ಓದಿದ್ದು ನೆನಪಾಯಿತು.....
ಯಕ್ಷಲೋಕದ ಧ್ವನಿ
September 20, 2007 - 1:35pm — ಮಂಜುಬೊಮ್ನಳ್ಳಿಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ್ಜೆಗೆ ತಲೆಯೊಡ್ಡಿದಂತೆ ಎಂದು ಗೊತ್ತಿದ್ದೂ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು ಗೋಪಾಲಕ್ರಷ್ಣ ಭಾಗವತ ಎಂಬ ಪ್ರತಿಭೆ.
ಅಪರೂಪಕ್ಕೆಂಬಂತೆ, ಸಾಂಸ್ಕ್ರತಿಕ ಕಾಳಜಿಯುಳ್ಳ, ಸೀಮಿತ ಮಾರುಕಟ್ಟೆಯುಳ್ಳ, ಯಕ್ಷಗಾನದ ಕುರಿತು ಬರೆಯುವುದಕ್ಕೆ ಎಷ್ಟು ಸರಕು ಇದೆ ಎಂದು ಮನವರಿಕೆ ಮಾಡಿಸಿಕೊಡುತ್ತಿರುವ ಈ ಪತ್ರಿಕೆ ದಿನ ಕಳೆದಂತೆ ಬಲಗೊಳ್ಳುತ್ತಿರುವುದು ಖುಶಿಯ ಸುದ್ದಿ. ಯಕ್ಷಗಾನವನ್ನು ಹಾಗೆ ಹೀಗೆ ಎಂದೆಲ್ಲ ಸವಕಲು ಪದಗಳಿಂದ ಬಣ್ಣಿಸುವ ಅಥವಾ ಅದರ ದುರ್ದೆಶೆಯ ಕುರಿತು ಗೋಳಿಡುವ ಪೂರ್ವಾಗ್ರಹ-ಪೀಡಿತ ಪ್ರವ್ರತ್ತಿಗಿಂತ ಭಿನ್ನವಾದ ನಿಲುವು ‘ಯಕ್ಷರಂಗ’ದ್ದು. ರಂಗಕಲೆಯೊಂದರ ಭೂತ-ವರ್ತಮಾನ-ಭವಿಷ್ಯತ್ತನ್ನು ಚಿಕಿತ್ಸಕ ದ್ರಷ್ಟಿಯಿಂದ ನೋಡುವ, ಸಾಕಷ್ಟು ಹಿನ್ನೆಲೆ ಜ್ಞಾನವುಳ್ಳ, ಯಕ್ಷಗಾನದ ಕುರಿತಾದ ನಿರ್ಲಕ್ಷ್ಯವನ್ನು ಎತ್ತರದ ಧ್ವನಿಯಲ್ಲಿ ಖಂಡಿಸುವ ಗೋಪಾಲರ ಈ ಸಂಚಿಕೆಯ ಸಂಪಾದಕೀಯವನ್ನು ನೋಡಿ. ಮುಂದೆ ಓದಿ »

- ಮಂಜುಬೊಮ್ನಳ್ಳಿ ರವರ ಬ್ಲಾಗ್
- Login or register to post comments
- 354 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕಾಡುವ ಹಾಡು
May 11, 2007 - 4:10am — honnalichandras...ಮತ್ತದೆ ಬೇಸರ...
ಅದೇ ಸಂಜೆ
ಅದೇ ಏಕಾಂತ...
ನಿನ್ನ ಜೊತೆ ಇಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ....
ನಿಸ್ಸಾರರ ಈ ಕವನ ಓದಿದಾಗಲೆಲ್ಲಾ ಸಂಜೆಯೂ ಆಲ್ಲದ, ರಾತ್ರಿಯೂ ಅಲ್ಲದ ಆ ಸಮಯ ನೆನಪಿಗೆ ಬರುತ್ತದೆ. ಸೂರ್ಯ ಮುಳುಗಿದ ನಂತರದ, ರಾತ್ರಿ ಆವರಿಸುವ ಮೊದಲಿನ ಆ ಸಮಯ. ಅದೊಂದು ಹಗಲು ಅಲ್ಲದ, ರಾತ್ರಿಯೂ ಅಲ್ಲದ ವಿಚಿತ್ರ ಕಾಲ. ನೆನಪುಗಳು ನುಗ್ಗಿ ಬರುವ ಸಂಕ್ರಮಣ ಸಮಯ. ಮುಂದೆ ಓದಿ »

- honnalichandrashekhar ರವರ ಬ್ಲಾಗ್
- Login or register to post comments
- 388 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: