ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಾಹಿತ್ಯ

ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ

ಇಂದು ವಿಜಯದಶಮಿ ಆದ್ದರಿಂದ ಅನೇಕ ಸ್ನೇಹಿತರು ಈಮೈಲ್ ಮುಖಾಂತರ ಶುಭಾಶಯಗಳನ್ನು ಕೋರುತ್ತಿದ್ದರು. ಬಹುದಿನಗಳಿಂದ ಸಿನೆಮ, ನಾಟಕ, ಸಾಹಿತ್ಯ ಇಂತಹ ವಿಷಯಗಳ ಬಗ್ಗೆ ಒಂದು ಬ್ಲಾಗ್ ಮಾಡಬೇಕು ಎಂದು ಕೊಂಡಿದ್ದೆ. ಇದಕ್ಕೆ ಸರಿಯಾಗಿ ನಿನ್ನೆ ಡಾ|| ಗುರುಲಿಂಗ ಕಾಪ್ಸೆ ಅವರನ್ನು ಸಂದರ್ಶನ ಮಾಡುವ ಸದಾವಕಾಶ ಒದಗಿ ಬಂತು.  ಮುಂದೆ ಓದಿ »

ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?

ನಮಸ್ಕಾರ,
ನಿನ್ನೆ ಸಂಜೆ ಕಚೇರಿ ಇಂದ ಮನೆಗೆ ಬರುತ್ತಿದ್ದಾಗ ಒಂದು ವಿಚಾರ ಸುಮ್ನೆ ಮನಸಿನಲ್ಲಿ ಹೀಗೆ ಹೊಳೀತು, ನಿಮ್ಮ ಜೊತೆ ಅದನ್ನ ಹಂಚಿಕೊಳ್ಳೋಣ ಅಂತ.  ಮುಂದೆ ಓದಿ »

ಕುಮಾರವ್ಯಾಸ ಭಾರತ

ಕುಮಾರವ್ಯಾಸ ಭಾರತ ಒಂದು ಸಮಗ್ರ ಕನ್ನಡ ಪುರಾಣ ಕಾವ್ಯ. ಇದರಲ್ಲಿ ಎಲ್ಲ ಸಂದರ್ಭಗಳನ್ನು ರಸವತ್ತಾಗಿ ವರ್ಣಿಸಿ ಪ್ರತಿಯೊಂದು ಘಟನಾವಳಿಗಳ ಹಿನ್ನೆಲೆ ಯನ್ನು ಅದರ ಕಾರಣ ಸಮೇತ ವರ್ಣಿಸಿದ್ದಾನೆ ಕವಿ. ಆದರೂ ಕರ್ನಾಟಕದಲ್ಲಿ ಕುಮಾರವ್ಯಾಸ ಭಾರತ ಕೇವಲ ಗಮಕವಾಚನಕಾರರಿಗೆ ಮಾತ್ರ ಸೀಮಿತವಾಗಿದೆಯೇನೋ ಅನ್ನಿಸುತ್ತದೆ.  ಮುಂದೆ ಓದಿ »

ನವ್ಯ, ನವೋದಯ, ಬಂಡಾಯ.....

ನವ್ಯ, ನವೋದಯ, ಬಂಡಾಯ ಇತ್ಯಾದಿ ಪದಗಳನ್ನು ಕೆಲವು ಲೇಖನಗಳಲ್ಲಿ ಬಳಸುತ್ತಿರುತ್ತಾರೆ. ಇವು ಸಾಹಿತ್ಯಗಳನ್ನು ವರ್ಗೀಕರಣಗೊಳಿಸುವ ವಿಧಗಳಿರಬಹುದು. ನವ್ಯ, ನವೋದಯ, ಬಂಡಾಯ ಸಾಹಿತ್ಯಗಳೆಂದರೇನು? ಈಗಿರುವ ಸಾಹಿತಿಗಳು ಯಾವ ವರ್ಗಕ್ಕೆ ಸೇರುತ್ತಾರೆ? ಗೊತ್ತಿದ್ದವರು ತಿಳಿಸಿ..

ಹೊರಟಿದೆ ಎತ್ತ, ನಮ್ಮ ಸಾಹಿತ್ಯ?

ಕನ್ನಡದಲ್ಲಿ ಕಾವ್ಯ ಸತ್ತಿದೆ.

