ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕವಿತೆ

ನೀನೇ...

ಕೂರಲೋ ನಿಲ್ಲಲೋ
ಎಂದು ಮಂಡಿ ಮಡಚಿ
ಬಾಗಿದ್ದಾಗ ಅಂಗೈ ಬೆಸೆದು
ಸನಿಹ ಕೂರಿಸಿದವಳು ನೀನು

ಬಲಗಾಲೊಂದು ಎಡಗಾಲೊಂದು
ತೆಪ್ಪದಲ್ಲಿಟ್ಟು ಹುಟ್ಟು
ಹಾಕಿ ಬೆವರಿದವನ ಬಿಗಿದಪ್ಪಿ
ದಂಡೆಗೆ ಎಳೆದವಳು ನೀನು

ಬೀಳಲೋ ಉಳಿಯಲೋ
ಎನುತ ಮುಷ್ಟಿ ಬಿಗಿ ಹಿಡಿಯಲಿ
ಎದೆಯಡಗಿಸಿದವನ
ಕೊಡವಿ ಕೆಡವಿದಳು ನೀನು

ಮುಳುಗಿ ಮೇಲೇರೆತ್ತಾ
ಚಂಚಲದಿ ತೊಳಲಾಡುತ್ತ
ದಣಿದ ಬುದ್ಧಿಗೆ ಲಂಗರು
ಇಳಿಸಿ ನಿಲ್ಲಿಸಿದ್ದು ನೀನು

ಹಿಡಿಯಲೋ ಬೇಡವೋ
ಎನ್ನುತ ನಿನ್ನ ಕೈಯ ದಿಟ್ಟಿಸುವಾಗ
ಕೊಟ್ಟ ಆಸರೆಯ ಮರೆತು
ಕೋಪದಿ ಕೊಡವಿ ಎದ್ದು ಹೋದವಳೂ ನೀನೇ!

ಪುಕ್ಕಟೆ ಪುರಾಣ.

ಇರುವಷ್ಟುದಿನ ಬದುಕಿಬಿಡು,


ಮದರ ಥೇರೆಸಾ,


ಗಾಂಧೀಜಿಯ ಹಾಗೇ......!


 


ಅಷ್ಟು ಬೇಗ


ಕೋಪಗೊಳ್ಳಬೇಡ ಗೆಳತಿ,


 


ನನಗೂ ಗೊತ್ತು,


ಹೇಳುವಷ್ಟು ಸುಲಭವಲ್ಲ ಹಾಗೆ


ಬದುಕುವುದು ಎಂದು......!


 


ಆದರೆನುಮಾಡಲಿ?


ನಿಂಗೊತ್ತಲ್ಲ


ನನ್ನ ಸ್ವಭಾವ....


 


ನನ್ನಲ್ಲಿ ಪುಕ್ಕಟ್ಟೆಯಾಗಿ


ಸಿಗುವುದು


ಉಪದೇಶ ಒಂದೇ.........!


 

ಸಮಗಾರ ಸಾವು

ಸಿಡಿಮದ್ದ ಸಿಡಿತದಲಿ ಮುರಿದು ಬಿದ್ದಿಹರಿಬ್ಬರು
ತಾಯ್ನಾಡ ಬಯಕೆಗೆ ಬಾಳ ನೈವೇದ್ಯವಿತ್ತ ಧೀರ ಯೋಧರು
ಹದಿನೆಂಟರ ಹರೆಯದ ಮುಗ್ಧನೊಬ್ಬ ಇನ್ನೂ ಬಲಿಯದ ಮೈ
ನಲ್ವತ್ತರ ಮತ್ತೊಬ್ಬ ಕಂಡಿಹನು ಯುದ್ಧಗಳ, ಬಡಿದಾಡಿಹನು  ಹೊಯ್ ಕಯ್

ಹರೆಯದ ಹುಡುಗನಿಗೆ ಪಳಗಿಲ್ಲ ಮೈ -ಮನ . ಅಳಿದಿಲ್ಲ ಹುಡುಗುತನ
ಎಳೆಯ ಹೃದಯದಲ್ಲಿನ್ನೂ ಕಳೆದಿಲ್ಲ ಮಗುತನ ಮೊಳೆತಿಲ್ಲ ಧೀರತನ
ತುಕಡಿಗವ ನಿಮಿತ್ತ,  ಯುದ್ದದಾವೇಶಕೆ ಬಲಿಯಾದ ಮೇಷ
ಮರಣದ ಮುಂದು ಸಿಡಿದ ಬೈಗಳೋ, ದೇವನನೇ ಕೊಲ್ಲುವಾವೇಶ.  ಮುಂದೆ ಓದಿ »

ನೆನಪುಗಳು ಮೊಡವೆಯ ಹಾಗೆ

ನೆನಪುಗಳು ಮೊಡವೆಯ ಹಾಗೆ


ಕನ್ನಡಿಯ ಮು೦ದೆ ನಿ೦ತು


ಪದೇ ಪದೇ ಮೊಡವೆಯ ನೋಡುವುದೊ೦ದು ಬಗೆ


ಯಾರೇ ಎದುರಾದರೂ


ಕೈ ಮೊಡವೆಯ ಮುಚ್ಚುತ್ತದೆ ಮತ್ತು ಮುಟ್ಟುತ್ತದೆ


ಯಾರೂ ಇಲ್ಲದಾಗ


ಸುಮ್ಮನೆ ಇರದು ಮೊಡವೆ ಮತ್ತು ಮನಸು


ಮೊಡವೆಯನೊಮ್ಮೆ ಹಿತವಾಗಿ


ಸವರಿ, ನೋವಾದಾಗ ಕಣ್ತು೦ಬಿ


ಸುಮ್ಮನಾಗುತ್ತೇವೆ,ಅಳುವುದಿಲ್ಲ.


ಮೊಡವೆಯ ಗೊಡವೆಯೇಕೆ ಎ೦ದು


ಸುಮ್ಮನಾದರೆ ಉಳಿವೆವು ನಿಜ,


ಮೊಡವೆಯ ಹಿಚುಕಿ, ಕೀವು


ಬರಿಸಿಕೊ೦ಡು ಕಲೆ ಉಳಿಸಿಕೊಳ್ಳುವುದು ಸರಿಯೇ?


ಮೊಡವೆ ತಾರುಣ್ಯದ ಚಿಹ್ನೆಯ೦ತೆ!  ಮುಂದೆ ಓದಿ »

ಸಂ‘ಸಾರ’

ಇಬ್ಬರು ಮಕ್ಕಳು
ಒಂದು ಕವಿತೆ

ಅದೂ ಮಗುವೇ!

ಮಕ್ಕಳೆದ್ದಿರುವಾಗ ಕವಿತೆಗೆ ನಿದ್ದೆ
ಕವಿತೆ ಎಚ್ಚೆತ್ತಾಗ ಮಕ್ಕಳಿಗೆ ನಿದ್ದೆ
ಇಬ್ಬರನ್ನೂ- ಅಲ್ಲಲ್ಲ ಮೂವರನ್ನೂ
ಸಂಭಾಳಿಸುವುದರಲ್ಲಿ ಕಣ್ಣು ಒದ್ದೆ

ಮಕ್ಕಳಿಗೆ ನಾನು ತಂದೆ
ಕವಿತೆಗೆ- ತಾಯಿ
ಮೂವರೂ ಸೇರಿ
ನಾನು

ತಂದೆ-ತಾಯಿ!

