ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

ಸಂಪದ ಆರ್ಕೈವಿನಿಂದ

kavana

ನಿಲ್ಲು ನಿಲ್ ಗಣಿಗಾರ

 

ನಿಲ್ಲು ನಿಲ್ ಗಣಿಗಾರ


ನಿಲ್ಲು ನಿಲ್ ಗಣಿಗಾರ ತಾಯೊಡಲ ಸಿಗಿಯದಿರು

ತಾಯಸ್ಥಿ ಮಾಂಸಗಳ ಮಾರಿ ಬದುಕದಿರು ||ಪ||

 

ಸಹ್ಯಾದ್ರಿ ವಿಂದ್ಯಾದ್ರಿ ಭೂತಳದ ಭಾಗ್ಯವಿದು

ನೋಡಿಲ್ಲಿ ನಗರಸಿರಿ ಜಾನಪದ ಮೂಲ

ಲೆಕ್ಕವಿಲ್ಲದ ಸಸ್ಯ ಸಂಕುಲಗಳುಳಿಯಲಿ

ವನ್ಯ ಜೀವಿಗಳನ್ನು ನೀ ಕೊಲ್ಲಬೇಡ ||೧||

 

ಉದರಭರಣಕೆ ನೂರು ಸಾವಿರದ ದಾರಿಯಿದೆ  ಮುಂದೆ ಓದಿ »

ನಿಜವಾದ ಗೆಲುವು

ಗೆದ್ದೆ ನೀ ಯಾರನ್ನು ???
ಹಲವರನ್ನೋ ??? ಹೊಲವರನ್ನೋ ???
ಗೆದ್ದು ನೀ ಸಾಧಿಸಿದ್ದಾದರೂ ಏನನ್ನು ???
ಗೆಲ್ಲಲಾಗದೆ ತಾನು ತನ್ನನ್ನು !!!

**************************

ಹೋರಾಡಿ ಗೆದ್ದರು ಹಲವಾರು ರಾಜರು ...
ಮಣ್ಣಿನಲಿ ಮಣ್ಣಾದರು ಮದಾಂಧರು ...
ಇಹರು ಹಲವರು ಸೋತು ಗೆದ್ದವರು ...
ತಮ್ಮನ್ನು ತಾವೇ ಜಯಿಸಿದವರು !!!

**************************

ಎಂಥ ಜಟಿಲ ಈ ಬದುಕು
ಹುಟ್ಟಿನಿಂದ ಮಣ್ಣಾಗುವನಕ ಹೋರಾಟದ ಬದುಕು !!!
ಗೆದ್ದೆನೆಂದು ಹೊರಗೆ ತೋರಿದರೂ ಥಳಕು
ಒಳಗೇ ಚುಚ್ಚುತಿಹುದು ತನಗೆ ತಾನೇ ಸೋತ ಹುಳುಕು !!!

**********************************

in

ಕಾಫಿ ಬಾರ್ ಹುಡುಗಿ


ಈಹೊತ್ತಿನ ಕವನ

ಕಾಫಿ ಬಾರ್ ಹುಡುಗಿ

ಅಂದದ ಗಾಜಿನ ತೋಟ
ಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿ
ಅಂಗನೆ ಅವಳು ಚಂದವಳ್ಳಿಯ ಸುಮ
ಕೇಶಕೆ ತುಸುತೈಲವನುನಿಸಿ ನೀಟಾಗಿ ಎಳೆದು ಕ-
 ಮುಂದೆ ಓದಿ »

in

ಮುತ್ತು

ನಾ ನಿನ್ನ ಕೇಳಿದ ಮುತ್ತು
ನಿನ್ನ ಕಣ್ಣ ಹನಿಯಲ್ಲ ನಲ್ಲೆ ..........
ನಾ ಕೇಳಿದ್ದು ........
ನೀ ನಗುವಾಗ ಚೆಲ್ಲಿಸುವ ಬಿಳಿಮುತ್ತು
ನೀ ನುಡಿದಾಗ ಸಿಡಿಸುವ ಆಣಿಮುತ್ತು
ನೀ ತುಟಿಯೊತ್ತಿ ಮುದ್ರಿಸುವ ಸಿಹಿ ಮುತ್ತು !!!!!!!!

in

ಇನಿಯ !!!

ಇನಿಯ !!!

ನಿನ್ನ ಕಣ್ಣ ನೋಟ..
ಎನ್ನೆದೆಯ ನಾಟಿದಾಗ.....
ನಿನ್ನ ಒಂದು ಸ್ಪರ್ಶ ....
ಎನ್ನ ಹೃದಯ ತಂತಿ ಮೀಟಿದಾಗ...
ಪ್ರೀತಿ ಧಾರೆಯಾಗಿ ಹರಿದು ..
ಪ್ರೇಮ ಗಂಗೆಯಲ್ಲಿ ಮಿಂದು ....
ಬಂಧಿಯಾದೆ ನಾ ನಿನ್ನ ಬಾಹು ಬಂಧನದಲಿ ಬಂದು .........

in

ಹೃದಯಾ ಸಣ್ಣ ಮಗು..!!

