ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡ

ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು!

ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು
ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;
ಅರಿವು ನಿನ್ನಲಿ ಇರಲು ಪರರ ನೋಯಿಸುವಂಥ
ನುಡಿಯಂಬುಗಳನೆಂದೂ ಬಿಡದಿರುವುದೇ ಲೇಸು.

ಸಂಸ್ಕೃತ ಮೂಲ:

ವಾಕ್ಸಾಯಕಾ ವದನಾನ್ನಿಷ್ಪತಂತಿ
ಯೈರಾಹತಃ ಶೋಚತಿ ರಾತ್ರ್ಯಹಾನಿ |
ಪರಸ್ಪರಂ ಮರ್ಮಸು ತೇ ಪತಂತಿ
ತಾನ್ ಪಂಡಿತೋ ನಾಪಸೃಜೇತ್ಪರೇಷು ||

-ಹಂಸಾನಂದಿ

ನಮ್ಮೂರ ಬಾಗಿಲಿಗೆ ಇವರದ್ದೆಂತ ಕಾವಲು?

 

ನಮಸ್ಕಾರ ಗೆಳೆಯರೆ. ತುಂಬಾ ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಶೇಕಡವಾರು ಅಪರಾಧ ಹೆಚ್ಚುತ್ತಲೇ ಇದೆ. ಇಂತಹ ಅಪರಾಧಗಳನ್ನು ತಡೆಯುವುದಕ್ಕೆಂದೇ ಅನೇಕ ಖಾಸಗಿ ಕಂಪನಿಗಳು ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತಾರೆ. ಇಂತಹಾ ಸಿಬ್ಬಂದಿಯನ್ನೇ ನಮ್ಮ ಎಲ್ಲಾ ಕಾರ್ಪೊರೇಟ್ ಕಂಪನಿಗಳು, ದೊಡ್ಡ ದೊಡ್ಡ ಮಾಲ್ ಗಳು ಗುತ್ತಿಗೆ ಪಡೆಯುತ್ತಾರೆ.  ಮುಂದೆ ಓದಿ »

ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಕಳೆದ ವಾರ ಏನ್ ಗುರು ಬ್ಲಾಗಿನಲ್ಲಿ ಗೂಗಲ್ ನ್ಯೂಸ್ ಸಂಬಂಧಪಟ್ಟಂತೆ ಒಂದು ಒಳ್ಳೆ ಲೇಖನ ಮೂಡಿ ಬಂದಿತ್ತು. ಲೇಖನವನ್ನು ಓದಿ, “ಹಿಂದಿ, ತಮಿಳು, ತೆಲುಗು, ಮಲಯಾಳಮ್ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಈಗಾಗಲೇ ಬಂದಿರುವಾಗ, ದೇಶಕ್ಕೇ ಐ.ಟಿ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿರುವ ಕನ್ನಡಿಗರ ಭಾಷೆ ಮಾತ್ರ ಗೂಗಲ್ ನ್ಯೂಸ್-ನಲ್ಲಿ ಯಾಕಿಲ್ಲ?” ಎಂದು ಮನಸ್ಸು ಯೋಚಿಸತೊಡಗಿತ್ತು.

ಇದೇ ಪ್ರಶ್ನೆಗೆ ಉತ್ತರ ಹುಡುಕಿ ಹೊರಟಾಗ, ಇಂಟರ್ನೆಟ್-ನಲ್ಲಿ ಸಿಕ್ಕ ಮಾಹಿತಿ:

.          ಏನ್-ಗುರು ಬ್ಲಾಗಿನಲ್ಲಿ ಹೇಳಿದಂತೆ, ಕನ್ನಡ ಲಿಪಿಯನ್ನೇ ಬಳಸಿ ಗೂಗಲ್-ನಲ್ಲಿ ನಡೆಯುವ ಸರ್ಚ್-ಗಳು ದಿನಕ್ಕೆ ಅಬ್ಬಬ್ಬಾ ಅಂದರೆ ೧೦೦೦ ದಷ್ಟಿರಬಹುದಂತೆ. ತಮಿಳು, ತೆಲುಗು, ಹಿಂದಿ ಭಾಷೆಗಳ ಲಿಪಿಯಲ್ಲಿ ನಡೆಯುವ ಸರ್ಚ್-ಗಳು ಕನ್ನಡಕ್ಕೆ ಹೋಲಿಸಿದರೆ ಬಹಳ ಜಾಸ್ತಿ ಇವೆಯಂತೆ.  ಮುಂದೆ ಓದಿ »

ನೀನು ಮತ್ತು ಸೋತ ನಾನು

ನೀನು ಮತ್ತು ಸೋತ ನಾನು
ನನ್ನನ್ನು ನಿಜವಾಗಿಯೂ 
ಮರುಳನನ್ನಾಗಿ ಮಾಡಿದ
ಮೊದಲನೆಯವಳು ನೀನು.
ಇಂದು

ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ

ರವೀಂದ್ರ ಕಲಾಕ್ಷೇತ್ರದ ಬಳಿ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮೇಳ ನಡೆಯುತ್ತಿದೆ. ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರುತ್ತಿದ್ದಾರೆ.

Kannada Book Fair, Ravindra Kalakshethra
ನಿನ್ನೆ ಶನಿವಾರ ನಾವು ಇಲ್ಲಿಗೆ ಹೋಗಿದ್ದೆವು. ಮುಖ್ಯವಾಗಿ ಮೈಸೂರು ಪ್ರಸಾರಾಂಗ, ಹಂಪಿ ವಿಶ್ವವಿದ್ಯಾನಿಲಯದ ಸ್ಟಾಲುಗಳಿಗೆ ಭೇಟಿ ಕೊಡದೆ ಬರುವಂತಿಲ್ಲ. ಏಕೆಂದರೆ ಅಲ್ಲಿರುವ ಸುಮಾರು ಪುಸ್ತಕಗಳು ಚೆಂದ ಇರೋದಷ್ಟೇ ಅಲ್ಲ, ಬೆಲೆ ನೋಡಿದರೆ ಶಾಕ್ ಆಗುವುದು ಗ್ಯಾರಂಟಿ. ಐದು ರೂಪಾಯಿ, ನಾಲ್ಕು ರೂಪಾಯಿ, ಏಳು ರೂಪಾಯಿ... ಹೀಗೆ! ಅದೂ ಒಳ್ಳೆಯ ಪುಸ್ತಕಗಳು (ಮತ್ತೆಲ್ಲೂ ಸಿಗದ ಪುಸ್ತಕಗಳು ಕೂಡ).  ಮುಂದೆ ಓದಿ »

ಭಾವಬ್ರಹ್ಮ (ಸಿ ಅಶ್ವಥ್)

ನಮ್ಮ ಭಾವನೆಗಳಿಗೆ ರಾಗವಾದಿರಿ, ಹಾಡಾದಿರಿ.
ಮತ್ತೆ ನಿಶ್ಯಬ್ಧವಾಗಿ ನಮ್ಮನ್ನು ಅಗಲಿದಿರಿ.
ಈಗಲೂ ನಮ್ಮೆಲ್ಲರ ಎದೆಯಲ್ಲಿ ನಿಮ್ಮದೇ ರಾಗ, ನಿಮ್ಮದೇ ಹಾಡು.
ಇಹಲೋಕವನ್ನು ತ್ಯಜಿಸಿದರೇನು..
ನಿಮ್ಮನ್ನು ಎದೆಯಲ್ಲಿ ತುಂಬಿಕೊಂಡಿರುವೆವು ನಾವು.
ಏಕೆಂದರೆ, ನಮ್ಮ ಭಾವನೆಗಳಿಗೆ ಅರ್ಥ ನೀಡಿದವರು ನೀವು.


                                     --ಅರುಣ ಸಿರಿಗೆರೆ

ನಾನ್ ಯಾಕ್ ತಮಿಳ್ ಕಲಿಬೇಕು!?