- ಚಾಮರಾಜ ಸವಡಿ

ವಿಷದ ಗಿಡ

ಗೆಳೆಯನ ಮೇಲೆ ಏಕೋ ಮುನಿಸಾಯ್ತು
ಅವನೆದುರು ಹೇಳಿಕೊಂಡೆ, ಮುನಿಸು ಕರಗಿತು
ಶತ್ರವಿನ ಮೇಲೇಕೋ ಮುನಿಸಾಯ್ತು
ಅವನೆದುರು ಹೇಳಲಿಲ್ಲ, ಮುನಿಸು ಬೆಳೆಯಿತು

ಅವನ ಮೇಲಿನ ಭಯದ ನೀರುಣಿಸಿದೆ
ಹಗಲು-ರಾತ್ರಿ ಕಣ್ಣೀರು ಹನಿಸಿದೆ
ಹುಸಿ ನಗೆ ಹಾಗೂ ಕುತಂತ್ರಗಳ
ಬಿಸಿಲುಣಿಸಿ ಮುನಿಸು ಬೆಳೆಸಿದೆ

ದ್ವೇಷದ ಗಿಡ ಹಗಲು-ರಾತ್ರಿ ಬೆಳೆಯಿತು
ಕೊನೆಗೆ ಸುಂದರ ವಿಷ ಫಲ ಬಿಟ್ಟಿತು
ಅದು ಬೆಳಗುವುದನ್ನು ನನ್ನ ಶತ್ರು ನೋಡಿದ್ದ
ಆ ಫಲ ನನ್ನದೆನ್ನುವುದನ್ನು ಅವ ಅರಿತಿದ್ದ

ಕತ್ತಲಾವರಿಸಿದಾಗ, ಏನೂ ಕಾಣದಾದಾಗ
ಸದ್ದಿಲ್ಲದೇ ಬಂದ, ವಿಷ ಫಲವ ಕದ್ದು ಮೆದ್ದ
ಬೆಳಗಾದಾಗ ನನ್ನ ಹೃದಯ ಪುಟಿಯಿತು
ಮರದಡಿ ಅವ ಸತ್ತಿದ್ದ ಕಂಡು ನಲಿಯಿತು

ಮೂಲ: ವಿಲಿಯಂ ಬ್ಲೇಕ್‌
ಭಾವಾನುವಾದ: ಚಾಮರಾಜ ಸವಡಿ

ಕಂದ

ಮುದ್ದು ಕ೦ದ ನೀನು,
ನಿನ್ನ ಪ್ರೀತಿ "ಅಮ್ಮ" ನಾನು
ಸಿಹಿ ಮುತ್ತು ನೀಡುವೆ
ಮುನಿಸು ನಿನ್ನ ಮರೆಸುವೆ,


ಚ೦ದ ಮಾಮ ಕೇಳು
ನಗುವು ಇಲ್ಲಿ ನೀಡು,
ಬಾರೂ ಮುದ್ದು ನೀನು
ನಿನ್ನ ನಗುವು ನನಗೆ ಜೇನು,


ಹೆಜ್ಜೆ ಮೇಲೆ ಹೆಜ್ಜೆ
ನಿನ್ನ ಪಾದಕೆ ಪುಟ್ಟ ಗೆಜ್ಜೆ
ಬಾರೂ ತು೦ಟ ನೀನು
ಬಿಟ್ಟು ಏಕೆ ಓಡುವೇ ಏನು


ಚುಕ್ಕಿ ಬಾನ ತು೦ಬ
ಬೆಳಕು ಹರಡುತಿರಲು
ಹಿಡಿದು ನಿನಗೆ ಕೊಡುವೆ
ಅ೦ಗೈಯ ನೀನು ಚಾಚು


ಕೋಪ ಏಕೆ ನಿನಗೆ
ಕೊಡುವೆ ಸಿಹಿಯ ತಿನಿಸು,
ಮುನಿಸು ನಿನ್ನ ಹುಸಿಯು
ನನಗೆ ತಿಳಿಯದೇನು


ಗುಮ್ಮ  ಇಲ್ಲೆ ಇರುವನು
ಹೆದರಿಸಿ ನಿನ್ನ ನಗುವನು,
ಅಳದೆ ನೀನು ಬ೦ದರೆ
ನನ್ನ ತುತ್ತೇ ನಿನಗೆ ಸೊಗಸು