ಇದು ಹಿಂದಿ ಚಿತ್ರ "ಈಶ್ಕಿಯಾ"ದ ಸೊಗಸಾದ ಗುಲ್ಜಾರ್ ಲೇಖನಿಯಲಿ ಮೂಡಿ ಬಂದ ಸುಂದರ ಗೀತೆ 'Dil to baccha hain ji .."ಯಾ ಕನ್ನಡ ಅನುವಾದ..( ಒಂದು ಸಣ್ಣ ಪ್ರಯತ್ನ..)
(ಮೊದಲ ನುಡಿ ನನ್ನದಲ್ಲ...you tube ಅಲ್ಲಿ ಸಿಕ್ಕ ನುಡಿ...). ನೈಜ ಹಾಡಿನ ಭಾವವನ್ನ ಇಲ್ಲಿ ತರೋದಕ್ಕೆ ಪ್ರಯತ್ನಿಸಿದ್ದೀನಿ. ಪ್ರಯತ್ನದಲ್ಲಿ ಏನಾದರು ತಪ್ಪಿದ್ದರೆ ದಯವಿಟ್ಟು ತಿದ್ದಿ....ಇಂತಿ  ನಿಮ್ಮವ - ಸಿದ್ದು


ಹೃದಯಾ ಸಣ್ಣ  ಮಗು..!!  ಮುಂದೆ ಓದಿ »

in

ನಿನ್ನ ನಾ ನೆನೆದಾಗ

ನಲ್ಮೆಯ ನಲ್ಲ,
ನಿನ್ನ ನಾ ನೆನೆದಾಗ...
ಉರಿಬಿಸಿಲು ತಂಪಾಯ್ತು, ಕಳ್ಳಿ ಹೂ ಕಂಪಾಯ್ತು....
ಒಣಮರವು ಸೊಂಪಾಯ್ತು ನಿನ್ನನೆನೆದು,
ನನ್ನರಸ, ಮನ ಹಿಗ್ಗಿ ಹಗುರಾಯ್ತು ನಿನ್ನ ನೆನೆದು.....

ಪ್ರಕೃತಿ

ಎತ್ತ ನೋಡಿದರತ್ತ ನಿನದೇ ಚೆಲುವು
ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು

ಪರ್ವತದ ಮೇಲೆ ಮಂಜಿನ ತೋರಣ
ಅದರ ಮೇಲೆ ರವಿಯ ಹೊನ್ನಿನ ಕಿರಣ

ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ
ಆ ಸಪ್ತವರ್ಣಗಳ ನೋಡುವುದೇ ಸಡಗರ

ಆಗಸದಲ್ಲಿ ಕಾರ್ಮೋಡದ ಆರ್ಭಟ
ಇನ್ನೇನು ಶುರುವಾಗಲಿದೆ ಧರೆಯ ಮೇಲೆ ಅದರಾಟ

ಇಳೆಯ ಮೇಲೆ ಮಳೆಯ ನರ್ತನ
ಎಲೆಯ ಮೇಲೆ ಹನಿಯ ಸಿಂಚನ

ಎಲ್ಲೆಲ್ಲೂ ಹಸಿರ ಹೊದಿಕೆ
ಸಾಲುವುದಿಲ್ಲ ಎರಡೂ ನಯನ ಅದಕೆ

ವ್ಯರ್ಥ

ಮಳೆಯಲಿ ನೆನೆಯುತ 

ನಿನ್ನನು ನೆನೆಸುತ 
ಸುರಿಸುವ ಕಣ್ಣೀರಿಗೆ ಏನಿದೆ ಅರ್ಥ 
ಮಳೆಯೊಂದಿಗೆ ಬೆರೆತಿರುವ ಕಣ್ಣೀರು ಬರೀ ವ್ಯರ್ಥ
 
ಗಾಳಿಯಲಿ ನಿನ್ನುಸಿರನು ಹುಡುಕುತ 
ಹುಡುಕಾಟದ ಅಮಲಿನಲಿ ಬದುಕುತ 
ಬಯಸುವ ಪ್ರೀತಿಗೆ ಏನಿದೆ ಅರ್ಥ 
ಗಾಳಿಯೊಂದಿಗೆ ಬೆರೆತಿರುವ ನನ್ನುಸಿರು ಬರೀ ವ್ಯರ್ಥ
 
ನೀನಾಡಿದ ಮಾತುಗಳ ಬರೆಯುತ 
ಹೃದಯಕೆ ನಿನ್ನ ಮರೆಯುವ ಪಾಠ ಕಲಿಸುತ 
ಬದುಕುವ ಬಯಕೆಗೆ ಏನಿದೆ ಅರ್ಥ 
ನೀನಿಲ್ಲದ ಜೀವನ ಬರೀ ವ್ಯರ್ಥ
 
ನಾಡಿಯಲ್ಲಿರದ ನಿನ್ನ ಪ್ರೀತಿಯ ಮಿಡಿತ 
ನಿನ್ನೊಂದಿಗೆ ಕಂಡ ಕನಸುಗಳ ಮರೆಯುತ 
ಬದುಕಿದ್ದು ಸತ್ತಂತಿರುವ ಜೀವಕೆ ಏನಿದೆ ಅರ್ಥ 
ನೀನಿಲ್ಲದೆ ಕಳೆಯುವ ಕಾಲ ಬರೀ ವ್ಯರ್ಥ 
- Vರ 
in
Syndicate content