ಸಾಹಿತ್ಯ
ನಿರಕ್ಷರಿ ಕವಿಯ ಅಕ್ಷರಗಾಥೆ
July 3, 2008 - 6:17am — Chamarajನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ.
ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ ಕುಟುಂಬದಲ್ಲಿ ಜನಿಸಿ, ಬಡತನದಿಂದಾಗಿ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿದ ಸಿದ್ದಪ್ಪನಿಗೆ ಓದುವ ಭಾಗ್ಯ ದೊರೆಯಲಿಲ್ಲ.
ಆದರೇನಂತೆ, ಕಾವ್ಯ ಸರಸ್ವತಿ ಒಲಿದಿದ್ದಳು. ಚಿಕ್ಕಂದಿನಿಂದಲೇ ಪದ್ಯದ ಗೀಳು. ಸುತ್ತಲಿನ ಪರಿಸರವೇ ಕವಿತೆಯ ವಸ್ತುಗಳಾದವು. ಅವನ್ನೇ ಪ್ರಾಸಬದ್ಧವಾಗಿ, ಜಾನಪದ ಶೈಲಿಯಲ್ಲಿ ಜೋಡಿಸಿ ಹಾಡುತ್ತಿದ್ದ ಸಿದ್ದಪ್ಪ ಸುತ್ತಲಿನ ಜನರನ್ನು ಆಕರ್ಷಿಸಿದ. ಚೆನ್ನಾಗಿವೆ ಎಂದು ಅನ್ನಿಸಿದ ಕವಿತೆಗಳನ್ನು ಊರಿನ ಕೆಲವು ಅಕ್ಷರಸ್ಥರು ಆತನಿಗೆ ಬರೆದು ಕೊಟ್ಟರು. ಅವನ್ನೇ ನೋಟ್ಬುಕ್ನಲ್ಲಿ ಇಟ್ಟುಕೊಂಡು ಹರ್ಷಪಡುತ್ತ ದಿನಗಳೆದ ಸಿದ್ದಪ್ಪ.
ಕ್ರಮೇಣ ನೋಟ್ಬುಕ್ಗಳ ಸಂಖ್ಯೆ ಬೆಳೆಯಿತು. ಆಗ ಯಾರೋ ಒಬ್ಬರು, ’ಒಂದು ಕವಿತಾ ಸಂಕಲನ ಪ್ರಕಟಿಸಬಹುದಲ್ಲ?’ ಎಂದು ಸೂಚಿಸಿದರು. ಅಕ್ಷರವೇ ಬಾರದ ತಾನು ಏನಂತ ಪ್ರಕಟಿಸಬೇಕು ಎಂದು ಅನ್ನಿಸಿದರೂ, ಹಿತೈಷಿಗಳು ಒತ್ತಾಯಿಸಿದರು. ಕವಿತೆ ಕೇಳಿ ಮೆಚ್ಚಿದ ಸಹೃದಯರು ಪ್ರಕಟಿಸಲು ಮುಂದೆ ಬಂದರು. ಒಂದಷ್ಟು ಹಣ ಸಂಗ್ರಹಿಸಿ, ೧೯೯೦ರಲ್ಲಿ ಮೊದಲ ಕವಿತಾ ಸಂಕಲನ ’ಹೊಳಿ ಸಾಲಿನ ಹೋರಿ’ ಪ್ರಕಟಿಸಿದ ಸಿದ್ದಪ್ಪ. ಮುಂದೆ ಓದಿ »

ಡೈಸಿ ರಿಡ್ಜ್ ಡೈರಿ
April 15, 2008 - 5:13am — hemzy78ಸಿನೆಮಾ, ಸಿನೆಮಾ ವಿಮರ್ಶೆ, ಕಲೆ, ಸಾಹಿತ್ಯ, ಸಮಾಜ, ಜನ ಜೀವನ , ಬದುಕು , ಸಂಗೀತ ಮತ್ತು ಭಾವನೆಗಳು - ಇವುಗಳ ಜತೆ ನನ್ನ ಒಡನಾಟದ ಕೆಲವು ಕ್ಷಣಗಳು... ಇಲ್ಲಿ.