ನಗುತ ನೀನು ಬರಲು
ಶಶಿಯು ಅವಿತು ಕುಳಿತನು
ಲಾಲಿ ನಾನು ಹಾಡುವೆ
ಮಲಗು ನೀನು ಮಗುವೆ

ಸಾಮಾನ್ಯ ಮನುಷ್ಯ

ದೊಡ್ಡ ದೊಡ್ಡ ಟ್ರೈನುಗಳಲ್ಲಿ ಸಣ್ಣ ಸಣ್ಣ ಕನಸುಗಳನ್ನು
ಹೊತ್ತುಕೊಂಡು ತಿರುಗುತ್ತಿದ್ದ ನನಗೆ ಈಗ ಅಂಥ ಕನಸುಗಳಿಲ್ಲ
ನಾಳಿನ ಕನಸುಗಳನ್ನು ಎದೆಯೊಳಗೆ ಅದುಮಿ
ನೋವಿನ ನಗೆಯನ್ನು ನಗುವ ನನಗೆ ಈಗ ಕನಸುಗಳಿಲ್ಲ

ಯಾವಾಗ ಎಲ್ಲಿ ಬಾಂಬು ಸಿಡಿಯುತ್ತದೋ ಎಂಬ
ಹೆದರಿಕೆಯಿಂದ ಬಸ್ಸು ಹತ್ತಲು ಈಗೀಗ ಹೆದರುತ್ತೇನೆ
ರೈಲು ನಿಲ್ದಾಣಗಳಲ್ಲಿ ಎಲ್ಲಿ ಬಂದೂಕುಗಳು ಗುಂಡು
ಉಗುಳುತ್ತವೋ ಎಂದು ಭಯ ಪಡುತ್ತೇನೆ

ನಿನ್ನೆ ಕಂಡಿದ್ದ ಕನಸುಗಳಲ್ಲಿ ಎಷ್ಟನ್ನೋ 'ಆಗದು'
ಎಂದು ಕೊಂದು ಹಾಕಿದ್ದೇನೆ
ಕೆಲವನ್ನು ಅಳಿದುಳಿದ ನಿರೀಕ್ಷೆಯಿಂದ ಎದೆಯ
ಜೈಲಿನಲ್ಲಿ ಕಾರವಸಕ್ಕಿರಿಸಿ ಜೀವಾವಧಿ ನೀಡಿದ್ದೇನೆ

ಮೊದ ಮೊದಲು ನಂಬಿದ್ದ ನನಸುಗಳೇ
ಕನಸುಗಳಾಗುತ್ತಿರುವ ಈ ವರ್ತಮಾನದಲ್ಲಿ ನನಗೀಗ ಕನಸುಗಳಿಲ್ಲ
ನನಗೆ ಭಯವಿರುವುದು ನನ್ನ ಪಕ್ಕದಲ್ಲಿ ನನ್ನೊಡನೆ
ಇರುವ ನನ್ನವರಿಂದ, ಬೋಟಿನಲ್ಲಿ ಬಂದವರಿಂದಲ್ಲ

ಮರುಕಳಿಸದ ಭೂತದಲ್ಲಿ ನನ್ನವರು ಇಟ್ಟು ಹೋದ
ಬಾಂಬು ನನ್ನಮ್ಮನ ಎದೆಯಲ್ಲೇ ಸಿಡಿದಿದೆ  ಮುಂದೆ ಓದಿ »

ಜಗದ ಮೋಹಕೆ ಮರುಗುತ್ತ...

 

ಕೆನ್ನಾಲಿಗೆಯ ಚಾಚಿ

ನಿನ್ನನೇ ನೀ ನುಂಗುತ್ತ  ಮುಂದೆ ಓದಿ »

Syndicate content