೆ.’ಱ’ "ಳ’ಗಳ ಉಲಿಕೆಯಲ್ಲಿ ಬೇರೆತನ ಹೋಗಿರುವುದರಿಂದ ತುರು ಪದವು ’ತುಳು’ ಎಂದು ಮಾರ್ಪಾಟು ಹೊಂದಿದೆ. ಈ ಮಾರ್ಪಾಟಿಗೆ ಸಾದ್ಯತೆಯೂ ಇದೆ. ತುರುಗಳೆ ಹೆಚ್ಚಾಗಿರುವ ನಾಡು ತುರುನಾಡು, ಅದೇ ತುಳುನಾಡು. ತುರುಗಳನ್ನು ಸಾಕುವವರು, ಅವುಗಳನ್ನು ಹೊಂದಿದವರು ತುರುಕಾರರು(ತುರುವರು) ಅವರೇ ತುಳವರೆಂದು ಹೆಸರನ್ನು ಪಡೆದರು. ಅವರ ನಾಡು ’ತುಳವ’ವಾಯಿತು. ತುರುವರ ನಾಡು ತುಳುನಾಡಾಯ್ತು...."


ಅಂದರೆ ’ತುಳು’ ಕನ್ನಡ ಪದವಾದ ’ತುಱು’ ಎಂಬುದರಿಂದ ಹುಟ್ಟಿತು ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ.


ಈ ವಿವರಣೆ ಶಂ.ಬಾ.ಜೋಶಿಯವರು ಕನ್ನಡದ ಹುಟ್ಟಿಗೆ ಕೊಟ್ಟ ವಿವರಣೆಯನ್ನೇ ಅನುಸರಿಸಿದಂತಿದೆ:-  ಮುಂದೆ ಓದಿ »

ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ್ ವಿ ಯವರ " ಅಭ್ಯಾಸ ೩" ೨೦.೦೬.೧೦

ಈ ಬಾರಿ ನಾನೇ ವೈಯ್ಯಕ್ತಿಕ ಕೆಲಸದಲ್ಲಿ ಮಗ್ನ ನಾಗಿ ಸಮಯಕ್ಕೆ ಸರಿಯಾಗಿ ಅಭ್ಯಾಸ ಏರ್ಪಡಿಸಿರುವಂತಹ ವಿಜಯನಗರಕ್ಕೆ ಮನೋಹರ ಸಾಲಿಮಠ ರ ಸ್ವಗೃಹ "ನೆಲೆ" ಗೆ ತಲುಪಿರದಿದ್ದರೂ ನನಗೇ ನಾಚಿಕೆಯಾಗುವಂತೆ, ಆರಂಭ ಮಾಡದೇ
ನನಗಾಗಿಯೆ ಅವರೆಲ್ಲರೂ ಕಾಯುತ್ತಿದ್ದರು, .ಇನ್ನೂ ತಡಮಾಡಿದರೆ ಒಳ್ಳೆಯದಲ್ಲವೆಂದು ನನಗೆ ನಾನೇ ಶಿಕ್ಷೆ ವಿಧಿಸಿಕೊಂಡೆ ಬೆಳಗಿನ ತಿಂಡಿಯನ್ನು ತಿನ್ನದೇ.

 

   ಮುಂದೆ ಓದಿ »

'ದಿಲ್ಲಿ'ಯ ಬೇತಾಳ 'ಬೆಂಗಳೂರ' ಬೆನ್ನೇರಬೇಕೆ!?

ವಿವಾದಗಳಿಲ್ಲದೇ ಆಡಳಿತ ನಡೆಸುವ ಮನಸು ನಮ್ಮ ರಾಜ್ಯ ಸರ್ಕಾರಕ್ಕಿಲ್ಲವೋ? ತಿಳಿಯುತ್ತಿಲ್ಲ. ಅದೇನು ಅಂತ ಈ ರೀತಿ ಯೋಜನೆಗಳನ್ನ ಹಾಕ್ತಾರೋ?ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಕನಿಷ್ಠ ಯೋಚನೆಯನ್ನಾದರೂ ಮಾಡಿರುತ್ತಾರ? ಬಹುಷಃ ಆ ರೀತಿ ಯೋಚನೆಯನ್ನೆನಾದರು ಮಾಡಿದ್ದರೆ ಮೊನ್ನೆ ನಗರಾಭಿವೃದ್ಧಿ ಮಂತ್ರಿಗಳಾದ ಶ್ರೀ ಸುರೇಶ್ ಕುಮಾರ್ ಅವ್ರು " ಶೀಘ್ರದಲ್ಲೇ ಕರ್ನಾಟಕದ ಎಲ್ಲಾ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಸಗಿಯೋರ ಜೊತೆ ಸೇರ್ಕೊಂಡು ಸಿ.ಬಿ.ಎಸ್.ಇ ಶಾಲೆಗಳನ್ನು ಆರಂಭಮಾಡ್ತೀವಿ" ಅಂತಿದ್ರಾ?
 ಮುಂದೆ ಓದಿ »

ಕನ್ನಡದ ಮಾನ citehr.com nalli ಹೀಗೆ ಹರಾಜಾಗಿದೆ ನೋಡಿ

ಇವತ್ತು kannada  ಅಂತ citehr nalli ಹುಡುಕ್ತಾ ಇದ್ದಾಗ ಸಿಕ್ಕ ಮಾಹಿತಿ ಅಥವ ಕೊಂಡಿ


http://www.citehr.com/103381-about-kannada.html  ಈ ಲೇಖನಕ್ಕೆ ಬಂದ ಕಾಮೆಂಟ್ಸ್ ನೋಡಿ


ಕೆಲವರು   bull shilt ಅದೂ ಇದೂ ಅಂತ ಕನ್ನಡಾನ ಮತ್ತೆ  ಕನ್ನಡಿಗರನ್ನ ಅವಹೇಳನ ಮಾಡ್ತಾ ಇದ್ದರೆ ಮತ್ಯಾರೋ ತಿವಾರಿ ಎನ್ನುವವರು ಇಡೀ ದಕ್ಷಿಣ ಕನ್ನಡದವರನ್ನ ಲುಂಗಿವಾಲಾಗಳು ಎಂದು ಅಣಕಿಸಿದ್ದಾರೆ


ಜೊತೆಗೆ  ತಮಿಳು ತೆಲಗು  ಬೆಳವಣಿಗೆಯ ನಂತರ ಸುಮಾರು ೧೧ ನೇ ಶತಮಾನದಲ್ಲಿ ಕನ್ನಡ ಬೆಳವಣಿಗೆಯಾಯ್ತು   ಅವುಗಳ mixture ಕನ್ನಡ ಎಂಬ ಮಾಹಿತಿಯನ್ನ ನಮಗೇ ಕೊಟ್ಟಿದ್ದಾರೆ


ಆದರೆ


ವಿಕಿಪೀಡಿಯಾದಲ್ಲಿನ ಪ್ರಕಾರ


"


  • ಪೂರ್ವದ ಹಳಗನ್ನಡ ಅನಿಶ್ಚಿತ ಪ್ರಾರಂಭದಿಂದ ೭ನೆಯ ಶತಮಾನದವರೆಗೆ

  • ಹಳಗನ್ನಡ ೭ ರಿಂದ ೧೨ ನೆಯ ಶತಮಾನದವರೆಗೆ

  • "  ಮುಂದೆ ಓದಿ »

    ಕನ್ನಡ ಬಳಕೆಯಲ್ಲೇಕೆ ಕೀಳರಿಮೆ?

    ಈಗೀಗ ಪತ್ರಿಕೆಗಳಲ್ಲಿ ಬರುವ ಕೆಲವು ಪದಗಳನ್ನ ನೋಡಿದ್ರೆ ಇದು ಕನ್ನಡವಾ ಅಂತ ಅನುಮಾನ ಬರೋದು ಸಹಜ.

    ’ಪಠಣ ಅಕ್ಷಮತೆ’ ’ಕಲಿಕಾ ನ್ಯೂನತೆ’ – ಇದ್ಯಾವ್ ಸೀಮೆ ಕನ್ನಡ ಪದಗಳು ರೀ? ಈ ರೀತಿಯ ಪದಗಳನ್ನ ನೀವು ಓದಿಲ್ದಿದ್ರೆ, ಇಲ್ಲಿ ಚಿಟಕಿಸಿ.

    ಈಗ ಡಿಸ್ಲೆಕ್ಸಿಯಾಗೆ ಓದುವಲ್ಲಿ ತೊಡಕು – ಓದುವುದರಲ್ಲಿ ತೊಡಕು – ಅಥವಾ ’ತೊಡಕೋದು’ ಅಂತ ಒಂದು ಹೊಸ ಪದವನ್ನು ಹುಟ್ಟಿಸಬಹುದು. ಯಾಕಂದ್ರೆ ಆ ಪದಗಳೇ ಹೇಳುತ್ತೆ - ಓದುವುದರಲ್ಲಿ ತೊಡಕಾಗುತ್ತೆ ಅಂತ. ಅದನ್ನ ಬಿಟ್ಟು ಪಠಣ ಅಕ್ಷಮತೆ ಅಂತೆ ಪಠಣ ಅಕ್ಷಮತೆ!

    ಮತ್ತೆ ’ಕಲಿಕಾ ನ್ಯೂನತೆ’ – ಇದೂ ಅಷ್ಟೆ – ಸಂಸ್ಕೃತವೂ ಅಲ್ಲ, ಕನ್ನಡವೂ ಅಲ್ಲದ ಒಂದು ಕಲಸು ಮೇಲೋಗರ; ಆದರೆ ರುಚಿಯೂ ಇಲ್ಲ ಅಷ್ಟೇ ಈ ಮೇಲೋಗರದಲ್ಲಿ. ಕಲಿಕೆ ಏನು ಆಕಾರಾಂತ ಸ್ತ್ರೀಲಿಂಗ ಪದವೇ ಕಲಿಕಾ ಅಂತ ಹೇಳೋದಕ್ಕೆ?
     ಮುಂದೆ ಓದಿ »

    ಕನ್ನಡದಲ್ಲಿ ಬಹುವಚನ ಪ್ರತ್ಯಯಗಳು


    ಕನ್ನಡದಲ್ಲಿ  ಬಹುವಚನ ಪ್ರತ್ಯಯ ಪ್ರಯೋಗಗಳ ದ ಬಗ್ಗೆ ಕೆಲ ದಿನಗಳ ಹಿಂದೆ ಒಂದು ಚರ್ಚೆ ನೋಡಿದೆ. ವಿಜಯ ಕರ್ನಾಟಕದಲ್ಲಿನ  "ಎರಡು ರಸ್ತೆ " ಪ್ರಯೋಗ ಸರಿಯೇ ತಪ್ಪೇ ಎಂದು. 

     

    ಅದರ ನೆಪದಿಂದ ಈ ಬರಹ. 

    ...................................

    ಕನ್ನಡದಲ್ಲಿ ಬಹು ವಚನ ಪ್ರತ್ಯಯಗಳು ಐದು ರೀತಿಯಾಗಿ ಪ್ರಯೋಗಿಸಲ್ಪಡುತ್ತವೆ.

    ೧. ಗಳು ......


    >ನಪುಂಸಕ ನಾಮಗಳಿಗೆ
    ಉದಾ.  ಕಲ್ಲುಗಳು, ಹುಳುಗಳು,  

      
    >ಕೆಲ ವಿಶಿಷ್ಟ ನಾಮಗಳಿಗೆ

    ಉದಾ.  ಗುರುಗಳು,  ವ್ಯಾಪಾರಿಗಳು,

     
     ಮುಂದೆ ಓದಿ »

    ಕನ್ನಡ ನುಡಿಯ ಪ್ರಾಚೀನತೆ

    http://sampada.net/blog/savithru/24/04/2010/25029  "ಕನ್ನಡ ಭಾಷೆಯ "ಅಸ್ತಿತ್ವ" ವನ್ನು "ಖಚಿತ" ವಾಗಿ ತಿಳಿಸುವ ಮೊದಲ  ಆಧಾರ ಯಾವುದು? ಅದರ ವಿಷಯಯವೇನು?"




    ಎಂಬ ಪ್ರಶ್ನೆಗೆ ಕೆಲವರು ಆಸಕ್ತಿ ವಹಿಸಿದರು. ಇದನ್ನೇ ನೆಪವಾಗಿಟ್ಟುಕೊಂಡು ಕನ್ನಡ ಅದೆಷ್ಟು ಕಾಲದ ಹಿಂದೆ ಅಸ್ತಿತ್ವದಲ್ಲಿತ್ತು, ಅದರ ಇತಿಹಾಸಕ್ಕೆ ದಾಖಲೆಗಲೆನಿರಬಹುದು, ಅನ್ನುವ ಬಗ್ಗೆ ಈ ಲೇಖನ.

    ೧. ಕ್ರಿಸ್ತ ಪೂರ್ವ ೩ ನೆ ಶತಮಾನಕ್ಕೆ ಸೇರಿದ ಬ್ರಹ್ಮಗಿರಿ ಶಾಸನ ( ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ) ದಲ್ಲಿ "ಇಸಿಲ" ಎಂಬ ಪದ ಇದೆ. ಡಿ ಎಲ್ ನರಸಿಂಹಚಾರ್ ಅವರು ಈ ಇಸಿಲ ಪದ ಕನ್ನಡ ( ಸ್ಥಳನಾಮ) ಎಂದಿದ್ದಾರೆ.  ಮುಂದೆ ಓದಿ »

    ಕನ್ನಡ ಚಿತ್ರ ಒದ್ದೋಡಿಸಲು ಯತ್ನಿಸಿದ ಪಿವಿಆರ್

    ಪತ್ರಿಕೆಗಳಿಂದ, ಪ್ರೇಕ್ಷಕರಿಂದ ಒಳ್ಳೆ ಅನಿಸಿಕೆ ಪಡೆದ ಸಿನೆಮಾವೊಂದು, ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಚಿತ್ರ ಮಂದಿರದಿಂದ ಒದ್ದೋಡಿಸಲು ಯತ್ನಿಸಿದ ವ್ಯಥೆಯ ಕತೆಯಿದು.
    ಅಂತರಾತ್ಮ ಕಳೆದ ವಾರ ತೆರೆಗೆ ಬಂದು ಯಶಸ್ವಿ ಪ್ರದರ್ಶನ ಕಾಣ್ತಾ ಇರೋ ಚಿತ್ರ. ಕನ್ನಡ ಚಿತ್ರದಿಂದ ಹೆಸರು, ಹಣ ಎರಡನ್ನು ದಂಡಿಯಾಗಿ ಮಾಡಿಕೊಂಡಿರೋ, ಆದ್ರೂ ಕನ್ನಡ ಚಿತ್ರಗಳ ಬಗ್ಗೆ ಯಾವಾಗಲೂ ಮಲತಾಯಿ ಧೋರಣೆ ತಳೆಯೋ ಪಿ.ವಿ.ಆರ್ ಮಲ್ಟಿಪ್ಲೆಕ್ಸ್ ನಲ್ಲಿ ಈ ಚಿತ್ರ ಯಶಸ್ವಯಾಗಿ ಪ್ರದರ್ಶನ ಕಾಣ್ತಾ ಇತ್ತು. ಯಶಸ್ವಿಯಾಗಿ ಓಡೋ ಯಾವುದೇ ಸಿನೆಮಾವನ್ನು ಚಿತ್ರ ಮಂದಿರದಿಂದ ತೆಗೆಯೋದು ಕಾನೂನುಬಾಹಿರ. ಚಿತ್ರ ಮಂದಿರದಲ್ಲಿ ಕಲೆಕ್ಷನ್ ಇಲ್ಲ ಅಂತಾದಾಗ ಮಾತ್ರ ಆ ಚಿತ್ರ ತೆಗೆದು ಬೇರೆದನ್ನು ಹಾಕುವ ಹಕ್ಕು ಚಿತ್ರ ಮಂದಿರಕ್ಕಿದೆ. ಆದ್ರೆ ಅಂತರಾತ್ಮ ಚೆನ್ನಾಗಿ ಓಡ್ತಾ ಇತ್ತು, ಅದನ್ನ ತೆಗಯೋಕೆ ಹೋದ್ರೆ ಕಿರಿಕ್ ಆಗುತ್ತೆ ಅನ್ನೋದು ಪಿ.ವಿ.ಆರ್ ಅವರಿಗೆ ಗೊತ್ತು.  ಮುಂದೆ ಓದಿ »

    ಬಂಗಾರದ ಮನುಷ್ಯನಿಗೆ ನುಡಿನಮನ 'ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ ...'

     ಹೋದ ವರ್ಷ ಇದೇ ಅಣ್ಣಾವ್ರ ಹುಟ್ಟುಹಬ್ಬದಂದು ನಾನು 'ಸಾವಿರದ ಶರಣ'ರಾಜ್ ನೆನಪಿಗೆ ನುಡಿ ನಮನ (http://sampada.net/blog/shashikannada/24/04/2009/19512) ಅರ್ಪಿಸಿದ್ದೆ. ಈ ವರ್ಷ ಏನು ಬರೆಯಲಿ ಎಂದು ಯೋಚಿಸುವಷ್ಟು ಪುರುಸೊತ್ತು ಇಲ್ಲದಾಗಿದೆ. ಬರೆಯುವುದಕ್ಕೇನೋ ಸಾಕಷ್ಟಿದೆ. ಆದರೆ,ಒಂದೆಡೆ ಕೂತು ಬರೆಯುವ ವ್ಯವಧಾನವೇ ಇಲ್ಲವಾಗಿದೆ. ಅಂದು ಬ್ಲಾಗ್ ಬರೆಯುವುದನ್ನು ನಿಲ್ಲಿಸಿದ್ದ ನನಗೆ ಅಂದಿನಿಂದ ಮೊನ್ನೆಯವರೆಗೂ ಏನನ್ನೂ ಬರೆಯಲಾಗಿರಲಿಲ್ಲ.ಯಾವುದಾದರೂ ವಿಚಾರದ ಬಗ್ಗೆ ಬರೆಯುವ ಹಾಗೆ ಅಣ್ಣಾವ್ರ ಬಗ್ಗೆ ಬರೆಯಲಾಗದು. ಅಷ್ಟು ಎತ್ತರದ ವ್ಯಕ್ತಿತ್ವ ಅವರದು.ಕನ್ನಡ ನಾಡು, ನುಡಿ, ಸಂಸ್ಕೃತಿಯ ಪ್ರತಿನಿಧಿಯಾಗಿದ್ದ ಅವರು ಇಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಸಂದರ್ಭದಲ್ಲಿ ನಮ್ಮೊಂದಿಗಿಲ್ಲದಿರುವುದು ಏನನ್ನೋ ಕಳೆದುಕೊಂಡ ಭಾವವನ್ನು ನೀಡಿದೆ.ಏಕೆಂದರೆ, ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಹೋರಾಟವಿರಲಿ ರಾಜ್ ಮುಂಚೂಣಿಯಲ್ಲಿರುತ್ತಿದ್ದರು.  ಮುಂದೆ ಓದಿ »

    Syndicate content