24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಂಗೀತ

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? - (ರಾಗ ಮೋಹನ, ಭಾಗ ಐದು, ಅಂತೂ ಮುಗಿಯಿತು!)

May 12, 2007 - 5:18am
hamsanandi

ಮೋಹನ ಮುರಳಿಯ ಕರೆಯ ಬಗ್ಗೆ ವಿಚಿತ್ರಾನ್ನದ ಶ್ರೀವತ್ಸಜೋಷಿಯವರು ಮೊನ್ನೆ ಬರೆದಿದ್ದರು. ಆಗಲೇ ನಾನು ನನ್ನ ಮೋಹನ ರಾಗದ ಬಗ್ಗೆಯ ಟಿಪ್ಪಣಿ ಇನ್ನೂ ಮುಗಿಸಲೇ ಇಲ್ಲ ಎಂಬುದು ನೆನಪಾಯಿತು. ಇರಲಿ, ನಾನು ನನ್ನ ವಿವರಣೆ ಬರೆಯದಿದ್ದರೆ, ಮೋಹನಕ್ಕಾದ ಹಾನಿ ಏನೂ ಇಲ್ಲ. ಆದರೂ. ಸರಿಯಾದ ಮುಕ್ತಾಯಕ್ಕೆ, ಇದು ಬೇಕೆನ್ನಿಸಿತು. Read more about ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? - (ರಾಗ ಮೋಹನ, ಭಾಗ ಐದು, ಅಂತೂ ಮುಗಿಯಿತು!)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಿರುವೈಯ್ಯಾರು ಮತ್ತು ಮಿಶನ್ ಸ್ಯಾನ್ ಹೊಸೆ

June 16, 2007 - 1:19am
hamsanandi

ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.

  Read more about ತಿರುವೈಯ್ಯಾರು ಮತ್ತು ಮಿಶನ್ ಸ್ಯಾನ್ ಹೊಸೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭೀಮಸೇನ ಜೋಷಿ: ನೆನಪಾದದ್ದು

June 30, 2007 - 6:16am
keshav

ಭೀಮಸೇನ ಜೋಷಿಯವರ ರಾಗ ಕೇಳುವಾಗ ಅವರ ಸಂಗೀತ ಕಾರ್ಯಕ್ರಮ ನೆನೆದು ಬರೆದದ್ದು, http://kannada-nudi.blogspot.com/2007/06/blog-post_26.html ಇಲ್ಲಿದೆ Read more about ಭೀಮಸೇನ ಜೋಷಿ: ನೆನಪಾದದ್ದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಿತ್ರಗೀತೆಗಳಲ್ಲಿ ಶಾಸ್ತ್ರೀಯ ಸಂಗೀತ - ಡಾ.ರಾಜ್ ವಿಶೇಷ

July 13, 2007 - 8:50am
hamsanandi

ಸಾಧಾರಣವಾಗಿ ಶಾಸ್ತ್ರೀಯ ಗಾಯನ ಬಲ್ಲವರಿಗೆ, ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಅಷ್ಟಾಗಿ ಯಶಸ್ಸು ಸಿಗುವುದು ಕಷ್ಟ. ಏಕೆಂದರೆ ಶಾಸ್ತ್ರೀಯ ಸಂಗೀತ ಬಯಸುವ ಕಂಠದ ಒನಪು, ಗಮಕಗಳೇ ಬೇರೆ. ಚಿತ್ರ ಸಂಗೀತಕ್ಕೆ ಬೇಕಾದ್ದೇ ಬೇರೆ. ಎಲ್ಲ ರೀತಿಯ ಹಾಡುಗಳಿಗೆ ಶಾಸ್ತ್ರೀಯ ಗಾಯಕರಿಗೆ, ತಮ್ಮ ಕಂಠವನ್ನು ಹೊಂದಿಸಿಕೊಳ್ಳುವುದೂ ಬಹಳ ಕಷ್ಟ. ಉದಾಹರಣೆಗೆ ಹೇಳುವುದಾದರೆ, ಬಾಲಮುರಳಿಕೃಷ್ಣ ಅವರು ಹಲವು ಚಿತ್ರಗೀತೆಗಳನ್ನು ಹಾಡಿರುವುದಾದರೂ, ಅವರ ಶೈಲಿ ಕೆಲವೇ ಬಗೆಯ ಹಾಡುಗಳಿಗೆ, ಸನ್ನಿವೇಶಗಳಿಗೆ ಹೊಂದಬಲ್ಲುದು. ಅದೇರೀತಿ, ಚಿತ್ರಗಳಲ್ಲಿ ಹಾಡಿ ಪರಿಶ್ರಮವಿರುವವರಿಗೆ, ಶಾಸ್ತ್ರೀಯಗಾಯನವೂ ಕಷ್ಟವೇ. ಎಸ್.ಪಿ.ಬಾಲಸುಬ್ರಮಣ್ಯಮ್, ಎಸ್.ಜಾನಕಿ ಮೊದಲಾದವರು ಎಷ್ಟೇ ಒಳ್ಳೆಯ ಗಾಯಕರಾದರೂ, ಪಕ್ಕಾ ಶಾಸ್ತ್ರ್ರೀಯ ಸಂಗೀತಕ್ಕೆ ಅವರ ಕಂಠಸಿರಿ ಅಷ್ಟಾಗಿ ಒಪ್ಪದು. ಈ ದಿಸೆಯಲ್ಲಿ ಡಾ ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಗಾಯಕ ಎಂದರೆ ಅದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಶಾಸ್ತ್ರ್ರೀಯ, ಅರೆ-ಶಾಸ್ತ್ರ್ರೀಯ, ಮತ್ತೆ ಪಕ್ಕಾ ಫಿಲ್ಮೀ ಗೀತೆಗಳನ್ನು - ಹೀಗೆ ಎಲ್ಲ ಬಗೆಯ ಹಾಡುಗಳನ್ನು ಹಾಡುವುದರಲ್ಲಿ, ಅವರಷ್ಟು ಎತ್ತಿದ ಕೈ ಯಾರೂ ಇಲ್ಲ ಎಂದು ನನ್ನ ಭಾವನೆ. ಹಾಗಾಗಿ, ಅವರು ಹಾಡಿರುವ ಕೆಲವು ಶಾಸ್ತ್ರೀಯ ಗೀತೆಗಳನ್ನು ನೆನೆಸಿಕೊಳ್ಳೋಣ ಎನ್ನಿಸಿತು. ಅದೇಕೋ, ಮ್ಯೂಸಿಕ್ ಇಂಡಿಯಾ ತಾಣ ನನಗೆ ಕೆಲಸ ಮಾಡುತ್ತಿಲ್ಲ. ಆದರೆ, ನಾನೀಗ ಹೇಳುತ್ತಿರುವುದೆಲ್ಲ ಬಹಳ ಪ್ರಸಿದ್ಧ ಗೀತೆಗಳೇ,ಎಲ್ಲರಿಗೂ ತಿಳಿದುರುವಂತಹವೇ. ನಾನು, ಅಲ್ಲಲ್ಲಿ ಅದು ಯಾವ ರಾಗ ಎಂದು ಹೇಳುತ್ತೇನೆ ಅಷ್ಟೇ. ಈದನ್ನು ಓದುತ್ತ, ಆ ಗೀತೆಗಳನ್ನು ಮೆಲುಕಿ ಹಾಕಿದರೆ, ಬಹಳ ಚೆನ್ನು! Read more about ಚಿತ್ರಗೀತೆಗಳಲ್ಲಿ ಶಾಸ್ತ್ರೀಯ ಸಂಗೀತ - ಡಾ.ರಾಜ್ ವಿಶೇಷ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭೀಮಸೇನ ಜೋಷಿ: ನೆನಪಾದದ್ದು

July 22, 2007 - 7:27am
keshav
ಲಂಡನ್ನಿನ ರಸ್ತೆಯಲ್ಲಿ ಕಾರ್ ಓಡಿಸುವಾಗ ತುಂಬಾ ದಿನಗಳಾದ ಮೇಲೆ ಭೀಮಸೇನ್ ಜೋಷಿಯನ್ನು ಕೇಳುತ್ತಿದ್ದೆ, ಭೀಮ್ ಪಲಾಸ್ ರಾಗದಲ್ಲಿ 'ಬೇಗುನ ಗುನ ಗಾಯೀಯೆ’ ಹಾಡುತ್ತಿದ್ದರೆ, ಮತ್ತೆ ಹುಬ್ಬಳ್ಳಿಯ ದಿನಗಳು ನೆನಪಾಗುತ್ತಿದ್ದವು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಿ ಅಶ್ವಥ್, ಸುಗಮ ಸಂಗೀತ ಮತ್ತು ಕನ್ನಡ ಸಾಹಿತ್ಯ

July 26, 2007 - 2:44am
keshav
ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ. ಸರಿ ಸುಮಾರು ಅದೇ ಕಾಲದಲ್ಲಿ, ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು

August 8, 2007 - 11:02pm
hamsanandi
 ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು
ವೆಂಕಟಮಖಿ ಗೋವಿಂದದೀಕ್ಷಿತನ ಮತ್ತು ನಾಗಮ್ಮ ಇವರ ಮಗ. ಇವನಿಗೆ ವೆಂಕಟಾಧ್ವರಿ, ವೆಂಕಟೇಶ್ವರ ದೀಕ್ಷಿತ ಎಂಬ ಹೆಸರೂ ಇತ್ತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೋಗಿಲೆ ಹಾಡಿದೆ ಕೇಳಿದೆಯಾ?

August 23, 2007 - 3:03am
hamsanandi

ಇತ್ತೀಚೆಗೆ ಎಸ್.ಜಾನಕಿಯವರು ಚಿತ್ರ ರಂಗದಲ್ಲಿ ಹಿನ್ನಲೆಗಾಯಕಿಯಾಗಿ ಐವತ್ತು ವರ್ಷಗಳನ್ನು ಪೂರೈಸಿರುವ ಬಗ್ಗೆ ಹಲವೆಡೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಯಾವುದೇ ಕಾರ್ಯಕ್ಷೇತ್ರದಲ್ಲಿ ಆದರೂ ಇದು ಮಹತ್ಸಾಧನೆಯೇ. ಸುಮಾರು ಇಪ್ಪತ್ತೈದು ವರ್ಷ ಇವರು ಕನ್ನಡ ಚಿತ್ರರಂಗದಲ್ಲಿ ಮೊದಲ ಸ್ಥಾನದಲ್ಲಿ ಮಿಂಚಿದ್ದನ್ನು ಯಾವ ಚಿತ್ರ ಪ್ರೇಮಿಗಳೂ ಮರೆಯಲಾರರು.

ಯಾವುದೇ ಹಾಡುಗಾರನಿಗೆ, ಇನ್ನೊಬ್ಬ ಹಾಡುಗಾರ/ಹಾಡುಗಾರ್ತಿಯ ಮೆಚ್ಚುಗೆಯಿಂದ ಸಿಗುವಷ್ಟು ಸಂತೋಷ ಇನ್ನು ಯಾವುದರಿಂದಲೂ ಸಿಗಲಾರದು ಎನ್ನುವುದು ನನ್ನ ಅನಿಸಿಕೆ. ಕೆಲವು ದಿನಗಳ ಹಿಂದೆ, ಪಿ.ಬಿ.ಶ್ರೀನಿವಾಸ್ ಅವರು ನಮ್ಮಲ್ಲಿ ಕಾರ್ಯಕ್ರಮವೊಂದನ್ನು ಕೊಟ್ಟಾಗ, ಅವರು ನುಡಿದ ಮಾತುಗಳನ್ನು ನೆನಸಿಕೊಂಡರೆ, ಎಸ್.ಜಾನಕಿ ಅವರು ಬಹಳ ಸಂತೋಷ ಪಡಲೇ ಬೇಕು. ತಮ್ಮ ಜೊತೆಯಲ್ಲಿ ಹಾಡಿದ ಎಲ್ಲ ಗಾಯಕಿಯರೂ ಉತ್ಕೃಷ್ಟ ಮಟ್ಟದವರು, ಅವರಲ್ಲಿ ಒಬ್ಬರಿಗೊಬ್ಬರನ್ನು ಹೋಲಿಸಲು ಸಾಧ್ಯವಾಗದು ಎಂದು ಅವರು ಹೇಳಿದರೂ, ಜಾನಕಿಯವರ ಜೊತೆ ಅವರು ಹಾಡಿದ ಹಾಡುಗಳನ್ನು, ಅವರ ಜೊತೆ ನಡೆಸಿದ ರಿಹರ್ಸಲ್ ಗಳನ್ನೂ, ಹೇಗೆ ಅವರು ಒಂದು ಹಾಡು ಪೂರ್ತಿ ಮನಸ್ಸಿಗೆ ಬೇಕಾಗುವಂತೆ ಬರುವವರೆಗೂ ಬಿಡದೆ ಹಾಡಿ, ನಂತರವೇ ರೆಕಾರ್ಡ್ ಮಾಡಲು ಮುಂದಾಗುತ್ತಿದ್ದುದ್ದನ್ನೂ ಪಿಬಿ ಅವರು ಹೆಚ್ಚಾಗಿ ನೆನೆದರು. Read more about ಕೋಗಿಲೆ ಹಾಡಿದೆ ಕೇಳಿದೆಯಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ವಾತಾಪಿ ಗಣಪತಿಂ ಭಜೇಹಂ

September 15, 2007 - 4:32am
hamsanandi

ಈ ಶನಿವಾರ ಭಾದ್ರಪದ ಶುಕ್ಲ ಚೌತಿ. ಗಣೇಶನನ್ನು ತೊಡಕುಗಳನ್ನು ಕಳೆಯುವವನೆಂದು ನಾವೆಲ್ಲ ಪೂಜಿಸುತ್ತೇವೆ. ನಮ್ಮ ಹಿಂದಿನ ಹರಿದಾಸರು, ಮತ್ತೆ ಹಲವು ಕವಿಗಳನ್ನು ಬಗೆಬಗೆಯಾಗಿ ಹೊಗಳಿರುವವರೇ. ಕನಕದಾಸರ ಹಾಡೊಂದು, ಎಲ್ಲರ ಮನದಲ್ಲಿ ನೆಲೆಯಾಗಿ ನಿಲ್ಲುವಂತೆ ವಿದ್ಯಾಭೂಷಣರು ಹಾಡಿರುವುದು ನಮಗೆಲ್ಲ ತಿಳಿದಿರುವುದೇ - ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ ಅನ್ನುವ ಈ ಹಾಡು ಹಂಸಧ್ವನಿ ರಾಗದಲ್ಲಿದೆ. ಅದೇ ಹಂಸದ್ವನಿ ರಾಗದಲ್ಲಿ ಮತ್ತೊಂದು ಪ್ರಖ್ಯಾತ ರಚನೆ ಇದೆ - ಅದು ಮುತ್ತುಸ್ವಾಮಿ ದೀಕ್ಷಿತರ ವಾತಾಪಿಗಣಪತಿಂ ಭಜೇಹಂ ಅನ್ನುವ ಕೃತಿ. ಸುಮಾರು ಒಂದು ನಾಲ್ಕಾರು ಸಂಗೀತ ಕಚೇರಿಗಳಿಗಾದರೂ ನೀವು ಹೋಗಿದ್ದರೆ, ನಿಮಗೆ ಈ ರಚನೆ ತಿಳಿದೇ ಇರಬೇಕು ಎನ್ನುವಷ್ಟು ಪ್ರಖ್ಯಾತವಾದ ರಚನೆ ಇದು.

ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು. ಇವರು ಸುಮಾರು ನಾನೂರು ರಚನೆಗಳನ್ನು ರಚಿಸಿದ್ದಾರೆ. ಅದರಲ್ಲಿ ೩-೪ ಮಾತ್ರ ತೆಲುಗು/ಮಣಿಪ್ರವಾಳದಲ್ಲಿದ್ದು ಉಳಿದದ್ದೆಲ್ಲ ಸಂಸ್ಕೃತದಲ್ಲಿವೆ. ಬಹಳ ಸರಳವಲ್ಲದಿದ್ದರೂ, ಇವರ ರಚನೆಗಳು ಸಂಗೀತರಸದಿಂದ ತುಂಬಿವೆ. ತಂಜಾವೂರಿನ ಬಳಿಯ ತಿರುವಾರೂರಿನಲ್ಲಿ ಜನಿಸಿದ ಇವರು ದೇಶದ ಹಲವೆಡೆಗಳಿಗೆ ಯಾತ್ರಿಕರಾಗಿ ಹೋಗಿ, ಅಲ್ಲಿನ ದೇವಾಲಯಗಳ ದೇವಾನುದೇವತೆಗಳ ಬಗ್ಗೆ ತಮ್ಮ ಕೃತಿಗಳನ್ನು ರಚಿಸಿದ್ದಾರೆ.

ಮುತ್ತುಸ್ವಾಮಿ ದೀಕ್ಷಿತರು (ಕ್ರಿ.ಶ.೧೭೭೬- ೧೮೩೫) Read more about ವಾತಾಪಿ ಗಣಪತಿಂ ಭಜೇಹಂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ನವರಾತ್ರಿಯ ಮೊದಲ ದಿನ

October 13, 2007 - 12:15am
hamsanandi

ಇಂದು ನವರಾತ್ರಿಯ ಮೊದಲ ದಿನ. ದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಕಾರಣಗಳಿಗಿಂತ, ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನನಗೆ ಮೆಚ್ಚುಗೆಯಾಗುವ ಹಬ್ಬ.

ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. ಅಲ್ಲಿಯ ಪದ್ಮನಾಭದೇವಸ್ಥಾನದ ಪಕ್ಕದ ನವರಾತ್ರಿ ಮಂಡಪಂ ನಲ್ಲಿ, ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗೀತೋತ್ಸವದ ಆಚರಣೆ ಇದೆ. ಮಹಾರಾಜ ಸ್ವಾತಿ ತಿರುನಾಳ್ ( ಕ್ರಿ.ಶ. ರಿಂದ ಕ್ರಿ.ಶ. ) ಕರ್ನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಅವರು ನವರಾತ್ರಿಯ ಸಂದರ್ಭದಲ್ಲೇ ಹಾಡಬೇಕೆಂದು ರಚಿಸಿರುವ ಒಂಬತ್ತು ದೇವೀ ಪರವಾದ ಕೃತಿಗಳನ್ನು, ಈ ಸಂಗೀತೋತ್ಸವದಲ್ಲಿ ಪ್ರತಿ ದಿನ ತಲಾ ಒಂದು ಕೃತಿಯನ್ನು ವಿಸ್ತರಿಸಿ ಹಾಡಲಾಗುತ್ತೆ. ಈ ರಚನೆಗಳಿಗೆ ನವರಾತ್ರಿ ಕೃತಿಗಳೆಂದೇ ಕರೆಯಲಾಗುತ್ತೆ. ದಸರೆಯ ಮೊದಲ ದಿವಸ ಸಂಜೆ ಹಾಡುವ ಕೃತಿ ಶಂಕರಾಭರಣ ರಾಗದ ದೇವಿ ಜಗಜ್ಜನನಿ ಎಂಬುದು.

ಈ ಸಂದರ್ಭದಲ್ಲೇ, ನನಗೆ ಇಷ್ಟವಾದ ಕೆಲವು ರಚನೆಗಳನ್ನೂ ಸಂಗೀತಾಸಕ್ತರೊಂದಿಗೆ ಹಂಚಿಕೊಳ್ಳೋಣವೆನಿಸಿತು. ಪ್ರತಿ ದಿನ ಒಂದು ಕೃತಿಯ ಬಗ್ಗೆ ಸ್ಬಲ್ಪ ಮಾಹಿತಿಯನ್ನೂ, ಸಾಧ್ಯವಾದರೆ ಕೇಳಲು ಕೊಂಡಿಗಳನ್ನೂ ಕೊಡುವ ಇರಾದೆ ನನ್ನದು. ನವರಾತ್ರಿ ಆದ್ದರಿಂದ, ದೇವಿಯ ವಿವಿಧ ರೂಪಗಳ ( ಪಾರ್ವತಿ, ಸರಸ್ವತಿ, ದುರ್ಗೆ, ಇತ್ಯಾದಿ) ಬಗ್ಗೆ ಇರುವ ಕೃತಿಗಳಿವು ಅನ್ನುವುದನ್ನು ಬಿಟ್ಟರೆ, ಯಾವುದೇ ಕ್ರಮವನ್ನು ನಾನು ಅನುಸರಿಸುತ್ತಿಲ್ಲ. Read more about ನವರಾತ್ರಿಯ ಮೊದಲ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ನವರಾತ್ರಿಯ ಎರಡನೇ ದಿನ

October 14, 2007 - 6:36am
hamsanandi

ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.

ಮೈಸೂರರಸರು ದಸರೆಯ ಆಚರಣೆಯೊಂದರಲ್ಲೇ ಅಲ್ಲ - ಅವರು ವಿವಿಧ ಕಲಾಪ್ರಕಾರಗಳಿಗೆ ಕೊಡುತ್ತಿದ್ದ ಪ್ರೋತ್ಸಾಹದಲ್ಲೂ ಆ ಕಾಲದ ರಾಜ್ಯಗಳ ಮುಂಚೂಣಿಯಲ್ಲಿದ್ದರು. ೧೮-೧೯ ನೇ ಶತಮಾನಗಳಲ್ಲಿ ಮೈಸೂರು ವೀಣೆಯ ಬೆಡಗೆಂದಾಗುವುದಕ್ಕೂ ಇದೇ ಕಾರಣ. ಹಲವಾರು ವಿದ್ವಾಂಸರು ಹಾಗೇ ಮೈಸೂರರಸರ ಆಶ್ರಯ ಅರಸಿ ಬಂದದ್ದೂ ಉಂಟು. ಹಾಗೆ ಬಂದವರಲ್ಲಿ, ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಪ್ರಮುಖರು.
ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿ ಇವರು ಬಂದದ್ದರ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯೊಂದಿದೆ. ಅದೇನೋ, ಮುತ್ತಯ್ಯ ಭಾಗವತರಿಗೆ ಮಹಾರಾಜರ ಮುಂದೆ ಕಚೇರಿ ಕೊಡುವ ಅವಕಾಶ ಸಿಕ್ಕ ದಿನ ಅವರ ಗಂಟಲಿಗೆ ಏನೋ ತೊಂದರೆಯಾಗಿ, ಕಾರ್ಯಕ್ರಮ ಹೆಚ್ಚು ಕಳೆಕಟ್ಟಲಿಲ್ಲ. ಸಾಧಾರಣವಾಗಿ, ಅರಮನೆಯಲ್ಲಿ ಹಾಡುವ ವಿದ್ವಾಂಸರಿಗೆ, ಅವರಿಗೆ ತಕ್ಕ ಮರ್ಯಾದೆ ಕೊಡಲಾಗುತ್ತಿತ್ತು. ಆ ರೀತಿ ಅವರಿಗೂ ಮರ್ಯಾದೆ ಮಾಡಿ ಕಳಿಸಲಾಯಿತಂತೆ. ಭಾಗವತರಿಗೆ ಸ್ವಲ್ಪ ನಿರಾಸೆಯೇ ಆಯಿತು. ನಂತರ ಕೆಲವು ದಿನಗಳ ನಂತರ, ಅವರು ಚಾಮುಂಡಿ ಬೆಟ್ಟದ ಮೇಲೆ, ದೇವಾಲಯದಲ್ಲಿ ತಮ್ಮ ಪಾಡಿಗೆ ಹಾಡಿಕೊಳ್ಳುತ್ತಿದ್ದಾಗ ಆ ದಿನ ದೇವಿಯ ದರ್ಶನಕ್ಕೆ ಬಂದ ಒಡೆಯರಿಗೆ ಅದು ಕೇಳಿ, ಅವರ ಮೇಲೆ ಬಂದಿದ್ದ ಅಭಿಪ್ರಾಯ ಬದಲಾಯಿತಂತೆ. ನಂತರ ಅವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಂಡರಂತೆ. ಇದು ನಡೆದದ್ದು ೧೯೨೭ರಲ್ಲಿ.

ರಾಜರು ತಮ್ಮ ಇಷ್ಟದೇವಿ ಮೈಸೂರಿನ ನಗರ ದೇವತೆ, ಚಾಮುಂಡಿಯ ಮೇಲೆ ೧೦೮ ಕೃತಿಗಳನ್ನು ರಚಿಸಲು ಕೇಳಿದರಂತೆ, ಅಂತೆಯೇ ಮುತ್ತಯ್ಯ ಭಾಗವತರು ೧೦೮ ಕೃತಿಗಳನ್ನು ರಚಿಸಿದರು - ಕನ್ನಡದಲ್ಲಿರುವ ಈ ಕೃತಿಗಳ ಸಾಹಿತ್ಯವನ್ನು ದೇವೋತ್ತಮ ಜೋಯಿಸರೆಂಬುವರು ಬರೆದುಕೊಟ್ಟರಂತೆ. Read more about ನವರಾತ್ರಿಯ ಎರಡನೇ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಮೂರನೆಯ ದಿನ

October 14, 2007 - 11:54pm
hamsanandi

ಇವತ್ತು ನವರಾತ್ರಿಯ ಮೂರನೆಯ ದಿನ. ಮೈಸೂರು ಮತ್ತು ತಂಜಾವೂರು ಎರಡೂ ೧೮-೧೯ ನೆ ಶತಮಾನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಾಂಸ್ಕೃತಿಕ ನೆಲೆಗಳಾಗಿ ರೂಪುಗೊಂಡವು. ಹಾಗಾಗಿಯೇ ಇಂದಿಗೂ ನಾವು ವೀಣೆ, ಚಿತ್ರಕಲೆ ಮತ್ತು ಭರತನಾಟ್ಯ ಇವೆರಡರಲ್ಲೂ, ಮೈಸೂರು ಶೈಲಿ ಮತ್ತು ತಂಜಾವೂರು ಶೈಲಿ ಎಂದು ಎರಡು ಪ್ರಮುಖ ಶೈಲೆಗಳನ್ನು ನೋಡಬಹುದು. Read more about ನವರಾತ್ರಿಯ ಮೂರನೆಯ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನವರಾತ್ರಿಯ ನಾಲ್ಕನೇ ದಿನ

October 16, 2007 - 2:05am
hamsanandi

ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ.

ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದಲ್ಲ್ರಿರುವ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ಹಾಗಾಗಿ, ನೆನ್ನೆ ಇಲ್ಲಿ ನಡೆದ ಸಂಗೀತ ಕಚೇರಿಗೆ ಹೋಗುವ ಅವಕಾಶ ಸಿಕ್ಕಿತು ನನಗೆ- ಹಾಗಾಗಿ ನನ್ನ ಬರೀ ಮಾತುಗಳಲ್ಲೂ ಸ್ವಲ್ಪ ಅರ್ಥ ಕೂಡಿದಂತಾಯಿತು ನನಗೆ. ನನ್ನ ಬಾಲ್ಯದಲ್ಲಿ, ನನ್ನ ಊರಿನಲ್ಲಿ ನಡೆಯುತ್ತಿದ್ದ ನವರಾತ್ರಿ-ಗಣೇಶೋತ್ಸವದ ನೆನಪು ಮರುಕಳಿಸಿತು.

ಇವತ್ತು ನಾನು ವಿವರಿಸಹೊರಡಲಿರುವ ದೇವೀ ಪರವಾದ ಕೃತಿ ೨೦ನೇ ಶತಮಾನದಲ್ಲಿ ಬಂದ ಒಬ್ಬ ಮಹಾನ್ ಕಲಾವಿದರ ರಚನೆ. ಇವರು ಸಂಗೀತಗಾರರಷ್ಟೇ ಅಲ್ಲದೆ, ತಮಿಳು ಸಿನಿಮಾ ರಂಗದಲ್ಲೂ ಹೆಸರು ಮಾಡಿದ್ದವರು. ಇವರೇ ಜಿ.ಎನ್.ಬಿ. ಎಂಬ ಹೆಸರಿನಲ್ಲೇ ಚಿರಪರಿಚಿತರಾದ ಜಿ.ಎನ್.ಬಾಲಸುಬ್ರಮಣಿಯನ್.

ಜಿ.ಎನ್.ಬಿ. (೧೯೧೦- ೧೯೬೫) ಸಂಗೀತ ರಂಗಕ್ಕೆ ಪರಿಚಿತರಾಗಿದ್ದು ಒಂದು ವಿಶಿಷ್ಟ ಸಂದರ್ಭದಲ್ಲಂತೆ. ಒಮ್ಮೆ, ಯಾರೋ ವಿದ್ವಾಸರು ಒಂದು ಕಚೇರಿಗೆ ಬರಲಾಗಲಿಲ್ಲ. ಆಗ, ಆ ಸಮಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಜಿ.ಎನ್.ಬಿ. ಅವರನ್ನು, ಅವರ ಸ್ಥಾನ ತುಂಬಲು ಕಳಿಸಲಾಯಿತಂತೆ. ಅಂದು ತಮ್ಮ ಶೈಲಿಯಿಂದ ಇವರು ಎಲ್ಲ ರಸಿಕರ ಮನಗೆದ್ದುಬಿಟ್ಟ ಜಿ.ಎನ್.ಬಿ. ಮತ್ತೆ ಹಿಂತಿರುಗಿ ನೋಡಲಿಲ್ಲ.

ಕೇವಲ ಐವತ್ತೈದು ವರ್ಷದ ಕಿರಿಯ ವಯಸ್ಸಿನಲ್ಲೇ ರಸಿಕರು ಇವರನ್ನು ಕಳೆದುಕೊಳ್ಳಬೇಕಾಯಿತು. ಆದರೆ, ಇವರ ಹಲವಾರು ಶಿಷ್ಯರು ಇವರ ಪರಂಪರೆಯನ್ನು ಮುಂದುವರೆಸಿಕೊಂಡುಹೋಗಿದ್ದಾರೆ. ಪ್ರಸಿದ್ಧ ಸಂಗೀತಗಾರರಾದ ಎಮ್.ಎಲ್.ವಸಂತಕುಮಾರಿ, ತ್ರಿಶೂರು ರಾಮಚಂದ್ರನ್, ರಾಧಾ-ಜಯಲಕ್ಷ್ಮಿ ಇವರೆಲ್ಲ ಜಿ.ಎನ್.ಬಿ. ಪರಂಪರೆಯವರೇ.

ಜಿ.ಎನ್.ಬಿ. ಅವರು ಸುಮಾರು ಐವತ್ತಕ್ಕೂ ಹೆಚ್ಚು ರಚನೆಗಳನ್ನು ಸಂಸ್ಕೃತ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಚಿಸಿದ್ದಾರೆ. ಹಿಂದೆ ಕೇಳಿಲ್ಲದ ಹೊಸ ರಾಗಗಳನ್ನು ಸೃಷ್ಟಿಸಿ, ಅದರಲ್ಲಿ ಕೃತಿಗಳನ್ನು ಮಾಡಿದ್ದಾರೆ. ಆದರೆ, ಇವರು ತಮ್ಮ ಕಚೇರಿಗಳಲ್ಲಿ ತಮ್ಮ ಕೃತಿಗಳನ್ನು ಹೆಚ್ಚಾಗಿ ಹಾಡುತ್ತಿರಲಿಲ್ಲ ಎಂದು ಕೇಳಿದ್ದೇನೆ. Read more about ನವರಾತ್ರಿಯ ನಾಲ್ಕನೇ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಐದನೆಯ ದಿನ

October 17, 2007 - 2:41am
hamsanandi

ಇವತ್ತು ನವರಾತ್ರಿಯ ಐದನೆಯ ದಿನ. ಇಂದು ಸಂಜೆ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಪಕ್ಕದಲ್ಲಿರುವ ನವರಾತ್ರಿ ಮಂಡಪದಲ್ಲಿ ಪ್ರಮುಖವಾಗಿ ವಿಸ್ತರಿಸುವುದು ಭೈರವಿ ರಾಗ. ಮತ್ತೆ ಅದರಲ್ಲಿ, ಸ್ವಾತಿ ತಿರುನಾಳ್ ಮಹಾರಾಜರ ಜನನೀ ಮಾಮವ ಮೇಯೆ ಎಂಬ ಕೃತಿಯನ್ನು ಹಾಡಲಾಗುತ್ತೆ. ಈ ರಚನೆಯನ್ನು ನೀವು ಮ್ಯೂಸಿಕ್ ಇಂಡಿಯಾ ತಾಣದಲ್ಲಿ, ಬಾಂಬೇ ಸಹೋದರಿಯರ ಧ್ವನಿಯಲ್ಲಿ, ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.

ಭೈರವಿ ರಾಗ ಕರ್ನಾಟಕ ಸಂಗೀತಕ್ಕೆ ಸೀಮಿತವಾದ ರಾಗ - ಇದಕ್ಕೆ ಹತ್ತಿರವಾದ ರಾಗ, ಹಿಂದೂಸ್ಗಾನಿ ಸಂಗೀತದಲ್ಲಾಗಲಿ, ಅಥವಾ ಪ್ರಪಂಚದ ಬೇರೆ ಯಾವುದೇ ಸಂಗೀತದಲ್ಲೂ ಇದನ್ನು ಹೋಲುವ ರಾಗವಿಲ್ಲ. ನೀವು ತರಾಸು ಅವರ ಹಂಸಗೀತೆಯನ್ನು ಓದಿದ್ದರೆ, ಅದರ ಮೇಲೆ ಆಧಾರಿತವಾದ ಚಲನಚಿತ್ರವನ್ನು ನೋಡಿದ್ದರೆ, ಅದರಲ್ಲಿ ಬರುವ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿಮಗೆ ತಿಳಿದೇ ಇರುತ್ತೆ. ಇಲ್ಲಿ ಒಂದು ವಿಷಯವನ್ನು ಹೇಳಿಬಿಡುತ್ತೇನೆ. ಈ ಭೈರವಿ ವೆಂಕಟಸುಬ್ಬಯ್ಯ ತರಾಸು ಅವರ್ ಕಲ್ಪನೆಯ ಪಾತ್ರವೇ ಹೊರತು ಚಾರಿತ್ರಿಕ ವ್ಯಕ್ತಿಯಲ್ಲ. Read more about ನವರಾತ್ರಿಯ ಐದನೆಯ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಆರನೇ ದಿನ

October 18, 2007 - 3:07am
hamsanandi

ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು

ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ

ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ

ಏಳನೆಯ ದಿನ ಬರುತ್ತದೆ.

Read more about ನವರಾತ್ರಿಯ ಆರನೇ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಏಳನೇ ದಿನ

October 18, 2007 - 10:48pm
hamsanandi

ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುಪಾಲು ಭೂಮಿಗೆ ನೀರುಣಿಸುತ್ತವೆ. ಇಂತಹ ಮಹಾತಾಯಿ ಕಾವೇರಿಗೆ ಇಂದು ಮೊದಲು ನಮಿಸೋಣ.

ಇವತ್ತು ಈ ಮೊದಲ ಆರು ದಿನಕ್ಕಿಂತ ಸ್ವಲ್ಪ ಬೇರೆ. ಬೇರೆ ಸಂಗೀತಗಾರರು ಹಾಡಿದ, ದೇವಿಯ ಬಗ್ಗೆಯ ರಚನೆಯ ಕೊಂಡಿಗಳನ್ನು ಕೊಡುವ ಬದಲು ಇವತ್ತು ಒಂದು ಬದಲಾವಣೆ ಮಾಡಿದ್ದೇನೆ. ಕನ್ನಡದ ಮೂರು ಕವಿಗಳು ಸರಸ್ವತಿಯ ಬಗ್ಗೆ ಮಾಡಿರುವ ಸ್ತುತಿಯನ್ನು, ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ ಕೇಳಿಸುವೆ. ಇದಕ್ಕೆ ಕಾರಣ, ಕನ್ನಡಕ್ಕೂ-ಕಾವೇರಿಗೂ ಇರುವ ಬಿಡಿಸದ ನಂಟು. ಹಾಗಾಗಿ, ಕಾವೇರಿ ಸಂಕ್ರಮಣದ ದಿನ ಒಂದಲ್ಲ, ಮೂರು ಕನ್ನಡ ರಚನೆಗಳು ಇವತ್ತು ಇಲ್ಲಿ ಕೇಳಿ ಬರುತ್ತಿವೆ. ಇವಕ್ಕೆ ಹಿನ್ನಲೆ ವಾದ್ಯಗಳ ಅಲಂಕಾರವಿಲ್ಲ. ಆದರೂ ಪರವಾಗಿಲ್ಲ, ಎನ್ನುವ ಭಾವನೆ ನನ್ನದು.

ಮೊದಲಿಗೆ ಕನ್ನಡದ ಮೊದಲ ಕಾವ್ಯ ಕವಿರಾಜ ಮಾರ್ಗದಿಂದ ಆಯ್ದ ಸರಸ್ವತೀ ಸ್ತುತಿಯಾದ ಒಂದು ಕಂದಪದ್ಯ:

ಶ್ರೀ ವಿಶದವರ್ಣೆ ಮಧುರಾ

ರಾವೋಚಿತೆ ಚತುರ ರುಚಿರ ಪದರಚನೆ ಚಿರಂ

ದೇವಿ ಸರಸ್ವತಿ ಹಂಸೀ

ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್ Read more about ನವರಾತ್ರಿಯ ಏಳನೇ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಎಂಟನೇ ದಿನ

October 19, 2007 - 10:04pm
hamsanandi

ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ. Read more about ನವರಾತ್ರಿಯ ಎಂಟನೇ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಒಂಬತ್ತನೆಯ ದಿನ

October 20, 2007 - 5:46am
hamsanandi

ಇವತ್ತು ನವರಾತ್ರಿಯ ಒಂಬತ್ತನೆಯ ದಿವಸ. ಮಹಾನವಮಿ. ಆಯುಧಪೂಜೆ. ಎಷ್ಟೋ ಕನ್ನಡಿಗರಿಗೆ ಸರಸ್ವತೀ ಪೂಜೆಯೂ ಇಂದೇ. ಇವತ್ತು ಕರ್ನಾಟಕದ ಒಬ್ಬ ವಾಗ್ಗೇಯಕಾರರ ರಚನೆ ನೋಡೋಣ. Read more about ನವರಾತ್ರಿಯ ಒಂಬತ್ತನೆಯ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಹತ್ತನೇ ದಿನ

October 21, 2007 - 3:05am
hamsanandi

ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ. Read more about ನವರಾತ್ರಿಯ ಹತ್ತನೇ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಸವಾಯಿ ಗಂಧರ್ವ ಸಂಗೀತ ಮಹೋತ್ಸವ

November 22, 2007 - 1:59pm
sankul

ಈ ವರ್ಷದ ಸವಾಯಿ ಗಂಧರ್ವ ಸಂಗೀತ ಮಹೋತ್ಸವ ಡಿಸೆಂಬರ್ ೬ ರಿಂದ ೯ ನೆಯ ತಾರಿಖಿನವರೆಗೆ ಪುಣೆಯಲ್ಲಿ ನಡೆಯಲಿದೆ. ಇದು ಈ ಸಂಗೀತ ಮಹೋತ್ಸವದ ೫೫ನೇಯ ವರ್ಷ. ಪಂಡಿತ ಭೀಮಸೇನ ಜೋಶಿಯವರು ತಮ್ಮ ಗುರುಗಳಾದ ಸವಾಯಿ ಗಂಧರ್ವರ ಸ್ಮರಣೆಯಲ್ಲಿ ಈ ಸಂಗೀತ ಮಹೋತ್ಸವವನ್ನು ಪ್ರಾರಂಭಿಸಿದ್ದರು. Read more about ಸವಾಯಿ ಗಂಧರ್ವ ಸಂಗೀತ ಮಹೋತ್ಸವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.

December 7, 2007 - 12:39am
hamsanandi

ಇದನ್ನು ರವಿಕೆರೆಡ್ಡಿಯವರ ಬ್ಲಾಗ್ ಬರಹಕ್ಕೆ ಟಿಪ್ಪಣಿಯಾಗಿ ಸೇರಿಸಿದ್ದೆ. ಇನ್ನೂ ಹೆಚ್ಚ್ಜಿನ ಕಣ್ಣುಗಳು ಇದರ ಮೇಲೆ ಬೀಳಬಹುದೆಂಬ ಆಶಯದಲ್ಲಿ ಇಲ್ಲಿ ಮತ್ತೆ ಬರೆಯುತ್ತಿದ್ದೇನೆ:


ಸಂಪದಿಗರೆ,  Read more about ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮುಖಸ್ತುತಿ

January 31, 2008 - 1:35pm
hamsanandi
ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ:

ಮೂತಿಗೆ ಗಿಡಿದರೆ ಓಗರವ
ಹಿತದಲೆ ಅಳವಿಗೆ ಸಿಗುವರೆಲ್ಲ!
ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ
ಇನಿದನಿಯಲಿ ಮೃದಂಗ ನುಡಿವುದಲ್ಲ!


(ಅನುವಾದ ನನ್ನದು)
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅರ್ಬನ್ ಲ್ಯಾಡ್ಸ್

February 28, 2008 - 5:51pm
madhava_hs
ಇತ್ತೀಚೆಗೆ ’ಅರ್ಬನ್ ಲ್ಯಾಡ್ಸ್’ ಎಂಬ ರಾಕ್ ಸಂಗೀತದ ಕನ್ನಡ ಹಾಡನ್ನು ಯಾರೋ ಕಳಿಸಿದ್ದರು. ಇದರ ಸಿ.ಡಿ ಯೂ ಇತ್ತೀಚೆಗೆ ಬಿಡುಗಡೆಯಾಯಿತೆಂದು ವಿ.ಕ.ದಲ್ಲಿ ಓದಿದೆ. ಉತ್ತರ ಕರ್ನಾಟಕ/ದ.ಕರ್ನಾಟಕ ಶೈಲಿಯ ಕನ್ನಡಗಳನ್ನು ಬಹಳ ಪ್ರಾಸಬದ್ಧವಾಗಿ ಈ ಹಾಡಿನಲ್ಲಿ ಬಳಸಿದ್ದಾರೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಿಂಧು ಭೈರವಿ

April 23, 2008 - 6:11am
hamsanandi

೧೯೮೫ ರಲ್ಲಿ ಒಂದು ತಮಿಳು ಚಿತ್ರ ತೆರೆಕಂಡಿತ್ತು. ಅದರ ಹೆಸರು ಸಿಂಧು ಭೈರವಿ.

ತಮಿಳು ಅರ್ಥವಾಗುವರ ಸಂಖ್ಯೆ ಬಹಳ ಕಡಿಮೆ ಇದ್ದ ನಮ್ಮೂರಿನಲ್ಲೂ ಈ ಚಿತ್ರ  ಕೆಲವು ವಾರ ಹೌಸ್‍ಫುಲ್ ಪ್ರದರ್ಶನ ಕಂಡಿತ್ತು ಎಂದರೆ ಚಿತ್ರ ಬಹಳ ಯಶಸ್ವಿಯಾಗಿತ್ತೆಂದು ನೀವು  ಊಹಿಸಿರುತ್ತೀರಿ. Read more about ಸಿಂಧು ಭೈರವಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

May 1, 2008 - 11:15pm
hamsanandi

ಕೆಲವು ದಿನಗಳ ಹಿಂದೆ ಸಿಂಧು ಭೈರವಿ ರಾಗದ ಬಗ್ಗೆ ಒಂದು ಅಸಂಬದ್ಧ ಪೀಠಿಕೆ ಬರೆದಿದ್ದೆ. ನಂತರ, ಕೇಳಿಸಬಹುದಾದ ಕೆಲವು ಒಳ್ಳೆ ಉದಾಹರಣೆಗಳಿಗೆ ಹುಡುಕುತ್ತಿದ್ದೆ. ನಾನು ಹುಡುಕುತ್ತಿದ್ದ ಕೆಲವು ಉತ್ತಮ ಗೀತೆಗಳು ಸಿಕ್ಕಲಿಲ್ಲವಾದ್ದರಿಂದ ಏನು ಮಾಡಲೆಂದು ಯೋಚಿಸುತ್ತಿದ್ದಾಗ, ನೋಡಿಸಿ-ಕೇಳಿಸುವ ಇನ್ನೊಂದಷ್ಟು ಹಾಡುಗಳು ದೊರೆತವು. ಸರಿ ಮತ್ತೆ, ತಡವೇಕೆ?

ಸಿಂಧುಭೈರವಿ ಅನ್ನುವುದು ದಕ್ಷಿಣಾದಿ(ಕರ್ನಾಟಕ) ಹಾಗೂ ಉತ್ತರಾದಿ(ಹಿಂದೂಸ್ತಾನಿ)ಸಂಗೀತ ಎರಡರಲ್ಲೂ ಪ್ರಚಾರದಲ್ಲಿರುವ ರಾಗ. ಹಿಂದೂಸ್ತಾನಿ ಪದ್ಧತಿಯಲ್ಲಿ ಇದಕ್ಕೆ ಭೈರವಿ ಎಂದರೆ, ಕರ್ನಾಟಕ ಸಂಗೀತದಲ್ಲಿ ಸಿಂಧೂಭೈರವಿ ಎನ್ನುತ್ತಾರೆ. ಕರ್ನಾಟಕ ಸಂಗೀತಕ್ಕೆ ಇದು ಹಿಂದೂಸ್ತಾನಿಯಿಂದಲೇ ಬಂದಿದೆ ಎನ್ನುವುದನ್ನು ನೀವು ಈ ಬರಹದಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗಳನ್ನು ಕೇಳಿದಾಗ ನಿಮಗೆ ಅರಿವಾಗುತ್ತೆ. ಈ ಬರಹದ ಮಟ್ಟಿಗೆ, ನಾನು ಭೈರವಿ ಎಂದಾಗಲೂ, ಸಿಂಧೂಭೈರವಿ ಎಂದಾಗಲೂ ಒಂದೇ ರಾಗದ ಬಗ್ಗೆಯೇ ಹೇಳುತ್ತಿದ್ದೇನೆ ಎಂದುಕೊಳ್ಳಿ. (ಕರ್ನಾಟಕ ಸಂಗೀತದಲ್ಲಿ ಬೇರೊಂದು ಭೈರವಿ ಇದೆ - ಅದೂ ಒಂದು ಮಹಾನ್ ರಾಗವೇ. ಅದರ ವಿಷಯ ಈಗ ಬೇಡ.)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಟಪಯಾದಿ ಸೂತ್ರ

May 14, 2008 - 8:45am
hamsanandi

ಕೆಲವು ದಿನಗಳ ಹಿಂದೆ ರಮೇಶಬಳಗಂಚಿಯವರು ಒಂದು ಸಬ್ಸ್ಟಿಟ್ಯೂಷನ್ ಸೈಫರ್ ಅಮ್ಮಜಿಖಷೆಸ್ಸ ಖನಮ ಒಜಿ ಎಂಬ ಬರಹವನ್ನು ಬರೆದಿದ್ದರು. ಆಗ, ಕಟಪಯಾದಿ ಸೂತ್ರದ ಬಗ್ಗೆ ಬರೆಯಬಹುದಲ್ಲ ಅನ್ನೋ ಯೋಚನೆ ಬಂತು.

Read more about ಕಟಪಯಾದಿ ಸೂತ್ರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬ್ರೋಚೇವಾರೆವರುರಾ ನಿನುವಿನಾ?

May 28, 2008 - 1:03am
hamsanandi

ಇದೇನಿದು, ಕನ್ನಡ ಬರಹಕ್ಕೆ ತೆಲುಗು ತಲೆಬರಹವೇ ಎಂದಿರಾ? ಕಾರಣವಿದೆ. ಇಂದು ಮೇ ೨೮ -ಮೈಸೂರು ವಾಸುದೇವಾಚಾರ್ಯರು ೧೮೬೫ರಲ್ಲಿ ಇದೇ ದಿನ ಹುಟ್ಟಿದ್ದು. ಮೈಸೂರು ವಾಸುದೇವಾಚಾರ್ಯ ಎಂದ ಕೂಡಲೆ, ನನಗೆ ನೆನಪಿಗೆ ಬರುವ ಕೃತಿ ಖಮಾಚ್ ರಾಗದ ಬ್ರೋಚೇವಾರೆವರುರಾ ಎನ್ನುವ ರಚನೆ. ಕೆ.ವಿಶ್ವನಾಥರ, ಮತ್ತು ಕೆ.ವಿ.ಮಹಾದೇವನ್ ಅಂತಹವರ ದಯದಿಂದ ಸಂಗೀತದ ಪರಿಚಯ ಇಲ್ಲದವರಿಗೂ, ಶಂಕರಾಭರಣಂ ಮೊದಲಾದ ತೆಲುಗು ಸಿನೆಮಾಗಳ ಮೂಲಕ ಶಾಸ್ತ್ರೀಯ ಸಂಗೀತದ ಅಲ್ಪ ಸ್ವಲ್ಪ ಪರಿಚಯವಾದದ್ದು, ಬ್ರೋಚೇವಾರೆವರುರಾ, ಸಾಮಜವರಗಮನ ಮೊದಲಾದ ಕೃತಿಗಳು ಎಲ್ಲರ ಬಾಯಲ್ಲೂ ನಲಿದಾಡಿದ್ದು ೮೦ರ ದಶಕದ ಸಂಗತಿ.

ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಮೊದಲಸಾಲಿನಲ್ಲಿ ನಿಲ್ಲಬಲ್ಲಂತಹವರು. ತ್ಯಾಗರಾಜಾದಿ ಸಂಗೀತ ತ್ರಿಮೂರ್ತಿಗಳ ನಂತರ ಬರಬಲ್ಲ ಹೆಸರುಗಳಲ್ಲಿ ಮೊದಲದ್ದೇ ವಾಸುದೇವಾಚಾರ್ಯರದ್ದು ಎಂದರೂ ತಪ್ಪಿಲ್ಲ. ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬಂದ ವಾಸುದೇವಾಚಾರ್ಯರು, ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರ ಪಟ್ಟ ಶಿಷ್ಯ.

ತ್ಯಾಗರಾಜರ ರೀತಿಯಲ್ಲಿ ರಚನೆ ಮಾಡಿದ ವಾಸುದೇವಾಚಾರ್ಯರು, ತಮ್ಮ ರಚನೆಗಳಿಗೆ ತ್ಯಾಗರಾಜರಂತೆಯೇ ಆಯ್ದದ್ದು ಸಂಸ್ಕೃತ ಹಾಗೂ ತೆಲುಗು ಭಾಷೆಗಳನ್ನು. ಅಲ್ಲದೆ, ಅವರಂತೆಯೇ ವಾಸುದೇವಾಚಾರ್ಯರೂ ಸ್ವನಾಮಮುದ್ರೆಯನ್ನೇ ಉಪಯೋಗಿಸಿದರು. ತ್ಯಾಗರಾಜರ ರಚನೆಗಳಲ್ಲಿ, ತ್ಯಾಗರಾಜ ಎಂಬ ಮುದ್ರೆ ಕಂಡುಬಂದರೆ, ವಾಸುದೇವಾಚಾರ್ಯರು ವಾಸುದೇವ ಅನ್ನುವ ಅಂಕಿತವನ್ನು ಉಪಯೋಗಿಸಿದ್ದಾರೆ. Read more about ಬ್ರೋಚೇವಾರೆವರುರಾ ನಿನುವಿನಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದೇಶ್ ರಾಗ್

August 15, 2008 - 6:42am
hamsanandi

ಅಶೋಕರು ಮಿಲೇ ಸುರ್ ಮೇರಾ ತುಮ್ಹಾರಾ ಕೇಳಿಸುತ್ತಿದ್ದಂತೆ, ದೂರದರ್ಶನದ ಮತ್ತಷ್ಟು ಹಳೆ ನೆನಪುಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೌಮಾರೀ ಗೌರೀ ವೇಳಾವಳಿ

September 2, 2008 - 5:19am
hamsanandi

ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ವರ್ಷಾವಧಿ ಹಬ್ಬಗಳಲ್ಲಿ ಅತಿ ಹೆಚ್ಚಿನ ಹಿರಿಮೆ ಇರುವ ಹಬ್ಬ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ಬಹಳ ಹೆಚ್ಚಾಯದ್ದೇ. ನಮ್ಮ ನೆರೆಯ ನಾಡುಗಳಲ್ಲಿ ಗೌರಿ ಹಬ್ಬಕ್ಕೆ ಅಷ್ಟು ಪ್ರಾಶಸ್ತ್ಯವಿಲ್ಲದ್ದೂ, ನಮ್ಮಲ್ಲಿ ಇರುವುದೂ ಏಕೆ ಎನ್ನುವುದು ನನಗೆ ಗೊತ್ತಿಲ್ಲ.

ನಾನು ಚಿಕ್ಕವನಾಗಿದ್ದಾಗ, ಮಳೆಗಾಲದ, ಅದರಲ್ಲೂ ಸೋನೆಮಳೆಗಾಲದಲ್ಲಿ ಬರುವ ಈ ಹಬ್ಬಗಳ ಮುನ್ನಾದಿನ, ಅಷ್ಟಾಗಿ ದುರಸ್ತಿಯಲ್ಲ ರಸ್ತೆಯ ಆಚೀಚೆ ಕುಳಿತ ವ್ಯಾಪಾರಸ್ಥರ  ನಡುವೆ ಹೋಗಿ ಪೇಟೆ ಬೀದಿಯಲ್ಲಿ ಸುತ್ತಿ ಹೂವು ಹಣ್ಣು ಖರೀದಿಸುವ ಆ ಅನುಭವ ಮಾತ್ರ ಇನ್ನೂ ಮರೆತಿಲ್ಲ.

ಅದೆಲ್ಲಾ ಇರಲಿ; ಸಂಪದಿಗರೆಲ್ಲರಿಗೂ ಹಬ್ಬಗಳು ಚೆನ್ನಾಗಿ ಕಳೆಯಲಿ ಎನ್ನುವ ಹಾರೈಕೆಗಳೊಂದಿಗೆ ಒಂದು ಒಳ್ಳೆ ಹಾಡನ್ನು ಕೇಳಿಸಹುದು ಎನ್ನಿಸಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭಾಮೆಯ ನೋಡಲು ತಾ ಬಂದ

September 12, 2008 - 11:04pm
hamsanandi

ಎಷ್ಟೋ ದಿನಗಳಿಂದ ಯಾವುದಾದರೂ ರಾಗದ ವಿಷಯ ಬರೆಯಬೇಕೆಂದುಕೊಳ್ಳುತ್ತಲೇ ಇದ್ದೆ. ಆದರೆ ಯಾಕೋ ಮುಂದೆ ಹೋಗುತ್ತಲೇ ಹೋಗುತ್ತಿತ್ತು. ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡುತ್ತ ಇದ್ದಕ್ಕಿದ್ದ ಹಾಗೆ ಸ್ಕೂಲ್ ಮಾಸ್ಟರ್ ಚಿತ್ರದ ಭಾಮೆಯ ನೋಡಲು ತಾ ಬಂದ ಅನ್ನುವ ಹಾಡು ನೆನಪಿಗೆ ಬಂತು.

ಈ ಚಿತ್ರವನ್ನು ನಾನು ನೋಡಿರಲಿಲ್ಲ. ಆದರೆ ಬರೀ ಹಾಡುಗಳನ್ನ ಕೇಳಿದ್ದೆ. ಆ ಕಾಲಕ್ಕೆ ತಕ್ಕ ಹಾಗೆ ಒಳ್ಳೇ ಶಾಸ್ತ್ರೀಯ ಧಾಟಿಯ ಹಾಡುಗಳಿವೆ ಅಂತ ಗೊತ್ತಿತ್ತು. ಆದರೆ ಈಗ ಬೇಕಾದ್ದು ತೋರಿಸಲು ಸಪ್ತಾಕ್ಷರೀ ಮಂತ್ರವಿದೆಯಲ್ಲ ;) (youtube), ಅದನ್ನೇ ಜಪಿಸಿಸಿದೆ. ಸಿಕ್ಕೇಬಿಡ್ತು ಬೇಕಾದ್ದ ಹಾಡು. ಮೊದಲಿಗೆ ಹಾಡು ಕೇಳಿ, ಮತ್ತೆ ಈ ಹಾಡನ್ನು ಏಕೆ ತೆಗೆದುಕೊಂಡೆ ಅಂತ ಹೇಳುವೆ.



ಸೂಲಮಂಗಲಂ ರಾಜಲಕ್ಷ್ಮಿ ಅವರು ಹಾಡಿರೋ ಈ ಹಾಡು ಹಿಂದೋಳ ರಾಗದಲ್ಲಿದೆ. ಈ ಹಿಂದೆ ಕಲ್ಯಾಣಿ, ಮೋಹನ, ಸಿಂಧೂಬೈರವಿ ಮೊದಲಾದ ರಾಗಗಳ ಬಗ್ಗೆ ಬರೆದಿದ್ದೆ. ಹೀಗಾಗಿ, ಇನ್ನೊಂದು ಒಳ್ಳೇ ರಾಗದ ಬಗ್ಗೆ ಬರೀಬೇಕು ಅನ್ನಿಸಿದಾಗ ಹಿಂದೋಳ ರಾಗ ಸಹಜವಾದ ಒಂದು ಆಯ್ಕೆ. Read more about ಭಾಮೆಯ ನೋಡಲು ತಾ ಬಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಧರ್ಮವೆ ಜಯವೆಂಬ ದಿವ್ಯ ಮಂತ್ರ

September 24, 2008 - 6:01am
hamsanandi

 

ಧರ್ಮವೆ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು ಮಾಡಲುಬೇಕು ತಂತ್ರ

ವಿಷವಿಕ್ಕಿದವನಿಗೆ ಷಡ್ರಸವನುಣಿಸಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪುಸಿಯಾಡಿ ಕೆಡಿಸುವನ ಹಾಡಿ ಹೊಗಳಲು ಬೇಕು
ಮೋಸ ಮಾಡುವವನ ಹೆಸರ ಮಗನಿಗಿಡಬೇಕು ! 

  Read more about ಧರ್ಮವೆ ಜಯವೆಂಬ ದಿವ್ಯ ಮಂತ್ರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಏನೀ ಮಹಾನಂದವೇ? ಓ ಭಾಮಿನಿ!

September 26, 2008 - 5:24am
hamsanandi

ಕೆಲವು ದಿನಗಳ ಹಿಂದೆ 'ಭಾಮೆಯ ನೋಡಲು ತಾ ಬಂದ' ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಇವತ್ತು ಇನ್ನೊಂದು ಸ್ವಲ್ಪ ಮುಂದುವರೆಸೋಣವೇ?

ಹಿಂದೋಳದಲ್ಲಿ ಬೇಕಾದಷ್ಟು ಚಿತ್ರಗೀತೆಗಳಿವೆ ಅಂತ ಹೇಳಿದ್ದೆ. ಕಳೆದ ಬರಹಗಳಲ್ಲಿ ಇಲ್ಲದೇ ಇರೋ ಕೆಲವು ಒಳ್ಳೇ ಉದಾಹರಣೆಗಳು ಅಂದರೆ, ರಾಜ್‍ಕುಮಾರ್ ಮತ್ತೆ ವಾಣಿ ಜಯರಾಂ ಅವರು ಹಾಡಿರೋ ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ ಅನ್ನೋ ಹಾಡು; ಹಾಗೇನೇ ಮಲಯಮಾರುತ ಚಿತ್ರದಲ್ಲಿ ಏಸುದಾಸ್ ಅವರು ಹಾಡಿರೋ ನಟನವಿಶಾರದ ನಟಶೇಖರ ಅನ್ನೋ ಗೀತೆ; ಮತ್ತೆ ರವಿಚಂದ್ರನ್ ಅವರು ನಟಿಸಿರೋ ಒಂದು ಚಿತ್ರ (ಹೆಸರು ಮರೆತಿದ್ದೇನೆ)ದಲ್ಲಿನ ನೀನು ನೀನೇ ಅಲ್ಲಿ ನಾನು ನಾನೇ ಅನ್ನೋ ಹಾಡು - ಇಂತಹವುಗಳನ್ನ ನೆನೆಯಬಹುದು.

ನಾನು ಮೊದಲೇ ಹೇಳಿದಂತೆ, ಹಿಂದೋಳ ರಾಗದಲ್ಲಿ ಬರುವುದು ಐದು ಸ್ವರಗಳು ಮಾತ್ರ. ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು ಕೈಶಿಕಿ ನಿಷಾದ. ಇದನ್ನು ಕರ್ನಾಟಕ ಸಂಗೀತ ಲಿಪಿಯಲ್ಲಿ ಹೀಗೆ ಸೂಚಿಸುವುದು ರೂಢಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

October 2, 2008 - 10:07pm
hamsanandi

ಲಲಿತಾ! ಆ ಪದವೇ ಒಂದು ಇನಿದಾದ ಹೆಸರು!

ಲಲಿತಾ! ಆ ಹೆಸರೇ ಒಂದು ಸವಿಯಾದ ನೆನಪು!!

..

..

..

..

..

(ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಸಾಲುಗಳಲ್ಲ ಇವು!)

ದೇವಿಯ ಬೇರೆ ಹೆಸರುಗಳಾದ ಪಾರ್ವತಿ,ಶೈಲಜಾ,ಶಂಕರಿ,ಕಾಳಿ, ದುರ್ಗಾ,ಗೌರಿ ಮೀನಾಕ್ಷಿ,ವಿಶಾಲಾಕ್ಷಿ ಇಂತಹವೆಲ್ಲ ಒಂದೋ ದೇವಿಯು ಪರ್ವತರಾಜನ ಮಗಳು, ಶಿವನ ಹೆಂಡತಿ ಎನ್ನುವುದನ್ನೋ, ಅಥವಾ ಅವಳ ಬಣ್ಣವನ್ನೋ, ಕಣ್ಣನ್ನೋ ವರ್ಣಿಸುತ್ತವೆ. ಆದರೆ ಅವಳ ಎಲ್ಲ ಗುಣಗಳನ್ನೂ ಒಟ್ಟುಸೇರಿಸುವಂತಹ ಒಂದು ಹೆಸರಿದ್ದರೆ, ಅದು ಲಲಿತಾ ಎಂಬ ಹೆಸರೇ ಆಗಿರಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

October 3, 2008 - 9:42pm
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

October 7, 2008 - 9:33pm
hamsanandi

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥಾನ ಇಲ್ದಿದ್ರೂ,ಅಲ್ಲಿ ಆ ಮಂಟಪ ಯಾಕೆ ಕಟ್ಟಿದ್ರೋ? ಅಥವಾ ಮನೆ ಮಠ ಇಲ್ಲದೇ ಇರೋವ್ರಿಗೇ ಅಂತಲೇ ಯಾರಾದ್ರೂ ಪುಣ್ಯಾತ್ಮರು ಕಟ್ಟಿಸಿದ್ರೋ ಗೊತ್ತಿಲ್ಲ - ಅಂತೂ ಅಲ್ಲಿ ಪಾಪ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳೋ ಎಷ್ಟೋ ಸಂಸಾರಗಳು ನೆಲೆ ನಿಂತಿದ್ರು.ಅವರಿಗೆ ವರ್ಷಕ್ಕೆ ಮುನ್ನೂರಅರವತ್ತೆರಡು ದಿನ ಆ ಮಂಟಪವೇ ಮನೆ. ಒಂದುವೇಳೆ ಮನೆಯಲ್ಲಿ ಏನೋ ಸಮಾರಂಭವೋ ಏನೋ ಆದಾಗ ಊಟ ತಿಂಡಿ ಮಿಕ್ಕರೆ ಅಲ್ಲಿಗೆ ಹೋಗಿ ಕರೆದು, ಮತ್ತೆ ಮಾಡಿದ ಅಡುಗೆಗೆ ಆಗೋ ದಂಡವನ್ನ ತಪ್ಪಿಸ್ತಿದ್ವಿ. ಒಂದೊಂದ್ಸಲ ಕಲಾಯ ಮಾಡೋ ಮನುಷ್ಯ ಬಂದರೂ ಅಲ್ಲೇ ಮಂಟಪದ ಪಕ್ಕದಲ್ಲೇ ಅವನ ಅಗ್ಗಿಷ್ಟಿಕೆ ಹೂಡ್ಕೋತಿದ್ದ. ಸುತ್ತ ಮುತ್ತಲಿನ ಮನೆಯವರೆಲ್ಲ ಅವರ ಕೊಡವೋ, ಕೊಳದಪ್ಪಲೆಯೋ, ಯಾವುದಕ್ಕಾದ್ರೂ ಕಲಾಯ ಮಾಡಿಸ್ಬೇಕಾಗಿದ್ರೆ ಅಲ್ಲಿಗೇ ತರ್ತಿದ್ರು. ಹಾಗೇನಾದ್ರೂ ಕೊಟ್ಟಾಗ, ನಾನೂ ಕಲಾಯದ ಮನುಷ್ಯ ತವರ ಕಾಸೋದು, ತಿದಿ ಒತ್ತೋದು ಇದೆಲ್ಲ ನೋಡ್ತಾ ಕೂತಿರ್ತಿದ್ದೆ. ಒಂದೊಂದು ಸಲ ಸಂಜೆ ಹೋಗಿ ಆ ಮಂಟಪದ ಹಿಂದಿನ ಬಯಲಲ್ಲಿ ಗೆಳೆಯರ ಜೊತೆ ಆಡ್ತಿದ್ದಿದ್ದೂ ಉಂಟು. Read more about ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹನ್ನೊಂದು ಅಡಿ ಎತ್ತರದ ತಂಬೂರಿ!

October 11, 2008 - 9:13am
hamsanandi

ರಾಡೆಲ್ ಎಲೆಕ್ಟ್ರಾನಿಕ್ಸ್ ದಯದಿಂದ, ಎಲ್ಲ ಸಂಗೀತಗಾರರ ಬಳಿಯಲ್ಲೂ ಎಲೆಕ್ಟ್ರಾನಿಕ್ ತಂಬೂರಿಗಳೇ ರಾರಾಜಿಸುತ್ತಿರುವ  ಈ ಕಾಲದಲ್ಲಿ, ಬೆಂಗಳೂರಿನ ಶಿವ ಮ್ಯೂಸಿಕಲ್ಸ್ ನವರು ೧೧ ಅಡಿ ಎತ್ತರದ, ೧೫೦ ಕೆಜಿ ತೂಕದ ಏಕಾಂಡ ತಂಬೂರಿಯನ್ನು ತಯಾರಿಸಿರುವುದು ಒಂದು ಸೋಜಿಗವೇ!

ಚಿತ್ರ ಹಾಗೂ ಬರಹಕ್ಕೆ ದಟ್ಸ್ ಕನ್ನಡ ದ ಈ ಕೊಂಡಿಯನ್ನು ನೋಡಿ: Read more about ಹನ್ನೊಂದು ಅಡಿ ಎತ್ತರದ ತಂಬೂರಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದೊಡ್ಡವರ ದೊಡ್ಡತನ

October 16, 2008 - 12:39am
hamsanandi

ಮೊನ್ನೆ ಒಂದು ಒಳ್ಳೇ ಅವಕಾಶ ಸಿಕ್ಕಿತು. ಇಲ್ಲಿ ಕಚೇರಿಯೊಂದಕ್ಕೆ ಬಂದಿದ್ದ ಒಬ್ಬ ಸಂಗೀತಗಾರರು ನಮ್ಮ ಗೆಳೆಯರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಆ ನೆವದಲ್ಲಿ ನಾವು ಕೆಲವು ಸಂಗೀತಾಸಕ್ತ ಕುಟುಂಬಗಳು ನಮ್ಮ ಗೆಳೆಯರ ಮನೆಯಲ್ಲಿ ಒಟ್ಟು ಸೇರಿ ಅವರೊಡನೆ ಹರಟೆ ಹೊಡೆಯುತ್ತಾ - ಊಟ ಮಾಡುವ ಅವಕಾಶ ಸಿಕ್ಕಿತು. Read more about ದೊಡ್ಡವರ ದೊಡ್ಡತನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಈ ಹಾಡನ್ನು ಬರೆದವರು ಯಾರು?

October 22, 2008 - 4:08pm
veena
ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದಾ ಮಾತು. ಈ ಹಾಡನ್ನು ಬರೆದವರು ಯಾರು ಎಂಬುದು ಗೊತ್ತಿದ್ದರೆ, ದಯವಿಟ್ಟು ತಿಳಿಸಿರಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೀವಳಿಗೆಯ ದಿನಕ್ಕೊಂದು ನೆನಪು

October 27, 2008 - 11:19pm
hamsanandi

ದೀಪಾವಳಿಯ ನರಕ ಚತುರ್ದಶಿಯ ದಿನವೇ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಪುಣ್ಯದಿನ.

ಅವರ ನೆನಪಿನಲ್ಲಿ ನಾನು ಬರೆದ ಒಂದು ಬರಹ ಇಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದೆ - ಓದಲು ಕೆಳಗಿನ ಕೊಂಡಿಯನ್ನು ಚಿಟಕಿಸಿ:

ಮೀನ ಲೋಚನಿ ಪಾಶ ಮೋಚನಿ Read more about ದೀವಳಿಗೆಯ ದಿನಕ್ಕೊಂದು ನೆನಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೇಮಂತ ಋತುರಾಜ

October 28, 2008 - 10:12pm
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸೈಕೋ ಸಂಗೀತ ವಿಷ್ಲೇಷಣೆ

November 17, 2008 - 11:04pm
mayakar
ರಘು ದೀಕ್ಷಿತ್ ರವರ ಮೊದಲ ಸಂಗೀತ ನಿರ್ದೇಶನದಲಿ ಅತ್ತ್ಯುತ್ತಮವಾಗಿ ಮೂಡಿಬಂದಿರುವ ಸಂಗೀತ. ಚಿಕ್ಕದಾಗಿ ಚೊಕ್ಕವಾಗಿ ಹೇಳ್ಬೇಕಂದ್ರೆ ಸಿಂಪಲ್, ಸುಂದರ, ಸಂಗೀತ. ಸಿ ಡಿ ಖರೀದಿ ಮಾಡೋಕೆ ಮರಿಬೇಡಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

'ರೀ’ ಅನ್ನುವ ಒಂದೇ ಸ್ವರ

November 20, 2008 - 10:31pm
hamsanandi

 

ಸರಸರನೆ ಸರಾಗವಾಗಿ
ಸ್ವರಗಳ ಜೋಡಿಸಿ
ರಾಗವ ಹಾಡುವ
ಭಾರೀ ಹಾಡುಗಾರ

ಅವಳ ’ರೀ’ ಎಂಬ
ಒಂದು ಸ್ವರದ ಹಿಂದಿನ
ನೂರು ಭಾವಗಳ
ಅರಿಯದೇ ತಿಣುಕಿದನಂತೆ!

-ಹಂಸಾನಂದಿ Read more about 'ರೀ’ ಅನ್ನುವ ಒಂದೇ ಸ್ವರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗ್ರಹ ಭೇದ

December 18, 2008 - 5:10am
hamsanandi

ಮೊದಲೇ ಹೇಳುವೆ. ಇದು ಆಕಾಶದ ಬಗ್ಗೆಯ ಬರಹ ಅಲ್ಲ. ಹಾಗಾಗಿ, ಮಂಗಳ ಗುರು ಶನಿ ವಿಷಯ ಯೋಚಿಸೋದನ್ನ ಬಿಡಿ. ನಾನು ಹಾಡಿದ್ದೇ ಹಾಡೋ ಕಿಸ್ಬಾಯಿದಾಸ ಅಂತಲೂ ಗೊತ್ತಿದೆ. ಹಾಗಾಗಿ ಇದು ಯಾವ ವಿಷಯದ ಬಗ್ಗೆ ಇರಬಹುದು ಅನ್ನೋ ಊಹೆ ಮಾಡೋದು ನಿಮಗೇ ಬಿಟ್ಟದ್ದು. Read more about ಗ್ರಹ ಭೇದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಗೀತ ಸುಧೆ

January 2, 2009 - 3:09pm
harsha.k.acharya
ಮನದ ನಾಡಿ ಮಿಡಿತವನ್ನು ಸಂಗೀತ ಸ್ವರಾಲಾಪನೆಯಿಂದ, ನಿವೇದಿಸುವ ದಾರಿಯು, ಮನತಣಿಸುವ ಸಾಧನ. ಸಂಗೀತ ಸ್ವರಾಂಜಲಿಯಿಂದ ಮನಪರಿವರ್ತಿಸುವ ರೀತಿ ಅನನ್ಯ. ಜೀವನದ ನಾಡಿಯದ ಸಂಗೀತ , ಅದರ ಮಿಳಿತ ನಮ್ಮೆಲ್ಲರ, ಬಾಲ್ಯದ ಆನಂದವನು ಸೆಳೆಯುವ ಕೊಲ್ಮೀನ್ಚು - ಆನಂದ ನಂದನ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತ್ಯಾಗರಾಜ ಮತ್ತು ಪಾಶ್ಚಾತ್ಯ ಸಂಗೀತ

January 5, 2009 - 11:50pm
hamsanandi
ತ್ಯಾಗರಾಜರು ಸಮಾಧಿ ಹೊಂದಿದ್ದು ೧೭೪೭ರ ಜನವರಿ ೬ರಂದು. ಅವರ ನೆನಕೆಯಲ್ಲಿ ಈ ಕಿರುಬರಹ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಂಸನಾದ

January 9, 2009 - 12:16am
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆಡಿಸಿದಳೆಶೋದಾ ಜಗದೋದ್ಧಾರನ

January 13, 2009 - 4:56am
mahesha
ಕಾಪಿ ರಾಗ, ಆದಿ ತಾಳ ಆಡಿಸಿದಳೆಶೋದಾ ಜಗದೋದ್ಧಾರನ ಜಗದೋದ್ಧಾರನ ಮಗನೆಂದು ತಿಳಿಯುತ ಮಗುಗಳ ಮಾಣಿಕ್ಯನ ಆಡಿಸಿದಳೆಶೋದಾ ನಿಗಮಕೆ ಸಿಲುಕದ ಅಗಣಿತ ಮಹಿಮನ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕುಱೈ ಒನ್ಱುಂ ಇಲ್ಲೈ - ರಾಗ ಮಾಲಿಕೆ

January 13, 2009 - 9:28am
mahesha
ಕುಱೈ ಒನ್ಱುಂ ಇಲ್ಲೈ http://accessstreet....
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತ್ಯಾಗರಾಜರ ‘ಅಭೇರಿ’ರಾಗದ ‘ನಗುಮೋಮು’ ...

January 13, 2009 - 12:03pm
mahesha
ತ್ಯಾಗರಾಜರ ‘ಅಭೇರಿ’ರಾಗದ ‘ನಗುಮೋಮು’ ...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಜ ಗೋವಿಂದಂ ರಾಗ ಮಾಲಿಕೆ

January 13, 2009 - 9:23pm
mahesha
ಭಜ ಎಂಬುದು ಸಂಸ್ಕೃತದ ಪದವಲ್ಲವಂತೆ. ಮೋಹಮುದ್ಗರದ ಶ್ಲೋಕಗಳ ಗಾಯನ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆರ್ ಕೆ ಶ್ರೀಕಂಠನ್ ಅವರೊಂದಿಗೊಂದು ಮಾತುಕತೆ - ತ್ಯಾಗರಾಜ ಆರಾಧನೆಯ ವಿಶೇಷ

January 15, 2009 - 12:08am
hamsanandi

(ಪರದೇಶಿಗಳಾಗಿರೋದ್ರಲ್ಲಿ, ಅಂದ್ರೆ ಹೊಟ್ಟೆಬಟ್ಟೆಗಾಗಿ ನಮ್ಮೂರಲ್ದೇ ಬೇರೆ ಊರಿನಲ್ಲಿ ನೆಲೆ ನಿಂತಾಗ ಅದರಿಂದ ಒಂದು ಒಳ್ಳೇ ಪರಿಣಾಮ ಕೂಡ ಇದೆ. ನಮ್ಮೂರಲ್ಲಿ ಖ್ಯಾತರಾದ ನಟರೋ, ಕಲಾವಿದರೋ, ಯಾರಾದರೂ ನಾವಿದ್ದಲ್ಲಿಗೆ ಬಂದಾಗ ಅವರನ್ನು ಸುಲಭವಾಗಿ ಭೇಟಿ ಮಾಡಬಹುದು. ಮಾತಾಡಬಹುದು. ನಮ್ಮೂರಲ್ಲೇ ಇದ್ದರೆ ಅದು, ಅಸಾಧ್ಯವಲ್ಲದಿದ್ದರೂ ಸ್ವಲ್ಪ ಕಷ್ಟವೇನೋ ಅನ್ನಿಸುತ್ತೆ. ಅದೇ ಕಾರಣಕ್ಕೋ ಏನೋ, ನನಗೂ ಎಷ್ಟೋ ಹೆಸರುವಾಸಿಯಾದವರನ್ನು ನೋಡಿ ಮಾತಾಡಿಸೋ, ಇನ್ನೂ ಹೆಚ್ಚು ಅಂದ್ರೆ ಅವರನ್ನೊಮ್ಮೆ ಮನೆಗೆ ಕರೆದು ಸತ್ಕರಿಸುವ ಭಾಗ್ಯವೂ ಕಳೆದ ಕೆಲವು ವರ್ಷಗಳಲ್ಲಿ ದಕ್ಕಿದೆ .

ಜನವರಿ ೧೫, ೨೦೦೯ ರಂದು ಪುಷ್ಯ ಬಹುಳ ಪಂಚಮಿ. ತ್ಯಾಗರಾಜರ ಆರಾಧನೆ. ಅವತ್ತಿಗೆ ಸರಿಯಾಗಿ, ತ್ಯಾಗರಾಜರ ನೇರ ಶಿಷ್ಯಪರಂಪರೆಗೆ ಸೇರಿದ, ಹಿರಿಯ ವಿದ್ವಾಂಸರಾದ ಸಂಗೀತ ಕಲಾನಿಧಿ ಡಾ.ಆರ್.ಕೆ. ಶ್ರೀಕಂಠನ್ ಮತ್ತು ಅವರ ಮಗ ಸಂಗೀತ ವಿದ್ವಾಂಸರಾದ ಆರ್.ಕೆ. ರಮಾಕಾಂತ್ ಅವರೊಡನೆ (ಮೇ ೨೦೦೮ ರಲ್ಲಿ ಅವರು ಕ್ಯಾಲಿಫೋರ್ನಿಯಾಗೆ ಭೇಟಿ ಕೊಟ್ಟಿದ್ದಾಗ) ನಾನು ಗೆಳೆಯರೊಬ್ಬರೊಡನೆ ಕೂಡಿ ನಡೆಸಿದ ಸಂದರ್ಶನದ ಸಾರಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳಸಂತೋಷವಾಗುತ್ತಿದೆ.
Read more about ಆರ್ ಕೆ ಶ್ರೀಕಂಠನ್ ಅವರೊಂದಿಗೊಂದು ಮಾತುಕತೆ - ತ್ಯಾಗರಾಜ ಆರಾಧನೆಯ ವಿಶೇಷ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದೀಕ್ಷಿತರ ಕೀರ್ತನೆಗಳ ಸಂಗ್ರಹ

January 27, 2009 - 11:36am
nkumar
ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳ ಸಂಗ್ರಹ ಈ ಕೊಂಡಿಯಲ್ಲಿದೆ (http://tributes.sang...). ಅನೇಕ ಸಂಗೀತ ವಿದ್ವಾಂಸರು ಹಾಡಿದ್ದಾರೆ. ಕೆಲವು ಕೊಂಡಿಗಳು ಕೆಲಸ ಮಾಡುವುದಿಲ್ಲ ಅನ್ನಿಸುತ್ತದೆ. ಒಟ್ಟಾರೆ ಸಂಗ್ರಹ ತುಂಬಾ ಚೆನ್ನಾಗಿದೆ. ಎಲ್ಲ ಹಾಡುಗಳನ್ನು ಇಳಿಸಿಕೊಂಡು DVD ಮಾಡಿದರೆ ಇನ್ನು ಉತ್ತಮ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ರಾಗ ಅಭೇರಿ - ಮೊದಲ ಕಂತು

February 3, 2009 - 2:01am
hamsanandi
ಯಾವುದೇ ರಾಗಗಳ ಬಗ್ಗೆ ಬರೆದು ಬಹಳ ದಿನಗಳಾಯಿತು ಅನ್ನಿಸಿತು. ಅದಕ್ಕೇ ಇರಲಿ ಅಂತ ಅಭೇರಿ ರಾಗದ ಬಗ್ಗೆ ಶುರು ಮಾಡ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಹಿರ್ ಭೈರವ್

March 9, 2009 - 11:28pm
hamsanandi

ಅಹಿರ್ ಭೈರವ್ ಒಂದು ಹಿಂದೂಸ್ತಾನಿ ರಾಗ - ಇದಕ್ಕೆ ಹತ್ತಿರವಾದ ದಕ್ಷಿಣಾದಿ ರಾಗದ ಹೆಸರು ಚಕ್ರವಾಕ ಎಂದು. ಕರ್ನಾಟಕ ಸಂಗೀತದಲ್ಲಿ ೧೬ನೇ ಮೇಳಕರ್ತವಾದ ಈರಾಗವನ್ನ ಹಿಂದೂಸ್ತಾನಿಯಲ್ಲಿ ಭೈರವ್ ಥಾಟ್ ಗೆ ಸೇರಿಸಲಾಗುತ್ತೆ. ಚಕ್ರವಾಕಕ್ಕೂ ಆಹಿರ್ ಭೈರವ್ ಗೂ ಸ್ವರಗಳು ಒಂದೇ ಆದರೂ, ಹಾಡುವ ಶೈಲಿಯಲ್ಲಿ ವ್ಯತ್ಯಾಸ ಇದೆ. Read more about ಅಹಿರ್ ಭೈರವ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತ್ಯಾಗ ರಾಗ ಸಂಯೋಗ

March 23, 2009 - 1:55pm
Shamala
ಹೋದ ವರ್ಷ ಒಂದು ಅತ್ಯಂತ ಅಪರೂಪದ ಹಾಗು ನನಗೆ ತಿಳಿದಿರುವಂತೆ ನಡೆದ ಪ್ರಥಮ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಇದರ ಬಗ್ಗೆ ಯಾರದರೂ ಸಂಪದದಲ್ಲಿ ಬರೆದಿದ್ದಾರೇನೋ ನನಗೆ ಗೊತ್ತಿಲ್ಲ. ಸಂಗೀತ ರೋಗಗಳನ್ನು ಗುಣಪಡಿಸುತ್ತದೆಯೆಂಬ ಸಿದ್ಧಾಂತ ವೈಗ್ನಾನಿಕವಾಗಿ, ಈಗ ಎಲ್ಲರೂ ಒಪ್ಪಿಕೊಂಡಿರುವ ವಿಷಯವೇ ಆದರು, ಈ ಥರಹದ ಪ್ರಯೋಗಳು ಹೆಚ್ಚು ಹೆಚ್ಚು ನಡೆದಷ್ಟೂ, ನಮ್ಮ ಸಂಗೀತ ಪ್ರಚಾರ ಹಾಗೂ ಪ್ರಚಲಿತವಾಗತ್ತೆ ಎಂಬುದು ನನ್ನ ಅನಿಸಿಕೆ. ಈ ತ್ಯಾಗ ರಾಗ ಸಂಯೋಗ ಕಾರ್ಯಕ್ರಮ ಶ್ರೀ ನಿಮಿಷಾನಂದ ಗುರೂಜಿಯವರ ವಿಷಯ ವಿವರಣೆಯೊಂದಿಗೆ, ವಿದ್ವಾನ್ ಶ್ರೀ ಆರ್ ಕೆ ಪದ್ಮನಾಭ ಮತ್ತು ತಂಡದವರಿಂದ ಧ್ಯಾನಕ್ಕೆ ಸಮಂಜಸವಾದ ಸಂಗೀತದ ಜೊತೆ ನಡೆಯಿತು. ಪೂರ್ಣಕುಂಭದ ಸ್ವಾಗತದೊಂದಿಗೆ ಸ್ವಾಮೀಜಿಯವರ ಆಗಮನವಾಯಿತು. ಗುರುಗಳ ಶಿಷ್ಯರ ಭಜನೆಯ ನಂತರ ಗುರೂಜಿಯವರು ಪ್ರವಚನ ಆರಂಭಿಸಿದರು. ಮೊದಲು "ತ್ಯಾಗ" ಎಂದರೇನು ಮತ್ತು ಮನುಷ್ಯ ಏನನ್ನು ತ್ಯಾಗ ಮಾಡಬೇಕು ಎಂದು ತಿಳಿಸಿದರು. ಶ್ರೀ RKP ಯವರು ಪಹಾಡಿ ರಾಗದಲ್ಲಿ ಶ್ರೀ ಗುರುನಾಪಾಲಿತೋ ಶ್ರೀ ಸಚ್ಛಿದಾನಂದನಾಥೇನ ಹಾಡಿದರು. ಜೊತೆಗೆ ಶ್ರುಂಗಪುರಾಧೀಶ್ವರಿ ಶಾರದೆ - ಪದ್ಮ ಚರಣ ರಚನೆ, ಪಂಚಾಷಟ್ಪೀಟ ರೂಪಿಣಿ - ದೇವಗಾಂಧಾರಿ or ಅಭೇರಿ or ಭೀಮಪಲಾಸ್ ಕೂಡ ಹಾಡಿದರು. ಮಧ್ಯೆ ಮಧ್ಯೆ ಗುಗುಗಳ ಪ್ರವಚನ ನಡೆಯುತ್ತಿತ್ತು. ಬಾಕಿ ವಿಷಯಗಳ ಬಗ್ಗೆ ನಾನಿಲ್ಲಿ ವಿವರವಾಗಿ ಏನನ್ನೂ ಬರೆಯುತ್ತಿಲ್ಲ ಏಕೆಂದರೆ ನಾನು ಬರೀ ಸಂಗೀತ ಅದಕ್ಕೆ ಸಂಬಂಧ ಪಟ್ಟ ಮಾತುಗಳನ್ನು ಮಾತ್ರ ಹೇಳುತ್ತಿದ್ದೇನೆ. ಗುರೂಜಿಯವರು ಸಂಗೀತದ ಸಪ್ತ ಸ್ವರಗಳು ನಮ್ಮ ದೇಹದಲ್ಲಿನ ಚಕ್ರಗಳಿಗೆ ನೇರವಾಗಿ ಸಂಬಂಧಿಸಲ್ಪಟ್ಟವು - ಉದಾ. ಸ - ಮೂಲಧಾರ ಚಕ್ರ, ರ - ಸ್ವಾದಿಷ್ಟಾನ ಮತ್ತು ಗ ಮಣಿಪುರ....... ಕೇವಲ ಈ ಮೂರೇ ಮೂರು ಸ್ವರಗಳನ್ನು ನಾವು ಆಲಿಸಿ ನಮ್ಮ ಜೀವನಕ್ಕೆ ಅಳವಡಿಸಿಕೊಂಡರೆ, ನಮ್ಮಲ್ಲಿರುವ "ಅಹಂ" ಅನ್ನು ಕಳೆದುಕೊಂಡು ಬಿಡಬಹುದು ಎಂದರು. "ತ್ಯಾಗ" ಇಲ್ಲಿ ಅಹಂ ತ್ಯಜಿಸುವುದು ಎಂಬರ್ಥದಲ್ಲಿದೆ. ಅಹಂ ಬಿಡುವುದು or ತ್ಯಜಿಸುವುದು ಎಂದರೆ loosing our name identity and recognising HIM as supreme ಎಂದು ತಿಳಿಸಿದರು. ಈ ಹಂತದಲ್ಲಿ ಶ್ರೀ RKP ಯವರು ಬಿಂದುಮಾಲಿನಿ ರಾಗದಲ್ಲಿ - ಎಂಥಮುದ್ದೋ ಎಂಥ ಸೊಗಸೋ, ಪ್ರಾರ್ಥಿಪೆ ವಾದಿರಾಜರ - ನಠಭೈರವಿಯಲ್ಲಿ (ಸ್ವಂತ ರಚನೆ), ವರಲಕ್ಶ್ಮೀ ನಮೋಸ್ತುತೆ - ಗೌರಿಮನೋಹರಿಯಲ್ಲಿ, ತಮಿಳು ಚಿತ್ರದ ಅತ್ಯಂತ ಜನಪ್ರಿಯ ಹಾಡು ಪಾಟ್ಟುಂ ನಾನೆ... ಪಾಡವುಂ ನಾನೆ... ಹಾಡಿದರು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏತಕವತಾರವನೆತ್ತಿದೆಯೋ?

April 13, 2009 - 11:44am
hamsanandi

ಇವತ್ತು ಒಂದು ಒಳ್ಳೇ ಸಂಗೀತ ಕಚೇರಿಗೆ ಹೋಗಿದ್ದೆ. ಟಿ.ಎಮ್.ಕೃಷ್ಣ ಅವರ ಹಾಡುಗಾರಿಕೆ.ಪಕ್ಕವಾದ್ಯದಲ್ಲಿ ನಾಗೈ ಶ್ರೀರಾಮ್ ಮತ್ತು ಪ್ರೊ.ತಿರುಚಿ ಶಂಕರನ್. ಅಂದ್ಮೇಲೆ ಹೇಳಬೇಕಾದ್ದೇ ಇಲ್ಲ. Read more about ಏತಕವತಾರವನೆತ್ತಿದೆಯೋ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಸಂತ್ ಮುಖಾರಿ

April 20, 2009 - 8:05am
hamsanandi
ಅವತ್ತಿನಿಂದ ಡಾ.ಕೇಶವ ಕುಲಕರ್ಣಿ ಅವರು ಯಾವುದಾದರೂ ರಾಗದ ಬಗ್ಗೆ ಬರ್ದಿಲ್ವಲ್ಲ ಅಂತ ಹೇಳ್ತಾನೇ ಇದ್ರು. ಇವತ್ತು ಇದ್ದಕ್ಕಿದ್ದ ಹಾಗೆ ಈಗಿನ್ನೂ ವಸಂತ ಋತು ಅನ್ನೋದು ನೆನಪಾಯ್ತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರಿನ್ಸ್ ರಾಮ ವರ್ಮ

April 26, 2009 - 12:50pm
Vasanth Kaje
ಪ್ರಿನ್ಸ್ ರಾಮ ವರ್ಮ ಸಂಗೀತಾಸಕ್ತರಿಗೆ ಪರಿಚಿತ ಹೆಸರು. ರಾಮವರ್ಮ ಹಾಡುಗಾರಿಕೆ ಮತ್ತು ವೀಣಾ ವಾದನದಲ್ಲಿ ವಿದ್ವಾಂಸರು. ವಿಕಿಪೀಡಿಯ ದಲ್ಲಿ ಹೇಳುವಂತೆ ಅವರು ’ರಾಜ ಮನೆತನದಲ್ಲೊಬ್ಬ ಸಂಗೀತಗಾರ ಮತ್ತು ಸಂಗೀತಲೋಕಕ್ಕೊಬ್ಬ ರಾಜ!’.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಅಮೃತವರ್ಷಿಣಿ

May 20, 2009 - 12:31am
hamsanandi
ಸ್ವಲ್ಪ ದಿವಸಗಳ ಹಿಂದೆ ಉದಯ ಟೀವೀನಲ್ಲಿ ಈಚೆಗೆ ತೆರೆಕಂಡ ಒಂದು ಸಿನಿಮಾ ತಂಡದವರ ಜೊತೆ ಮುಖಾಮುಖಿ ಮಾತುಕತೆ ಬರ್ತಾ ಇತ್ತು. ನಿರೂಪಕಿ ನಡುವೆ ಈಗ ಒಂದು ಹಾಡು ಕೇಳೋಣ್ವಾ ಅಂತ ಒಂದು ಹಾಡು ಹಾಕಿದರು. ಆ ಹಾಡು ನನಗಂತೂ ಕೂಡಲೆ ಹಿಡಿಸಿಬಿಡ್ತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ದಕ್ಷಿಣ ಕರ್ನಾಟಕದಲ್ಲೊಂದು ಸುತ್ತಾಟ

November 1, 2009 - 11:18pm
hamsanandi

ಜುಲೈ ನಲ್ಲಿ ಹಾಸನ ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಒಂದಷ್ಟು ಸುತ್ತಾಡುವ ಅವಕಾಶ ಸಿಕ್ಕಿತ್ತು. ಹತ್ತನೇ ಶತಮಾನದಿಂದ ಹಿಡಿದು ಇಪ್ಪತ್ತೊಂದನೇ ಶತಮಾನದ ವರೆಗಿನ ಹಲವು ನೋಟಗಳ ಸರಣಿ ಇಲ್ಲಿ ಒಂದಿದೆ.

ಒಂದು ವಿಚಾರ ಹೇಳಬೇಕೆನ್ನಿಸಿತು. ಹಿನ್ನಲೆಯಲ್ಲಿ ಬರುತ್ತಿರುವ ಸಂಗೀತವನ್ನು ರಚಿಸಿದ್ದು ನಾನೇ - ನಾಸಾಮಣಿ ಎನ್ನುವ ರಾಗದಲ್ಲಿ ಒಂದು ಜತಿಸ್ವರ. ಪಿಟೀಲಿನಲ್ಲಿ ನಿಡಿಸಿರುವುದು ಬೆಂಗಳೂರಿನ ಕಲಾವಿದರಾದ ಕೆ.ಆರ್.ಸತ್ಯಪ್ರಕಾಶ್

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವಾವರಣ ಕೃತಿಗಳು - ೪

November 6, 2009 - 1:27pm
Shamala

ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯನ ಪ್ರಾರ್ಥನೆಯ ನಂತರ, ನಾವು ದೇವಿ ಕಮಲಾಂಬಿಕೆಯನ್ನೇ ಧ್ಯಾನಿಸುತ್ತೇವೆ. ಈ ಧ್ಯಾನ ಕೃತಿಯನ್ನು ದೀಕ್ಷಿತರು ೮ನೇ ಮೇಳ ಹನುಮ ತೋಡಿ ರಾಗದಲ್ಲಿ ರಚಿಸಿದ್ದಾರೆ. ಈ ಕೃತಿಯು ತೋಡಿ ರಾಗದ ನಿಷಾದ ಸ್ವರದಿಂದ ಆರಂಭವಾಗುವುದು ಮತ್ತು ಗಾಯಕರನ್ನು ಶುರುವಿನಿಂದಲೇ ಭಕ್ತಿಯ ದಾರಿಗೆ ಎಳೆದುಕೊಂಡುಬಿಡುತ್ತದೆ... ಸ್ವರ ಪ್ರಸ್ತಾರ ಇಡೀ ಕೃತಿಯಲ್ಲಿ, ತೋಡಿ ರಾಗದ ಸಾರವನ್ನು ಪರಿಪೂರ್ಣವಾಗಿ ಬಿಂಬಿಸುತ್ತದೆ. ಸಂಗೀತಗಾರರಿಗೆ ಈ ಕೃತಿ ಹಾಡುವುದೊಂಥರಾ ಆತ್ಮ ತೃಪ್ತಿಕೊಡುತ್ತದೆ.

ಪಲ್ಲವಿ
Read more about ನವಾವರಣ ಕೃತಿಗಳು - ೪

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮನಸ್ಸಿನ ಭಾವನೆಗಳೊಂದಿಗೆ ಚೂರು ಜ್ಞಾನ , ಕಲೆ, ಚೂರು ಸಾಹಿತ್ಯ..ಚೂರು ಮನರಂಜನೆ..!!!

February 4, 2010 - 12:42pm
roopa kotwal

 

ನಮಸ್ಕಾರ ಗೆಳೆಯರೇ,...ಈ ಸಂಪದ ಲೋಕಕ್ಕೆ ನಾನು ಹೊಸಬಳು...ಎಲ್ಲೆಲ್ಲೂ ಕನ್ನಡದ ಕಂಪು ಸೃಷ್ಟಿಸಿರುವ ಸಂಪದದಲ್ಲಿ ನಾನೂ ಈಗ ಒಬ್ಬಳು ಎಂದು ತುಂಬಾ ಖುಷಿಯಾಗುತ್ತಿದೆ...ಮೊದಲಿಗೆ ಏನು ಬರೆಯಲಿ ತಿಳಿಯಲಿಲ್ಲ...ಹೊಸ ಹೊಸ ಚಿತ್ರಗಳನ್ನು ನೋಡುವ ಹವ್ಯಾಸವಿರುವ ನಾನು ಮೊನ್ನೆ ತಾನೇ ಮೀರರ್ಸ್ ಚಿತ್ರ ನೋಡಿದೆ..ಅದಕ್ಕೆ ಅದರ್ ಬಗ್ಗೆ ನಾಲ್ಕು ಸಾಲು ಬರೆಯುತ್ತಿದ್ದೇನೆ...

ನೀವು ಸೂಕ್ಷ ಮನಸ್ಸಿನವರಾಗಿದ್ದರೆ ದಯವಿಟ್ಟು ಸಿನೆಮಾ ನೋಡಬೇಡಿ..

 

  Read more about ಮನಸ್ಸಿನ ಭಾವನೆಗಳೊಂದಿಗೆ ಚೂರು ಜ್ಞಾನ , ಕಲೆ, ಚೂರು ಸಾಹಿತ್ಯ..ಚೂರು ಮನರಂಜನೆ..!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಹುಟ್ಟು ಹಬ್ಬದ ದಿನ

May 4, 2010 - 5:13am
hamsanandi

ಇವತ್ತು ಏಟಿಎಮ್ ಗೆ ದುಡ್ಡು ತೆಗೆಯಲು ಹೋದರೆ ಕಿಸೆಯಲ್ಲಿ ಎಟಿಎಮ್ ಕಾರ್ಡೇ ಕಾಣಲಿಲ್ಲ. ಎಲ್ಲಿ ಮರೆತಿರುವೆ ಗೊತ್ತಾಗದೆ ಒಂದು ಸಲ ಮನೆಯಲ್ಲೂ ಹುಡುಕಿದ್ದಾಯ್ತು. ಅಲ್ಲೂ ಕಾಣಲಿಲ್ಲ. ನೆನ್ನೆ-ಮೊನ್ನೆ ತಾನೇ ಉಪಯೋಗಿಸಿದ್ದೂ ನೆನಪಿಗೆ ಬಂತು. ಕೂಡಲೆ ಆನ್-ಲೈನ್ ರೆಕಾರ್ಡ್ ನೋಡಿದರೆ, ದೇವರ ದಯ, ಯಾವುದೇ ಅನುಮಾನ ಹುಟ್ಟುವಂತಹ ಎಂಟ್ರೀ ಕಾಣಲಿಲ್ಲ. ಹೇಗೇ ಇರಲಿ, ಒಮ್ಮೆ ಬ್ಯಾಂಕಿಗೆ ಹೋಗಿ ಹೊಸ ಎಟಿಎಮ್ ಕಾರ್ಡ್ ತೆಗೆದುಕೊಳ್ಳೋಣ ಅಂತ ಹೋದೆ.

ಸರಿ ಎಲ್ಲ ವಿವರಗಳನ್ನು ಕೊಟ್ಟಮೇಲೆ, ಕೌಂಟರ್ನಲ್ಲಿದ್ದಾಕೆ ಮಾಡಬೇಕಿದ್ದ ಸಹಾಯ ಮಾಡಿ ಮುಗಿಸಿ "ಹುಟ್ಟು ಹಬ್ಬದ ಶುಭಾಶಯಗಳು! ನಾಳೆಗೆ ಏನು ವಿಶೇಷ?" ಅಂದಳು. ನಾಳೆ ಹುಟ್ಟುಹಬ್ಬ ಆಚರಿಸುವ ಯಾವುದೇ ಯೋಚನೆಯಿಲ್ಲದ ನಾನು :) ಒಂದು ಕ್ಷಣ ತಬ್ಬಿಬ್ಬಾದರೂ, "ಥ್ಯಾಂಕ್ಸ್" ಹೇಳಿ ಜಾಗ ಖಾಲಿ ಮಾಡಿದೆ. Read more about ಹುಟ್ಟು ಹಬ್ಬದ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಕೃಷ್ಣಾಷ್ಟಮಿಯಲ್ಲಿಷ್ಟು ಕೃಷ್ಣ ಸ್ಮರಣೆ

September 1, 2010 - 10:21pm
hamsanandi

ಪ್ರತೀ ವರ್ಷ ಅಂದ್ಕೋತೀನಿ ಕೃಷ್ಣಾಷ್ಟಮಿಯ ಹೊತ್ತಿಗೆ ಒಂದು ಒಳ್ಳೇ ಬರಹ ಬರೀಬೇಕು - ಹರಿದಾಸರು ಕಂಡ ಕೃಷ್ಣನ ಬಗ್ಗೆ ಅಂತ. ಆ ಬಗ್ಗೆ ನೂರಾರು ಜನ ಬರ್ದಿದಾರೆ ಅಂದ್ರಾ? ಹೌದು. ಬರೆದಿದ್ರೇನಂತೆ. ನನ್ನ ಹಾಡು ನನ್ನದು -  ನನ್ನ ಮಾತು ನನ್ನದು - ನನ್ನ ನೋಟ ನನ್ನದು - ನನ್ನ ಧಾಟಿ ನನ್ನದು ಅಂತ ಅಂದ್ಕೊಳೋದಪ್ಪ! ಆದ್ರೆ ಯಾಕೋ ಕೃಷ್ಣನಿಗೆ ಅದರ ಮೇಲೆ ಮನಸ್ಸಿಲ್ಲ ಅನ್ಸತ್ತೆ. ಯಾಕಂದ್ರೆ ಎಂತೆಂತಹವರೋ ಅವನ ಬಗ್ಗೆ ಹಾಡಿಬಿಟ್ಟಿರೋವಾಗ ನನ್ನ ನಾಕು ಸಾಲು ಇದ್ರೇನಂತೆ ಇಲ್ದಿದ್ರೇನಂತೆ ಅಂತಲೇ ಇರಬೇಕು, ಎರಡು ಮೂರು ವರ್ಷದಿಂದ ನೋಡ್ತಿದೀನಿ, ಈ ಗೋಕುಲಾಷ್ಟಮಿ ಬರೋ ಹೊತ್ತಿಗೇ ಇನ್ನೇನೋ ಜರೂರಾದ ಕೆಲಸವೋ ಮತ್ತೊಂದೋ ಅಂಟ್ಕೊಳತ್ತೆ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಅನ್ನೋ ತರಹ.

  Read more about ಕೃಷ್ಣಾಷ್ಟಮಿಯಲ್ಲಿಷ್ಟು ಕೃಷ್ಣ ಸ್ಮರಣೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

’ಕರ್ನಾಟಕದ ದೇಗುಲಗಳ ಸುತ್ತ ಒಂದು ಸುತ್ತು’ - ಒಂದು ಸಂಗೀತ ಕಚೇರಿ

October 6, 2010 - 11:15pm
hamsanandi

ಕರ್ನಾಟಕ ಸಂಗೀತ ದೇವಾಲಯಗಳ ಸುತ್ತ ಬೆಳೆಯಿತು, ಹಿಂದೂಸ್ತಾನಿ ಸಂಗೀತ ಸುಲ್ತಾನರ ಆಸ್ಥಾನಗಳಲ್ಲಿ ಬೆಳೆಯಿತು ಅನ್ನೋ ಮಾತಿದೆ. ಆದರೂ ಕರ್ನಾಟಕ ಸಂಗೀತಕ್ಕೆ ಮೈಸೂರು ಒಡೆಯರ, ತಂಜಾವೂರಿನ ನಾಯಕರ, ಮರಾಠೀ ದೊರೆಗಳ ಪ್ರೋತ್ಸಾಹ ಹೆಚ್ಚಿಗೆ ಇದ್ದೇ ಇತ್ತು. ಅದು ಹೇಗೇ ಇರಲಿ, ಅಂದರೆ ಇಂದು ಒಂದು ಕರ್ನಾಟಕ ಸಂಗೀತ ಕಚೇರಿಗೆ ಹೋದರೆ ಹೆಚ್ಚಾಗಿ ಭಕ್ತಿ ಪ್ರಧಾನ ರಚನೆಗಳನ್ನು ಕೇಳುವ ಸಾಧ್ಯತೆಯೇ ಹೆಚ್ಚು ಅನ್ನುವುದೇನೋ ನಿಜ.


ಈಗ ರಾಜಾಸ್ಥಾನಗಳಿಲ್ಲವಲ್ಲ- ಆದರೆ ಅದರ ಬದಲು ವಿಶೇಷ ಸಂದರ್ಭಗಳಲ್ಲಿ ಮನೆಗಳಲ್ಲೇ ಕಚೇರಿ ನಡೆಸುವ ಪದ್ಧತಿ ಬೆಳೆದು ಬಂದಿದೆ. ಇಂತಹ ಮನೆ-ಕಚೇರಿಗಳು ಸಭೆಯಲ್ಲಿ ನಡೆವ ಕಚೇರಿಗಳಿಗಿಂತ ಒಂದು ರೀತಿಯ ಆಪ್ತ ಅನುಭವವನ್ನೂ ನೀಡುತ್ತವೆ.
Read more about ’ಕರ್ನಾಟಕದ ದೇಗುಲಗಳ ಸುತ್ತ ಒಂದು ಸುತ್ತು’ - ಒಂದು ಸಂಗೀತ ಕಚೇರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ನವರಾತ್ರಿಯ ದಿನಗಳು - ಮತ್ತೊಮ್ಮೆ

October 8, 2010 - 10:53pm
hamsanandi

ಮೂರುವರ್ಷಗಳ ಹಿಂದೆ ಇದೇ ಸಮಯದಲ್ಲಿ ಸಂಪದದಲ್ಲಿ ’ನವರಾತ್ರಿಯ ದಿನಗಳು’ ಎನ್ನುವ ಸರಣಿಯನ್ನು, ಎರಡು ವರ್ಷಗಳ ಹಿಂದೆ ’ಸಂಗೀತ ನವರಾತ್ರಿ’ ಅನ್ನುವ ಸರಣಿಯನ್ನೂ ಬರೆದಿದ್ದೆ. ಅದಾದನಂತರ ಹೇಮಾವತಿಯಲ್ಲಿ ಬಹಳ ನೀರು ಹರಿದು ಹೋಗಿದೆ. ಗ್ವಾಡಲೂಪೆಯಲ್ಲೂ  ಅಷ್ಟಲ್ಲದಿದ್ದರೂ, ತಕ್ಕ ಮಟ್ಟಿಗೆ ನೀರು ಹರಿದು ಹೋಗಿದೆ! ಅದಾದ ನಂತರ ಸಂಪದಕ್ಕೂ ಬಹಳ ಹೊಸಬರ ಬರೋಣವಾಗಿದೆ ಹಾಗಾಗಿ, ಆ ಹಳೆಯ ಬರಹಗಳಿಂದ ಕೆಲವನ್ನು ಹೆಕ್ಕಿ, ಕೆಲವು ಹೊಸತಾಗಿ ಬರೆದು ಈ ಬಾರಿಯ ದೇವೀ ನವರಾತ್ರಿಯಲ್ಲಿ ಹಾಕೋಣವೆಂದಿದ್ದೇನೆ. 

ಆಸಕ್ತರು ಕೆಳಗಿನ ಕೊಂಡಿಗಳನ್ನು ನೋಡಬಹುದು: 

ನವರಾತ್ರಿಯ ದಿನಗಳು  - ಕನ್ನಡದಲ್ಲಿ

The Days of Navaratri - ಇಂಗ್ಲಿಷ್ ನಲ್ಲಿ

ಯಾವುದೇ ಅಡ್ಡಿ ಆತಂಕವಿಲ್ಲದೇ ಹೋದರೆ ಪ್ರತಿ ದಿನವೂ ಒಂದು ಬರಹವನ್ನು ಹಾಕುವ ಯೋಚನೆ ಇದೆ. ನೋಡೋಣ, ಹೇಗಾಗುವುದೋ! Read more about ನವರಾತ್ರಿಯ ದಿನಗಳು - ಮತ್ತೊಮ್ಮೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಬುರುಡೆ ಇಲ್ಲದ ವೀಣೆ

January 4, 2011 - 7:00am
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಸರಣಿ: 

ಪಹಾಡಿ

March 11, 2011 - 11:46pm
hamsanandi

ನಮ್ಮ ಸಂಗೀತದಲ್ಲಿ ರಾಗಗಳ ಹೆಸರುಗಳನ್ನು ಹುಡುಕುವುದೂ ಒಮ್ಮೊಮ್ಮೆ ನದೀಮೂಲ ಹುಡುಕಿದಷ್ಟೇ ಕಷ್ಟ. ರಾಗಗಳಿಗೂ, ಅವುಗಳು ನಮ್ಮಲ್ಲಿ ಉಂಟು ಮಾಡುವ ಭಾವನೆಗಳಿಗೂ ಯಾವ ನೇರ ಸಂಬಂಧವೂ ಇಲ್ಲ. ಕೆಲವು ರಾಗಗಳು ದೇವ ದೇವಿಯರ ಮೇಲೆ ಹೆಸರಿದ್ದರೆ, ಕೆಲವು ಪ್ರಾಣಿ ಪಕ್ಷಿಗಳ ಮೇಲೆ. ಇನ್ನು ಕೆಲವಕ್ಕೆ ಯಾವ ಅರ್ಥವೂ ತೋರುವುದೂ ಇಲ್ಲ. ಒಂದೇ ರೀತಿಯ ಹೆಸರುಳ್ಳ ರಾಗಗಳಿಗೆ ಹೋಲಿಕೆ ಇರಬೇಕೆಂಬುದೂ ಇಲ್ಲ. ಒಟ್ಟಿನಲ್ಲಿ ಒಂದು ರಾಗಕ್ಕೆ ಇಂತಹದ್ದೇ ಹೆಸರೇಕೆ ಬಂತು ಅನ್ನುವುದನ್ನು ಹೇಳುವುದು ಕಷ್ಟವೇ.

  Read more about ಪಹಾಡಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ವೀಣೆ ಎಂಬ ಸವತಿ

June 18, 2011 - 1:23am
hamsanandi


ನೆಚ್ಚಾಗುವಂಥ ಗೆಳತಿ ಕಾತರ ತುಂಬಿರುವ ಮನಕೆ
ಕಲಬೆರಕೆಯಿರದ ಅಪ್ಪಟ ಸಂತಸ ತರುವ ಸೇರಿಕೆ
ಬೇಟದಲಿನಿಯೆಯ ರೀತಿ ರಸಿಕನಿಗಾಗುವುದು ಜೋಡಿ
ಪೆಣ್ಗಳಿಗೋ ಇನಿಯನೊಲವಿಗೆ ಸವತಿಯಂತೆ ಅಡ್ಡಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಮಾರವೈರಿ ರಮಣಿ

August 30, 2011 - 2:01am
hamsanandi

 ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ. 

ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ ರಾಗದ, ರೂಪಕತಾಳದ ಮಾರವೈರಿ ರಮಣಿ ಎನ್ನುವ ರಚನೆ. ಮೊದಲು ಸಾಹಿತ್ಯವನ್ನು ಓದಿ. 

ಪಲ್ಲವಿ: 
ಮಾರವೈರಿ ರಮಣಿ ಮಂಜು ಭಾಷಿಣೀ ||ಮಾರವೈರಿ|| 

ಅನುಪಲ್ಲವಿ: 
ಕ್ರೂರ ದಾನವೇಭವಾರಣಾರೀ ಶ್ರೀಗೌರೀ ||ಮಾರವೈರಿ|| 

ಚರಣ: 
ಕರ್ಮಬಂಧವಾರಣ ನಿಷ್ಕಾಮಚಿತ್ತ ವರದೇ 
ಧರ್ಮವರ್ಧನೀ ಸದಾ ವದನಹಾಸೇ ಶುಭಫಲದೇ ||ಮಾರವೈರಿ|| 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ನವರಾತ್ರಿಯ ದಿನಗಳು ಮತ್ತು ಸಂಗೀತ ನವರಾತ್ರಿ

September 30, 2011 - 11:52am
hamsanandi

 ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ. 

 

ನವರಾತ್ರಿಯ ದಿನಗಳು: http://sampada.net/books/5976 Read more about ನವರಾತ್ರಿಯ ದಿನಗಳು ಮತ್ತು ಸಂಗೀತ ನವರಾತ್ರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ

January 1, 2012 - 5:33am
hamsanandi

ಎಲ್ಲ ಸಂಪದಿಗರಿಗೂ ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ. ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ ’ಬುರುಡೆ ಇಲ್ಲದ ವೀಣೆ’ ಎಂಬ ಸಂಗೀತವಾದ್ಯವೊಂದರ ಬಗ್ಗೆ ಬರೆದ ಪದ್ಯವೇ ಆಗಿತ್ತು. ಇರಲಿ, ಎಲ್ಲರ ಬಾಳಿನಲ್ಲೂ ಸಂಗೀತ ಹಾಸುಹೊಕ್ಕಾಗಿದ್ದರೆ, ಸಂತೋಷ ನೆಮ್ಮದಿಗಳು ಹೆಚ್ಚುತ್ತವೆ ಅನ್ನುವುದು ನನ್ನ ಎಣಿಕೆ. Read more about ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ತ್ಯಾಗರಾಜನೆಂಬ ರಾಗರಾಜ

January 15, 2012 - 4:14am
hamsanandi

ಐದುಹೊಳೆಯೂರಿನಲಿ* ಇದ್ದನವ ಮಹನೀಯ
ಹೆಸರವನದಾಗಿತ್ತು ತ್ಯಾಗರಾಜ;
ಬಗೆಬಗೆಯ ರಾಗದಲಿ ನೂರಾರು ರಚನೆಗಳ
ಮಾಡಿ ಇತ್ತಿಹನೆಮಗೆ ಯೋಗಿ ರಾಜ!

ತ್ಯಾಗರಾಜ ವಿರಾಗಿಯೇಕಾದೆ ಹೇಳು
ನೀ ನಾಗಿರಲು ರಸಿಕ ಮನವಾಳ್ವ ರಾಜ;
ಭೋಗಗಳ* ಬೇಡೆನುತ ನಿಲೆನಿಂತೆ ಹಾಡುತ್ತ
ರಾಗಗಳ ನೀ ನಿಜದಿ ರಾಗ ರಾಜ!

-ಹಂಸಾನಂದಿ

ಕೊ: ಐದುಹೊಳೆಯೂರು = ತ್ಯಾಗರಾಜರು ಬದುಕಿ ಬಾಳಿದ ತಿರುವೈಯಾರು

ಕೊ.ಕೊ: ಶರಭೋಜಿ ಮಹಾರಾಜ ತಂಜಾವೂರಿನ ಆಸ್ಥಾನವಿದ್ವಾಂಸರಾರಿರಬೇಕೆಂಬ ಆಹ್ವಾನವಿತ್ತರೂ, ತ್ಯಾಗರಾಜರು ಅದನ್ನು ಬೇಡವೆಂದೆಣಿಸಿ, ತಿರುವೈಯ್ಯಾರಿನಲ್ಲೇ ನೆಲೆ ನಿಂತರು Read more about ತ್ಯಾಗರಾಜನೆಂಬ ರಾಗರಾಜ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಕೊಳಲ ಬಗ್ಗೆ ಒಂದೆರೆಡು ಮಾತು.

June 23, 2012 - 2:15am
vidyakumargv

ಕೊಳಲು ನುಡಿಸುವುದು ವೃತ್ತಿಯೇ ಆಗಬೇಕೆಂದೇನಿಲ್ಲ. ಹವ್ಯಾಸವೂ ಆಗಬಹುದು.ಬೇಸರ ಆದಾಗ ಖುಷಿಯಾದಾಗ ಹೀಗೆ ಎಲ್ಲಾ ಸಮಯಕ್ಕೂ ಸ್ಯೂಟ್ ಆಗೋತರ ಟೋನ್ ಬದಲಿಸಿ ಕೊಳಲು ನುಡಿಸಬಹುದು. ಏಕಾಂತದಲ್ಲಿ, ಪ್ರತಿದ್ವನಿಸುವ ಕೋಣೆಯಲ್ಲಿ, ಗುಡ್ಡದ ತುದಿಯಲ್ಲಿ, ಸಮುದ್ರದ ಬದಿಯಲ್ಲಿ ಹೀಗೆ ನಿಶ್ಶಬ್ಧ ಸ್ಥಳಗಳಲ್ಲಿ ಕೊಳಲು ನುಡಿಸುವಾಗ ಪ್ರಕೃತಿಯ ಭಾವಕ್ಕೆ ತಕ್ಕಂತೆ ಹೊರಡುವ ನಾದ ಅನುಭವಿಸಿಯೇ ತಿಳಿಯಬೇಕು. ಕೊಳಲ ದ್ವನಿಗೆ ನುಡಿಸದ ಜೀವಿಯೇ ಇಲ್ಲ. ಮಹಾಭಾರತದ ಕೃಷ್ಣನ ಕೊಳಲ ನಾದಕ್ಕೆ ಗೋಪಿಯರು, ದನ ಕರುಗಳು, ಪ್ರಾಣಿ ಪಕ್ಷಿಗಳು ಪ್ರತಿಕ್ರಿಯಿಸುತಿದ್ದದ್ದು ಅತಿರೇಕವಾಗಿಕಂಡರೂ ಅದು ನಿಜ ಕೊಳಲ ದ್ವನಿಯೇ ಅಂತದ್ದು. Read more about ಕೊಳಲ ಬಗ್ಗೆ ಒಂದೆರೆಡು ಮಾತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
Subscribe to ಸಂಗೀತ