ಎಂದಿನಂತೆ ಇವತ್ತ್ ಬೆಳಿಗ್ಗೆ ಜಾಗಿಂಗ್ ಆದ್ಮೇಲೆ ಕುಟ್ಟಿ ಚಾ ಅಂಗಡಿ ಹೋದವ ಚಾ ಹೀರುತಿದ್ದೆ.ಎದುರಿಗೆ ಕುಳಿತಿದ್ದ ತಾತ ಅದೇನೋ ತಮಿಳಿನಲ್ಲಿ ಆ ಕುಟ್ಟಿಗೆ ಹೇಳ್ತಿದ್ರು.ನನ್ನ ನೋಡಿದವರೇ ಆ ಕುಟ್ಟಿ ಅವರಿಗೆ ರಂಜಾನ್ ಬಿರಿಯಾನಿ ಕೊಡಿಸಿಲ್ಲ ಅಂತ ಅಂತ ತಮಿಳಿನಲ್ಲಿ ಹೇಳಿದ್ರು, ಅಲ್ಪ ಸ್ವಲ್ಪ ಅರ್ಥ ಆಗೋದ್ರಿಂದ ನಕ್ಕು ಸುಮ್ಮನಾದೆ. ಕೆಲ ಹೊತ್ತಿನ ಬಳಿಕ ತಾತ ಮತ್ತೆ ನನ್ನ ಜೊತೆ ತಮಿಳಲ್ಲಿ ಏನೋ ಹೇಳೋಕೆ ಬಂದ್ರು, ನಾನ್ ನನ್ನ ಅರೆ ಬರೆ ತಮಿಳಿನಲ್ಲಿ 'ಯನಕ್ ತಮಿಳ್ ತೆರಿಯಾದ್' ಅಂದೆ.
ಆ ತಾತಪ್ಪ ತಮಿಳ್ ಸ್ಟೈಲ್ ಕನ್ನಡದಲ್ಲಿ 'ನಿಂದ್ ಯಾವ್ ಭಾಷೆ?' 
ನಾನು, 'ಕನ್ನಡ'.
ಆದ್ರೆ ನೀನಕ್ ತಮಿಳ್ ಕೊತ್ತಿರಬೇಕು!
ಹೌದಾ!?ಯಾಕೆ? ನಂಗ್ಯಾಕ್ ಗೊತ್ತಿರಬೇಕು? ಅಂತ ನಾ ಸ್ವಲ್ಪ ಬಿಸಿಯಾದೆ.
'ನೋಡಿ ಸರ್, ಬ್ರಿಟಿಷರ ಕಾಲದಲ್ಲಿ ಕರ್ನಾಟಕ,ತಮಿಳು ನಾಡು,ಕೇರಳ,ಆಂಧ್ರ ಎಲ್ಲವನ್ನ ತಮಿಳುನಾಡಿನ್ನಿಂದ ನಿಯಂತ್ರಿಸ್ತ ಇದ್ರೂ.ಬ್ರಿಟಿಷರು ಎಲ್ಲ ಕಡೆ ತಮಿಳರನ್ನೇ ಕೆಲ್ಸಕ್ಕೆ ಕರ್ಕೊಂಡ್ ಹೋಗ್ತಾ ಇದ್ರೂ'  ಮುಂದೆ ಓದಿ »

ದುಡ್ಡಿದ್ದವನೇ ದೊಡ್ಡಪ್ಪ

ಅರಿವೂ ಮನೆತನವೂ ತರಲಾರವು ಹಿರಿಮೆ

ಎಂದಿಗೂ ಹಣವುಳ್ಳವರಲೇ ಜನರ ಒಲುಮೆ;

ಶಿವನು ತಲೆಯ ಮೇಲೆ ಹೊತ್ತಾಡಿದರೇನು?

ಗಂಗೆ ಸೇರುವುದು ರತ್ನಾಕರ*ನಲ್ಲವೇನು?

 

ಸಂಸ್ಕೃತ ಮೂಲ:

ನ ವಿದ್ಯಯಾ ನೈವ ಕುಲೇನ ಗೌರವಂ

ಜನಾನುರಾಗೋ ಧನಿಕೇಷು ಸರ್ವದಾ |

ಕಪಾಲಿನಾ ಮೌಲಿ ಧೃತಾಪಿ ಜಾಹ್ನವೀ

ಪ್ರಯಾತಿ ರತ್ನಾಕರಮೇವ ಸರ್ವಾದಾ ||

-ಹಂಸಾನಂದಿ

 

* ಕೊ.ಕೊ: ರತ್ನಾಕರ = ಮುತ್ತು ರತ್ನಗಳಿಗೆ ಆಗರವಾದ ಸಾಗರ

ಮೊದಲು ಕನ್ನಡಿಗ ? ಅಥವಾ ಮೊದಲು ಭಾರತೀಯ ?


ಹೀಗೊಂದು ಮಿಂಚೆ ಸುಮಾರು ದಿನದಿಂದ ಹರಿದಾಡ್ತಾ ಇದೆ. ಒಮ್ಮೆ ನೀವು ಓದಿ. ನಿಮಗೇನ್ ಅನ್ಸುತ್ತೆ ಹೇಳಿ..

ಕನ್ನಡಿಗ ಮೊದಲೋ, ದೇಶ ಮೊದಲೋ ಎನ್ನುವ ದ್ವಂದ್ವ ಎದ್ದಿದೆ. ಇದಕ್ಕೆ ಉತ್ತರ   ಕಾಲ/ದೇಶ/ಸಂದರ್ಭಕ್ಕೆ ಸರಿಯಾಗಿ ಇರುತ್ತದೆ.  ಮುಂದೆ ಓದಿ »

Syndicate content