ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಚಿಂತನೆ

ನರಕಕ್ಕೆ ಹೋಗದಿರಲು ಏನು ಮಾಡಬೇಕು?

ನರಕಕ್ಕೆ ಹೋಗದಿರಲು ಏನು ಮಾಡಬೇಕು?

 

ಅಶ್ವತ್ಥಮೇಕಂ ಪಿಚುಮಂದಮೇಕಂ

ನ್ಯಗ್ರೋಧಮೇಕಂ ದಶತಿಂತ್ರಿಣೀಕಂ|

ಕಪಿತ್ಥಬಿಲ್ವಾಮಲಕ ತ್ರಯಂಚ

ಪಂಚಾಮ್ರರೋಪೀ ನರಕಂನಯಾತಿ||

 

ಇದು ಬಹುಶಃ ಗರುಡಪುರಾಣದ್ದಿರಬೇಕು.

 

ಒಂದು ಅಶ್ವತ್ಥ,  ಒಂದು ಬೇವಿನ ಮರ,

ಒಂದು ಆಲದ ಮರ, ೧೦ ಹುಣಿಸೆ ಮರ,

ಮೂರು ಬೇಲ, ಬಿಲ್ವ, ನೆಲ್ಲಿ ಮರಗಳು

ಮತ್ತು ಐದು ಮಾವಿನ ಮರಗಳು

ಇವಿಷ್ಟು ಗಿಡಗಳನ್ನು ನೆಟ್ಟು ಮರವಾಗಿ ಮಾಡಿದವ

ನರಕಕ್ಕೆ ಹೋಗೋದಿಲ್ಲ!

ಈ ಮರಗಳೆಲ್ಲ ಔಷಧೀಯ ಗುಣಗಳುಳ್ಳ, ಆಯುರ್ವೇದೀಯ ಮಹತ್ತ್ವ ಉಳ್ಳವು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತಿದೆ.

 

ವಿವಿಧ ಜಾತಿಯ ಮರಗಿಡಗಳು ಯಥೇಚ್ಚವಾಗಿದ್ದ ಕಾಲದಲ್ಲೇ  ಹೀಗೆ ಎಚ್ಚರವಹಿಸಿದ್ದರು, ಆಧುನಿಕ ಕಾಲ ಬರಲಿಕ್ಕೂ ಮೊದಲೆ ನಮ್ಮಲ್ಲಿ

ಪರಿಸರಪ್ರಜ್ಞೆ ಇತ್ತು. ನಾವೂ ಕೂಡಾ ಗಿಡ ಮರಗಳನ್ನು ಬೆಳೆಸುವ ಮೂಲಕ ಒಳ್ಳೆಯ ಪರಿಸರ ನಿರ್ಮಿಸೋಣ.

 

ಒಂದು ರೀತಿಯ ಭಯ !!

ಹಲವು ತಿಂಗಳನಂತರ ಸಂಪದಕ್ಕೆ ಮತ್ತೆ ಕಾಲಿಡುತ್ತಿರುವಾಗ ಒಂದು ರೀತಿಯ ಭಯ ಹಾಗು ಅದೇ ಸಮಯಕ್ಕೆ ನಿರುಮ್ಮಳ ಭಾವನೆಗಳು ಬರುತ್ತಿವೆ.  ಭಯ ಏಕೆಂದರೆ ಈ ಬ್ಲಾಗುಡಾಣಕ್ಕೆ/ಗಳಿಗೆ ಅಡಿಕ್ಟಾಗಿ ಬಿಟ್ಟಿದ್ದೀನೇನೋ ಅನ್ನಿಸುತ್ತೆ.. ಚಿಕ್ಕಂದಿನಿಂದಲೇ ಮನೆಯಲ್ಲಿ ಕಾಫಿ ಅಭ್ಯಾಸ ಮಾಡಿಸಿ ಅದನ್ನು ಬಿಡಲಾಗುತ್ತಿಲ್ಲ.  ಎರಡು ತಿಂಗಳು ಬಿಟ್ಟರೆ, ಮೂರನೇತಿಂಗಳಿಗೆ ಸಾಲಕೊಟ್ಟವರಂತೆ ಮತ್ತೆ ಅದೇ ಚಟ ಹಿಂದೆ ಬಿದ್ದಿರುತ್ತದೆ.


ಒಂದು ರೀತಿಯ ನೆಮ್ಮದಿ ಹೇಗೆಂದರೆ ಸಮಾಜದ ಎಲ್ಲ ಸ್ತರಗಳ ಜನರೂ ಇಲ್ಲಿ ಸಿಗುತ್ತಾರೆ. ಆಸ್ತಿಕತೆ, ನಾಸ್ತಿಕತೆ, ಸಮಾಜವಾದ, ರಾಜ ಕಾರಣ,ಕಲೆ,ಕಾದಂಬರಿ, ಕಥೆ ಎಲ್ಲವೂ ಸಿಗುವ ’ಬಿಟ್ಟಿ ತಾಣ’!! ಸಂಪದ ಮತ್ತೆ ಶುರುವಾಗುತ್ತಿರುವುದು ಸಂತೋಶ. ಸಧ್ಯ ಕನ್ನಡ ನೆಲದಲ್ಲಿರದ ನನಗೆ, ಈ ಬ್ಲಾಗೆಂಬ ಮಾಯಾ ಪರದೆಯ ಮೇಲೆ ಮೂಡುವ ಅಕ್ಕರಗಳೇ ಸ್ವಲ್ಪ ಸಂತಸ ನೀಡಿಯಾವು. ಇನ್ನು ಇಲ್ಲಿ ಕನ್ನಡ ಪದಗಳು ನಿರಂತರ ಹರಿದು ಬರಲಿ!!


 

ಶಿಕ್ಷಣ ಮತ್ತು ಜೀವನ

ಜೀವನ ಕಲಿಸದ ಡಿಗ್ರಿಗಳು

"ಬೆವರಿನ ಬದಲು ಹನಿ ರಕ್ತ ಕೊಡುವ ಒಂದು ಯುವಕರ ಗುಂಪು ಕೊಡಿ, ಇಡಿ ಜಗತ್ತನ್ನೆ ಗೆಲ್ಲುತ್ತೇನೆ" ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಎಲ್ಲರೂ ನಂಬಬಹುದಾದ ಹುರುಳಿದೆ ಆದರೆ ಇಪ್ಪತ್ತೊಂದನೆ ಶತಮಾನ ಯುವಕರು ಎಂದಾಗ ನಮ್ಮ ಮುಂದೆ ಮೂಡುವುದು ಒಂದು ದೊಡ್ಡ ಪ್ರಶ್ನೆಯೋ? ಅಥಾವ ದೊಡ್ಡ ಶೂನ್ಯವೋ?!.  ಮುಂದೆ ಓದಿ »

ಸಾವಿಗೆ ಹೆದರದೇ ಹೋದಾಗ..

ಇದು ನನ್ನ ಅನುಭವಕ್ಕೆ ಬಂದ ಘಟನೆ. ಸುಮಾರು ಹನ್ನೆರಡು ವರ್ಷದಹಿಂದಿನ ಮಾತದು. ನಮ್ಮ ಇಡೀ ಕುಟುಂಬದ ನಾಲ್ಕೂ ಜನರಿಗೆ ನನ್ನ ಕೆಲಸವೊಂದೇ ಆಧಾರವಾಗಿದ್ದಿತು. ಬಡ ಮಧ್ಯಮ ವರ್ಗದಲ್ಲಿ ಬೆಳೆದು ಬಂದ ನನಗೆ  ಮುಂದೆ ಓದಿ »

ನನ್ನ ಬದುಕಿನ ಅತಿ ಕೆಟ್ಟ ಘಳಿಗೆಗಳು - ಇದಕ್ಕೆ ಪರಿಹಾರ ಇಲ್ಲವೇ??

ಕಳೆದ ವಾರ ಕೆಲವು ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡಿ ನಮ್ಮ ಸಂಭಂಧಿಕರ ಮನೆಯ ಸದಸ್ಯರೊಬ್ಬರನ್ನು ತೀರ ಹೀನಾ ಮಾನವಾಗಿ
ಬಯ್ದಾಡಿದೆ. ಕೆಲವು ಸಹ್ಯವೆನಿಸದ ಪದಗಳನ್ನು ಬಳಸಿ ನಿಂದಿಸಿದ್ದೂ ಉಂಟು. ಆ ಜಗಳಕ್ಕೆ ಸುಮಾರು ೮೦% ಕಾರಣ ನಾನೆ ಎಂಬುದೂ ನನಗೆ ಅರಿವಿತ್ತು.  ಮುಂದೆ ಓದಿ »

ರಾಷ್ಟ್ರೀಯ ವೈಙ್ಞನಿಕ ದಿನಾಚರಣೆ

C.V. Raman

ಭಾರತದಲ್ಲಿ ಒಬ್ಬ ಸತ್ಪ್ರಜೆಯ ಮಹತ್ವದ ಕಾಣಿಕೆಯ ಸ್ಮರಣರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಈ ದಿನ Feb ೨೮ ೧೯೨೮ನೇ ಇಸವಿ ಅಂದು ಸಿ.ವಿ. ರಾಮನ್ ಜಗತ್ತಿಗೆ ತಮ್ಮ ಪ್ರಸಿದ್ದ ಸಂಶೊಧನೆಯನ್ನು ಪ್ರಚಾರ ಪಡಿಸಿದರು. ಈ ಪರಿಶೋಧನೆಗಾಗಿ ಅವರಿಗೆ ೧೯೩೦ರ ಭೌತಶಾಸ್ತ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಕೂಡ ದೊರೆಯಿತು.  ಮುಂದೆ ಓದಿ »

ದೊಡ್ಡಕಳ್ಳ - ಚಿಕ್ಕ ಕಳ್ಳ

ಇವತ್ತು ಟಿ.ವಿ. ನ್ಯೂಸ್ ನಲ್ಲಿ ಹೇಳುತ್ತಿದ್ದರು ’ಸತ್ಯಂ ನ ಮಾಜಿ ನಿರ್ದೇಶಕ ರಾಮಲಿಂಗಾರಾಜು ಅವರ ಪೋಲೀಸು ಕಸ್ಟಡಿಯನ್ನು ಇನ್ನೆರಡು ದಿನ ವಿಸ್ತರಿಸಲಾಗಿದೆ’ ಎಂದು. ಅದೇ ರೀತಿ ಒಬ್ಬ ಜೇಬುಗಳ್ಳನೊಬ್ಬನನ್ನು ಹಿಡಿದಿದ್ದರೆ  ಮುಂದೆ ಓದಿ »

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ

Writing.gif

’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ.

ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ.   ಮುಂದೆ ಓದಿ »

Syndicate content