ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ದಾಸ ಸಾಹಿತ್ಯ

ಪುರಂದರ ದಾಸ ಆರಾಧನೆ ೨೦೧೦

ಜನವರಿ ೧೫, ೨೦೧೦ ಪುಷ್ಯ ಅಮಾವಾಸ್ಯೆ - ಪುರಂದರ ದಾಸರ ಆರಾಧನೆಯ ದಿನ ಈ ಕೊಂಡಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ನಾನು ಮಾಡಿದ್ದ "ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ" ವನ್ನು ಕೇಳಲು ಇಲ್ಲ ಚಿಟುಕಿಸಿ: http://chirb.it/f09a9L

-ಹಂಸಾನಂದಿ

ನಾಡೆಲ್ಲ ಹುಡುಕಿದರು ಈಡಾರ ಕಾಣೆ - ಕನಕದಾಸರ ಮೇಲೊಂದು ಪದ

ಕನಕದಾಸರು

ನವೆಂಬರ್ ೧೫ರಂದು ಕನಕದಾಸರ ಜಯಂತಿ ಎನ್ನುವ ವರದಿ ಓದಿದೆ. ಕನಕದಾಸರನ್ನು ನೆನೆಯಲು ಯಾವ ದಿನವಾದರೂ ಒಳ್ಳೆಯದೇ, ಆದರೆ ಇವತ್ತು ಅವರ ಜಯಂತಿಯಾಗಿದ್ದರೆ ಇನ್ನೂ ಒಳ್ಳೆಯದೇ ಅಲ್ಲವೇ ಎನ್ನಿಸಿತು.

ದಾಸಸಾಹಿತ್ಯವನ್ನೇ ಆಗಲಿ, ವಚನಸಾಹಿತ್ಯವನ್ನೇ ಆಗಲಿ ಬರೀ ಭಕ್ತಿಮಾರ್ಗದ ಮೆಟ್ಟಿಲೆಂದೆಣಿಸದೇ, ಅವರ ಕಾಲಕ್ಕೊಂದು ಕನ್ನಡಿ ಎಂದು ನೋಡುವುದೇ ಒಳ್ಳೆಯದು. ಎಷ್ಟೋ ವಿಷಯಗಳನ್ನು ನಾವು ಅಲ್ಲಿಂದ ತಿಳಿಯಬಹುದಾಗಿದೆ. ಈ ಬಗ್ಗೆ ಹಿಂದೆಯೂ ನಾನು ಬರೆದಿದ್ದೆ. ಈಗ ಕನಕದಾಸರ ಕಥೆ ಎಲ್ಲರಿಗೂ ಗೊತ್ತಿರುವುದೇ. ಕನಕನ ಕಿಂಡಿಯ ಕಥೆ, ’ನಾನು ಹೋದರೆ ಹೋದೇನು’
ಪ್ರಸಂಗಗಳೂ ಜನಜನಿತವಾಗಿವೆ.  ಹಾಗೇ, ಬಾಳೇಹಣ್ಣಿನ ಪ್ರಸಂಗವೂ ಕೂಡ.  ಮುಂದೆ ಓದಿ »

ದಾಸ ಸಾಹಿತ್ಯದ ಪುಟ ಏನಾಯಿತು

ನಾನು ಈ ಹಿಂದೆ www.dasasahitya.org ಸೈಟಿನಲ್ಲಿ ಸ್ವಚ್ಛಂದವಾಗಿ ವಿಹರಿಸುದ್ದೆ
ಈಗೇನಾಗಿದೆಯೋ ನಿಮಗಾರಿಗಾದರೂ ಗೊತ್ತೆ ?
ದಯವಿಟ್ಟು ಉತ್ತರಿಸಿ

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

ಕೆಲದಿನಗಳ ಹಿಂದೆ ಪುರಂದರದಾಸರ ಸುಲಭವಲ್ಲವೋ ಎನ್ನುವ ಕೃತಿಯ ಬಗ್ಗೆ ಬರೆದಿದ್ದೆ. ಸುನಿಲ್ ಅವರು ಅದಕ್ಕೆ ಚೆನ್ನಾಗೆ ವ್ಯಾಖ್ಯಾನ ಕೂಡ ಮಾಡಿದ್ದರು. ಇವತ್ತು ಪುರಂದರ ದಾಸರದ್ದೇ ಇನ್ನೊಂದು ದೇವರನಾಮ. ಸುಲಭವಲ್ಲವೋ  ಮಹದಾನಂದ ಎನ್ನುವ ರಚನೆ ನನಗೆ ಸ್ವಲ್ಪವಾದರೂ ಅರ್ಥವಾಗಿತ್ತು. ಆದರೆ, ಇದು ಪೂರ್ತಿ ಒಗಟಾಗಿದೆ!  ಮುಂದೆ ಓದಿ »

ಸುಲಭವಲ್ಲವೋ ಮಹದಾನಂದ ...

ಹಿಂದಿನ ಬರಹದಲ್ಲಿ, ಪುರಂದರ ದಾಸರ ಇಂದಿನ ಯೋಗ ಶುಭಯೋಗ ಎನ್ನುವ ಪದವನ್ನು ಹೆಸರಿಸಿದ್ದೆ. ಅದಕ್ಕೇ ಅವರದೇ ಇನ್ನೊಂದು ದೇವರನಾಮದ ಬಗ್ಗೆ ಮಾತಾಡೋಣ ಎನ್ನಿಸಿತು. ಪುರಂದರ ದಾಸರು ನಾಕು ಲಕ್ಷ ಎಪ್ಪತ್ತೈದು ಸಾವಿರ ರಚನೆಗಳನ್ನು ಬರೆದರೆಂದು ನಂಬಿಕೆ. ಈ ನಂಬಿಕೆ ಹೇಗೇ ಇರಲಿ, ನಮಗೆ ಸಿಕ್ಕಿರುವುದು ಸುಮಾರು ಎರಡು ಸಾವಿರಕ್ಕೂ ಕಡಿಮೆ ರಚನೆಗಳು. ದಾಸಸಾಹಿತ್ಯದಲ್ಲಿ ಪುರಂದರರು ಅತೀ ಮುಖ್ಯರಾಗಿ ಕಾಣಲು ಅವರ ಸರಳವಾದ, ಮನಸ್ಸಿಗೆ ಸುಲಭವಾಗಿ ನಾಟುವ ಶೈಲಿಯೇ ಕಾರಣ ಎಂದು ನನ್ನ ಭಾವನೆ.  ಮುಂದೆ ಓದಿ »

Syndicate content