ಇದರರ್ಥ ಕವಿತೆಗಳನ್ನು ಬರೆಯುವವರು ಇಲ್ಲವೆ೦ದಲ್ಲ. ಅವರ ಸ೦ಖ್ಯೆ ಮೊದಲಿಗಿ೦ತ ಹೆಚ್ಚಾಗಿದೆ. ಆದರೆ ಅವರು ಬರೆದಿದ್ದನ್ನೆಲ್ಲಾ ಕವಿತೆ ಎ೦ದು ಒಪ್ಪಿಕೊಳ್ಳುವುದು ಕಷ್ಟ. ಅದಕ್ಕೆ ಹೇಳಿದ್ದು ಕನ್ನಡದಲ್ಲಿ ಕಾವ್ಯ ಸತ್ತಿದೆ ಎ೦ದು.  ಮುಂದೆ ಓದಿ »

ನಿರಕ್ಷರಿ ಕವಿಯ ಅಕ್ಷರಗಾಥೆ

ಪ್ರಕಟಿಸಿದ ಕವಿತಾ ಸಂಕಲನಗಳೊಂದಿಗೆ ನಿರಕ್ಷರಿ ಸಿದ್ದಪ್ಪ

ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ.

ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ ಕುಟುಂಬದಲ್ಲಿ ಜನಿಸಿ, ಬಡತನದಿಂದಾಗಿ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿದ ಸಿದ್ದಪ್ಪನಿಗೆ ಓದುವ ಭಾಗ್ಯ ದೊರೆಯಲಿಲ್ಲ.

ಆದರೇನಂತೆ, ಕಾವ್ಯ ಸರಸ್ವತಿ ಒಲಿದಿದ್ದಳು. ಚಿಕ್ಕಂದಿನಿಂದಲೇ ಪದ್ಯದ ಗೀಳು. ಸುತ್ತಲಿನ ಪರಿಸರವೇ ಕವಿತೆಯ ವಸ್ತುಗಳಾದವು. ಅವನ್ನೇ ಪ್ರಾಸಬದ್ಧವಾಗಿ, ಜಾನಪದ ಶೈಲಿಯಲ್ಲಿ ಜೋಡಿಸಿ ಹಾಡುತ್ತಿದ್ದ ಸಿದ್ದಪ್ಪ ಸುತ್ತಲಿನ ಜನರನ್ನು ಆಕರ್ಷಿಸಿದ. ಚೆನ್ನಾಗಿವೆ ಎಂದು ಅನ್ನಿಸಿದ ಕವಿತೆಗಳನ್ನು ಊರಿನ ಕೆಲವು ಅಕ್ಷರಸ್ಥರು ಆತನಿಗೆ ಬರೆದು ಕೊಟ್ಟರು. ಅವನ್ನೇ ನೋಟ್‌ಬುಕ್‌ನಲ್ಲಿ ಇಟ್ಟುಕೊಂಡು ಹರ್ಷಪಡುತ್ತ ದಿನಗಳೆದ ಸಿದ್ದಪ್ಪ.

ಕ್ರಮೇಣ ನೋಟ್‌ಬುಕ್‌ಗಳ ಸಂಖ್ಯೆ ಬೆಳೆಯಿತು. ಆಗ ಯಾರೋ ಒಬ್ಬರು, ’ಒಂದು ಕವಿತಾ ಸಂಕಲನ ಪ್ರಕಟಿಸಬಹುದಲ್ಲ?’ ಎಂದು ಸೂಚಿಸಿದರು. ಅಕ್ಷರವೇ ಬಾರದ ತಾನು ಏನಂತ ಪ್ರಕಟಿಸಬೇಕು ಎಂದು ಅನ್ನಿಸಿದರೂ, ಹಿತೈಷಿಗಳು ಒತ್ತಾಯಿಸಿದರು. ಕವಿತೆ ಕೇಳಿ ಮೆಚ್ಚಿದ ಸಹೃದಯರು ಪ್ರಕಟಿಸಲು ಮುಂದೆ ಬಂದರು. ಒಂದಷ್ಟು ಹಣ ಸಂಗ್ರಹಿಸಿ, ೧೯೯೦ರಲ್ಲಿ ಮೊದಲ ಕವಿತಾ ಸಂಕಲನ ’ಹೊಳಿ ಸಾಲಿನ ಹೋರಿ’ ಪ್ರಕಟಿಸಿದ ಸಿದ್ದಪ್ಪ.  ಮುಂದೆ ಓದಿ »

ಡೈಸಿ ರಿಡ್ಜ್ ಡೈರಿ

ಸಿನೆಮಾ, ಸಿನೆಮಾ ವಿಮರ್ಶೆ, ಕಲೆ, ಸಾಹಿತ್ಯ, ಸಮಾಜ, ಜನ ಜೀವನ , ಬದುಕು , ಸಂಗೀತ ಮತ್ತು ಭಾವನೆಗಳು - ಇವುಗಳ ಜತೆ ನನ್ನ ಒಡನಾಟದ ಕೆಲವು ಕ್ಷಣಗಳು... ಇಲ್ಲಿ.

ಜಲ ಜಲ ಜಲಜಾಕ್ಷಿ !

ಈಗಿನ ಕೆಲ ಹಾಡುಗಳ ಸಾಹಿತ್ಯ ಹೀಗಿವೆ ನೋಡಿ..

’ಚಿಂದಿ ಮಾಡೆ ಚಂದ್ರಿಕಾ’
’ಕೊಡೆ ಕೊಡೆ ಕೊಡೆ ಕೊಬ್ರಿ ಮಿಠಾಯಿ’..
’ಜಲ ಜಲ ಜಲ ಜಲಜಾಕ್ಷಿ, ಮಿನ ಮಿನ ಮಿನ ಮೀನಾಕ್ಷಿ’..

ಆಹಾ ಎಂಥ ಅದ್ಬುತ ಸಾಹಿತ್ಯ ! :-)

ಕುವೆಂಪು ಬದ್ಕಿರ್ಬೇಕಾಗಿತ್ತು ಇದನ್ನೆಲ್ಲಾ ನೋಡ್ಲಿಕ್ಕೆ !

ಕವಿತೆ ಅರ್ಥವಾಗೋದಿಲ್ಲ ಬಿಡಿ!

ಮೊನ್ನೆಯೆರಡು ದಿನಗಳಿಂದ ಎಸ್.ಎಲ್.ಭೈರಪ್ಪನವರ "ಗ್ರಹಣ" ಕಾದಂಬರಿಯನ್ನು ಓದುತ್ತಿದ್ದೇನೆ. ಕಾದಂಬರಿಗಳೆಂದರೆ ಕೇವಲ ಮನರಂಜನೆಯ ಸರಕು. ಕಪೋಲ ಕಲ್ಪಿತ ಕಹಾನಿಗಳನ್ನು ಉದ್ದಕ್ಕೆ ಎಳೆದೆಳೆದು ನೂರಾರು ಪುಟಗಳಿಗೆ ವಿಸ್ತರಿಸಿದರೆ ಕಾದಂಬರಿಯಾಗುತ್ತದೆ ಎಂಬ ಭಾವ ಸಹಜವಾದದ್ದು.  ಮುಂದೆ ಓದಿ »

ಕನ್ನಡ ಸಾಹಿತ್ಯದ ಮಜಲುಗಳು-ಭಾಗ ೧

ಮಿತ್ರರೆ,

ನಮ್ಮ ಕನ್ನಡ ಸಾಹಿತ್ಯದ ಅತಿಮುಖ್ಯ ಹಾಗೂ ರಂಜನೀಯ ಬರಹಗಾರರಲ್ಲಿ ಕಾದಂಬರಿ ಕಾರರ ಪಟ್ಟಿ ಬಲು ದೊಡ್ಡದು....

ನನಗೆ ತಿಳಿದವರ ಹೆಸರುಗಳನ್ನು ಇಲ್ಲಿ ಬರೆದಿದ್ದೇನೆ:

ಅ. ನ. ಕೃ
ದೇವುಡು ನರಸಿಂಹ ಶಾಸ್ತ್ರಿ
ತ್ರಿವೇಣಿ
ಆರ್ಯಾಂಭ ಪಟ್ಟಾಭಿ
ಟಿ. ಕೆ. ರಾಮ ರಾವ್
ತ.ರಾ. ಸುಬ್ಬರಾವ್
ತ. ಪು. ವೆಂಕಟರಾಂ
ಉಷಾ ನವರತ್ನ ರಾಂ
ಅನುಪಮಾ ನಿರಂಜನ  ಮುಂದೆ ಓದಿ »

Syndicate content