ಜಲ ಜಲ ಜಲಜಾಕ್ಷಿ !
April 8, 2008 - 2:13pm — madhava_hsಈಗಿನ ಕೆಲ ಹಾಡುಗಳ ಸಾಹಿತ್ಯ ಹೀಗಿವೆ ನೋಡಿ..
’ಚಿಂದಿ ಮಾಡೆ ಚಂದ್ರಿಕಾ’
’ಕೊಡೆ ಕೊಡೆ ಕೊಡೆ ಕೊಬ್ರಿ ಮಿಠಾಯಿ’..
’ಜಲ ಜಲ ಜಲ ಜಲಜಾಕ್ಷಿ, ಮಿನ ಮಿನ ಮಿನ ಮೀನಾಕ್ಷಿ’..
ಆಹಾ ಎಂಥ ಅದ್ಬುತ ಸಾಹಿತ್ಯ !
ಕುವೆಂಪು ಬದ್ಕಿರ್ಬೇಕಾಗಿತ್ತು ಇದನ್ನೆಲ್ಲಾ ನೋಡ್ಲಿಕ್ಕೆ !

ಕವಿತೆ ಅರ್ಥವಾಗೋದಿಲ್ಲ ಬಿಡಿ!
February 7, 2008 - 3:19pm — uniquesupriಮೊನ್ನೆಯೆರಡು ದಿನಗಳಿಂದ ಎಸ್.ಎಲ್.ಭೈರಪ್ಪನವರ "ಗ್ರಹಣ" ಕಾದಂಬರಿಯನ್ನು ಓದುತ್ತಿದ್ದೇನೆ. ಕಾದಂಬರಿಗಳೆಂದರೆ ಕೇವಲ ಮನರಂಜನೆಯ ಸರಕು. ಕಪೋಲ ಕಲ್ಪಿತ ಕಹಾನಿಗಳನ್ನು ಉದ್ದಕ್ಕೆ ಎಳೆದೆಳೆದು ನೂರಾರು ಪುಟಗಳಿಗೆ ವಿಸ್ತರಿಸಿದರೆ ಕಾದಂಬರಿಯಾಗುತ್ತದೆ ಎಂಬ ಭಾವ ಸಹಜವಾದದ್ದು. ಮುಂದೆ ಓದಿ »

- uniquesupri ರವರ ಬ್ಲಾಗ್
- Login or register to post comments
- 244 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕನ್ನಡ ಸಾಹಿತ್ಯದ ಮಜಲುಗಳು-ಭಾಗ ೧
January 30, 2008 - 10:20pm — chennadigaಮಿತ್ರರೆ,
ನಮ್ಮ ಕನ್ನಡ ಸಾಹಿತ್ಯದ ಅತಿಮುಖ್ಯ ಹಾಗೂ ರಂಜನೀಯ ಬರಹಗಾರರಲ್ಲಿ ಕಾದಂಬರಿ ಕಾರರ ಪಟ್ಟಿ ಬಲು ದೊಡ್ಡದು....
ನನಗೆ ತಿಳಿದವರ ಹೆಸರುಗಳನ್ನು ಇಲ್ಲಿ ಬರೆದಿದ್ದೇನೆ:
ಅ. ನ. ಕೃ
ದೇವುಡು ನರಸಿಂಹ ಶಾಸ್ತ್ರಿ
ತ್ರಿವೇಣಿ
ಆರ್ಯಾಂಭ ಪಟ್ಟಾಭಿ
ಟಿ. ಕೆ. ರಾಮ ರಾವ್
ತ.ರಾ. ಸುಬ್ಬರಾವ್
ತ. ಪು. ವೆಂಕಟರಾಂ
ಉಷಾ ನವರತ್ನ ರಾಂ
ಅನುಪಮಾ ನಿರಂಜನ ಮುಂದೆ ಓದಿ »

- chennadiga ರವರ ಬ್ಲಾಗ್
- Login or register to post comments
- 178 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: